ಅರ್ಜುನ
ಗಾಂಡೀವದಾರಿ ಅರ್ಜುನಾ / From Wikipedia, the free encyclopedia
ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.
Quick Facts ಅರ್ಜುನ, ದೇವನಾಗರಿ ...
ಅರ್ಜುನ | |
---|---|
ಚಿತ್ರ:Arjuna meets Krishna at Prabhasakshetra.jpg | |
ದೇವನಾಗರಿ | अर्जुन |
ಸಂಗಾತಿ | ದ್ರೌಪದಿ, ಸುಭದ್ರ, ಉಳುಪಿ, ಚಿತ್ರಗಂಧ |
ಒಡಹುಟ್ಟಿದವರು | ಪಾಂಡವರು |
ಮಕ್ಕಳು | ಸ್ರುತಕರ್ಮ, ಅಭಿಮನ್ಯು, ಬಬ್ರುವಾಹನ, ಇರವಣ,*ಪ್ರಗೀತಿ |
ತಂದೆತಾಯಿಯರು | ಪಾಂಡು (ತಂದೆ), ಕುಂತಿ (ತಾಯಿ) |
Close
ಪರ್ಷಿಯಾದ ಪುರಾಣ ಕಥೆಗಳಲ್ಲಿ ಬರುವ "ಆರ್ಶ್, ದಿ ಆರ್ಚರ್" ದಂತಕಥೆಯು ಅರ್ಜುನನ ಕಥೆಯೊಂದಿಗೆ ಗಮನ ಸೆಳೆಯುವ ಸಾದೃಶ್ಯವನ್ನು ಹೊಂದಿದೆಯೆಂದು ಆಗಾಗ್ಗೆ ಪ್ರತಿಪಾದಿಸುತ್ತಾರೆ. ಇದು ಭಾರತ ಹಾಗೂ ಪರ್ಷಿಯಾ ದೇಶಗಳು ಸಮಾನ ಪರಂಪರೆಯನ್ನು ಹಂಚಿಕೊಂಡಿದ್ದುದರ ನೆನವರಿಕೆಯೆಂದು ಕೆಲವರು ಹೇಳುತ್ತಾರೆ.