ಇಂಡಿಯಾ ಗೇಟ್
From Wikipedia, the free encyclopedia
ನಾನು ಎಲ ಇಂಡಿಯಾ ಗೇಟ್ ಎಂಬುದು ಭಾರತದ ರಾಷ್ಟ್ರೀಯ ಸ್ಮಾರಕವಾಗಿದೆ. ನವದೆಹಲಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ಇಂಡಿಯಾ ಗೇಟ್, ಸರ್ ಎಡ್ವಿನ್ ಲುಟ್ಯೆನ್ಸ್ ಎಂಬಾತನಿಂದ ವಿನ್ಯಾಸಗೊಳಿಸಲ್ಪಟ್ಟಿತು. ಮೂಲತಃ ಅಖಿಲ ಭಾರತ ಯುದ್ಧಸ್ಮಾರಕವಾಗಿ ಚಿರಪರಿಚಿತವಾಗಿರುವ ಇದು ದೆಹಲಿಯಲ್ಲಿನ ಒಂದು ಎದ್ದುಕಾಣುವ ಹೆಗ್ಗುರುತಾಗಿದೆ. ಅಷ್ಟೇ ಅಲ್ಲ, Iನೇ ಜಾಗತಿಕ ಸಮರ ಮತ್ತು ಮೂರನೇ ಆಂಗ್ಲೋ-ಆಫ್ಘನ್ ಯುದ್ಧದಲ್ಲಿ ಬ್ರಿಟಿಷ್ ಭಾರತದ ಸಾಮ್ರಾಜ್ಯದ ಪರವಾಗಿ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಬ್ರಿಟಿಷ್ ಆಳ್ವಿಕೆಯ ಪರವಾಗಿ ಹೋರಾಡುವಾಗ ತಮ್ಮ ಪ್ರಾಣಗಳನ್ನು ತೆತ್ತ ಬ್ರಿಟಿಷ್ ಭಾರತದ ಸೇನೆಯ 90,000 ಯೋಧರನ್ನು ನೆನಪಿಗೆ ತರುತ್ತದೆ. ಕೆಮ್ಮರಳು ಶಿಲೆ ಮತ್ತು ಗ್ರಾನೈಟ್ನಿಂದ ಇದು ಮಾಡಲ್ಪಟ್ಟಿದೆ. ಮೂಲತಃ, ಇಂಡಿಯಾ ಗೇಟ್ನ ಮುಂಭಾಗದಲ್ಲಿ, ಈಗ-ಖಾಲಿಯಿರುವ ಮೇಲಾವರಣದ ಅಡಿಯಲ್ಲಿ ರಾಜ Vನೇ ಜಾರ್ಜ್ನ ಪ್ರತಿಮೆಯೊಂದನ್ನು ನಿಲ್ಲಿಸಲಾಗಿತ್ತು, ಮತ್ತು ಇತರ ಪ್ರತಿಮೆಗಳೊಂದಿಗೆ ಇದನ್ನು ತೆಗೆದು ಕಾರೊನೇಷನ್ ಉದ್ಯಾನವನಕ್ಕೆ ವರ್ಗಾಯಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ, ಭಾರತದ ಸೇನೆಯ ಅಜ್ಞಾತ ಯೋಧನ ಸಮಾಧಿಯ ತಾಣವಾಗಿ ಇಂಡಿಯಾ ಗೇಟ್ ಮಾರ್ಪಟ್ಟು, ಅಮರ್ ಜವಾನ್ ಜ್ಯೋತಿ (ಅಮರ ಯೋಧನ ಜ್ವಾಲೆ) ಎಂಬುದಾಗಿ ಕರೆಯಲ್ಪಟ್ಟಿತು.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. (December 2010) |