ಚಿನ್ಮಯಾನಂದ ಸರಸ್ವತಿ
From Wikipedia, the free encyclopedia
ಭಗವದ್ಗೀತೆಯನ್ನು ನಮ್ಮ ಕಾಲದ ಜನಕ್ಕೆ ಹತ್ತಿರ ತಂದುಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು (ಮೇ ೮, ೧೯೧೬ - ಅಗಸ್ಟ್ ೩, ೧೯೯೩). ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ಅವರ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗಳು ಹೀಗೆ ಭಗವದ್ಗೀತೆಯಲ್ಲಿ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿಯನ್ನು ಮೂಡಿಸಿದ ಸೇವೆಗಳು ಅದ್ವಿತೀಯವಾದದ್ದು.