ಭಾರತದ ರಾಜ್ಯ / From Wikipedia, the free encyclopedia
ಛತ್ತೀಸ್ಘಡ್
ಹೆಸರು= ಛತ್ತೀಸ್ಘಡ್| छत्तीसगढ़
ವಿಧ = ರಾಜ್ಯ
ನಕ್ಷೆ =
ಭಾರತದಲ್ಲಿ ಛತ್ತೀಸ್ಘಡ್ನ ಸ್ಥಳ
ದೇಶ = ಭಾರತ ಭಾರತ
ಸ್ಥಾಪನೆ =ರಾಜ್ಯ
ಸ್ಥಾಪನೆ = ೧ ನವೆಂಬರ್ ೨೦೦೦
ಜಿಲ್ಲೆ = ೨೭ (೯ ಹೊಸ ಜಿಲ್ಲೆ)
ನಗರ ಹೆಸರು= ರಾಜಧಾನಿ ರಾಯ್ಪುರ್
ಶ್ರೇಣಿ = ಅತಿ ದೊಡ್ಡ ನಗರ
ಉನ್ನತ ಅಧಿಕಾರ = ರಾಜ್ಯಪಾಲ
ಅಧಿಕಾರಿಯ ಹೆಸರು = ಆನಂದಿ ಬೆನ್ ಪಟೇಲ್
ನಾಯಕ = ಮುಖ್ಯ ಮಂತ್ರಿ
ನಾಯಕನ ಹೆಸರು = ಭೂಪೇಶ್ ಬಾಗೇಲ್
ರಾಜಕೀಯ ಪಕ್ಷ= ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಚುನಾಯಿತ ಸಭೆ = ವಿಧಾನ ಮಂಡಲ
ಸಭೆ ವಿಧ = ಏಕಸಭೆ (೯೦ ಸ್ಥಾನಗಳು)
ಸಂಸತ್ ಪ್ರಾತಿನಿಧ್ಯ ರಾಜ್ಯಸಭಾ= 5
ಸಂಸತ್ ಲೋಕಸಭೆ =11
ಸಬೆಯ ಅವಧಿ = ೫ (ವರ್ಷ ೨೦೧೦)
ನ್ಯಾಯಾಂಗ = ಉಚ್ಚ ನ್ಯಾಯಾಲಯ
ಸ್ಥಾನ = ಛತ್ತೀಸ್ಘಡ್ ಉಚ್ಚ ನ್ಯಾಯಾಲಯ
ಮಾಪನ = Metric
ವಿಸ್ತೀರ್ಣ_km2 = 135194
ವಿಸ್ತೀರ್ಣ ಶ್ರೇಣಿ = 10th
ಒಟ್ಟು ಜನಸಂಖ್ಯೆ = 25540196
ಒಟ್ಟು ಜನಸಂಖ್ಯೆ = ೨೦೧೧
ಒಟ್ಟು ಜನಸಂಖ್ಯೆ ಶ್ರೇಣಿ = 16th
ಒಟ್ಟು ಜನಸಂಖ್ಯೆ ಸಾಂದ್ರತೆ_km2 = auto
ಕಾಲ = IST
ಸಮಯ= +05:30
.
ಛತ್ತೀಸ್ಘಡ್ (ಛತ್ತೀಸ್ಘಡಿ /ಹಿಂದಿ: छत्तीसगढ़) ಮಧ್ಯಭಾರತದ ಒಂದು ರಾಜ್ಯವಾಗಿದ್ದು ಮಧ್ಯಪ್ರದೇಶದ ಆಗ್ನೇಯ ಮೂಲೆಯಲ್ಲಿರುವ ೧೬ ಛತ್ತೀಸ್ಘಡಿ ಭಾಷೆಯನ್ನು ಮಾತನಾಡುವ ಜಿಲ್ಲೆಗಳು ಒಂದುಗೂಡಿ, ನವೆಂಬರ್ ಒಂದು, ೨೦೦೦ದಂದು ರಾಜ್ಯವಾಗಿ ಘೋಷಿಸಲ್ಪಟ್ಟಿತು.
ರಾಯ್ಪುರ್ ಈ ರಾಜ್ಯದ ರಾಜಧಾನಿಯಾಗಿದೆ. ಇದು ಭಾರತದ ಹತ್ತನೆಯ ಅತಿ ದೊಡ್ಡ ರಾಜ್ಯವಾಗಿದ್ದು ಇದರ ವಿಸ್ತೀರ್ಣ ೫೨,೧೯೯ ಚದರ ಮೈಲಿಗಳಾಗಿದೆ (೧೩೫,೧೯೪km²). ಛತ್ತೀಸ್ಘಡಿನ ಗಡಿಗಳು ಹೀಗಿವೆ; ವಾಯುವ್ಯದಲ್ಲಿ ಮಧ್ಯ ಪ್ರದೇಶ, ಪಶ್ಚಿಮದಲ್ಲಿ ಮಹಾರಾಷ್ಟ್ರ, ದಕ್ಷಿಣಕ್ಕೆ ತೆಲಂಗಾಣ, ಪೂರ್ವಕ್ಕೆ ಒಡಿಶಾ, ಈಶಾನ್ಯಕ್ಕೆ ಝಾರ್ಖಂಡ್ ಮತ್ತ್ತು ಉತ್ತರಕ್ಕೆ ಉತ್ತರ ಪ್ರದೇಶ.
{೦)ಛತ್ತೀಸ್ ಘರೀ ಭಾಷೆ{/0}, ಯು ಪೂರ್ವಭಾಗದ ಹಿಂದಿಯ ಒಂದು ಪ್ರಕಾರವಾಗಿದ್ದು, ಈ ರಾಜ್ಯದ ಪ್ರಮುಖ ಭಾಷೆಯಾಗಿದೆ ಹಾಗೂ ಹಿಂದಿ ಭಾಷೆಯೊಡನೆ ಈ ರಾಜ್ಯದ ಅಧಿಕೃತ ರಾಜ್ಯಭಾಷೆಯಾಗಿ ಸ್ಥಾನ ಪಡೆದಿದೆ. ಹಲವಾರು ಬುಡಕಟ್ಟಿನ ಹಾಗೂ ಕೆಲವು ದ್ರಾವಿಡ ಭಾಷಾ ಪ್ರಭಾವಿತ ಭಾಷಾ ರೂಪಗಳೂ ಅಥವಾ ಭಾಷೆಗಳೂ ಛತ್ತೀಸ್ ಘಡ್ ನ ವಿವಿಧ ಭಾಗಗಳಲ್ಲಿ ಮಾತನಾಡಲ್ಪಡುತ್ತವೆ.
ಛತ್ತೀಸ್ ಘಡ್ ಮೂಲತಃ ಒಂದು ಗ್ರಾಮೀಣ ರಾಜ್ಯವೇ ಆಗಿದ್ದು ನಗರಪ್ರದೇಶಗಳಲ್ಲಿ ಕೇವಲ ೨೦% ಜನರು ವಾಸಿಸುತ್ತಿದ್ದಾರೆ. ಛತ್ತೀಸ್ ಘಡ್ ನ ೨೦೦೪ನೆಯ ಇಸವಿಯ ರಾಜ್ಯದ ಗೃಹ ಉತ್ಪನ್ನವು ಒಟ್ಟಾರೆ ೧೨ ಬಿಲಿಯನ್ ಯು.ಎಸ್.ಡಾಲರ್ ಗಳಷ್ಟು ಎಂದು ಇಂದಿನ ಮೌಲ್ಯಗಳ ಆಧಾರದ ಮೇಲೆ ಅಂದಾಜಿಸಲಾಗಿದೆ. ವಿಭಾಗವಾದನಂತರ, ಈ ಖನಿಜ-ಶ್ರೀಮಂತ ರಾಜ್ಯವು ಹಳೆಯ ಮಧ್ಯಪ್ರದೇಶವು ಉತ್ಪಾದಿಸುತ್ತಿದ್ದ ಅದಿರಿನ ೩೦%ದಷ್ಟನ್ನು ಉತ್ಪಾದಿಸುತ್ತದೆ.
ಈ ರಾಜ್ಯದ ಹಣಕಾಸು ವ್ಯವಸ್ಥೆಗೆ ಭಿಲಾಯ್ ಉಕ್ಕಿನ ಕಾರ್ಖಾನಿಯ ಅಸ್ಥಿತ್ವ, ೆಸ್.ಇ.ಸಿ. ರೈಲ್ವೇ ವಿಭಾಗ, , BALCO ಅಲ್ಯುಮಿನಿಯಂ ಕಾರ್ಖಾನೆ (ಕೊರ್ಬಾ), ಮತ್ತು ನ್ಯಾಷನಲ್ ಪವರ್ ಥರ್ಮಲ್ ಕಾರ್ಪೊರೇಷನ್ (NTPC) ನ ಕೊರ್ಬಾ ಮತ್ತು ಸಿಪಾಟ್ (ಬಿಲಾಸ್ ಪುರ್) ವಿಭಾಗಗಳು ಹಾಗೂ ಸೌತ್ ಈಸ್ಟ್ರನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (SECL) ಗಳು ಸುಭದ್ರತೆಯನ್ನು ಒದಗಿಸಿವೆ.
ಕೊರ್ಬಾ ಮತ್ತು ಬಿಲಾಸ್ ಪುರ್ ಈ ರಾಜ್ಯದ ಶಕ್ತಿ ಕೇಂದ್ರಗಳಾಗಿದ್ದು, ಈ ಸ್ಥಳಗಳಿಂದ ಭಾರತದ ಇತರ ರಾಜ್ಯಗಳಿಗೆ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತದೆ. ಛತ್ತೀಸ್ ಘಡ್ ನ ದಕ್ಷಿಣ ಪ್ರದೇಶದಲ್ಲಿ ಕಬ್ಬಿಣದ ಅದಿರು ಲಭ್ಯವಿದ್ದು ಎನ್.ಎಂ.ಡಿ.ಸಿ.ಯು ಅದಿರು ಉತ್ಖನನಕಾರ್ಯದಲ್ಲಿ ತೊಡಗಿದ್ದು ಭಾರತದ ಕಬ್ಬಿಣದ ಬೇಡಿಕೆಗಳನ್ನು ಪೂರೈಸುವುದೇ ಅಲ್ಲದೆ ಇತರ ದೇಶಗಳಿಗೂ ಕಬ್ಬಿಣವನ್ನು ರಫ್ತು ಮಾಡುತ್ತಿದೆ. ಎನ್.ಎಂ.ಡಿ.ಸಿ. ದಾಂತೇವಾಡಾ ಜಿಲ್ಲೆಯಲ್ಲಿದೆ. ಇತ್ತೀಚೆಗೆ ಇಎಸ್ ಎಸ್ ಎ ಆರ್ ಪೈಪ್ ಲೈನುಗಳ ಮೂಲಕ ಕಬ್ಬಿಣವನ್ನು ವಿಶಾಖಪಟ್ಟಣಕ್ಕೆ ರವಾನೆ ಮಾಡಲಾರಂಭಿಸಿದೆ. ಇತ್ತೀಚೆಗೆ ಮೂರು ಹೊಸ ಶಕ್ತಿ ಉತ್ಪಾದನಾ ಕಾರ್ಖಾನೆಗಳನ್ನು ಸುರಾಜೂರ್ ಜಿಲ್ಲೆಯ ಭೈಯಾತಾನ್ ಮತ್ತು ಪ್ರೇಮ್ ನಗರ್ ಗಳಲ್ಲಿ ಆರಂಭಿಸಲು ಆಲೋಚಿಸಲಾಗಿದೆ. ಈ ಶಕ್ತಿ ಉತ್ಪಾದನಾ ಕೇಂದ್ರಗಳನ್ನು ಆರಂಭಿಸಲು ಹಲವಾರು ಖಾಸಗಿ ಕಂಪನಿಗಳು ಒಂದೊಂದಾಗಿ ಹಾಗೂ ಒಟ್ಟಾಗಿ ಛತ್ತೀಸ್ ಘಡ್ ಸರ್ಕಾರದೊಡನೆ ಮುಂಕರಾರು ಪತ್ರಕ್ಕೆ ಸಹಿ ಹಾಕಿವೆ.
ಈ ರಾಜ್ಯವು ಜತ್ರೋಫಾ ಗಿಡಗಳನ್ನು ನೆಟ್ಟು ತನ್ಮೂಲಕ ಜೈವಿಕ ಇಂಧನವನ್ನು ಹೊಂದಿ ೨೦೧೫ರ ವೇಳೆಗೆ ಸ್ವಾವಲಂಬಿಯಾಗುವಂತಹ ಒಂದು ಆಶಾಪೂರಿತ ಯೋಜನೆಯನ್ನೂ ಹಮ್ಮಿಕೊಳ್ಳುತ್ತಲಿದೆ.