ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ
From Wikipedia, the free encyclopedia
ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ ಇವರು ೧೮೯೧ ಡಿಶಂಬರ ೨೯ರಂದು ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ಊರಿನವರು. ಕೃಷ್ಣಾಜಿ ಕುಂದಗೋಳಕರ ಎಂದೇ ಅವರ ಹೆಸರು.ಮೈಸೂರು ಸಂಸ್ಥಾನದಲ್ಲಿ ಜಮೀನು ಮೋಜಣಿ ಮಾಡಿಸುವ ಉದ್ದೇಶದಿಂದ ಮೈಸೂರು ಮಹಾರಾಜರು ಕರೆಯಿಸಿದ ಮೋಜಣಿದಾರರಲ್ಲಿ ಕೃಷ್ಣಾಜಿ ಕುಂದಗೋಳಕರ ಒಬ್ಬರು. ಭಾರದ್ವಾಜರ ತಾಯಿ ಭೀಮಾಬಾಯಿ. ಚಿಕ್ಕಂದಿನಲ್ಲಿಯೆ ತಾಯಿ ನಿಧನರಾದರು. ಭಾರದ್ವಾಜರ ಶಿಕ್ಷಣ ಬೆಂಗಳೂರಿನ ಸೆಂಟ್ರಲ್ ಪ್ರೌಢಶಾಲೆಯಲ್ಲಿ ಆಯಿತೆಂದು ತಿಳಿದು ಬರುತ್ತದೆ. ಆ ದಿನಗಳಲ್ಲಿ (ಸು.೧೯೦೦) ಬೀಸುತ್ತಿರುವ ರಾಷ್ಟ್ರೀಯತೆಯ ಗಾಳಿ ಭಾರದ್ವಾಜರ ಮೇಲೆ ತೀವ್ರ ಪ್ರಭಾವ ಬೀರಿತು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಡಿಸೆಂಬರ್ ೨೦೧೫) |