From Wikipedia, the free encyclopedia
ಬಿ.ಆರ್.ಲಕ್ಷ್ಮಣರಾವ್, ಅವರು ಕನ್ನಡದ ಪ್ರೇಮಕವಿ , ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿ, ಭಾವಗೀತೆಗಳ ಕವಿ. ಲಕ್ಷ್ಮಣರಾಯರ 'ಅಮ್ಮ, ನಿನ್ನ ಎದೆಯಾಳದಲ್ಲಿ',‘ಸುಬ್ಭಾಭಟ್ಟರ ಮಗಳೇ’,‘ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು',' ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರು' ಮುಂತಾದ ಕವಿತೆಗಳು ಜನಪ್ರಿಯವಾಗಿವೆ. ಈ ಪದ್ಯಗಳು, ಹಲವು ವೇಳೆ ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಪದ್ಯಗಳಿಗೆ ಸರಿಹೋಲಿಕೆಯಂತಿವೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬಿ.ಆರ್.ರಾಜಾರಾವ್ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ 'ಲಕ್ಷ್ಮಣ್,' ಚಿಕ್ಕಬಳ್ಳಾಪುರ ಜಿಲ್ಲೆಯ 'ಚೀಮಂಗಲ'ದಲ್ಲಿ ೧೯೪೬ ರ ಸೆಪ್ಟಂಬರ್ 9ರಂದು ಜನಿಸಿದರು. ಲಕ್ಷ್ಮಣರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ; ಮತ್ತು ಬಿ.ಎಡ್. ಪದವಿಗಳನ್ನೂ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ; ಪದವಿಯನ್ನೂ ಗಳಿಸಿದರು.
ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಅವೆಲ್ಲಾ 'ಲಹರಿ', 'ಗೋಕುಲ', 'ಸಂಕ್ರಮಣ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನವ್ಯ ಸಾಹಿತ್ಯದ ಚಳವಳಿ ಮೊದಲುಗೊಂಡು, 'ಚುಟುಕು', 'ವಿಡಂಬನೆ', ಭಾವಗೀತೆ' ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. 'ಅವರ ಕವಿತೆಯ ಕೆಲವು ಸಾಲುಗಳು : ನಾನಾಗಬೇಕು ರೈತನ ಬಂಧು ಒಂದು ಮಣ್ಣುಹುಳ.
ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ
ಪ್ರೀತಿ ಪರಿಧಿಯಲಿ ನಮ್ಮ ಪರಿಭ್ರಮಣ, ಪ್ರೀತಿಯೆ ಪಥ ನಮಗೆ; ನೋವು ನಲಿವಿನಲಿ ಸದಾ ಉಳಿದಿರಲಿ ಈ ಪ್ರೀತಿಯ ಬೆಸುಗೆ.
ಗೆಳೆಯರಿರಲಿ ಈ ಬಾಳಿನಲಿ, ಗೆಳೆಯರಿರಲಿ ಕೊನೆ ತನಕ; ಹಗುರ ಹೃದಯ ತಿಳಿ ಮನಸಿರಲಿ, ನೀಗಿ ಎಲ್ಲ ತವಕ.
ಕವನಗಳು
ಕವನಗಳು)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.