From Wikipedia, the free encyclopedia
ರಾಜೇಂದ್ರ ಕುಮಾರ್ ಪಚೌರಿ ಯವರು (ಜನನ: ಆಗಸ್ಟ್ 20, 1940) 2002ರಿಂದಲೂ ಇಂಟರ್ಗೌರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (IPCC) ಎಂಬ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿನ ಅವರ ಅಧಿಕಾರಾವಧಿಯು ವಿವಾದವನ್ನು ಹುಟ್ಟುಹಾಕಿದೆ. TERI ಎಂದೇ ಪ್ರಸಿದ್ಧವಾಗಿರುವ, ಭಾರತದಲ್ಲಿನ ಸಂಶೋಧನಾ ಮತ್ತು ಕಾರ್ಯನೀತಿಯ ಸಂಘಟನೆಯೊಂದರ ಮಹಾನಿರ್ದೇಶಕರಾಗಿಯೂ, ಮತ್ತು TERI ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ನ್ಯಾಷನಲ್ ಆಗ್ರೋ ಫೌಂಡೇಷನ್ನ (NAF) ಆಡಳಿತ ಮಂಡಳಿಯ ಸಭಾಪತಿಯ ಸ್ಥಾನವನ್ನು ಮಾತ್ರವೇ ಅಲ್ಲದೇ, ಕೊಲಂಬಿಯಾ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಅಂಡ್ ಸೊಸೈಟಿಯ ಮಂಡಳಿಯ ಸಭಾಪತಿಯ ಸ್ಥಾನವನ್ನೂ ಅವರು ಅಲಂಕರಿಸಿದ್ದಾರೆ. ಹವಾಮಾನ ಬದಲಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಪಚೌರಿಯವರು ಖಂಡಿತವಾದಿ ಎನಿಸಿಕೊಂಡಿದ್ದಾರೆ. ಈಗ ಅವರು ಯೇಲ್ನ ಕ್ಲೈಮೇಟ್ ಅಂಡ್ ಎನರ್ಜಿ ಇನ್ಸ್ಟಿಟ್ಯೂಟ್ನ (YCEI) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Rajendra K. Pachauri | |
---|---|
ಜನನ | Nainital, United Provinces of Agra and Oudh, British Raj (now Uttarakhand, India) | ಆಗಸ್ಟ್ ೨೦, ೧೯೪೦
ರಾಷ್ಟ್ರೀಯತೆ | Indian |
ವೃತ್ತಿ(ಗಳು) | Chief, Intergovernmental Panel on Climate Change, Director General, TERI, Head Yale Energy and Climate Institute |
ಸಂಗಾತಿ | Saroj Pachauri |
ಮಕ್ಕಳು | Daughter Rashmi Pachauri-Rajan.[1] |
2007ರ ಡಿಸೆಂಬರ್ 10ರಂದು ನಡೆದ ನೊಬೆಲ್ ಶಾಂತಿ ಪ್ರಶಸ್ತಿ ಸಮಾರಂಭದಲ್ಲಿ ಅಲ್ ಗೋರ್ ಮತ್ತು IPCCಯ ನಡುವೆ ಸದರಿ ಪ್ರಶಸ್ತಿಯು ಹಂಚಲ್ಪಟ್ಟಾಗ, ಪಚೌರಿಯವರು IPCCಯನ್ನು ಪ್ರತಿನಿಧಿಸಿದರು.[2][3]
ಭಾರತದ ನೈನಿತಾಲ್ನಲ್ಲಿ ಪಚೌರಿಯವರು ಜನಿಸಿದರು. ಲಕ್ನೋದಲ್ಲಿನ[4] ಲಾ ಮಾರ್ಟಿನಿಯೆರಿ ಕಾಲೇಜಿನಲ್ಲಿ ಮತ್ತು ಬಿಹಾರದ ಜಮಾಲ್ಪುರ್ನಲ್ಲಿನ ಇಂಡಿಯನ್ ರೇಲ್ವೇಸ್ ಇನ್ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಅಂಡ್ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಅವರು ಶಿಕ್ಷಣವನ್ನು ಪಡೆದರು. ವಿಶೇಷ ವರ್ಗದ ರೇಲ್ವೆ ಶಿಕ್ಷಾರ್ಥಿಗಳು ಎಂಬ 1958ರ ವರ್ಷದ ತಂಡಕ್ಕೆ ಅವರು ಸೇರಿದವರಾಗಿದ್ದಾರೆ; ಇದೊಂದು ಉತ್ಕೃಷ್ಟವಾದ ಯೋಜನೆಯಾಗಿದ್ದು ಭಾರತದಲ್ಲಿನ ಯಂತ್ರಶಿಲ್ಪ ಎಂಜಿನಿಯರಿಂಗ್ ಶಿಕ್ಷಣದ ಆರಂಭವನ್ನು ಘೋಷಿಸಿತು. [ಸೂಕ್ತ ಉಲ್ಲೇಖನ ಬೇಕು]. ವಾರಣಾಸಿಯಲ್ಲಿರುವ ಡೀಸೆಲ್ ಲೋಕೊಮೊಟಿವ್ ವರ್ಕ್ಸ್ ಕಂಪನಿಯೊಂದಿಗೆ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರ್ಯಾಲಿಯಲ್ಲಿರುವ ನಾರ್ತ್ ಕರೋಲಿನಾ ಸ್ಟೇಟ್ ಯೂನಿವರ್ಸಿಟಿಯ ವತಿಯಿಂದ 1972ರಲ್ಲಿ ಪಚೌರಿಯವರಿಗೆ ಕೈಗಾರಿಕಾ ಎಂಜಿನಿಯರಿಂಗ್ ವಿಷಯದಲ್ಲಿ MS ಪದವಿಯೊಂದನ್ನು ಪ್ರದಾನಮಾಡಲಾಯಿತು; ಅಷ್ಟೇ ಅಲ್ಲ, 1974ರಲ್ಲಿ ಕೈಗಾರಿಕಾ ಎಂಜಿನಿಯರಿಂಗ್ ಮತ್ತು ಅರ್ಥಶಾಸ್ತ್ರದ ವಿಷಯದಲ್ಲಿ ಒಂದು ಜಂಟಿ Ph.D. ಪದವಿಯೂ ಅವರಿಗೆ ದೊರಕಿತು.[5] ನವದೆಹಲಿಯ ಗಾಲ್ಫ್ ಲಿಂಕ್ಸ್ ಎಂಬಲ್ಲಿ ಅವರು ವಾಸಿಸುತ್ತಿದ್ದಾರೆ.[6] ಅವರೊಬ್ಬ ಕಟ್ಟಾ ಸಸ್ಯಾಹಾರಿ; ಓರ್ವ ಹಿಂದೂ ಆಗಿ ಅವರು ಇಟ್ಟುಕೊಂಡಿರುವ ನಂಬಿಕೆಗಳು ಇದಕ್ಕೆ ಭಾಗಶಃ ಕಾರಣವಾಗಿದ್ದರೆ, ಪರಿಸರದ ಮೇಲೆ ಮಾಂಸದ-ಉತ್ಪಾದನೆಯು ಉಂಟುಮಾಡುವ ಪ್ರಭಾವವೂ ಸಹ ಭಾಗಶಃ ಕಾರಣವಾಗಿರಬಹುದು.[7]
NC ಸಂಸ್ಥಾನದಲ್ಲಿನ ಅರ್ಥಶಾಸ್ತ್ರ ಮತ್ತು ಉದ್ದಿಮೆಯ ವಿಭಾಗದಲ್ಲಿ ಅವರು ಸಹಾಯಕ ಪ್ರಾಧ್ಯಾಪಕರಾಗಿ (1974ರ ಆಗಸ್ಟ್ - 1975ರ ಮೇ) ಮತ್ತು ಬೋಧನಾಂಗದ ಸಂದರ್ಶಕ ಸದಸ್ಯರಾಗಿ (1976ರ ಬೇಸಿಗೆ ಮತ್ತು 1977) ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ವರ್ಜೀನಿಯಾ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಮಿನರಲ್ ಅಂಡ್ ಎನರ್ಜಿ ರಿಸೋರ್ಸಸ್ನಲ್ಲಿ ಅವರು ಸಂಪನ್ಮೂಲ ಅರ್ಥಶಾಸ್ತ್ರ ವಿಷಯದಲ್ಲಿ ಓರ್ವ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಭಾರತಕ್ಕೆ ಅವರು ವಾಪಸಾದ ನಂತರ, ಹೈದರಾಬಾದ್ನ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಲ್ಲಿ ಹಿರಿಯ ಸದಸ್ಯ ಅಧ್ಯಾಪಕರಾಗಿ (1975ರ ಜೂನ್ - 1979ರ ಜೂನ್) ಸೇರಿಕೊಂಡರು ಹಾಗೂ ನಂತರದಲ್ಲಿ ಸಮಾಲೋಚನೆ ಮತ್ತು ಅನ್ವಯಿಕ ಸಂಶೋಧನೆ ವಿಭಾಗದ ನಿರ್ದೇಶಕ ಸ್ಥಾನದಲ್ಲಿ (1979ರ ಜುಲೈ-1981ರ ಮಾರ್ಚ್) ಮುಂದುವರಿದರು. 1981ರ ಏಪ್ರಿಲ್ನಲ್ಲಿ[8] ಅವರು TERIಯನ್ನು ನಿರ್ದೇಶಕರಾಗಿ ಸೇರಿಕೊಂಡರು ಹಾಗೂ ಈಗ ಅವರು ಸಂಘಟನೆಯ ಮುಖ್ಯಸ್ಥರಾಗಿದ್ದಾರೆ. ಅವರು ರಿಸೋರ್ಸ್ ಸಿಸ್ಟಮ್ಸ್ ಇನ್ಸ್ಟಿಟ್ಯೂಟ್ನಲ್ಲಿ (1982) ವಿದ್ವನ್ಮಂಡಲಿಯ ಓರ್ವ ಹಿರಿಯ ಸಂದರ್ಶಕ ಸದಸ್ಯರೂ ಆಗಿದ್ದರು, ಮತ್ತು ವಾಷಿಂಗ್ಟನ್ DCಯ (1990) ವಿಶ್ವಬ್ಯಾಂಕ್ನಲ್ಲಿ ಸಂಶೋಧನಾ ವಿದ್ವನ್ಮಂಡಲಿಯ ಸಂದರ್ಶಕ ಸದಸ್ಯರೂ ಆಗಿದ್ದರು. 2002ರ ಏಪ್ರಿಲ್ 20ರಂದು, ಇಂಟರ್ಗೌರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ ಎಂಬ ಮಂಡಳಿಯ ಸಭಾಪತಿಯಾಗಿ ಪಚೌರಿಯವರು ಚುನಾಯಿಸಲ್ಪಟ್ಟರು; ಇದು WMO ಮತ್ತು UNEP ವತಿಯಿಂದ ಸ್ಥಾಪಿಸಲ್ಪಟ್ಟ ವಿಶ್ವಸಂಸ್ಥೆಯ ಒಂದು ಮಂಡಳಿಯಾಗಿದ್ದು, ಹವಾಮಾನ ಬದಲಾವಣೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಂಬದ್ಧವಾಗಿರುವ ಮಾಹಿತಿಯನ್ನು ಮೌಲ್ಯಮಾಪನ ಮಾಡುವುದು ಅದರ ಉದ್ದೇಶವಾಗಿತ್ತು.[9]
ಪಚೌರಿಯವರು ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಶ್ರೀರಾಮ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಫೌಂಡೇಷನ್ನ ಕಾರ್ಯಾಧ್ಯಕ್ಷರ ಮಂಡಳಿಯಲ್ಲಿ (1987ರ ಸೆಪ್ಟೆಂಬರ್), ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನ ಕಾರ್ಯಕಾರಿ ಸಮಿತಿಯಲ್ಲಿ (1985ರಲ್ಲಿ ಮುಂದುವರಿಯುತ್ತಾ), ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್ನ ಆಡಳಿತ ಪರಿಷತ್ತಿನಲ್ಲಿ (1987ರ ಅಕ್ಟೋಬರ್ನಲ್ಲಿ ಮುಂದುವರಿಯುತ್ತಾ), ಮತ್ತು ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಕಾರ್ಯಾಧ್ಯಕ್ಷರುಗಳ ಅಂಗಣದಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಇಷ್ಟೇ ಅಲ್ಲ, ಪೆಗಾಸಸ್ ಕ್ಯಾಪಿಟಲ್ ಅಡ್ವೈಸರ್ಸ್, ಗ್ಲೋರಿಆಯಿಲ್, ಚಿಕಾಗೊ ಕ್ಲೈಮೇಟ್ ಎಕ್ಸ್ಚೇಂಜ್, ಟೊಯೊಟಾ, ಡ್ಯೂಷೆ ಬ್ಯಾಂಕ್ ಮತ್ತು NTPCಯಂಥ ಕಂಪನಿಗಳಿಗೆ ಸಲಹಾಕಾರರಾಗಿಯೂ ಅವರು ಕೆಲಸ ಮಾಡುತ್ತಾರೆ.[10] ಅನೇಕ ಬಳಗಗಳು ಮತ್ತು ಆಯೋಗಗಳ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಇಂಟರ್ನ್ಯಾಷನಲ್ ಸೋಲಾರ್ ಎನರ್ಜಿ ಸೊಸೈಟಿಯ ಮಂಡಳಿಯ ಸದಸ್ಯರಾಗಿ (1991-1997), ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ ಕೌನ್ಸಿಲ್ನ ಸದಸ್ಯರಾಗಿ (1992) ಸೇವೆ ಸಲ್ಲಿಸಿರುವ ಅವರು, ವರ್ಲ್ಡ್ ಎನರ್ಜಿ ಕೌನ್ಸಿಲ್ನ ಸಭಾಪತಿಯ ಹುದ್ದೆಯನ್ನೂ (1993-1995), ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಎನರ್ಜಿ ಇಕನಾಮಿಕ್ಸ್ನ ಅಧ್ಯಕ್ಷ ಮತ್ತು ನಂತರದಲ್ಲಿ ಸಭಾಪತಿಯ ಹುದ್ದೆಯನ್ನೂ (1988-1990), ಮತ್ತು ಏಷ್ಯನ್ ಎನರ್ಜಿ ಇನ್ಸ್ಟಿಟ್ಯೂಟ್ನ ಅಧ್ಯಕ್ಷ ಸ್ಥಾನವನ್ನೂ (1992ರಿಂದ) ಅಲಂಕರಿಸಿದ್ದಾರೆ.[11]. ಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮರ್ಥನೀಯ ನಿರ್ವಹಣೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತಿರುವ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ (1994 - 1999) ಅವರು ಓರ್ವ ಅರೆಕಾಲಿಕ ಸಲಹೆಗಾರರೂ ಆಗಿದ್ದರು.[12] 2001ರ ಜುಲೈನಲ್ಲಿ, ಭಾರತದ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿ ಡಾ.R.K.ಪಚೌರಿ ನೇಮಿಸಲ್ಪಟ್ಟರು.[12]
2002ರ ಏಪ್ರಿಲ್ 20ರಂದು, ಇಂಟರ್ಗೌರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ ಎಂಬ ಮಂಡಳಿಯ ಸಭಾಪತಿಯಾಗಿ ಪಚೌರಿಯವರು ಚುನಾಯಿಸಲ್ಪಟ್ಟರು; ಇದು WMO ಮತ್ತು UNEP ವತಿಯಿಂದ ಸ್ಥಾಪಿಸಲ್ಪಟ್ಟ ವಿಶ್ವಸಂಸ್ಥೆಯ ಒಂದು ಮಂಡಳಿಯಾಗಿದ್ದು, ಹವಾಮಾನ ಬದಲಾವಣೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಂಬದ್ಧವಾಗಿರುವ ಮಾಹಿತಿಯನ್ನು ಮೌಲ್ಯಮಾಪನ ಮಾಡುವುದು ಅದರ ಉದ್ದೇಶವಾಗಿತ್ತು.[9]
ಪಚೌರಿಯವರು ಹವಾಮಾನ ಬದಲಾವಣೆಯ ಸಮಸ್ಯೆಯ ಕುರಿತಾದ ಧ್ವನಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಅವರು ಈ ಕುರಿತು ಮಾತನಾಡುತ್ತಾ, "ಏನು ಸಂಭವಿಸುತ್ತಿದೆ, ಮತ್ತು ಏನು ಸಂಭವಿಸಲಿದೆ ಎಂಬ ಅಂಶವು, 350ರ ಒಂದು ಗುರಿಯೆಡೆಗೆ ಸಾಗುವಲ್ಲಿ ವಿಶ್ವವು ನಿಜವಾಗಿಯೂ ಮಹತ್ವಾಕಾಂಕ್ಷಿಯಾಗಿರಬೇಕು ಮತ್ತು ಅತ್ಯಂತ ದೃಢಸಂಕಲ್ಪದಿಂದ ಕೂಡಿದ್ದಾಗಿರಬೇಕು ಎಂಬುದನ್ನು ನನಗೆ ಮನವರಿಕೆ ಮಾಡಿಕೊಡುತ್ತದೆ"[13] ಎಂದು ಹೇಳಿದ್ದಾರೆ. ಇಲ್ಲಿ ನಮೂದಿಸಲಾಗಿರುವ 350 ಎಂಬ ಅಂಕಿಯು ವಾತಾವರಣದಲ್ಲಿನ ಪ್ರತಿ ದಶಲಕ್ಷಕ್ಕಿರುವ ಭಾಗಗಳಲ್ಲಿನ ಇಂಗಾಲದ ಡೈಯಾಕ್ಸೈಡ್ನ ಮಟ್ಟವನ್ನು ಉಲ್ಲೇಖಿಸುತ್ತದೆ; ಇದು ಹವಾಮಾನದ ಒಂದು ಆಯತಪ್ಪಿ ಬೀಳುವ ಬಿಂದು ಅಥವಾ ಘಟ್ಟವನ್ನು ತಪ್ಪಿಸುವ ದೃಷ್ಟಿಯಿಂದ ಇರಬೇಕಿರುವ, NASAದ ಜೇಮ್ಸ್ ಹ್ಯಾನ್ಸನ್ರಂಥ ಅಗ್ರಗಣ್ಯ ಹವಾಮಾನ ವಿಜ್ಞಾನಿಗಳು ಸಮ್ಮತಿಸಿರುವ ಒಂದು ಸುರಕ್ಷಿತ ಮೇಲ್ಮಟ್ಟದ ಮಿತಿಯಾಗಿದೆ.[14]
2007ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು IPCCಯು U.S.ನ ಹಿಂದಿನ ಉಪಾಧ್ಯಕ್ಷ ಆಲ್ ಗೋರ್ ಜೊತೆಯಲ್ಲಿ ಹಂಚಿಕೊಂಡಿತು; ಪಚೌರಿಯವರು 2002ರಲ್ಲಿ ಮೊದಲಿಗೆ ಚುನಾಯಿಸಲ್ಪಟ್ಟಿದ್ದಾಗ, ಇದೇ ಆಲ್ ಗೋರ್ ಅವರನ್ನು ಹಿಂದೆ ಟೀಕಿಸಿದ್ದ.[15] ನೊಬೆಲ್ ಪ್ರಶಸ್ತಿ ಸಮಿತಿಯ ತನ್ನ ಪತ್ರಿಕಾ ಹೇಳಿಕೆಯಲ್ಲಿ[16] ಹೀಗೆ ಹೇಳಿತು:
2007ರ ಡಿಸೆಂಬರ್ 11ರಂದು, ಪಚೌರಿ (ಪ್ರಶಸ್ತಿ-ಪುರಸ್ಕೃತ IPCCಯನ್ನು ಇವರು ಪ್ರತಿನಿಧಿಸುತ್ತಿದ್ದರು) ಮತ್ತು ಸಹ-ಪುರಸ್ಕೃತ ಅಲ್ ಗೋರ್ ಇಬ್ಬರೂ ಸಹ ನಾರ್ವೆಯ ಓಸ್ಲೊದಲ್ಲಿನ ಪ್ರಶಸ್ತಿಗಳ ಸಮಾರಂಭವೊಂದರಲ್ಲಿ ತಮ್ಮ ಸ್ವೀಕೃತಿ ಭಾಷಣಗಳನ್ನು ಮಾಡಿದರು; ಆ ದಿನದಂದು ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನವೊಂದರ ನಿಯೋಗಿಗಳು ಇಂಡೋನೇಷಿಯಾದ ಬಾಲಿ ಎಂಬಲ್ಲಿ ಸಭೆ ಸೇರಿದ್ದರು.[17] "'ಇಡೀ ವಿಶ್ವವೇ ಒಂದು ಕುಟುಂಬವಾಗಿದೆ' ಎಂಬ ಅರ್ಥವನ್ನು ಸ್ಫುರಿಸುವ 'ವಸುಧೈವ ಕುಟುಂಬಕಂ' ಎಂಬ ಹಿಂದೂ ತತ್ತ್ವವನ್ನು ಪಚೌರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು ಹಾಗೂ ಜಾಗತಿಕ ಮಟ್ಟದಲ್ಲಿ ಜನಸಾಮಾನ್ಯರನ್ನು ಸಂರಕ್ಷಿಸಲೆಂದು ಹಮ್ಮಿಕೊಂಡಿರುವ ಜಾಗತಿಕ ಪ್ರಯತ್ನಗಳ ಮೇಲೆ ಈ ತತ್ತ್ವವು ಪ್ರಬಲವಾದ ಪ್ರಭಾವ ಬೀರಬೇಕಿದೆ ಎಂದು ಪ್ರತಿಪಾದಿಸಿದರು."[18] ತಮ್ಮ ಭಾಷಣದುದ್ದಕ್ಕೂ ಈ ವಿಷಯಕ್ಕೇ ಮರಳುತ್ತಿದ್ದ ಅವರು, 1987ರಲ್ಲಿ ಮಾಲ್ಡೀವ್ಸ್ನ ಅಧ್ಯಕ್ಷ (ಮೌಮೂನ್ ಅಬ್ದುಲ್ ಗಯೂಮ್) ಹೇಳಿದ್ದನ್ನು ಉಲ್ಲೇಖಿಸಿದರು:
ವಿಶ್ವದ ಅತ್ಯಂತ ಬಡ ರಾಷ್ಟ್ರಗಳಿಗೆ ಸಂಬಂಧಿಸಿದಂತಿರುವ ಹವಾಮಾನ ಬದಲಾವಣೆಯ ಸೂಚಿತ ಪರಿಣಾಮಗಳ ಕುರಿತಾದ ತಮ್ಮ ಕಾಳಜಿಗಳಿಗೆ ಪಚೌರಿಯವರು ಪದೇಪದೇ ಒತ್ತುನೀಡಿದರು ಹಾಗೂ ಈ ನಿಟ್ಟಿನಲ್ಲಿ ಅವರು ಕೆಲವೊಂದು ಅಧ್ಯಯನಗಳನ್ನು ಉಲ್ಲೇಖಿಸುತ್ತಾ ಹೀಗೆಂದರು:
ಒಂದು ಶತಕೋಟಿ ಜೀವಗಳನ್ನು ಬೆಳಗಿಸುವ ಉಪಕ್ರಮದ ಪರಿಕಲ್ಪನೆಯನ್ನು ಪಚೌರಿಯವರು 2005ರಲ್ಲಿ ರೂಪಿಸಿ ಆರಂಭಿಸಿದರು. ಶಕ್ತಿಯ ಕೊರತೆಯನ್ನು ಎದುರಿಸುತ್ತಿರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ಸೌರಶಕ್ತಿಯ ಮೂಲಕ ವಿದ್ಯುಚ್ಛಕ್ತಿಯನ್ನು ಒದಗಿಸುವ ಪರಿಕಲ್ಪನೆ ಇದಾಗಿತ್ತು.[19] ಪಶ್ಚಿಮ ಬಂಗಾಳದ ಸುಂದರಬನಗಳು ಮತ್ತು ರಾಜಾಸ್ತಾನದ ಥಾರ್ ಮರುಭೂಮಿಯಂಥ ದೂರದ ಸ್ಥಳಗಳಿಗೆ ಸೌರಶಕ್ತಿಯನ್ನು ಕೊಂಡೊಯ್ಯುವಲ್ಲಿ ಈ ಉಪಕ್ರಮವು ಯಶಸ್ವಿಯಾಗಿದೆ.
2010ರ ಜನವರಿಯಲ್ಲಿ ಕ್ರಿಸ್ಟೋಫರ್ ಬುಕರ್ ಮತ್ತು ರಿಚರ್ಡ್ ನಾರ್ತ್ ಎಂಬಿಬ್ಬರು ಪಚೌರಿಯವರ ಮೇಲೆ ಆಪಾದನೆಗಳನ್ನು ಹೊರಿಸುವ ಲೇಖನವೊಂದನ್ನು ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಬರೆದರು. ONGCಯ[20] ಮಂಡಳಿಯ ಸದಸ್ಯತ್ವವನ್ನು ಪಚೌರಿಯವರು ಹೊಂದಿರುವುದು ಮತ್ತು ಪಚೌರಿಯವರು ಮಹಾನಿರ್ದೇಶಕ ಸ್ಥಾನವನ್ನು ಅಲಂಕರಿಸಿರುವ, ಲಾಭಗಳಿಕೆಯ-ಉದ್ದೇಶವಿಲ್ಲದ ಒಂದು ಸಂಸ್ಥೆಯಾದ TERI ಸಂಘಟನೆಗೆ ಬರುವ ಸಂಶೋಧನಾ ಅನುದಾನಗಳಿಗೆ ಸಂಬಂಧಿಸಿದಂತೆ ಹಿತಾಸಕ್ತಿಯ ತಿಕ್ಕಾಟಗಳಿರುವ ಸಾಧ್ಯತೆಯಿದೆ ಎಂಬುದೇ ಸದರಿ ಆರೋಪವಾಗಿತ್ತು.[21] ಅವರು ತಮ್ಮ ಆಪಾದನೆಗಳನ್ನು ಮತ್ತಷ್ಟು ಮುಂದುವರಿಸುತ್ತಾ, TERIಯ ಯುರೋಪ್ ಘಟಕದಲ್ಲಿಯೂ ಹಣಕಾಸಿನ ಅಸಾಮಂಜಸ್ಯಗಳು ಅಥವಾ ವೈಪರೀತ್ಯಗಳು ಇದ್ದವು ಎಂದು ಅಭಿಪ್ರಾಯಪಟ್ಟರು.[22] ಪಚೌರಿಯವರು ಈ ಎಲ್ಲಾ ಆಪಾದನೆಗಳನ್ನು ನಿರಾಕರಿಸಿದರು.[23][24].
ಸದರಿ ಆಪಾದನೆಗಳಿಗೆ ಪ್ರತಿಕ್ರಿಯೆಯಾಗಿ, TERIಯ ಮನವಿಯ ಮೇರೆಗೆ KPMG ಎಂಬ ಲೆಕ್ಕಪರಿಶೋಧನಾ ಸಂಸ್ಥೆಯು ಒಂದು ಅವಲೋಕನವನ್ನು ನಡೆಸಿತು.[25]. ಸದರಿ ಅವಲೋಕನವು ವ್ಯಕ್ತಪಡಿಸಿದ ಅಭಿಪ್ರಾಯವು ಹೀಗಿತ್ತು: "ಡಾ.ಪಚೌರಿಯವರಿಗೆ ಅವರ ಹಲವಾರು ಸಲಹಾ ಪಾತ್ರಗಳಿಂದ ಕೂಡಿಕೊಂಡು ಬಂದ ವೈಯಕ್ತಿಕ ಹಣಕಾಸಿನ ಪ್ರಯೋಜನಗಳು ಒಂದು ಹಿತಾಸಕ್ತಿಯ ತಿಕ್ಕಾಟಕ್ಕೆ ಕಾರಣವಾಗಿವೆ ಎಂದು ಸೂಚಿಸುವ ಯಾವುದೇ ಪುರಾವೆಯು ಕಂಡುಬಂದಿಲ್ಲ". ತನ್ನ ಉದ್ದೇಶಗಳು ಮತ್ತು ಕಾರ್ಯವಿಧಾನವನ್ನು ವಿವರಿಸಿದ ಈ ವರದಿಯು ಹೀಗೆ ಅಭಿಪ್ರಾಯಪಟ್ಟಿತು: "ಆ ಹಂತದಲ್ಲಿ ಅವಶ್ಯಕವೆಂದು ಪರಿಗಣಿಸಲ್ಪಟ್ಟಿರುವಂತೆ, ನಾವು ಕೈಗೊಂಡ ಕೆಲಸವು ಸಕಾಲದಲ್ಲಿ ಮೂಡಿಬಂದಿತು ಹಾಗೂ ಇದು TERI, ಪಚೌರಿ ಮತ್ತು ಪಚೌರಿಯವರ ತೆರಿಗೆ ವಕೀಲನಿಂದ ಒದಗಿಸಲ್ಪಟ್ಟ ಮಾಹಿತಿಯನ್ನು ಆಧರಿಸಿದೆ". ತಡೆ ಅರ್ಜಿಯೊಂದರಲ್ಲಿ ಸದರಿ ಅವಲೋಕನವು ತನ್ನ ವಿವರಣೆಯನ್ನು ನೀಡುತ್ತಾ, "ಇದರ ವ್ಯಾಪ್ತಿಯು ಒಂದು ಲೆಕ್ಕಪರಿಶೋಧನಾ ಕಾರ್ಯಕ್ಕಿಂತ ಗಮನಾರ್ಹವಾಗಿ ವಿಭಿನ್ನವಾಗಿತ್ತು ಮತ್ತು ಒಂದು ಲೆಕ್ಕಪರಿಶೋಧನಾ ಕಾರ್ಯವಾಗಿ ಇದೇ ಮಟ್ಟದ ಭರವಸೆಯನ್ನು ಒದಗಿಸಬೇಕು ಎಂಬುದರ ಮೇಲೆ ನೆಚ್ಚಿಕೊಳ್ಳಲಾಗುವುದಿಲ್ಲ" ಎಂದು ತಿಳಿಸಿತು.[25] ಖಾಸಗಿ ವಲಯದ ಕಂಪನಿಗಳಿಂದ ಮಾಡಲ್ಪಟ್ಟ ಪಾವತಿಗಳನ್ನು KPMGಯು ಪರಿಶೀಲಿಸಿತು. ಅದು ಕಂಡುಕೊಂಡ ವಾಸ್ತವಾಂಶದ ಅನುಸಾರ, 17.66 ದಶಲಕ್ಷ $ನಷ್ಟು[25] ಮೊತ್ತದ ಪಾವತಿಗಳು TERI ಸಂಘಟನೆಗೆ ಮಾಡಲ್ಪಟ್ಟಿದ್ದವೇ ಹೊರತು, ಪಚೌರಿಯವರಿಗಲ್ಲ.[26][27] ಪಚೌರಿಯವರು TERIಯಿಂದ ಕೇವಲ ತಮ್ಮ ವಾರ್ಷಿಕ ವೇತನವನ್ನಷ್ಟೇ ಸ್ವೀಕರಿಸಿದ್ದು ಅದರ ಮೊತ್ತವು ವರ್ಷವೊಂದಕ್ಕೆ 45,000£ಗಳಷ್ಟಿದ್ದರೆ, ಇದರ ಜೊತೆಗೆ ಹೊರಗಿನ ಗಳಿಕೆಗಳಿಂದ ಗರಿಷ್ಟವೆಂದರೆ ಸುಮಾರು 2,174£ನಷ್ಟು ಮೊತ್ತವು ಬಂದಿತ್ತು. IPCCಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಕ್ಕಾಗಿ ಅವರು ಯಾವುದೇ ವೇತನ ಅಥವಾ ಪಾವತಿಯನ್ನು ಸ್ವೀಕರಿಸಿರಲಿಲ್ಲ.[28]
2010ರ ಆಗಸ್ಟ್ 21ರಂದು, ಡೈಲಿ ಟೆಲಿಗ್ರಾಫ್ ಪತ್ರಿಕೆಯು ಒಂದು ಕ್ಷಮಾಯಾಚನೆಯನ್ನು ಪ್ರಕಟಿಸಿ, "ಡಾ.ಪಚೌರಿಯವರು ಭ್ರಷ್ಟರಾಗಿದ್ದರು ಅಥವಾ IPCCಯ ಮುಖ್ಯಸ್ಥರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದನ್ನು ಸೂಚಿಸುವ ಉದ್ದೇಶ ನಮಗಿರಲಿಲ್ಲ; ಇತ್ತೀಚಿನ ವರ್ಷಗಳಲ್ಲಿ ಡಾ.ಪಚೌರಿಯವರು ದಶಲಕ್ಷಗಟ್ಟಲೆ ಡಾಲರುಗಳಷ್ಟು ದುಡ್ಡುಮಾಡಿಲ್ಲ ಎಂಬುದಾಗಿ KPMGಯು ಕಂಡುಕೊಂಡಿರುವುದನ್ನು ನಾವು ಪುರಸ್ಕರಿಸುತ್ತೇವೆ. ಡಾ.ಪಚೌರಿಯವರಿಗೆ ಯಾವುದೇ ತೆರನಾದ ಮುಜುಗರ ಉಂಟಾಗಿದ್ದರೆ, ಅದಕ್ಕಾಗಿ ನಾವು ಅವರಲ್ಲಿ ಕ್ಷಮೆಕೋರುತ್ತೇವೆ" ಎಂದು ತಿಳಿಸಿತು.[29] ಆರು ಅಂಕಿಗಳಷ್ಟು ಮೊತ್ತವನ್ನು ಮುಟ್ಟಿದ್ದ ಕಾನೂನು-ಸಂಬಂಧಿ ಅಥವಾ ಶಾಸನಬದ್ಧ ವೆಚ್ಚಗಳನ್ನು ಸದರಿ ವೃತ್ತಪತ್ರಿಕೆಯು ನೀಡಿತು ಎಂದು ತಿಳಿದುಬಂತು.[28] ಟೆಲಿಗ್ರಾಫ್ನ ಕ್ಷಮಾಯಾಚನೆಯನ್ನು ಪಚೌರಿಯವರು ಸ್ವಾಗತಿಸುತ್ತಾ, "ಅಂತಿಮವಾಗಿ ಅವರು ಸತ್ಯವನ್ನು ಪರಿಗಣಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ; IPCCಯನ್ನು ನಂಬದಿರುವಂತೆ ಹವಾಮಾನ ಸಂದೇಹವಾದಿಗಳಿಂದ ಮಾಡಲ್ಪಟ್ಟ ಮತ್ತೊಂದು ಪ್ರಯತ್ನದ ಫಲವೇ ನನ್ನ ಮೇಲೆ ಹೊರಿಸಲಾಗಿರುವ ಸುಳ್ಳು ಆಪಾದನೆಗಳಾಗಿವೆ. ಈಗ ಅವರು ನನ್ನ ಬೆನ್ನುಹತ್ತಲು ಬಯಸುತ್ತಾರೆ ಹಾಗೂ ಅದು ಅವರ ಉದ್ದೇಶವನ್ನು ಈಡೇರಿಸಬಹುದು" ಎಂದು ತಿಳಿಸಿದರು.[30]
ದಿ ಗಾರ್ಡಿಯನ್ ಪತ್ರಿಕೆಯ ಜಾರ್ಜ್ ಮಾನ್ಬಯೋಟ್ ಎಂಬಾತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಹಿತಾಸಕ್ತಿಯ ತಿಕ್ಕಾಟ ಮತ್ತು ಹಣಕಾಸಿನ ವಿಷಯದಲ್ಲಿ ತಪ್ಪೆಸಗಿರುವುದರ ಆಪಾದನೆಗಳಿಗೆ ಸಂಬಂಧಿಸಿದಂತೆ, KPMG ವತಿಯಿಂದ ಪಚೌರಿಯವರಿಗೆ ನಿಷ್ಕಳಂಕತೆಯ ಮೊಹರು ಲಭಿಸಿದ ಹೊರತಾಗಿಯೂ, ಅವರ ಕುರಿತಾದ ಸುಳ್ಳು ಸಮರ್ಥನೆಗಳು ರಿಚರ್ಡ್ ನಾರ್ತ್, ಡೈಲಿ ಮೇಲ್ ಮತ್ತು ದಿ ಆಸ್ಟ್ರೇಲಿಯನ್ ವತಿಯಿಂದ ಪುನರಾವರ್ತಿಸಲ್ಪಟ್ಟವು ಎಂದು ತಿಳಿಸಿದ.[31]
IPCCಯ AR4 ಕಾರ್ಯನಿರತ ತಂಡ IIರ ವರದಿಯಲ್ಲಿ ಹಿಮನದಿಯ ಕರಗುವಿಕೆಗೆ ಸಂಬಂಧಿಸಿದ ಮುನ್ನಂದಾಜೊಂದು ದೋಷಯುಕ್ತವಾಗಿರುವುದರ ಪ್ರತ್ಯಾಖ್ಯಾನವನ್ನು ಅನುಸರಿಸಿ, ಅವರು IPCCಯ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬುದಾಗಿ ಒಂದಷ್ಟು ಕೂಗುಗಳು ಕೇಳಿಬಂದರೂ, ಅವೆಲ್ಲವನ್ನೂ ಅವರು ತಿರಸ್ಕರಿಸಿದರು.[32][33][34][35]
ತಮ್ಮ ವಿದ್ವತ್ಪೂರ್ಣ ಪ್ರಕಟಣೆಗಳನ್ನು ಹೊರತುಪಡಿಸಿ, ಪಚೌರಿಯವರು ಕವಿತೆ ಮತ್ತು ಕಾದಂಬರಿಯನ್ನೂ ಬರೆಯುತ್ತಾರೆ. ರಿಟರ್ನ್ ಟು ಅಲ್ಮೋರಾ [45] ಎಂಬ ಶೀರ್ಷಿಕೆಯ ಒಂದು ಪ್ರಣಯ ಕಾದಂಬರಿಯನ್ನು ಅವರು ಬರೆದಿದ್ದು, ಅದು 2010ರಲ್ಲಿ ಪ್ರಕಟಿಸಲ್ಪಟ್ಟಿತು. ಹಿಂದೊಮ್ಮೆ ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಿವೃತ್ತ ಅಧಿಕಾರಿಯೊಬ್ಬನ ನೆನಪುಗಳ ಸ್ವರೂಪದಲ್ಲಿ ಈ ಕಾದಂಬರಿಯಿದ್ದು, ಅವನ ಆಧ್ಯಾತ್ಮಿಕ ಮತ್ತು ಗತ ಲೈಂಗಿಕ ಜೀವನದ ಹೂರಣವನ್ನು ಇದು ಒಳಗೊಂಡಿದೆ.[46][47] ಅವರು ತಮ್ಮ ಮಗಳಾದ ರಶ್ಮಿ ಪಚೌರಿ-ರಾಜನ್ ಜೊತೆಗೂಡಿ ಮೂಡ್ಸ್ ಅಂಡ್ ಮ್ಯೂಸಿಂಗ್ಸ್ [48] ಎಂಬ ಶೀರ್ಷಿಕೆಯನ್ನು ಹೊಂದಿರುವ ಪದ್ಯಗಳ ಒಂದು ಸಂಕಲನವನ್ನು ಬರೆದಿದ್ದಾರೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.