From Wikipedia, the free encyclopedia
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಬೆರಳಚ್ಚಿನ ಮತ್ತು ವ್ಯಾಕರಣ ತಪ್ಪುಗಳು. |
ವಾಣಿಜ್ಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು , ವ್ಯಾಪಾರ ಮತ್ತು ಇನ್ನಿತರ ಉದ್ಧೇಶಕ್ಕೈ ಸಾಲ ಕೊಡುವ ಮತ್ತು ಠೇವುಗಳನ್ನು ಸ್ವೀಕರಿಸುವ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳ ಹುಟ್ಟು ಬೆಳಣೆಗೆಗೆ ಸುಮಾರು ಮೂರು ನೂರು ವರ್ಷಗಳ ಇತಿಹಾಸವಿದೆ. ಬ್ಯಾಂಕ್ ಎಂಬ ಪದವು ಇಟಾಲಿಯನ್ ಪದ `ಬ್ಯಾಂಕೋ' ಎಂಬ ಪದದಿಂದ ಬಂದಿರುತ್ತದೆ[1]. ಬ್ಯಾಂಕೋ ಎಂದರೆ ಹಿಂದಿನ ಕಾಲದ ಸಾಹುಕಾರರ ಉಪಯೋಗಿಸುತ್ತಿದ್ದ ಬೆಂಚು ಅಥವಾ ಬಾಕು ಎಂದಾರ್ಥವಾಗುತ್ತದೆ. ಮಾರುಕಟ್ಟೆಯಲ್ಲಿ ಬೆಂಚು ಹಾಕಿಕೊಂಡು ಅದರ ಮೇಲೆ ಕುಳಿತು ಸಾಹುಕಾರರು ಹಣದ ಲೇವಾ ದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಕೈಗೊಂಡ ಹಣದ ಲೇವಾದೇವಿ ವ್ಯಾವಹಾರಗಳಲ್ಲಿ ಇಂದಿನ ಬ್ಯಾಂಕ್ ವ್ಯವಹಾರ ಪದ್ಧತಿಯ ಉಗಮವನ್ನು ಕಾಣಬಹುದು. ವ್ಯಾಪಾರಸ್ಥರು ತಮ್ಮಲ್ಲಿ ಅಧಿಕ ಇದ್ದ ಹಣವನ್ನು ಸುರಕ್ಶತೆಗಾಗಿ ಅಕ್ಕಸಾಲಿಗರಿಗೆ ಒಪ್ಪಿಸುತ್ತಿದ್ದರು. ಅಕ್ಕಸಾಲಿಗರು ಠೇವಣಿ ಇಟ್ಟ ವ್ಯಾಪಾರಸ್ತರಿಗೆ ಅವರಿಟ್ಟ ಠೇವಣಿಯ ಮೌಲ್ಯದಷ್ತು ರಾಶಿದಿಯನ್ನು ಕೊಡುತ್ತಿದ್ದರು. ರಶೀದಿಗಳಿಗೆ ಅಕ್ಕಸಾಲಿಗರ ಪಾವತಿ ಚೀಟಿ'ಗಳೆಂದು ಕರೆಯುತ್ತಿದ್ದರು. ಈ ಪಾವತಿ ಚೀಟಿಯನ್ನು ಹೊಂದಿದವರಿಗ ಠೇವಣಿಯ ಹಣ ವಾಪಾಸ ಪಡೆಯಲು ಹಕ್ಕು ಇರುತಿತ್ತು. ಬೇಡಿದಾಗ ಹಣವನ್ನು ಹಿಂದಿರುಗಿಸುವ ಹೊಣೆ ಅಕಸಾಲಿಗದಾಗಿತ್ತು. ಅಕ್ಕಸಾಲಿಗರ ಪಾವತಿ ಚೀಟಿಗಳು ಈ ಭರವಸೆಯ ಸಂಕೇತಗಳಾಗಿದ್ದವು. ಈ ಪ್ರಕಾರ ಹಣದ ಲೇವಾದೇವಿ ವ್ಯವಹಾರ ಮಾಡುವಾಗ ಅವರಿಗೆ ಹೊಸ ಅನುಭವದ ಅರಿವಾಯಿತು. ಎಲ್ಲಾ ಠೇವಣಿದಾರರು ಒಂದೇ ವೇಳೆಗೆ ತಾವಿಟ್ಟ ಠೇವಣಿಯ ಹಣವನ್ನು ವಾಪಾಸಕೇಳಲು ಬರುವುದಿಲ್ಲವೆಂಬ ವಿಶ್ವಾಸ ಅವರಗಾಯಿತು. ಅದರಿಂದಅವರ ಠೇವಣಿಯ ಹಣವನ್ನು ತಮ ಬಳಿ ಸೋಮಾರಿಯಾಗಿಡುವುದಕ್ಕೆ ಬದಲು ಅಗತ್ಯವಿದ್ದವರಿಗೆ ಸಾಲ ಕೊಟ್ಟು ಬಡ್ಡಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಈ ರೀತಿ ಕೇವಲ ಭದ್ರತೆಗಾಗಿ ಇಟ್ಟ ಠೇವಣಿಯ ರೂಪದಲ್ಲಿನ ಹಣವು ಸಾಲ ಕೊಡುವ ವ್ಯವಹಾರಕ್ಕಾಗಿ ಬಳಸಲ್ಪಡುವ ಸಾಧನವಾಯಿತು.ಕ್ರಮೇಣ ಸ್ವತಂತ್ರ ಬ್ಯಾಂಕಿಗ್ ಸಂಸ್ಥೆಗಳು ವಾಣಿಜ್ಯ ವ್ಯವಹಾರಗಳಿ ಸಾಲ ನೀಡಲು ಅಸ್ತಿತ್ವದಲ್ಲಿ ಬಂದವು.[2]
ವಿಂಗಡಿಸಬಹುದು. ಅವುಗಳೆಂದರೆ
ವಾಣಿಜ್ಯ ಬ್ಯಾಂಕುಗಳ ಕೆಳಗಿನ ಎರಡ ಪ್ರಧಾನ ಕಾರ್ಯಗಳನ್ನು ನಿರ್ವಹಿಸುತ್ತವೆ.
ವಾಣಿಜ್ಯ ಬ್ಯಾಂಕುಗಳು ಸ್ವೀಕರಿಸುವ ಠೇವಣಿಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು.
ಚಾಲ್ತಿ ಠೇವಣಿ: :ಠೇವಣಿದಾರನು ಈ ಖಾತೆಗೆ ಜಮಾ ಮಾಡುವುದಕ್ಕಾಗಲಿ ಅಥವಾ ಠೇವಣಿಯ ಹಣವನ್ನು ಹಿಂತೆಗದುಕೊಳ್ಳುವದಕ್ಕಾಗಲಿ ನಿರ್ಭಂಧವಿರುವುದಿಲ್ಲ. ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ. ವ್ಯಾಪಾರಿಗಳು, ಉದ್ದಿಮೆದಾರರಿಗೆ ಈ ಠೇವಣಿ ಅನುಕೂಲವಾಗಿರುತ್ತದೆ. ಉಳಿತಾಯ ಠೇವಣಿ; ಉಳಿತಾಯ ಠೇವಣಿ ಖಾತೆಗ ಹಣ ಜಮಾ ಮಾಡಲು ಯಾವ ನಿರ್ಬಂಧಗಳಿಲ್ಲ. ಆದೆರೆ ಹಣವನ್ನು ಮರಳಿ ಪಡಯುವುದಕ್ಕೆ ನಿರ್ಭಂಧಗಳಿರುತ್ತದೆ. ವಾರಕ್ಕೆ ಎರಡು ಬಾರಿ ಈ ಖಾತೆಯಿಂದ ಠೇವಣದಾರನು ತನ್ನ ಹಣವನು ವಾಪಸ್ ಪಡೆಯಬಹುದಾಗಿದೆ. ಬಡ ಮತ್ತು ಮಧ್ಯಮವರ್ಗದ ಜನರಿಗೆ ಇದು ಅನೂಕೂಲವಾಗಿರುತ್ತದೆ ಇಂತಹ ಠೇವಣಿಗಳ ಮೇಲೆ ಬ್ಯಾಂಕುಗಳು ಅಲ್ಪ ಬಡ್ತಿಯನ್ನು ನೀಡುತ್ತವೆ.
ಇದು ವಾಣಿಜ್ಯ ಬ್ಯಾಂಕಿನ ಇನ್ನೊಂದು ಪ್ರಮುಖ ಕಾರ್ಯವಾಗಿರುತ್ತದೆ. ವಾಣಿಜ್ಯ ಬ್ಯಾಂಕುಗಳು ಈ ಕೆಳಗಿನಂತೆ ಈ ಕಾರ್ಯವನ್ನು ನಿವಹಿಸುತ್ತವೆ.
ವಾಣಿಜ್ಯ ಬ್ಯಾಂಕುಗಳು ನಿವಹಿಸುವಾಗ ಸಹಾಯಕ ಕಾಯಗಳು ಕೆಳಗಿನಂತಿವೆ.
ಈ ಕಾರ್ಯಗಳಲ್ಲದೆ ವಾಣಿಜ್ಯ ಬ್ಯಾಂಕುಗಳು ಸರ್ವೋಪಯೋಗಿ ಸೇವೆಗಳನ್ನು ಸಲ್ಲಿಸುತ್ತದೆ. ಅವುಗಳೆಂದರೆ
ವಾಣಿಜ್ಯ ಬ್ಯಾಂಕುಗಳ ಸಂಘಟನೆ, ರಚನೆ, ಸ್ವರೂಪ ಮತ್ತು ಉದ್ದೇಶಗಳ ಆಧಾರದ ಮೇಲೆ ಅವುಗಳನ್ನು ವಿವಿಧ ಭಾಗಗಳಾಗಿ ವರ್ಗಿಕರಿಸಬಹುದು. ಅವುಗಳೆಂದರೆ
ವಾಣಿಜ್ಯ ಬ್ಯಾಂಕು ಒಂದು ದೊಡ್ಡ ಸಂಸ್ಥೆಯಾಗಿದ್ದು ರಾಷ್ಟ್ರಾದ್ಯಂತ ಹಲವಾರು ಶಾಖೆಗಳ ಮೂಲಕ ಬ್ಯಾಂಕಿನ ವ್ಯವಹಾರವನ್ನು ನಡೆಸುವ ವ್ಯವಸ್ಥೆಗೆ "ಕವಲು ಬ್ಯಾಂಕ್" ವ್ಯವಸ್ಥೆ ಎಂದು ಕರೆಯುತ್ತಾರೆ.ಈ ಬ್ಯಾಂಕಿನ ಶಾಖೆಗಳು ಆಂತರಿಕವಾಗಿಬಹುದು ಅಥವಾ ಅಂತರಾಷ್ಟ್ರೀಯವಾಗಿರಬಹುದು. ಈ ರೀತಿ ಶಾಖೆಗಳನ್ನು ಹೊಂದಿದ ಬ್ಯಾಂಕ್ ಪದ್ಧತಿಗೆ ವಿಕೇಂದ್ರಿಕೃತ ಬ್ಯಾಂಕ್ ಪದ್ಧತಿ ಎಂದು ಕರಯುತ್ತಾರೆ.
ಇದು ಕವಲು ಬ್ಯಾಂಕು ವ್ಯವಸ್ಥೆಗೆ ವಿರುದ್ಧವಾಗಿದೆ. ಪ್ರತಿಯೊಂದು ವಾಣಿಜ್ಯ ಬ್ಯಾಂಕು ಸ್ವತಂತ್ರವಾದ ಮತ್ತು ಪ್ರತ್ಯೇಕವಾದ ಸಂಸ್ಥೆಯಾಗಿದ್ದು ಒಂದೇ ಕಛೇರಿಯನ್ನು ಹೊಂದಿ ಅಥವಾ ನಿಗದಿತ ಸರಹದ್ದಿನಲ್ಲಿ ಒಂದೆರೆಡು ಶಾಖೆಗಳನ್ನು ತೆರೆದು ಉದ್ಯಮವನ್ನು ನಡೆಸುವ ವ್ಯವಸ್ಥೆಗೆ "ಏಕ ಬ್ಯಾಂಕ್ ಪದ್ಧತಿ" ಎಂದು ಕರೆಯುತ್ತಾರೆ.
ಸರಪಣಿ ಬ್ಯಾಂಕ್ ವ್ಯವಸ್ಥಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಾಣಿಜ್ಯ ಬ್ಯಾಂಕುಗಳನ್ನು ಒಂದೇ ಆಡಳಿತದ ನಿಯಂತ್ರಣಕ್ಕೆ ತರಲಾಗತ್ತದೆ. ಇದಕ್ಕಾಗಿ ವಿವಿಧ ಮಾರ್ಗಗಳನ್ನು ಅನುಸರಿಸಬಹುದಾಗಿದೆ. ಉದಾ|| ಅದೇ ವ್ಯಕತಿಗಳು ವಿವಿಧ ಬ್ಯಾಂಕುಗಳ ನಿರ್ದೇಶಕರೆಂದು ಕೆಲಸ ಮಾಡುತ್ತಿದ್ದಾಗ ಆ ಎಲ್ಲ ಬ್ಯಾಂಕುಗಳು ಒಂದೇ ಆಡಳಿತದ ನಿಯಂತ್ರಣಕ್ಕೊಳಗಾಗುತ್ತದೆ. ಇಲ್ಲವೇ ಅದೇ ವ್ಯಕ್ತಿಗಳು ವಿವಿಧ ಬ್ಯಾಂಕ್ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಹೊಂದಿರಬಹುದು. ಆಗ ಸಹ ಅವರಿಗೆ ಆ ಬ್ಯಾಂಕುಗಳ ಮೇಲೆ ತಮ್ಮ ನಿಯಂತ್ರಣವನ್ನಿಟ್ಟು ಕೊಳ್ಳಲು ಸಾಧ್ಯವಾಗುತ್ತದೆ.
ಗುಂಪು ಬ್ಯಾಂಕ್ ವ್ಯವಸ್ಥೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಬ್ಯಾಂಕುಗಳು ಒಂದು ಹೋಲ್ಡಿಂಗ್ ಕಂಪನಿ ಮೂಲಕ ಒಂದೇ ಆಡಳಿತ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.ಇಂತಹ ಒಟ್ಟು ಗೂಡಿದ ಬ್ಯಾಂಕುಗಳ ಕವಲು ಬ್ಯಾಂಕಗಳಾಗಿರಬಹುದು ಅಥವಾ ಏಕ ಬ್ಯಾಂಕುಗಳಾಗಿರಬಹುದು ಅಥವಾ ಎರಡೂ ಒಟ್ಟಾಗಿರಬಹುದು.
ಸಾವಜನಿಕರಿಂದ ಠೇವುಗಳನ್ನು ಸ್ವೀಕರಿಸಿ, ಅಂತಹ ಸಂಪನ್ಮೂಲಗಳನ್ನು ಅಲ್ಪಾವಧಿಗೆ ಸಾಲ ನೀಡುವ ಬ್ಯಾಂಕ್ ಪದ್ಧತಿಗೆ "ಠೇವಣಿ ವ್ಯವಸ್ಥೆ" ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ವ್ಯಾಪಾರ ಮತ್ತು ಉದ್ಯಮಕ್ಕೆ ಹುಂಡಿಯನ್ನು ಮುರಿಯುವಿಕೆ, ಮೀರೆಳೆತ ಸೌಲಭ್ಯ ಮತ್ತು ಮುಂಗಡಗಳ ವಿಧದಲ್ಲಿ ಸಾಲವನ್ನು ಠೇವಣಿ ಬ್ಯಾಂಕು ವ್ಯವಸ್ಥೆಯಲ್ಲಿ ಒದಗಿಸಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಸಾರ್ವಜನಿಕ ಉಳಿತಾಯದ ಹಣದ ಪಾಲಕರಾಗಿರುವುದರಿಂದ ಆ ಹಣವ್ನು ದೀರ್ಘಾವಧಿಗೆ ಸಾಲ ನೀಡಿ ಭದ್ರತೆಯನ್ನು ಕಳೆದುಕೊಳ್ಳುವ ಬದಲು ಅಲ್ಪಾವಧಿಯಲ್ಲಿ ಮರುಪಾವತಿಯಾಗುವಂತಹ ಉದ್ದೇಶಗಳಲ್ಲಿ ಸುರಕ್ಷಿತವಾಗಿ ವಿನಿಯೋಗಿಸಬೇಕೆಂಬ ತತ್ವದ ಮೇಲೆ ಠೇವಣಿ ಬ್ಯಾಂಕ ಪದ್ಧತಿ ನಿಂತಿದೆ.
ಕೈಗಾರಿಕಗಳಿ ಅಲ್ಪಾವಧಿ ಸಾಲಗಳಂತೆಯೇ ಉದ್ಯಮದ ವಿಸ್ತರಣೆಗೆ ದೀರ್ಘಾವಧಿ ಸಾಲವನ್ನು ಅವಶ್ಯಕವಾಗಿದೆ. ದೀರ್ಘಾವಧಿ ಹಣಕಾಸನ್ನು ಪೂರೈಕೆ ಮಾಡುವ ಬ್ಯಾಂಕ್ಗಳಿಗೆ ಹೂಡಿಕೆಯ ಬ್ಯಾಂಕ್ಗಳು ಅಥವಾ ಕೈಗಾರಿಕಾ ಬ್ಯಾಂಕುಗಳು ಎಂದು ಕರೆಯುತ್ತಾರೆ. [ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಿ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲವನ್ನು ಒದಗಿಸುವ ಬ್ಯಾಂಕುಗಳಿಗೆ "ಮಿಶ್ರ ಬ್ಯಾಂಕುಗಳೆಂದು ಕರೆಯುತ್ತಾರ. ಇಂತಹ ಬ್ಯಾಂಕುಗಳು ಠೇವಣಿ ಬ್ಯಾಂಕಿನ ಮತ್ತು ಹೂಡಿಕೆ ಬ್ಯಾಂಕಿನ ಕಾರ್ಯಗಳನ್ನು ಸಂಯೋಜಿಸಿಕೊಂಡಿರುತ್ತವೆ.
ಪ್ರತಿಯೊಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕ್ಗಳು ಅತಿ ಮಹತ್ವದ ಪಾತ್ರವನ್ನು ನಿವಹಿಸುತ್ತವೆ. ಆರ್ಥಿಕ ಯೋಜನೆಯ ಮೂಲಕ ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಿ ಸಮಾಜವಾದಿ ಸಮಾಜವನ್ನು ಸ್ಥಾಪಿಸಲು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ವಾಣಿಜ್ಯ ಬ್ಯಾಂಕುಗಳು ಇನ್ನೂ ಹೆಚ್ಚಿನ ಪಾತ್ರವನ್ನು ನಿರ್ವಹಿಸುತ್ತವೆ. ಯಾವ ದೇಶದಲ್ಲಿ ಬ್ಯಾಂಕುಗಳ ಅಭಿವೃದ್ಧಿ ಹೆಚ್ಚಾಗಿ ಆಗಿದೆಯೋ ಅಂಥಹ ದೇಶವು ಇಂದು ಆರ್ಥಿಕವಾಗಿ ಮುಂದುವರಿದ ದೇಶವಾಗಿದೆ. ದೇಶವು ಆರ್ಥಿಕವಾಗ ಹಿಂದುಳಿಯಲು ಬಂಡವಾಳದ ಕೊರತೆಯು ಮುಖ್ಯಕಾರಣವಾಗಿದೆ. ಬ್ಯಾಂಕುಗಳು ಇಂತಹ ಬಂಡವಾಳವನ್ನು ಒದಗಿಸುವುದರಿಂದ ದೇಶಕ್ಕೆ ತ್ವರಿತಗತಿಯಲ್ಲಿ ಆಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಜನತೆಯ ಉಳಿತಾಯವನ್ನು ಸಂಗ್ರಹಿಸಿ ಅವುಗಳನ್ನು ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಸಾಲದ ರೂಪದಲ್ಲಿ ಒದಗಿಸುತ್ತವೆ. ಬಂಡವಾಳವಿಲ್ಲದೆ ಕೃಷಿ, ಕೈಗಾರಿಕೆ, ವಾಣಿಜ್ಯ, ಉತ್ಪಾದನೆ ಉದ್ಯೋಗಗಳು ಅಧಿಕವಾಗಲಾರವು. ಜನರ ಜೀವನ ಮಟ್ಟ ಸುಧಾರಿಸಲಾರದು. ಆದ್ದರಿಂದ ಆರ್ಥಿಕ ಪ್ರಗತಿಯ ಮೂಲವಾದ ಬಂಡವಾಳವನ್ನು ಒದಗಿಸುವ ಕಾರ್ಯವನ್ನು ಬ್ಯಾಂಕುಗಳು ನಿರ್ವಹಿಸುವುದರಿಂದ ಅವು ಆರ್ಥಿಕ ಅಭಿವೃದ್ಧಿಯಲ್ಲಿತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ.ಅಭವೃದ್ದಿ ಪ್ರಕ್ರಿಯೆಯಲ್ಲಿ ಬ್ಯಾಂಕಗಳ ಪಾತ್ರ ಬಹುಮುಖ್ಯವಾಗಿದೆ.ಅಭಿವೃದ್ದಿಗೆ ಬೇಕಾದ ಪತ್ತಿನ ಸೌಲಭ್ಯವನ್ನು ಒದಗಿಸಿ ಅದರ ಚಾಲನೆಗೆ ಕಾರಣವಾಗಿರುತ್ತದೆ.ಅಭಿವೃದ್ದಿ ಶೀಲ ರಾಷ್ಟ್ರದಂತಹ ನಮ್ಮ ದೇಶದಲ್ಲಿ ಹಣಕಾಸಿನ ಸಂಪನ್ಮೂಲ ಕೊರತೆಯಲ್ಲಿದೆ ಎನ್ನುವುದು ಒಪ್ಪಿಕೊಳ್ಳುವಂತಹ ಅಂಶವಾಗಿದ್ದು,ಬ್ಯಾಂಕುಗಳು ಇದನ್ನು ಪೂರೈಸಿ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುತ್ತವೆ.ಸ್ವಾತಂತ್ರದ ನಂತರ ಭಾರತದ ಬ್ಯಾಂಕಿಂಗ ಪದ್ದತಿಯಲ್ಲಿ ಅನೇಕ ಬದಲಾವಣೆಗಳಾದವು. ಈ ಬದಲಾವಣೆ ೧೯೯೫ರಲ್ಲಿ ಇಂಪೀರಿಯಲ್ ಬ್ಯಾಂಕನಿಂದ ಭಾರತೀಯ ಸ್ಟೇಟ ಬ್ಯಾಂಕ ಪರಿವರ್ತನೆಯೊಂದಿಗೆ ಪ್ರಾರಂಭವಾಯಿತು.೧೯೬೭ರಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಮಾಜಿಕ ಹತೊಟಿ ವ್ಯಾಪ್ತ್ತಿಗೆ ತರಲಾಯಿತು.೧೯೬೯ರಲ್ಲಿ ಪ್ರಧಾನ ವಾಣಿಜ್ಯ ಬ್ಯಾಂಕುಗಳುನ್ನು ರಾಷ್ಟ್ರೀಕರಿಸಲಾಯಿತು.೧೯೭೫ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿ ಪತ್ತಿನ ಸೌಲಭ್ಯವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲಾಯಿತು.ಇವೆಲ್ಲ ಬ್ಯಾಂಕಿಂಗ್ ವ್ಯವಸ್ಥೆಯ ಬದಲಾವಣೆಗೆ ಒಂದು ಮುಖ್ಯವಾದ ಉದ್ದೇಶವಿದೆ.ಅದೇನೆಂದರೆ ಗ್ರಾಮೀಣ ಭಾಗದ ದುರ್ಬಲ ವರ್ಗಕ್ಕೆ ಸೇರಿದ ಜನರ ಆರ್ಥಿಕ ಪರಿಸ್ಥಿತಿಯನ್ನು ಸಂಧಾರಿಸಿ ರಾಷ್ಟ್ರದ ಅಭಿವೃದ್ಧಿಯನ್ನು ತ್ವರಿತಗೊಳಿಸುವ ಚಲನಾತ್ಮಕ ಪಾತ್ರವನ್ನು ಬ್ಯಾಂಕುಗಳು ನಿರ್ವಹಿಸಬಲ್ಲವೆನುವ ದೃಢ ವೆಶ್ವಾಸ ಬಹು ಮುಖ್ಯವಾದದಾಗಿದೆ.ಒಂದು ನಿರ್ದಿಷ್ಟವಾದ ವರ್ಗದ "ಬ್ಯಾಂಕಿಂಗ್ ಪದ್ದತಿಯಿಂದ ಬಹು ಜನರ" ಬ್ಯಾಂಕಿಂಗ್ ಪದ್ದತಿಗೆ ಬದಲಾಯಿಸುವ ನಿರ್ಧಾರ ತೆಗೆದುಕೊಳುಲಾಯಿತು. ಬದಲಾದ ಪದ್ದತಿಯಿಂದ ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರಿಗೆ ಪತ್ತಿನ ಸೌಲಭ್ಯಾವನ್ನು ವಿಸ್ತರಿಸುವ ಮಹೆತ್ತರ ಕರ್ಯದಲ್ಲಿ ತೊಡಗಿದವು. ಸಾರ್ವಜನಿಕ ಬ್ಯಾಂಕಗಳು "ಲಾಭದ ಧ್ಯಯ "ದಿಂದ "ಪ್ರಗತಿಯೊಂದಿಗೆ ಲಾಭ" ಸಾಧಿಸುವ ಗುರಿಯನ್ನು ಇಟ್ಟುಕೊಂಡವು.ಆರ್ಥಿಕ ಅಭಿವೃದ್ಧಿಯು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಅವಶ್ಯವಿದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದು ಅತೀ ಮುಖ್ಯವಾಗಿದೆ. ಪ್ರತಿಯೊಂದು ರಾಷ್ಟ್ರದ ಸಮಸ್ಯೆಗಳಿಗೆ ತನ್ನದೇ ಆದ ಉತ್ತರಗಳೆರುತ್ತವೆ. ಇತರ ಅಭಿವೃದ್ಧಿ ಶೀಲ ರಾಷ್ಟ್ರಗಳ ಅನುಭವವು ಈ ರಾಷ್ಟ್ರಗಳ ಒಟ್ಟಾರೆ ಅಭಿವೃದ್ಧಿಗೆ ಉಪಯುಕ್ತ್ತವಾದ ಮಾರ್ಗದರ್ಶನ ನೀಡಬಲ್ಲದು.[4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.