From Wikipedia, the free encyclopedia
ಸಂರಕ್ಷಣಾ ಜೀವಶಾಸ್ತ್ರ ವು ಭೂಮಿಯ ಜೀವವೈವಿಧ್ಯತೆಯ ಗುಣಲಕ್ಷಣ ಮತ್ತು ಸ್ಥಿತಿಯ ವೈಜ್ಞಾನಿಕ ಅಧ್ಯಯನವಾಗಿದೆ. ಇದು ಪ್ರಭೇದಗಳು, ಅವುಗಳ ಆವಾಸ ಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳು ಹೆಚ್ಚಿನ ದರಗಳಲ್ಲಿ ಕ್ಷೀಣಿಸುವುದರಿಂದ ಸಂರಕ್ಷಿಸುವ ಗುರಿಯನ್ನು ಹೊಂದಿದೆ.[1][2] ಇದು ವಿಜ್ಞಾನ, ಅರ್ಥಶಾಸ್ತ್ರ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಅಭ್ಯಾಸವನ್ನು ಒಳಗೊಂಡ ಒಂದು ಅಂತರ ಶಾಸ್ತ್ರೀಯ ವಿಷಯವಾಗಿದೆ.[3][4][5][6] ಸಂರಕ್ಷಣಾ ಜೀವಶಾಸ್ತ್ರ ಎಂಬುದನ್ನು ಮೊದಲು 1978ರಲ್ಲಿ ಕ್ಯಾಲಿಫೋರ್ನಿಯಾದ ಲಾ ಜೊಲ್ಲದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರಜ್ಞರಾದ ಬ್ರೂಸ್ ವಿಲ್ಕಾಕ್ಸ್ ಮತ್ತು ಮೈಕೆಲ್ ಸೋಲ್ ಆಯೋಜಿಸಿದ ಸಭೆಯಲ್ಲಿ ವಿಷಯದ ಶಿರೋನಾಮೆಯಾಗಿ ಪರಿಚಯಿಸಲಾಯಿತು. ಉಷ್ಣವಲಯದ ಅರಣ್ಯನಾಶ, ಪ್ರಭೇದಗಳ ಕಣ್ಮರೆ ಮತ್ತು ಪ್ರಭೇದಗಳಲ್ಲಿನ ತಳಿಗಳ ವೈವಿಧ್ಯತೆಯ ಕ್ಷೀಣಿಸುವಿಕೆ ಮೊದಲಾದವುಗಳ ಬಗೆಗಿನ ವಿಜ್ಞಾನಿಗಳ ಕಳವಳದಿಂದ ಆ ಸಭೆ ನಡೆಸಲು ಪ್ರೇರೇಪಣೆ ಒದಗಿಸಿತು.[7] ಆ ಸಭೆ ಮತ್ತು ಅದರ ಫಲವಾದ ಕಾರ್ಯವಿಧಾನಗಳು[1] ಒಂದು ಕಡೆ ಪರಿಸರ ವಿಜ್ಞಾನ ಮತ್ತು ಪ್ರಭೇದಗಳ ಸಂಖ್ಯೆಯ ಜೀವಶಾಸ್ತ್ರದ ಸಿದ್ಧಾಂತ ಹಾಗೂ ಮತ್ತೊಂದು ಕಡೆ ಸಂರಕ್ಷಣಾ ನೀತಿ ಮತ್ತು ಅಭ್ಯಾಸಗಳ ನಡುವೆ ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಅಂತರವನ್ನು ತುಂಬಲು ಪ್ರಯತ್ನಿಸಿದವು.[8] ಸಂರಕ್ಷಣಾ ಜೀವಶಾಸ್ತ್ರ ಮತ್ತು ಜೈವಿಕ ವೈವಿಧ್ಯತೆಯ ಪರಿಕಲ್ಪನೆಜೀವವೈವಿಧ್ಯತೆಒಂದುಗೂಡಿ, ಸಂರಕ್ಷಣಾ ವಿಜ್ಞಾನ ಮತ್ತು ನೀತಿಯ ಆಧುನಿಕ ಯುಗಕ್ಕೆ ಖಚಿತ ರೂಪುಕೊಡಲು ಸಹಾಯ ಮಾಡಿದವು.
ಪ್ರಪಂಚದಲ್ಲಿ ನೆಲೆಗೊಂಡ ಜೈವಿಕ ವ್ಯವಸ್ಥೆಗಳ ಶೀಘ್ರಗತಿಯ ಅವನತಿಯು ಸಂರಕ್ಷಣಾ ಜೀವಶಾಸ್ತ್ರವು "ಕಾಲಮಿತಿಯನ್ನು ಹೊಂದಿರುವ ಒಂದು ನಿಯಮ"ವೆಂದು ನಿರೂಪಿಸಿದೆ[9]. ಸಂರಕ್ಷಣಾ ಜೀವಶಾಸ್ತ್ರವು ವಿರಳ ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದಗಳ ಚೆದುರುವಿಕೆ, ವಲಸೆ, ಸಂಖ್ಯಾಶಾಸ್ತ್ರ, ಪರಿಣಾಮಕಾರಿ ಸಂಖ್ಯೆಯ ಗಾತ್ರ, ಅಂತಸ್ಸಬಂಧ ತಳಿಗಳ ಬೆಳವಣಿಗೆಯ ಕುಸಿತ ಮತ್ತು ಕನಿಷ್ಠ ಬದುಕುವ ಶಕ್ತಿ ಮೊದಲಾದವುಗಳ ಸಂಶೋಧನೆಯ ಪರಿಸರ ವಿಜ್ಞಾನಕ್ಕೆ ಹತ್ತಿರದಿಂದ ಸಂಬಂಧಿಸಿದೆ. ಸಂರಕ್ಷಣಾ ಜೀವಶಾಸ್ತ್ರವು ಜೀವವೈವಿಧ್ಯತೆಯ ನಿರ್ವಹಣೆ, ನಷ್ಟ ಮತ್ತು ಮರುಸ್ಥಾಪನೆಯ ಮೇಲೆ ಪ್ರಭಾವ ಬೀರುವ ವಿದ್ಯಮಾನ ಹಾಗೂ ತಳಿ, ಒಟ್ಟು ಸಂಖ್ಯೆ, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನು ಉಂಟುಮಾಡುವ ವಿಕಸನೀಯ ಕ್ರಿಯೆಗಳನ್ನು ಉತ್ತೇಜಿಸುವ ವಿಜ್ಞಾನದ ಬಗ್ಗೆ ಕಾಳಜಿ ವಹಿಸಿದೆ.[4][5][6] ಭೂಮಿಯ ಮೇಲಿನ ಎಲ್ಲಾ ಪ್ರಭೇದಗಳಲ್ಲಿ 50%ನಷ್ಟು ಪ್ರಭೇದಗಳು ಆಹಾರದ ಕೊರತೆ ಮತ್ತು ಹಸಿವಿನಿಂದ ಮುಂದಿನ 50 ವರ್ಷಗಳಲ್ಲಿ ನಾಶವಾಗುತ್ತವೆ ಹಾಗೂ ಭೂಮಿಯ ಮೇಲೆ ವಿಕಾಸ ಪುನಾರಂಭವಾಗುತ್ತದೆ ಎಂದು ಪ್ರಮುಖ ಅಂದಾಜುಗಳು ಸೂಚಿಸಿವೆ[10].[11][12]
ಜೀವವೈವಿಧ್ಯತೆಯ ಹಾನಿ, ಪ್ರಭೇದಗಳ ಅಳಿವು ಮತ್ತು ಮಾನವ ಸಮಾಜದ ಉತ್ತಮ ಸ್ಥಿತಿಯನ್ನು ಉಳಿಸುವಲ್ಲಿ ನಮ್ಮ ಸಾಮರ್ಥ್ಯಗಳ ಮೇಲೆ ಇದು ಹೊಂದಿರುವ ಋಣಾತ್ಮಕ ಪರಿಣಾಮ ಮುಂತಾದ ಪ್ರವೃತ್ತಿಗಳು ಮತ್ತು ಪ್ರಕ್ರಿಯೆ ಬಗ್ಗೆ ಜೀವಶಾಸ್ತ್ರಜ್ಞರು ಸಂಶೋಧನೆ ನಡೆಸಿ ಶಿಕ್ಷಣ ನೀಡುತ್ತಿದ್ದಾರೆ. ಸಂರಕ್ಷಣಾ ಜೀವಶಾಸ್ತ್ರಜ್ಞರು ಸರಕಾರ, ವಿಶ್ವವಿದ್ಯಾನಿಲಯಗಳು, ಲಾಭದ-ಉದ್ದೇಶವಿಲ್ಲದ ಸಂಸ್ಥೆಗಳು ಮತ್ತು ಉದ್ಯಮದಲ್ಲಿ ಕ್ಷೇತ್ರ ಮತ್ತು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭೂಮಿಯ ಪ್ರತಿಯೊಂದು ಭಾಗದ ಮತ್ತು ಸಮಾಜದೊಂದಿಗಿನ ಅದರ ಸಂಬಂಧದ ಬಗ್ಗೆ ಸಂಶೋಧನೆ, ಮೇಲ್ವಿಚಾರಣೆ ಮತ್ತು ಪಟ್ಟಿಮಾಡಲು ಹಣ ಸಹಾಯ ಮಾಡಲಾಗುತ್ತದೆ. ಈ ವಿಷಯಗಳು ವೈವಿಧ್ಯಮಯವಾಗಿವೆ. ಏಕೆಂದರೆ ಇದು ಜೈವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ವೃತ್ತಿಪರ ಒಕ್ಕೂಟಗಳನ್ನು ಹೊಂದಿರುವ ಅಂತರಶಾಸ್ತ್ರೀಯ ಜಾಲವಾಗಿದೆ. ಉದ್ದೇಶ ಮತ್ತು ವೃತ್ತಿಪರತೆಗೆ ಮುಡಿಪಾಗಿರುವವರು, ನೈತಿಕತೆಗಳು, ನೀತಿಗಳು, ಮತ್ತು ವೈಜ್ಞಾನಿಕ ಕಾರಣದ ಆಧಾರದ ಮೇಲೆ ಪ್ರಸಕ್ತಜೀವವೈವಿಧ್ಯತೆಯ ವಿಷಮಸ್ಥಿತಿಗೆ ಜಾಗತಿಕ ಪ್ರತಿಕ್ರಿಯೆಗಾಗಿ ವಾದಿಸುತ್ತಾರೆ. ಸಂಸ್ಥೆಗಳು ಮತ್ತು ನಾಗರಿಕರು ಜೀವವೈವಿಧ್ಯತೆಯ ವಿಷಮ ಸ್ಥಿತಿಗೆ ಸಂರಕ್ಷಣಾ ಕ್ರಮದ ಯೋಜನೆಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಆ ಯೋಜನೆಗಳು ಸ್ಥಳೀಯ ಮಟ್ಟದಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಸಂಶೋಧನೆ, ಮೇಲ್ವಿಚಾರಣೆ ಮತ್ತು ಶಿಕ್ಷಣದ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ.[3][4][5][6]
ಸಂರಕ್ಷಣಾ ಜೀವಶಾಸ್ತ್ರಜ್ಞರು ಪುರಾತನ ಜೀವವೈಜ್ಞಾನಿಕದಿಂದ ಇಂದಿನ ಪರಿಸರ ವಿಜ್ಞಾನದವರೆಗಿನ ಪ್ರವೃತ್ತಿಗಳು ಮತ್ತು ಪ್ರಕ್ರಿಯೆಯನ್ನು ಅಧ್ಯಯನ ಮಾಡುತ್ತಾರೆ. ಇದರಿಂದ ಅವರು ಪ್ರಭೇದಗಳ ಅಳಿವಿಗೆ ಸಂಬಂಧಿಸಿದ ಪರಿಸ್ಥಿತಿಗಳ ಬಗ್ಗೆ ತಿಳಿಯುತ್ತಾರೆ. ಭೂಮಿಯ ಇತಿಹಾಸದಲ್ಲಿ ದಾಖಲಾದ ಐದು ಪ್ರಮುಖ ಜಾಗತಿಕ ಸಾಮೂಹಿಕ ಅಳಿವುಗಳಿವೆ ಎಂದು ಸಾಮಾನ್ಯವಾಗಿ ತಿಳಿಯಲಾಗಿದೆ. ಅವುಗಳೆಂದರೆ: ಆರ್ಡವಿಷಿಯನ್ (440 mya), ಡಿವೋನಿಯನ್ (370 mya), ಪರ್ಮಿಯನ್-ಟ್ರೈಯಾಸಿಕ್ (245 mya), ಟ್ರೈಯಾಸಿಕ್–ಜುರಾಸಿಕ್ (200 mya) ಮತ್ತು ಕ್ರಿಟೇಷಿಯಸ್ (65 mya) ಅಳಿವಿನ ಅವಧಿಗಳು(notclear ಕಳೆದ 10,000 ವರ್ಷಗಳಲ್ಲಿ, ಭೂಮಿಯ ಪರಿಸರ ವ್ಯವಸ್ಥೆಯ ಮೇಲಿನ ಮಾನವನ ಪ್ರಭಾವವು ಬಹಳ ವ್ಯಾಪಕವಾಗಿದ್ದು,ಅಳಿದುಹೋದ ಪ್ರಭೇದಗಳ ಸಂಖ್ಯೆಯನ್ನು ಅಂದಾಜಿಸಲು ವಿಜ್ಞಾನಿಗಳಿಗೆ ಕಷ್ಟವಾಗಿದೆ;[13] ಅರಣ್ಯನಾಶ, ಬಂಡೆ-ಸಾಲುಗಳ ನಾಶ, ಜೌಗುಪ್ರದೇಶಗಳ ಬರಿದಾಗುವಿಕೆ ಮತ್ತು ಮಾನವನ ಇತರ ಚಟುವಟಿಕೆಗಳು ಮಾನವನು ಪ್ರಭೇದಗಳನ್ನು ಅಂದಾಜು ಮಾಡುವುಕ್ಕಿಂತ ವೇಗವಾಗಿ ಹೆಚ್ಚಾಗುತ್ತಿದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ನ ಇತ್ತೀಚಿನ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ಪ್ರಕಾರ,ಭೂಮಿಯ ಜೈವಿಕ- ಮರುಉತ್ಪಾದಿಸುವ ಸಾಮರ್ಥ್ಯವನ್ನು ನಾವು ಮೀರಿದ್ದೇವೆ ಎಂದು ಅಂದಾಜು ಮಾಡಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಬೇಡಿಕೆಗಳನ್ನು ಪೂರೈಸಲು 1.5ರಷ್ಟು ಭೂಮಿಯ ಅಗತ್ಯವಿದೆ.[14]
ಸಂರಕ್ಷಣಾ ಜೀವಶಾಸ್ತ್ರಜ್ಞರು ಮಾನವಕುಲವು ಆರನೇ ಮತ್ತು ಅತ್ಯುನ್ನತ ಭೂಮಿಯ-ಅಳಿವಿನ ಅವಧಿಯಲ್ಲಿ ಜೀವಿಸುತ್ತಿದೆ ಎಂದು ಸೂಚಿಸುವ ಭೂಮಿಯ ಎಲ್ಲಾ ಭಾಗಗಳಿಂದ ಸಾಕ್ಷ್ಯಾಧಾರವನ್ನು ಪಡೆದು ಪ್ರಕಟಿಸಿದ್ದಾರೆ.[15][16][17] ನಾವು ಎಣೆಯಿಲ್ಲದಷ್ಟು ಸಂಖ್ಯೆಯ ಪ್ರಭೇದಗಳ ಅಳಿವಿನ ಕಾಲದಲ್ಲಿ ವಾಸಿಸುತ್ತಿದ್ದೇವೆಂದು ಸೂಚಿಸಲಾಗಿದೆ. ಇದನ್ನು ಹೋಲೊಸೀನ್ ಅಳಿವಿನ ಅವಧಿಯೆಂದೂ ಕರೆಯುತ್ತಾರೆ.[18] ಜಾಗತಿಕ ಅಳಿವಿನ ದರವು ನೈಸರ್ಗಿಕ ಹಿನ್ನೆಲೆ ಅಳಿವಿನ ದರಕ್ಕಿಂತ ಸರಿಸುಮಾರು 100,000 ಪಟ್ಟು ಹೆಚ್ಚಾಗಿರಬಹುದು.[19] ಎಲ್ಲಾ ಸಸ್ತನಿ ಕುಲಗಳಲ್ಲಿ ಮೂರನೇ-ಎರಡರಷ್ಟು ಮತ್ತು ಕನಿಷ್ಠ 44 kilograms (97 lb)ರಷ್ಟು ಭಾರವಿರುವ ಎಲ್ಲಾ ಸಸ್ತನಿ ಪ್ರಭೇದಗಳಲ್ಲಿ ಅರ್ಧದಷ್ಟು ಕಳೆದ 50,000 ವರ್ಷಗಳಲ್ಲಿ ಅಳಿದುಹೋಗಿವೆಯೆಂದು ಅಂದಾಜಿಸಲಾಗಿದೆ. ಈ ಆರನೇ ಅಳಿವಿನ ಅವಧಿಯು ವಿಶಿಷ್ಟವೆಂದು ಊಹಿಸಲಾಗಿದೆ. ಏಕೆಂದರೆ ಇದು ಭೂಮಿಯ 4 ಶತಕೋಟಿ ವರ್ಷದ ಇತಿಹಾಸದಲ್ಲಿ ಮತ್ತೊಂದು ಜೈವಿಕ ಅಂಶದಿಂದ ಉಂಟಾದ ಒಂದು ಪ್ರಮುಖ ಅಳಿವು ಆಗಲಿದೆ.[20][21][22] ಉಭಯಚರಿಗಳು ಯಾವುದೇ ಇತರ ಕಶೇರುಕ ಗುಂಪುಗಳಿಗಿಂತ ವೇಗವಾಗಿ ಜಾಗತಿಕ ಮಟ್ಟದಲ್ಲಿ ಕ್ಷೀಣಿಸುತ್ತಿವೆ ಹಾಗೂ ಜೀವಂತವಿರುವ ಪ್ರಭೇದಗಳಲ್ಲಿ ಸುಮಾರು 32%ನಷ್ಟು ಅಳಿವಿನ ಅಂಚಿನಲ್ಲಿವೆ ಎಂದು ಗ್ಲೋಬಲ್ ಆಂಫಿಬಿಯನ್ ಅಸೆಸ್ಮೆಂಟ್[23] ವರದಿ ಮಾಡಿದೆ. ಬದುಕಿರುವ ಪ್ರಭೇದಗಳ ಕ್ಷೀಣಿಸುವಿಕೆಯು ಹಾಗೆಯೇ ಮುಂದುವರಿಯುತ್ತಿದೆ. ಅವುಗಳಲ್ಲಿ 43%ನಷ್ಟು ಪ್ರಭೇದಗಳು ಅಳಿವಿನ ಅಪಾಯವನ್ನು ಹೊಂದಿವೆ. ಮಧ್ಯ-1980ರ ದಶಕದಿಂದ ಅಳಿವಿನ ವಾಸ್ತವವಾದ ದರಗಳು ಪಳೆಯುಳಿಕೆ ದಾಖಲೆಯಿಂದ ಅಂದಾಜಿಸಲಾದ ದರಗಳನ್ನು 211 ಪಟ್ಟು ಮೀರಿಸಿವೆ.[24] ಆದರೆ "ಪ್ರಸ್ತುತದ ಉಭಯಚರಿಗಳ ಅಳಿವಿನ ದರವು ಉಭಯಚರಿಗಳ ಹಿನ್ನೆಲೆ ಅಳಿವಿನ ದರವನ್ನು 25,039ರಿಂದ 45,474ರಷ್ಟು ಪಟ್ಟು ಮೀರಿಸಿವೆ."[24] ಜಾಗತಿಕ ಅಳಿವಿನ ಪ್ರವೃತ್ತಿಯು ನಿಗಾವಹಿಸುತ್ತಿರುವ ಪ್ರಮುಖ ಕಶೇರುಕ ಗುಂಪುಗಳಲ್ಲಿ ಉಂಟಾಗುತ್ತಿವೆ. ಉದಾಹರಣೆಗಾಗಿ, 23%ನಷ್ಟು ಸಸ್ತನಿಗಳು ಮತ್ತು 12%ನಷ್ಟು ಪಕ್ಷಿಗಳು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)ನಿಂದ ಕೆಂಪು ಪಟ್ಟಿಯಲ್ಲಿವೆ, ಅಂದರೆ ಅವೂ ಸಹ ಅಳಿವಿನಂಚಿನಲ್ಲಿವೆ.
ಪ್ರಪಂಚದಲ್ಲಿನ ಹವಳದ ಬಂಡೆಗಳು ತೀವ್ರ ಪ್ರಮಾಣದಲ್ಲಿ ಮತ್ತು ಅತಿ ಶೀಘ್ರವಾಗಿ ನಾಶವಾಗುತ್ತಿದೆಯೆಂದು ಜಾಗತಿಕ ಅಂದಾಜುಗಳು ವರದಿ ಮಾಡಿವೆ. 2000ರ ದಾಖಲೆಯ ಪ್ರಕಾರ, ಪ್ರಪಂಚದ ಹವಳದ ಬಂಡೆಯ ಪರಿಸರ ವ್ಯವಸ್ಥೆಯು 27%ನಷ್ಟು ಸಂಪೂರ್ಣವಾಗಿ ಹಾನಿಯಾಗಿದೆ. ಅತಿಹೆಚ್ಚಿನ ಪ್ರಮಾಣದ ಹಾನಿಯು 1998ರ ಪರಿಣಾಮಕಾರಿಯಾದ "ಬ್ಲೀಚಿಂಗ್" ಅವಧಿಯಲ್ಲಿ ಕಂಡುಬಂದಿದೆ. ಆ ಕಾಲದಲ್ಲಿ ಒಂದು ವರ್ಷದೊಳಗೆ ಪ್ರಪಂಚದ ಹವಳದ ಬಂಡೆಗಳಲ್ಲಿ ಸರಿಸುಮಾರು 16%ನಷ್ಟು ನಾಶವಾಯಿತು. ಸಾಗರದ ತಾಪಮಾನ ಮತ್ತು ಆಮ್ಲತೆಯ ಏರಿಕೆಯಂತಹ ಅನೇಕ ನೈಸರ್ಗಿಕ ಒತ್ತಡಗಳಮಿಶ್ರಣದಿಂದಾಗಿ ಹವಳದ ಬಿಳುಪು ಉಂಟಾಯಿತು. ಅವಲಂಬಿತ ಆಲ್ಗೆಗಳ ಉತ್ಪತ್ತಿಗೆ ಮತ್ತು ಹವಳಗಳ ಅಳಿವಿಗೆ ಇದು ಕಾರಣವಾಯಿತು.[25] ಹವಳದ ಬಂಡೆಯ ಜೀವ-ವೈವಿಧ್ಯತೆಯ ಅಳಿವಿನ ಅಪಾಯವು ಕಳೆದ ಹತ್ತು ವರ್ಷಗಳಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಮುಂದಿನ ಶತಮಾನದಲ್ಲಿ ಸಂಪೂರ್ಣವಾಗಿ ಅಳಿದುಹೋಗಬಹುದೆಂದು ಮುಂಗಾಣಲಾದ ಹವಳದ ಬಂಡೆಗಳ ನಷ್ಟವು ಅಗಾಧ ಪ್ರಮಾಣದ ಆರ್ಥಿಕ ಪರಿಣಾಮವನ್ನು ಉಂಟುಮಾಡಲಿದೆ.ಜಾಗತಿಕ ಜೀವವೈವಿಧ್ಯತೆಯ ಸಮತೋಲನಕ್ಕೆ ಅಪಾಯದ ಸೂಚನೆಯನ್ನು ನೀಡುತ್ತದೆ ಹಾಗೂ ನೂರಾರು ದಶಲಕ್ಷದಷ್ಟು ಜನರ ಆಹಾರ-ಭದ್ರತೆಯನ್ನು ವಿಪತ್ತಿಗೆ ಸಿಲುಕಿಸುತ್ತದೆ.[26] ಸಂರಕ್ಷಣಾ ಜೀವಶಾಸ್ತ್ರವು ಪ್ರಪಂಚದ ಸಾಗರಗಳನ್ನು[25] ಒಳಗೊಂಡ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ (ಮತ್ತು ಜೀವವೈವಿಧ್ಯತೆಯ ಕುರಿತಾದ ಇತರ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉದಾ. Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ. Archived 2011-06-05 ವೇಬ್ಯಾಕ್ ಮೆಷಿನ್ ನಲ್ಲಿ.)
J.B. Jackson[12]: 11463
ಸಾಗರಗಳಲ್ಲಿ CO2 ಮಟ್ಟದ ಏರಿಕೆಯಿಂದ ಆಮ್ಲತೆಯು ಹೆಚ್ಚಾಗುವ ಅಪಾಯವಿದೆ. ಸಾಗರದ ನೈಸರ್ಗಿಕ ಸಂಪನ್ಮೂಲಗಳನ್ನು ಬಹಳವಾಗಿ ಅವಲಂಬಿಸಿರುವ ಸಮುದಾಯಗಳಿಗೆ ಇದು ಅತ್ಯಂತ ಗಂಭೀರ ಅಪಾಯವಾಗಿದೆ. ಸಾಗರದ ಹೆಚ್ಚಿನ ಪ್ರಭೇದಗಳು ಸಾಗರದಲ್ಲಾಗುವ ರಾಸಾಯನಿಕ ಬದಲಾವಣೆಗಳಿಗೆ ಹೊಂದಿಕೊಂಡು ಬೆಳೆಯುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲವೆಂಬುದು ಒಂದು ಗಮನಾರ್ಹ ಸಂಗತಿಯಾಗಿದೆ.[27]
ಪ್ರಭೇದಗಳ ಅಳಿವನ್ನು ತಪ್ಪಿಸುವ ಕಾರ್ಯಗಳು ಯಶಸ್ವಿಯಾಗಬಹುದೆಂಬ ನಿರೀಕ್ಷೆಯು, "ಸಾಗರದಲ್ಲಿನ 90%ನಷ್ಟು ದೊಡ್ಡ (ಸುಮಾರು ≥50 kg), ತೆರೆದ ಸಾಗರದ ಟೂನ, ಬಿಲ್ಫಿಶ್ ಮತ್ತು ಶಾರ್ಕ್ಗಳು"[12] ಸಂಪೂರ್ಣವಾಗಿ ನಾಶಹೊಂದಿದಾಗ ಅಸಂಭವವೆಂದು ಕಂಡುಬಂದಿತು. ಸಾಗರದ ಪರಿಸರ ವ್ಯವಸ್ಥೆಯಲ್ಲಿ ಪ್ರಧಾನವಾಗಿ ಕೇವಲ ಮೈಕ್ರೋಬ್ಗಳೊಂದಿಗೆ ಸಾಗರವು ಕೆಲವು ಬಹು-ಕೋಶೀಯ ಪ್ರಭೇದಗಳನ್ನು ಹೊಂದಿರುತ್ತದೆಂದು ಇತ್ತೀಚಿನ ಪ್ರವೃತ್ತಿಗಳ ವೈಜ್ಞಾನಿಕ ಅವಲೋಕನವು ತಿಳಿಸಿದೆ.[12]
ಕಶೇರುಕಗಳಷ್ಟು ಪ್ರಮಾಣದಲ್ಲಿ ಸಾಮಾಜಿಕ ಗಮನವನ್ನು ಸೆಳೆಯದ ಅಥವಾ ಆರ್ಥಿಕ ನೆರವನ್ನು ಆಕರ್ಷಿಸದ, ವ್ಯಾಪಕ ಜೀವವೈವಿಧ್ಯತೆಯನ್ನು ಪ್ರತಿನಿಧಿಸುವ ಪ್ರಭೇದ ವರ್ಗೀಕರಣದ ಗುಂಪುಗಳಾದಶಿಲೀಂಧ್ರಗಳು, ಕಲ್ಲುಹೂವುಗಳು, ಸಸ್ಯ ಮತ್ತು ಕೀಟ[10][28][29] ಸಮುದಾಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿವೆ. ವಿಶೇಷವಾಗಿ ಕೀಟಗಳ ಸಂರಕ್ಷಣೆಯು ಸಂರಕ್ಷಣಾ ಜೀವಶಾಸ್ತ್ರದಲ್ಲಿ ಪ್ರಧಾನ ಪ್ರಾಮುಖ್ಯತೆಯನ್ನು ಹೊಂದಿದೆ. ಜೀವಗೋಳದಲ್ಲಿ ಕೀಟಗಳು ಅತಿ ಹೆಚ್ಚಿನ ಮಹತ್ವವನ್ನು ಹೊಂದಿವೆ ಏಕೆಂದರೆ ಪ್ರಭೇದಗಳ ಸಮೃದ್ಧತೆಯ ಮಾಪನದಲ್ಲಿ ಅವು ಇತರ ಪ್ರಭೇದಗಳಿಗಿಂತ ಅಧಿಕ ಸಂಖ್ಯೆಯಲ್ಲಿವೆ. ನೆಲದಲ್ಲಿನ ಹೆಚ್ಚಿನ ಪ್ರಮಾಣದ ಜೀವರಾಶಿಯು ಸಸ್ಯಗಳಲ್ಲಿ ಕಂಡುಬರುತ್ತದೆ. ಸಸ್ಯಗಳು ಕೀಟಗಳ ಸಂಬಂಧಗ ಳಿಂದಾಗಿ ಉಳಿದುಕೊಂಡಿವೆ. ಕೀಟಗಳ ಈ ಅತ್ಯುನ್ನತ ಪರಿಸರ ವಿಜ್ಞಾನದ ಮೌಲ್ಯವು, ಸೌಂದರ್ಯಪ್ರಜ್ಞೆಗೆ-ಅಹಿತಕರವಾಗಿರುವ ಈ ಪ್ರಭೇದಗಳತ್ತ ಋಣಾತ್ಮಕವಾಗಿ ಪ್ರತಿಕ್ರಿಯಿಸುವ ಸಮಾಜದಿಂದ ಪ್ರತಿರೋಧ ಎದುರಿಸುತ್ತಿದೆ.[30][31]
ಕೀಟ ಸಮುದಾಯದಲ್ಲಿ ಸಾರ್ವಜನಿಕ ಗಮನವನ್ನು ಸೆಳೆದ ಒಂದು ಪ್ರಮುಖ ವಿಷಯವೆಂದರೆ ಜೇನ್ನೊಣಗಳು (ಅಪಿಸ್ ಮೆಲ್ಲಿಫೆರ ) ನಿಗೂಢರೀತಿಯಲ್ಲಿ ಕಣ್ಮರೆಯಾಗುತ್ತಿರುವ ಪ್ರಕರಣ. ಜೇನ್ನೊಣಗಳು ಅತ್ಯಗತ್ಯ ಪರಿಸರ ವಿಜ್ಞಾನದ ಸೇವೆಗಳನ್ನು ಒದಗಿಸುತ್ತವೆ. ಅವುಗಳು ಪರಾಗಸ್ಪರ್ಶ ಕ್ರಿಯೆಯ ಮೂಲಕ ಕೃಷಿ ಬೆಳೆಗಳಲ್ಲಿ ಭಾರಿ ವೈವಿಧ್ಯತೆಗೆ ನೆರವಾಗುತ್ತವೆ. ಖಾಲಿ ಜೇನುಗೂಡುಗಳನ್ನು ಬಿಟ್ಟುಹೋಗುವ ಜೇನ್ನೊಣಗಳ ಹಠಾತ್ ಕಣ್ಮರೆ ಅಥವಾ ಕಾಲನಿ ಕೊಲ್ಯಾಪ್ಸ್ ಡಿಸಾರ್ಡರ್ (CCD) ಸಾಮಾನ್ಯವಾಗುತ್ತಿದೆ. 2006ರಿಂದ 2007ರವರೆಗೆ 16-ತಿಂಗಳ ಅವಧಿಯಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ 577 ಜೇನುಸಾಕಣೆಕಾರರಪೈಕಿ 29%ನಷ್ಟು ಮಂದಿ ಅವರ 76%ನಷ್ಟು ಕಾಲನಿಗಳಲ್ಲಿ CCD ನಷ್ಟವಾಗಿದೆಯೆಂದು ವರದಿ ಮಾಡಿದ್ದಾರೆ. ಜೇನ್ನೊಣಗಳ ಸಂಖ್ಯೆಯಲ್ಲಿನ ಈ ಹಠಾತ್ ನಷ್ಟವು ಕೃಷಿ ಕ್ಷೇತ್ರದ ಮೇಲೆ ಬಲವಾದ ಪರಿಣಾಮ ಬೀರಿದೆ. ಈ ಭಾರಿ ನಷ್ಟದ ಹಿಂದಿನ ಕಾರಣವು ವಿಜ್ಞಾನಿಗಳನ್ನು ತಬ್ಬಿಬ್ಬುಗೊಳಿಸಿದೆ. ವಿನಾಶಕಾರಿ ಪ್ರಭೇದಗಳು, ಕೀಟನಾಶಕಗಳು ಮತ್ತು ಜಾಗತಿಕ ತಾಪಮಾನ ಏರಿಕೆ ಮೊದಲಾದವುಗಳನ್ನು ಸಂಭಾವ್ಯ ಕಾರಣಗಳೆಂದು ಪರಿಗಣಿಸಲಾಗಿದೆ.[32]
ಸಂರಕ್ಷಣಾ ಜೀವಶಾಸ್ತ್ರವನ್ನು ಕೀಟಗಳು, ಅರಣ್ಯಗಳು ಮತ್ತು ಹವಾಮಾನ ಬದಲಾವಣೆಯೊಂದಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿನ ಪರ್ವತದ ಪೈನ್ ಜೀರುಂಡೆಯ (ಡೆಂಡ್ರೊಕ್ಟನಸ್ ಪಾಂಡೆರೊಸೆ ) ಸಾಂಕ್ರಾಮಿಕ ರೋಗ. ಇದು 1999ರಿಂದ 470,000 km2 (180,000 sq mi)ನಷ್ಟು ಅರಣ್ಯ ಪ್ರದೇಶದಲ್ಲಿ ಸೋಂಕು ಉಂಟುಮಾಡಿದೆ.[33] ಈ ಸಮಸ್ಯೆಯನ್ನು ಪರಿಹರಿಸಲು ಬ್ರಿಟಿಷ್ ಕೊಲಂಬಿಯಾದ ಸರ್ಕಾರವು ಪರಿಣಾಮಕಾರಿ ಯೋಜನೆಯೊಂದನ್ನು ರೂಪಿಸಿತು.[34]
This impact [pine beetle epidemic] converted the forest from a small net carbon sink to a large net carbon source both during and immediately after the outbreak. In the worst year, the impacts resulting from the beetle outbreak in British Columbia were equivalent to 75% of the average annual direct forest fire emissions from all of Canada during 1959–1999.
— Kurz et al.[35]
ಅತಿ ಹೆಚ್ಚಿನ ಪ್ರಮಾಣದ ಪರೋಪಜೀವಿಗಳು ಅಳಿವಿನ ಅಂಚಿನಲ್ಲಿವೆ. ಅವುಗಳಲ್ಲಿ ಕೆಲವನ್ನು ಮಾನವರಿಗೆ ಅಥವಾ ಸಾಕುಪ್ರಾಣಿಗಳಿಗೆ ಕಂಟಕವೆಂದು ನಾಶಮಾಡಲಾಗಿದೆ. ಆದಾಗ್ಯೂ, ಹೆಚ್ಚಿನವು ನಿರುಪದ್ರವಿಗಳು. ಪರೋಪಜೀವಿಗಳ ಸಂಖ್ಯೆಯು ಕ್ಷೀಣಿಸುವ ಅಥವಾ ಅಥವಾ ವಿಘಟನೆಯಾಗುವ ಅಥವಾ ಸಂಪೂರ್ಣವಾಗಿ ನಾಶವಾಗುವ ಅಪಾಯಗಳಿವೆ.
ರೋಗ ಮತ್ತು ಹವಾಮಾನ ಬದಲಾವಣೆಯನ್ನೂ ಒಳಗೊಂಡಂತೆ ಹೆಚ್ಚಿನ ಜೀವವೈವಿಧ್ಯತೆಯ ಅಪಾಯಗಳು ಸಂರಕ್ಷಿತ ಪ್ರದೇಶಗಳ ಗಡಿಯೊಳಗೆ ತಲುಪಿವೆ ಹಾಗೂ ಅವನ್ನು 'ಹೆಚ್ಚು ಸಂರಕ್ಷಿತವಲ್ಲದ ಪ್ರದೇಶಗಳಾಗಿ' ಮಾಡಿವೆ (ಉದಾ. ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್[36]). ಉದಾಹರಣೆಗಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಹವಾಮಾನ ಬದಲಾವಣೆಯನ್ನು ಒಂದು ಗಂಭೀರ ಅಪಾಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಪ್ರಭೇದಗಳ ಅಳಿವು ಮತ್ತು ಪರಿಸರಕ್ಕೆ ಇಂಗಾಲದ ಡೈಆಕ್ಸೈಡ್ನ ಬಿಡುಗಡೆಯ ಮಧ್ಯೆ ಪ್ರತ್ಯಾದಾನದ ಕುಣಿಕೆ ಇದೆ.[33][35] ಪರಿಸರ ವ್ಯವಸ್ಥೆಗಳು ಜಾಗತಿಕ ಪರಿಸ್ಥಿತಿಗಳನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದ ಇಂಗಾಲವನ್ನು ಸಂಗ್ರಹಿಸುತ್ತವೆ ಮತ್ತು ಆವರ್ತನಗೊಳಿಸುತ್ತವೆ .[37] ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಜಾಗತಿಕ ಜೀವ-ವೈವಿಧ್ಯತೆಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗುವ ಮಹಾದುರಂತದ ಅಪಾಯವನ್ನು ತಂದೊಡ್ಡಿವೆ. 2050ರೊಳಗೆ 15ರಿಂದ 37 ಪ್ರತಿಶತದಷ್ಟು ಪ್ರಭೇದಗಳು[38][39] ಅಥವಾ ಮುಂದಿನ 50 ವರ್ಷಗಳಲ್ಲಿ 50 ಪ್ರತಿಶತದಷ್ಟು ಪ್ರಭೇದಗಳು ನಾಶ ಹೊಂದಬಹುದೆಂಬ ಅಪಾಯವನ್ನು ಅಂದಾಜಿಸಲಾಗಿದೆ.[10]
ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಕ್ರಿಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಗಮನಕ್ಕೆ ಬಾರದಂತೆ ಮುಂದುವರೆಯುವ ಅಪಾಯಗಳೆಂದರೆ - ಹವಾಮಾನ ಬದಲಾವಣೆ, ಭಾರಿ ಕೃಷಿ, ಅರಣ್ಯನಾಶ, ಅತಿಯಾಗಿ ಮೇಯಿಸುವಿಕೆ, ಕಡಿದು-ಸುಡುವ ಕೃಷಿ, ನಗರಗಳ ಅಭಿವೃದ್ಧಿ, ವನ್ಯಪ್ರಭೇದಗಳ ವ್ಯಾಪಾರ, ಬೆಳಕಿನ ಮಾಲಿನ್ಯ(ಕೃತಕ ಬೆಳಕಿನ ವಿಪರೀತ ಬಳಕೆ) ಮತ್ತು ಕೀಟನಾಶಕಗಳ ಬಳಕೆ.[13][40][41][42] [43] [44] ಆವಾಸ ಸ್ಥಾನಗಳ ಛಿದ್ರೀಕರಣವು ಅತಿ ಹೆಚ್ಚು ಕಷ್ಟದ ಸವಾಲುಗಳನ್ನು ತಂದೊಡ್ಡಿದೆ. ಏಕೆಂದರೆ ಸಂರಕ್ಷಿತ ಪ್ರದೇಶಗಳ ಜಾಗತಿಕ ಜಾಲವು ಭೂಮಿಯ ಮೇಲ್ಮೆಯ ಕೇವಲ 11.5%ನಷ್ಟು ಪ್ರದೇಶವನ್ನು ಮಾತ್ರ ಒಳಗೊಳ್ಳುತ್ತದೆ.[45] ಸಂರಕ್ಷಿತ ಪ್ರದೇಶಗಳ ಛಿದ್ರೀಕರಣ ಮತ್ತು ಕೊರತೆಯ ಒಂದು ಪ್ರಮುಖ ಪರಿಣಾಮವೆಂದರೆ ಜಾಗತಿಕ ಮಟ್ಟದಲ್ಲಿ ಪ್ರಭೇದಗಳ ವಲಸೆ ಹೋಗುವ ಪ್ರಮಾಣವು ಕಡಿಮೆಯಾಗುತ್ತದೆ. ಶತಕೋಟಿ ಟನ್ಗಳಷ್ಟು ಜೀವರಾಶಿಗಳು ಭೂಮಿಯಲ್ಲಿ ಪೌಷ್ಠಿಕಾಂಶದ ಚಕ್ರಕ್ಕೆ ಜವಾಬ್ದಾರಿಯಾಗಿರುವುದನ್ನು ಪರಿಗಣಿಸಿದರೆ, ವಲಸೆಯ ಕ್ಷೀಣಿಸುವಿಕೆಯು ಸಂರಕ್ಷಣಾ ಜೀವಶಾಸ್ತ್ರದಲ್ಲಿ ಒಂದು ಗಂಭೀರ ಸಮಸ್ಯೆಯಾಗಿದೆ.[46]
Wake and Vredenburg[15]
ಆದರೆ ಈ ಅಂಕಿಅಂಶಗಳು ಮಾನವನ ಚಟುವಟಿಕೆಗಳು ಜೀವಗೋಳಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡಿರುವುದನ್ನು ಸೂಚಿಸುವುದಿಲ್ಲ. ವಂಶವಾಹಿಗಳಿಂದ ಪರಿಸರ ವ್ಯವಸ್ಥೆಗಳವರೆಗಿನ ಎಲ್ಲಾ ಮಟ್ಟದಲ್ಲಿ ಜೀವವೈವಿಧ್ಯತೆಯ ಸಂರಕ್ಷಣಾ ನಿರ್ವಹಣೆ ಮತ್ತು ಯೋಜನೆಯೊಂದಿಗೆ, ಮಾನವನು ನಿಸರ್ಗದೊಂದಿಗೆ ಸಮರ್ಥನೀಯ ರೀತಿಯಲ್ಲಿ ಅನ್ಯೋನ್ಯವಾಗಿ ಸಹಜೀವನ ನಡೆಸುವ ಅನೇಕ ಉದಾಹರಣೆಗಳಿವೆ.[47] ಆದರೆ ಪ್ರಸ್ತುತದ ಪ್ರಭೇದಗಳ ಅಳಿವನ್ನು ತಡೆಗಟ್ಟುವಲ್ಲಿ ಮಾನವನ ಮಧ್ಯಪ್ರವೇಶಕ್ಕೆ ಕಾಲ ಮೀರಿ ಹೋಗಿದೆ.[15]
ಅಳಿವಿನ ಪ್ರಮಾಣಗಳನ್ನು ವಿವಿಧ ರೀತಿಗಳಲ್ಲಿ ಅಂದಾಜು ಮಾಡಬಹುದು. ಸಂರಕ್ಷಣಾ ಜೀವಶಾಸ್ತ್ರಜ್ಞರು ಅಂತಹ ಅಂದಾಜುಗಳನ್ನು ಪಡೆಯಲು ಪಳೆಯುಳಿಕೆ ದಾಖಲೆಗಳ ಸಂಖ್ಯಾಶಾಸ್ತ್ರೀಯ ಕ್ರಮಗಳು,[48] ಆವಾಸ ಸ್ಥಾನಗಳ ನಷ್ಟದ ದರಗಳು ಹಾಗೂ ಜೀವವೈವಿಧ್ಯತೆಯ ಹಾನಿಯಂತಹ ಇತರ ಅನೇಕ ವ್ಯತ್ಯಯಗಳನ್ನು ಆವಾಸಸ್ಥಾನದ ನಷ್ಟ ಮತ್ತು ಪ್ರದೇಶದಲ್ಲಿ ನೆಲೆಸಿರುವಿಕೆಯ[49] ದರದ ಕ್ರಿಯೆಯಾಗಿ ಬಳಸುತ್ತಾರೆ.[50] ದ ಥಿಯರಿ ಆಫ್ ಐಲ್ಯಾಂಡ್ ಬಯೋಜಿಯಾಗ್ರಫಿ[51] ಯು ಪ್ರಭೇದಗಳ ಅಳಿವಿನ ದರವನ್ನು ಹೇಗೆ ಅಂದಾಜು ಮಾಡಬಹುದೆಂಬುದನ್ನು ಮತ್ತು ಅದರ ಕಾರ್ಯವಿಧಾನವನ್ನು ವೈಜ್ಞಾನಿಕವಾಗಿ ತಿಳಿಯುವ ಬಗ್ಗೆ ಬಹುಮುಖ್ಯ ಕೊಡುಗೆಯನ್ನು ನೀಡಿದೆ. ಒಂದು ನಿರ್ದಿಷ್ಟವಾದ ಕೆಲವು ವರ್ಷಗಳಲ್ಲಿ ಒಂದೊಂದು ಪ್ರಭೇದ ಅಳಿಯುತ್ತಿವೆಯೆಂದು ಪ್ರಸ್ತುತದ ಹಿನ್ನೆಲೆಯ ಅಳಿವಿನ ಪ್ರಮಾಣವು ಅಂದಾಜಿಸಿದೆ.[52]
ಪ್ರಸಕ್ತ ಪ್ರಭೇದಗಳ-ನಾಶವನ್ನು ಅಂದಾಜು ಮಾಡುವುದು ಬಹಳ ಕ್ಲಿಷ್ಟವಾಗಿದೆ. ಏಕೆಂದರೆ ಭೂಮಿಯ ಮೇಲಿನ ಹೆಚ್ಚಿನ ಪ್ರಭೇದಗಳ ಬಗ್ಗೆ ವಿವರಗಳಿಲ್ಲ ಅಥವಾ ಅವುಗಳ ಮೌಲ್ಯ ಅಂದಾಜು ಮಾಡಿಲ್ಲ. ಅಂದಾಜುಗಳು ವಾಸ್ತವವಾಗಿ ಎಷ್ಟು ಪ್ರಭೇದಗಳು ಅಸ್ತಿತ್ವದಲ್ಲಿವೆ ಎಂಬುದರಿಂದ (ಅಂದಾಜಿಸಿದ ಪ್ರಮಾಣ: 3,600,000-111,700,000)[53] ಎಷ್ಟು ಪ್ರಭೇದಗಳು ದ್ವಿನಾಮದ ಹೆಸರನ್ನು ಪಡೆದಿವೆ (ಅಂದಾಜಿಸಿದ ಪ್ರಮಾಣ: 1.5-8 ದಶಲಕ್ಷ) ಎಂಬುದರ ಆಧಾರದಲ್ಲಿ ವ್ಯತ್ಯಾಸಗೊಳ್ಳುತ್ತದೆ.[53] ವಿವರಣೆ ನೀಡಲಾದ ಎಲ್ಲಾ ಪ್ರಭೇದಗಳಲ್ಲಿ 1%ನಷ್ಟು ಪ್ರಭೇದಗಳ ಬಗ್ಗೆ ಕೇವಲ ಅವುಗಳ ಅಸ್ತಿತ್ವವನ್ನು ಮಾತ್ರ ಗಮನಿಸದೇ ಸಂಪೂರ್ಣವಾಗಿ ಅಧ್ಯಯನ ಮಾಡಲಾಗಿದೆ.[53] ಈ ಮಾಹಿತಿಗಳಿಂದ IUCN, ಮೌಲ್ಯಮಾಪನ ಮಾಡಿದ 23%ನಷ್ಟು ಕಶೇರುಕಗಳು, 5% of ಅಕಶೇರುಕಗಳು ಮತ್ತು 70%ನಷ್ಟು ಸಸ್ಯಗಳು ಅಳಿವಿನ ಅಥವಾ ಅಪಾಯದ ಅಂಚಿನಲ್ಲಿದೆ ಎಂದು ವರದಿ ಮಾಡಿದೆ.[54][55]
ವ್ಯವಸ್ಥಿತ ಸಂರಕ್ಷಣಾ ಯೋಜನೆಯು, ಅತಿ ಹೆಚ್ಚಿನ ಪ್ರಾಮುಖ್ಯತೆಯ ಜೀವವೈವಿಧ್ಯತೆಯ ಪ್ರಭೇದಗಳನ್ನು ಕಂಡುಹಿಡಿದು ಉಳಿಸುವ ದಕ್ಷ ಮತ್ತು ಸಮರ್ಥ ಸಂರಕ್ಷಣಾ ವಿನ್ಯಾಸವನ್ನು ಗುರುತಿಸುವ ಹಾಗೂ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಸಮುದಾಯಗಳ ಜತೆ ಕಾರ್ಯನಿರ್ವಹಿಸುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಮಾರ್ಗ್ಯೂಲ್ಸ್ ಮತ್ತು ಪ್ರೆಸ್ಸಿ ವ್ಯವಸ್ಥಿತ ಯೋಜನೆಯ ನಡೆಯಲ್ಲಿ ಆರು ಪರಸ್ಪರ ಸಂಬಂಧಿತ ಹಂತಗಳನ್ನು ಗುರುತಿಸಿದ್ದಾರೆ:[56]
ಸಂರಕ್ಷಣಾ ಜೀವಶಾಸ್ತ್ರಜ್ಞರು ಅನುದಾನ ಪ್ರಸ್ತಾಪಗಳಿಗೆ ಅಥವಾ ಅವರ ಯೋಜನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಮತ್ತು ಅತ್ಯುತ್ತಮ ನಿರ್ವಹಣಾ ಅಭ್ಯಾಸಗಳನ್ನು ಗುರುತಿಸಲು ವಿವರವಾದ ಸಂರಕ್ಷಣಾ ಯೋಜನೆಗಳನ್ನು ನಿಯಮಿತವಾಗಿ ತಯಾರಿಸುತ್ತಾರೆ (ಉದಾ.[57]). ವ್ಯವಸ್ಥಿತ ಕಾರ್ಯವಿಧಾನಗಳು ಸಾಮಾನ್ಯವಾಗಿ ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ನೆರವು ನೀಡಲು ಜಿಯಾಗ್ರಾಫಿಕ್ ಇನ್ಫರ್ಮೇಶನ್ ಸಿಸ್ಟಮ್ನ ಸೇವೆಗಳನ್ನು ಬಳಸಿಕೊಳ್ಳುತ್ತವೆ.
ಸೊಸೈಟಿ ಫಾರ್ ಕನ್ಸರ್ವೇಶನ್ ಬಯೋಲಜಿಯು ಸಂರಕ್ಷಣಾ ವೃತ್ತಿಪರರ ಒಂದು ಜಾಗತಿಕ ಸಮುದಾಯವಾಗಿದೆ. ಇದು ಜೀವವೈವಿಧ್ಯತೆಯ ಸಂರಕ್ಷಣೆಯ ಅಧ್ಯಯನ ಮತ್ತು ಅಭ್ಯಾಸವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಸಂರಕ್ಷಣಾ ಜೀವಶಾಸ್ತ್ರವು ಕಾರ್ಯವಿಧಾನದಲ್ಲಿ ಜೀವಶಾಸ್ತ್ರವನ್ನೂ ಮೀರಿಸಿ, ತತ್ವಶಾಸ್ತ್ರ, ಕಾನೂನು, ಅರ್ಥಶಾಸ್ತ್ರ, ಮಾನವಿಕಗಳು, ಕಲೆ, ಮಾನವಶಾಸ್ತ್ರ ಮತ್ತು ಶಿಕ್ಷಣ ಮೊದಲಾದ ವಿಷಯಗಳನ್ನು ಆವರಿಸುತ್ತದೆ.[4][5] ಜೀವಶಾಸ್ತ್ರದಲ್ಲಿ ಸಂರಕ್ಷಣಾ ತಳಿಶಾಸ್ತ್ರ(ಕನ್ಸರ್ವೇಶನ್ ಜೆನೆಟಿಕ್ಸ್) ಮತ್ತು ವಿಕಾಸಗಳು ಬಹುದೊಡ್ಡ ಕ್ಷೇತ್ರಗಳಾಗಿವೆ. ಆದರೆ ಈ ವಿಷಯಗಳು ಸಂರಕ್ಷಣಾ ಜೀವಶಾಸ್ತ್ರದ ಅಭ್ಯಾಸ ಮತ್ತು ವೃತ್ತಿಯಲ್ಲಿ ಮುಖ್ಯ ಪ್ರಾಮುಖ್ಯತೆಯನ್ನು ಪಡೆದಿವೆ.
Chan[58]
ಜೀವಶಾಸ್ತ್ರಜ್ಞರು ನಿಸರ್ಗದಲ್ಲಿ ಅಂತರ್ಗತ ಮೌಲ್ಯಕ್ಕೆ ವಾದಿಸುವಾಗ ಸಂರಕ್ಷಣಾ ಜೀವಶಾಸ್ತ್ರವು ಒಂದು ವಸ್ತುನಿಷ್ಠ ವಿಜ್ಞಾನವಾಗಿದೆಯೇ? ಸಂರಕ್ಷಣಾಕಾರರು ಆವಾಸಸ್ಥಾನದ ಶಿಥಿಲತೆ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆ ಮುಂತಾದ ಗುಣಾತ್ಮಕ ವಿವರಣೆಗಳನ್ನು ಬಳಸಿಕೊಂಡು ನೀತಿಗಳನ್ನು ಬೆಂಬಲಿಸುವಾಗ ಪಕ್ಷಪಾತ ತೋರಿಸುತ್ತಾರೆಯೇ? ಎಲ್ಲ ವಿಜ್ಞಾನಿಗಳು ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಸಂರಕ್ಷಣಾ ಜೀವಶಾಸ್ತ್ರಜ್ಞರೂ ಸಮರ್ಥಿಸುತ್ತಾರೆ. ಸಂರಕ್ಷಣಾ ಜೀವಶಾಸ್ತ್ರಜ್ಞರು ನೈಸರ್ಗಿಕ ಸಂಪನ್ಮೂಲಗಳ ವಿವೇಚನೆಯ ಮತ್ತು ಸಮಂಜಸ ನಿರ್ವಹಣೆಗೆ ಸಲಹೆ ಮಾಡುತ್ತಾರೆ. ಅವರ ಸಂರಕ್ಷಣಾ ನಿರ್ವಹಣೆಯ ಯೋಜನೆಗಳಲ್ಲಿ ವಿಜ್ಞಾನ, ಕಾರಣ, ತರ್ಕ, ಮತ್ತು ಮೌಲ್ಯಗಳ ಪ್ರಕಟಿತ ಸಂಯೋಗದೊಂದಿಗೆ ಈ ರೀತಿ ಸೂಚಿಸುತ್ತಾರೆ.[4] ಈ ರೀತಿಯ ಸಲಹೆಯು ಆರೋಗ್ಯಕಾರಿ ಜೀವನಶೈಲಿಗೆ ಸಲಹೆ ನೀಡುವ ವೈದ್ಯಕೀಯ ವೃತ್ತಿಯಂತೆ ಇರುತ್ತದೆ. ಇಬ್ಬರೂ ಮಾನವನ ಯೋಗಕ್ಷೇಮಕ್ಕೆ ಉಪಯುಕ್ತವಾಗಿದ್ದಾರೆ. ಆದರೆ ಅವರ ನಿಲುವಿನಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಉಳಿಸಿಕೊಂಡಿದ್ದಾರೆ. ಹೆಚ್ಚಿನ ಸಂರಕ್ಷಣಾ ಜೀವಶಾಸ್ತ್ರಜ್ಞರು ಬ್ಯಾಚುಲರ್ಸ್ ಆಫ್ ಸೈನ್ಸ್ಜತೆಗೆ (ಅಥವಾ ವ್ಯಾಪಕ ನೈಸರ್ಗಿಕ ಅನುಭವ) ಹೊಂದುವುದರೊಂದಿಗೆ ಅವರ ಜೀವನದಲ್ಲಿ ವೃತ್ತಿಪರ ಮಾನ್ಯತೆಯನ್ನು ಪಡೆಯುತ್ತಾರೆ (ಉದಾ. Archived 2010-03-05 ವೇಬ್ಯಾಕ್ ಮೆಷಿನ್ ನಲ್ಲಿ. Archived 2010-03-05 ವೇಬ್ಯಾಕ್ ಮೆಷಿನ್ ನಲ್ಲಿ.).
ಸಂರಕ್ಷಣಾ ಜೀವಶಾಸ್ತ್ರದಲ್ಲಿನ ಅಭಿಯಾನವೊಂದು ಸಂರಕ್ಷಣಾ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿ ವಿಷಯವಾಗಿ ಕ್ರೋಢೀಕರಿಸಲು ಹೊಸ ಸ್ವರೂಪದ ನಾಯಕತ್ವಕ್ಕೆ ಸಲಹೆ ನೀಡಿದೆ. ಇದರಿಂದ ಸಮಾಜಕ್ಕೆ ಒಟ್ಟಾರೆಯಾಗಿ ಸಮಸ್ಯೆಯ ಪೂರ್ಣ ಸ್ವರೂಪವನ್ನು ಮುಟ್ಟಿಸಲು ಸಾಧ್ಯವಾಗಬಹುದು.[59] ಈ ಅಭಿಯಾನವು ಹೊಂದಾಣಿಕೆಯ ನಿರ್ವಹಣೆ ಮಾರ್ಗಕ್ಕೆ ಸಮಾನಾಂತರವಾದ ಹೊಂದಾಣಿಕೆಯ ನಾಯಕತ್ವ ಮಾರ್ಗಕ್ಕೆ ಸೂಚಿಸುತ್ತದೆ. ಈ ಪರಿಕಲ್ಪನೆಯು ಸಾಮರ್ಥ್ಯ, ಅಧಿಕಾರ ಮತ್ತು ಪ್ರಾಧಾನ್ಯತೆಯ ಐತಿಹಾಸಿಕ ಕಲ್ಪನೆಗಳಿಂದ ಭಿನ್ನವಾದ, ಹೊಸ ತತ್ವಶಾಸ್ತ್ರ ಅಥವಾ ಮುಖಂಡತ್ವ ಸಿದ್ಧಾಂತವನ್ನು ಆಧರಿಸಿದೆ. ಹೊಂದಿಕೊಳ್ಳಬಲ್ಲ ಸಂರಕ್ಷಣಾ ಮುಖಂಡತ್ವವು ಪ್ರತಿಫಲಿತವಾಗಿದೆ ಮತ್ತು ಹೆಚ್ಚು ನೀತಿಸಮ್ಮತವಾಗಿದೆ. ಇದು ಪ್ರೇರೇಪಿಸುವ ಮತ್ತು ಉದ್ದೇಶಪೂರ್ಣ, ಸಹೋದ್ಯೋಗದ ಸಂವಹನ ತಂತ್ರಗಳನ್ನು ಬಳಸಿಕೊಂಡು ಮತ್ತೊಬ್ಬರನ್ನು ಅರ್ಥಪೂರ್ಣ ಬದಲಾವಣೆಗೆ ಸಿದ್ಧಗೊಳಿಸುವ ಸಮಾಜದ ಯಾರಿಗಾದರೂ ಅನ್ವಯಿಸುತ್ತದೆ. ಹೊಂದಿಕೊಳ್ಳಬಲ್ಲ ಸಂರಕ್ಷಣಾ ಮುಖಂಡತ್ವ ಮತ್ತು ಸಲಹೆ ನೀಡುವ ಯೋಜನೆಗಳನ್ನು ಸಂರಕ್ಷಣಾ ಜೀವಶಾಸ್ತ್ರಜ್ಞರು ಆಲ್ಡೊ ಲಿಯೊಪಾಲ್ಡ್ ಲೀಡರ್ಶಿಪ್ ಪ್ರೋಗ್ರಾಂ[60] ನಂತಹ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸುತ್ತಿದ್ದಾರೆ.
ಸಂರಕ್ಷಣಾವಾದಿಯು ಮಧ್ಯಪ್ರವೇಶಿಸದ ನೀತಿಯ ಮೂಲಕ ಸಂರಕ್ಷಣಾ ಜೀವಶಾಸ್ತ್ರಜ್ಞನಿಂದ ಭಿನ್ನವಾಗಿರುತ್ತಾನೆ. ಸಂರಕ್ಷಣಾವಾದಿಗಳು ನಿಸರ್ಗ ಮತ್ತು ಪ್ರಭೇದಗಳಿಗೆ ಒಂದು ಸಂರಕ್ಷಿತ ಅಸ್ತಿತ್ವವನ್ನು ನೀಡುವುದನ್ನು ಸೂಚಿಸುತ್ತಾರೆ, ಇದು ಮಾನವರ ಮಧ್ಯಪ್ರವೇಶವನ್ನು ನಿರ್ಬಂಧಿಸುತ್ತದೆ.[4] ಸಂರಕ್ಷಣಾ ಜೀವಶಾಸ್ತ್ರವು ಸಮಾಜವನ್ನು ಕಾರ್ಯಪ್ರವೃತ್ತಗೊಳಿಸುತ್ತದೆ ಹಾಗೂ ಸಮಾಜ ಮತ್ತು ಪರಿಸರ ವ್ಯವಸ್ಥೆಗಳೆರಡಕ್ಕೂ ಸೂಕ್ತ ಪರಿಹಾರಗಳನ್ನು ಹುಡುಕುವುದರಿಂದ, ಸಂರಕ್ಷಣೆಕಾರರು ಸಾಮಾಜಿಕ ದೃಷ್ಟಿಕೋನದಲ್ಲಿ ಸಂರಕ್ಷಣಾವಾದಿಗಳಿಗಿಂತ ಭಿನ್ನವಾಗಿರುತ್ತಾರೆ.
ಸಂರಕ್ಷಣಾ ಜೀವಶಾಸ್ತ್ರಜ್ಞರು ಅಂತರಶಾಸ್ತ್ರೀಯ ಸಂಶೋಧಕರಾಗಿದ್ದಾರೆ, ಇವರು ಜೈವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ನೀತಿಶಾಸ್ತ್ರವನ್ನು ಅಧ್ಯಯನ ಮಾಡುತ್ತಾರೆ. ಸಂರಕ್ಷಣಾಕಾರರು ಜೀವವೈವಿಧ್ಯತೆಯ ಸಮರ್ಥಕರಾಗಿರಬೇಕು. ಇತರ ಪೈಪೋಟಿಯ ಮೌಲ್ಯಗಳ ವಿರುದ್ಧ ಏಕಕಾಲದಲ್ಲಿ ಸಮರ್ಥನೆಯನ್ನು ಉತ್ತೇಜಿಸದೇ ವೈಜ್ಞಾನಿಕವಾಗಿ ನೈತಿಕ ರೀತಿಯಲ್ಲಿ ಹಾಗೆ ಮಾಡಬೇಕು ಎಂದು ಚ್ಯಾನ್ ಸೂಚಿಸುತ್ತಾನೆ[58]. ಸಂರಕ್ಷಣಾಕಾರನೊಬ್ಬನು ರಿಸೋರ್ಸ್ ಕನ್ಸರ್ವೇಶನ್ ಎತಿಕ್ ಮೂಲಕ ಜೀವವೈವಿಧ್ಯತೆ ಮತ್ತು ಕಾರಣಗಳನ್ನು ಸಂಶೋಧನೆ ಮಾಡುತ್ತಾನೆ, ಇದು "ಯಾವ ಕ್ರಮಗಳು ಹೆಚ್ಚಿನ ಸಂಖ್ಯೆಯ ಜನರಿಗೆ ದೀರ್ಘ ಕಾಲ ಅತ್ಯುತ್ತಮವಾದುದನ್ನು ನೀಡುತ್ತದೆ" ಎಂಬುದನ್ನು ಗುರುತಿಸುತ್ತದೆ.[4]: 13
ಕೆಲವು ಸಂರಕ್ಷಣಾ ಜೀವಶಾಸ್ತ್ರಜ್ಞರು ನಿಸರ್ಗವು ಮಾನವ-ಕೇಂದ್ರಿತ ಉಪಯುಕ್ತತೆ ಅಥವಾ ಪ್ರಯೋಜಕತಾ ವಾದದಿಂದ ಸ್ವತಂತ್ರವಾದ ಒಂದು ನೈಜ ಮೌಲ್ಯವನ್ನು ಹೊಂದಿರುತ್ತದೆ ಎಂದು ವಾದಿಸುತ್ತಾರೆ. ಒಂದು ಜೀನ್ ಅಥವಾ ಪ್ರಭೇದವು ಮೌಲ್ಯಯುತವಾಗಿರುತ್ತದೆ ಎಂದು ನೈಜ ಮೌಲ್ಯವು ಸಮರ್ಥಿಸುತ್ತದೆ, ಏಕೆಂದರೆ ಅವು ಉಳಿದುಕೊಂಡಿರುವ ಪರಿಸರ ವ್ಯವಸ್ಥೆಗೆ ಉಪಯುಕ್ತವಾಗಿರುತ್ತವೆ. ಆಲ್ಡೊ ಲಿಯೊಪಾಲ್ಡ್ ಅಂತಹ ಸಂರಕ್ಷಣಾ ನೀತಿಶಾಸ್ತ್ರಗಳ ಬಗೆಗಿನ ಒಬ್ಬ ಶ್ರೇಷ್ಠ ಚಿಂತನೆಕಾರ ಮತ್ತು ಬರಹಗಾರ. ಅವನ ತತ್ವಶಾಸ್ತ್ರ, ನೀತಿಶಾಸ್ತ್ರ ಮತ್ತು ಬರಹಗಳು ಈಗಲೂ ಮನ್ನಣೆಯನ್ನು ಪಡೆದಿವೆ ಹಾಗೂ ಆಧುನಿಕ ಸಂರಕ್ಷಣಾ ಜೀವಶಾಸ್ತ್ರಜ್ಞರು ಮರುಸಂದರ್ಶಿಸುತ್ತಾರೆ. ಅವನ ಬರಹವನ್ನು ವೃತ್ತಿಯಲ್ಲಿರುವವರು ಹೆಚ್ಚಾಗಿ ಓದಿರಬೇಕಾಗಿರುತ್ತದೆ.
ಸಂರಕ್ಷಣಾ ವಿಜ್ಞಾನದ ಹೆಚ್ಚಿನ ಸಮುದಾಯದಲ್ಲಿ ಸುಸ್ಥಿರ ಜೀವವೈವಿಧ್ಯತೆಗೆ "ಹೆಚ್ಚು ಪ್ರಾಮುಖ್ಯತೆ"ಯನ್ನು ಕೊಡುತ್ತದೆ.[61] ಜೀವವೈವಿಧ್ಯತೆಯ ಘಟಕಗಳಾದ ಜೀನ್ಗಳು, ಪ್ರಭೇದಗಳು ಅಥವಾ ಪರಿಸರ ವ್ಯವಸ್ಥೆಗಳಿಗೆ ಯಾವ ಕ್ರಮದಲ್ಲಿ ಆದ್ಯತೆಯನ್ನು ನೀಡಬೇಕೆಂಬುದರ ಬಗ್ಗೆ ಚರ್ಚೆ ನಡೆದಿದೆ. (ಉದಾ. ಬೋವೆನ್, 1999). ಇಂದಿನವರೆಗಿನ ಪ್ರಮುಖ ಪ್ರಯತ್ನಗಳು ನಿರ್ದಿಷ್ಟ ಸ್ಥಳದ ಹೆಚ್ಚಿನ ಸಂಖ್ಯೆಯ ಜೀವವೈವಿಧ್ಯತೆ ತಾಣ (ಹಾಟ್ಸ್ಪಾಟ್)ಗಳನ್ನು ಸಂರಕ್ಷಿಸುವ ಮೂಲಕ ಅಳಿವಿನಂಚಿನಲ್ಲಿರುವ ಪ್ರಭೇದಗಳ ಮೇಲೆ ಕೇಂದ್ರೀಕೃತವಾಗಿವೆ. ಕೆಲವು ವಿಜ್ಞಾನಿಗಳು (ಉದಾ.[62]) ಮತ್ತು ನೇಚರ್ ಕನ್ಸರ್ವೆನ್ಸಿಯಂತಹ ಕೆಲವು ಸಂರಕ್ಷಣಾ ಸಂಸ್ಥೆಗಳು, ಜೀವವೈವಿಧ್ಯತೆ ಕೋಲ್ಡ್ಸ್ಪಾಟ್(/3)ಗಳ ಮೇಲೆ ಬಂಡವಾಳ ಹೂಡುವುದು ಹೆಚ್ಚು ಬೆಲೆ ಪರಿಣಾಮಕಾರಿಯಾಗಿದೆ, ತರ್ಕಬದ್ಧವಾಗಿದೆ ಹಾಗೂ ಸಾಮಾಜಿಕ ಪ್ರಸ್ತುತತೆಯಿಂದ ಕೂಡಿದೆ ಎಂದು ವಾದಿಸುತ್ತಾರೆ.{4/} ಪ್ರತಿಯೊಂದು ಪ್ರಭೇದದ ಶೋಧ,ಹೆಸರಿಸುವ ಮತ್ತು ಹಂಚಿಕೆಯನ್ನು ಮಾಪನ ಮಾಡುವ ವೆಚ್ಚಗಳು ವಿವೇಚನೆಯಿಲ್ಲದ ಸಂರಕ್ಷಣೆ ಸಾಹಸವೆಂದು ಅವರು ವಾದಿಸುತ್ತಾರೆ. ಅವರು ಪ್ರಭೇದಗಳ ಪರಿಸರ ವಿಜ್ಞಾನದ ಪಾತ್ರಗಳ ಪ್ರಾಮುಖ್ಯತೆಯನ್ನು ತಿಳಿಯುವುದು ಉತ್ತಮವೆಂದು ತರ್ಕಬದ್ಧವಾಗಿ ನಿರೂಪಿಸುತ್ತಾರೆ.[63]
ಜೀವವೈವಿಧ್ಯತೆ ಹಾಟ್ಸ್ಪಾಟ್ಗಳು ಮತ್ತು ಕೋಲ್ಡ್ಸ್ಪಾಟ್ಗಳು ಭೂಮಿಯ ಮೇಲ್ಮೆಯಲ್ಲಿ ಜೀನ್ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳು ಸಮಪ್ರಮಾಣದಲ್ಲಿ ಹಂಚಿಕೆಯಾಗಿಲ್ಲವೆಂಬುದನ್ನು ಗುರುತಿಸುವ ಒಂದು ಮಾರ್ಗವಾಗಿವೆ. ಉದಾಹರಣೆಗಾಗಿ, "ನಾಳ ಸಸ್ಯಗಳ 44%ನಷ್ಟು ಜಾತಿಗಳು ಮತ್ತು ನಾಲ್ಕು ಕಶೇರುಕ ಗುಂಪುಗಳ 35%ನಷ್ಟು ಜಾತಿಗಳು ಕೇವಲ 1.4%ನಷ್ಟು ಭೂಮಿಯ ಮೇಲ್ಮೆ ಪ್ರದೇಶವನ್ನು ಆವರಿಸಿಕೊಂಡ 25 ಹಾಟ್ಸ್ಪಾಟ್ಗಳಿಗೆ ಸೀಮಿತಗೊಂಡಿದೆ."[64]
ಕೋಲ್ಡ್ಸ್ಪಾಟ್ಗಳ ಆದ್ಯತೆಗಳ ಪರವಾಗಿ ವಾದಿಸುವವರು ಜೀವವೈವಿಧ್ಯತೆಯನ್ನು ಮೀರಿ ಪರಿಗಣಿಸಲು ಇತರ ಕ್ರಮಗಳಿವೆಯೆಂದು ವಾದಿಸುತ್ತಾರೆ. ಅವರು ಹಾಟ್ಸ್ಪಾಟ್ಗಳಿಗೆ ಹೆಚ್ಚು ಮಹತ್ವ ನೀಡುವುದರಿಂದ ಜೀವವೈವಿಧ್ಯತೆಯ ಬದಲಿಗೆ ಜೀವರಾಶಿಯು ಪ್ರಬಲವಾಗಿರುವ ಭೂಮಿಯ ಪರಿಸರ ವ್ಯವಸ್ಥೆಗಳ ವಿಸ್ತಾರ ಪ್ರದೇಶಗಳೊಂದಿಗೆ ಸಾಮಾಜಿಕ ಮತ್ತು ಪರಿಸರ ಸಂಪರ್ಕಗಳ ಪ್ರಾಮುಖ್ಯತೆಯನ್ನು ತಗ್ಗಿಸುತ್ತದೆಂದು ಗಮನಸೆಳೆದಿದ್ದಾರೆ.[65] ಪ್ರಪಂಚದ 38.9%ನಷ್ಟು ಕಶೇರುಕಗಳನ್ನೊಳಗೊಳ್ಳುವ 36%ನಷ್ಟು ಭೂಮಿಯ ಮೇಲ್ಮೆಯು ಜೀವವೈವಿಧ್ಯತೆಯ ಹಾಟ್ಸ್ಪಾಟ್ ಎಂದು ಅರ್ಹತೆ ಪಡೆಯಲು ಸ್ಥಳೀಯ ಪ್ರಭೇದಗಳ ಕೊರತೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.[66] ಇದಲ್ಲದೇ, ಜೀವವೈವಿಧ್ಯತೆಗೆ ರಕ್ಷಣೆಯನ್ನು ಗರಿಷ್ಠಗೊಳಿಸುವುದರಿಂದ ಮನಬಂದಂತೆ ಆರಿಸಿದ ಪ್ರದೇಶಗಳತ್ತ ಲಕ್ಷ್ಯವಹಿಸುವುದಕ್ಕಿಂತ ಉತ್ತಮವಾಗಿ ಪರಿಸರವ್ಯವಸ್ಥೆ ಸೇವೆಗಳನ್ನು ಆಕರ್ಷಿಸುವುದಿಲ್ಲವೆಂದು ಕ್ರಮಗಳು ತೋರಿಸಿವೆ. ಒಟ್ಟು ಸಂಖ್ಯೆಯ ಮಟ್ಟದ ಜೀವವೈವಿಧ್ಯತೆಗಳು (ಅಂದರೆ ಕೋಲ್ಡ್ಸ್ಪಾಟ್ಗಳು) ಪ್ರಭೇದಗಳ ಮಟ್ಟದ ಜೀವವೈವಿಧ್ಯತೆಗಳಿಗಿಂತ ಹತ್ತು ಪಟ್ಟು ಹೆಚ್ಚಿನ ದರದಲ್ಲಿ ನಾಶವಾಗುತ್ತಿವೆ.[62][67] ಸಂರಕ್ಷಣಾ ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಜೀವರಾಶಿ ವಿರುದ್ಧ ಸ್ಥಳೀಯತೆಯನ್ನು ಸೂಚಿಸುವ ಪ್ರಾಮುಖ್ಯತೆ ಮಟ್ಟದ ಬಗ್ಗೆ ಸಾಹಿತ್ಯದಲ್ಲಿ ಗಮನಸೆಳೆಯಲಾಗಿದೆ. ಸ್ಥಳೀಯ ಪ್ರದೇಶಗಳಲ್ಲಿ ಅವಶ್ಯಕವಾಗಿ ಇರಬೇಕಿಲ್ಲದ ಜಾಗತಿಕ ಪರಿಸರ ವ್ಯವಸ್ಥೆಯ ಇಂಗಾಲದ ಪ್ರಮಾಣಕ್ಕೆ ಅಪಾಯದ ಮಟ್ಟವನ್ನು ಅಂದಾಜು ಮಾಡಲಾಗಿದೆ.[33][35]
ಹಾಟ್ಸ್ಪಾಟ್ ಆದ್ಯತೆಯ ವಿಧಾನವು[68] ಸ್ಟೆಪ್, ಸೆರೆಗೆಂಟಿ, ಆರ್ಕಟಿಕ್ ಅಥವಾ ಟೈಗ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಬಂಡವಾಳ ಹೂಡುವುದಿಲ್ಲ. ಈ ಪ್ರದೇಶಗಳು ಒಟ್ಟು ಸಂಖ್ಯೆಯ (ಪ್ರಭೇದಗಳಲ್ಲ) ಮಟ್ಟದ ಜೀವವೈವಿಧ್ಯತೆ[67] ಮತ್ತು ಪರಿಸರ ವ್ಯವಸ್ಥೆಯ ಸೌಕರ್ಯಗಳಿಗೆ ವಿಪುಲ ಕೊಡುಗೆ ನೀಡಿವೆ.ಅಲ್ಲದೆ ಸಾಂಸ್ಕೃತಿಕ ಮೌಲ್ಯ ಮತ್ತು ಭೂಮಿಯ ಪೌಷ್ಠಿಕಾಂಶ ಆವರ್ತವನ್ನೂ ಒಳಗೊಂಡಿವೆ.[69]
2006 IUCN ರೆಡ್ ಲಿಸ್ಟ್ ವರ್ಗಗಳ ಸಾರಾಂಶ
ಹಾಟ್ಸ್ಪಾಟ್ಗಳ ವಿಧಾನದ ಪರವಾಗಿರುವವರು ಪ್ರಭೇದಗಳು ಜಾಗತಿಕ ಪರಿಸರ ವ್ಯವಸ್ಥೆಯ ಬದಲಿಸಲಾಗದ ಅಂಶಗಳಾಗಿವೆ, ಅವು ಹೆಚ್ಚು ಅಪಾಯದ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ, ಆದ್ದರಿಂದ ಅವುಗಳಿಗೆ ಅತಿ ಹೆಚ್ಚಿನ ಸಂರಕ್ಷಣೆಗಳನ್ನು ನೀಡಬೇಕು ಎಂದು ಸೂಚಿಸುತ್ತಾರೆ.[70] ವಿಕಿಪೀಡಿಯ ಪ್ರಭೇದಗಳ ಬರಹಗಳಲ್ಲಿ ಕಂಡುಬರುವ IUCN ರೆಡ್ ಲಿಸ್ಟ್ ವರ್ಗಗಳು ಹಾಟ್ಸ್ಪಾಟ್ ಸಂರಕ್ಷಣಾ ವಿಧಾನಕ್ಕೆ ಒಂದು ಉದಾಹರಣೆಯಾಗಿದೆ; ವಿರಳವಾಗಿಲ್ಲದ ಅಥವಾ ನಿರ್ದಿಷ್ಟ ಪ್ರದೇಶದಲ್ಲಿರುವ ಪ್ರಭೇದಗಳನ್ನು ಕಡಿಮೆ ಅಪಾಯಕ್ಕೊಳಗಾದವೆಂದು ಪಟ್ಟಿಮಾಡಲಾಗಿದೆ ಹಾಗೂ ಅವುಗಳ ವಿಕಿಪೀಡಿಯ ಬರಹಗಳು ಪ್ರಾಮುಖ್ಯತೆಯ ಆಧಾರದಲ್ಲಿ ಕೆಳಗಿನ ಶ್ರೇಣಿಯಲ್ಲಿವೆ. ಇದು ಹಾಟ್ಸ್ಪಾಟ್ ವಿಧಾನವಾಗಿದೆ. ಏಕೆಂದರೆ ಇದರ ಆದ್ಯತೆಯು ಸಂಖ್ಯೆಗಳ ಮಟ್ಟ ಅಥವಾ ಜೀವರಾಶಿಯ ಮಟ್ಟದ ವಿರುದ್ಧ ಪ್ರಭೇದಗಳ ಮಟ್ಟದ ಕಾಳಜಿಗಳ ಮೇಲೆ ಗುರಿಯಿರಿಸುವುದಾಗಿದೆ.[67] ಪ್ರಭೇದಗಳ ಸಮೃದ್ಧತೆ ಮತ್ತು ತಳೀಯ ಜೀವವೈವಿಧ್ಯತೆಯು ಪರಿಸರ ವ್ಯವಸ್ಥೆಯ ಸ್ಥಿರತೆ, ಪರಿಸರ ವ್ಯವಸ್ಥೆಯ ಪ್ರಕ್ರಿಯೆಗಳು, ವಿಕಾಸಾತ್ಮಕ ಹೊಂದಾಣಿಕೆಯ ಕೊಡುಗೆಯನ್ನು ನೀಡುತ್ತದೆ.[71] ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಅಳಿವಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ನಿಸರ್ಗದಲ್ಲಿ ಸಹಜ ಮೌಲ್ಯವನ್ನು ಗುರುತಿಸಲು ಅವಶ್ಯಕವೆಂಬುದನ್ನು ಇವೆರಡೂ ಒಪ್ಪುತ್ತವೆ;ಚರ್ಚೆಯು ಸೀಮಿತ ಸಂರಕ್ಷಣಾ ಸಂಪನ್ಮೂಲಗಳನ್ನು ವೆಚ್ಚ ಪರಿಣಾಮಕಾರಿ ರೀತಿಯಲ್ಲಿ ಹೇಗೆ ಆದ್ಯತೆ ನೀಡುವುದು ಎಂಬುದನ್ನು ಆಧರಿಸಿದೆ.
ನಿಸರ್ಗದ ಸಂಪತ್ತು ಮತ್ತು ಸೌಕರ್ಯಗಳನ್ನು ಹೇಗೆ ಅಳೆಯುವುದೆಂದು ನಿರ್ಧರಿಸಲು ಹಾಗೂ ಈ ಮೌಲ್ಯಗಳನ್ನು ಜಾಗತಿಕ ಮಾರುಕಟ್ಟೆ ವ್ಯವಹಾರಗಳಲ್ಲಿಗಳಲ್ಲಿ ಕಾಣುವಂತೆ ಮಾಡಲು ಸಂರಕ್ಷಣಾ ಜೀವಶಾಸ್ತ್ರಜ್ಞರು ಪ್ರಮುಖ ಜಾಗತಿಕ ಅರ್ಥಶಾಸ್ತ್ರಜ್ಞರೊಂದಿಗೆ ಜತೆಗೂಡಿ ಕೆಲಸ ಮಾಡಲು ಆರಂಭಿಸಿದ್ದಾರೆ.[72] ಈ ರೀತಿಯ ಗಣನೆಯನ್ನು ನೈಸರ್ಗಿಕ ಬಂಡವಾಳ ಎಂದು ಕರೆಯುತ್ತಾರೆ ಹಾಗೂ ಇದು, ಉದಾಹರಣೆಗಾಗಿ, ಪರಿಸರ ವ್ಯವಸ್ಥೆಯು ಅಭಿವೃದ್ಧಿಗಾಗಿ ದಾರಿಮಾಡಿಕೊಡಲು ಅನುಮತಿ ಪಡೆಯುವುದಕ್ಕಿಂತ ಮುಂಚಿತವಾಗಿ ಪರಿಸರವ್ಯವಸ್ಥೆಯ ಮೌಲ್ಯವನ್ನು ದಾಖಲಿಸುವುದು.[73] WWF ಅದರ ಲಿವಿಂಗ್ ಪ್ಲಾನೆಟ್ ರಿಪೋರ್ಟ್ ಅನ್ನು ಪ್ರಕಟಿಸುತ್ತದೆ ಹಾಗೂ 1,686 ಕಶೇರುಕ ಪ್ರಭೇದಗಳ (ಸಸ್ತನಿಗಳು, ಪಕ್ಷಿಗಳು, ಮೀನುಗಳು, ಸರೀಸೃಪಗಳು ಮತ್ತು ಉಭಯಚರಿಗಳು) ಸರಿಸುಮಾರು 5,000 ಸಂಖ್ಯೆಗಳನ್ನು ಪರೀಕ್ಷಿಸುವ ಮೂಲಕ ಜೀವವೈವಿಧ್ಯತೆಯ ಜಾಗತಿಕ ಸೂಚಿಯನ್ನು ಒದಗಿಸುತ್ತದೆ. ಇದು ಹೆಚ್ಚಾಗಿ ಷೇರು ಮಾರುಕಟ್ಟೆ ಹಾದಿಯ ರೀತಿಯಲ್ಲೇ ಪ್ರವೃತ್ತಿಗಳ ಬಗ್ಗೆ ವರದಿ ಮಾಡುತ್ತದೆ.[74]
ನಿಸರ್ಗದ ಜಾಗತಿಕ ಆರ್ಥಿಕ ಪ್ರಯೋಜನವನ್ನು ಅಂದಾಜಿಸುವ ಈ ವಿಧಾನವು G8+5 ಮುಖಂಡರಿಂದ ಮತ್ತು ಯುರೋಪಿಯನ್ ಕಮೀಶನ್ನಿಂದ ಅನುಮೋದಿಸಲ್ಪಟ್ಟಿದೆ.[72] ನಿಸರ್ಗವು ಮಾನವರಿಗೆ ಉಪಯುಕ್ತವಾದ ಅನೇಕ ಪರಿಸರ ವ್ಯವಸ್ಥೆಯ ಸೌಕರ್ಯ[75] ಗಳನ್ನು ಪೋಷಿಸಿದೆ.[76] ಭೂಮಿಯ ಹೆಚ್ಚಿನ ಪರಿಸರ-ವ್ಯವಸ್ಥೆಯ ಸೌಕರ್ಯಗಳು ಮಾರುಕಟ್ಟೆಯನ್ನು ಹೊಂದಿರದ ಹಾಗೂ ಆ ಮೂಲಕ ಬೆಲೆ ಅಥವಾ ಮೌಲ್ಯವನ್ನು ಹೊಂದಿರದ ಸಾರ್ವಜನಿಕ ಸರಕುಗಳಾಗಿವೆ.[72] ಷೇರು ಮಾರುಕಟ್ಟೆ ಯು ಹಣಕಾಸಿನ ಬಿಕ್ಕಟ್ಟನ್ನು ಸೂಚಿಸುವಾಗ, ವಾಲ್ ಸ್ಟ್ರೀಟ್ನ ವ್ಯಾಪಾರಸ್ಥರು ಪರಿಸರ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುವ ಭೂಮಿಯ ಹೆಚ್ಚಿನ ನೈಸರ್ಗಿಕ ಬಂಡವಾಳದ ಷೇರುಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿರುವುದಿಲ್ಲ. ಸಮುದ್ರದ ಕುದುರೆಗಳು, ಉಭಯಚರಿಗಳು, ಕೀಟಗಳು ಮತ್ತು ಸಮಾಜಕ್ಕೆ ಅತ್ಯಧಿಕ ಮೌಲ್ಯಯುತವಾದ ಪರಿಸರ ವ್ಯವಸ್ಥೆಯ ಸೌಕರ್ಯಗಳನ್ನು ಪೂರೈಸುವ ಇತರ ಜೀವಿಗಳ ಬಗ್ಗೆ ಬಂಡವಾಳ ಪೋರ್ಟ್ಫೋಲಿಯೊಗಳ ನೈಸರ್ಗಿಕ ಷೇರು ಮಾರುಕಟ್ಟೆಯಿಲ್ಲ.[76] ಸಮಾಜದ ಮೇಲಿನ ಪರಿಸರ ವಿಜ್ಞಾನದ ಹೆಜ್ಜೆಗುರುತು ಭೂಮಿಯ ಪರಿಸರ ವ್ಯವಸ್ಥೆಗಳ ಜೈವಿಕ-ಪುನರುತ್ಪಾದಕ ಸಾಮರ್ಥ್ಯದ ಮಿತಿಗಳನ್ನು ಸುಮಾರು 30 ಪ್ರತಿಶತದಷ್ಟು ಮೀರಿಸಿದೆ. ಈ ಪ್ರಮಾಣವು 1970ರಿಂದ 2005ರವರೆಗೆ ಕ್ಷೀಣಿಸುತ್ತಿವೆಯೆಂದು ದಾಖಲಾದ ಕಶೇರುಕಗಳ ಶೇಖಡಾವಾರು ಸಂಖ್ಯೆಯಷ್ಟೇ ಇದೆ.[74]
WWF Living Planet Report[74]
ಅಂತರ್ಗತ ನೈಸರ್ಗಿಕ ಅರ್ಥಶಾಸ್ತ್ರವು ಮಾನವಕುಲವನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.[77] ಇದು ಜಾಗತಿಕ ವಾಯುಮಂಡಲದ ರಾಸಾಯನಿಕಗಳ ನಿಯಂತ್ರಣ, ಬೆಳೆಗಳ ಅಭಿವೃದ್ಧಿ, ಕೀಟಗಳ ನಿಯಂತ್ರಣ,[78] ಮಣ್ಣಿನ ಪೌಷ್ಠಿಕಾಂಶಗಳ ಆವರ್ತನ, ನಮ್ಮ ನೀರಿನ ಪೂರೈಕೆಯ ಶುದ್ಧೀಕರಣ, ಔಷಧಿಗಳ ಮತ್ತು ಆರೋಗ್ಯ ಅನುಕೂಲಗಳ ಪೂರೈಕೆ ಹಾಗೂ ಅಳತೆಮಾಡಲಾಗದಷ್ಟು ಜೀವನದ ಗುಣಮಟ್ಟದ ಸುಧಾರಣೆಗಳು ಮೊದಲಾದವನ್ನು ಒಳಗೊಳ್ಳುತ್ತದೆ.[79] ಮಾರುಕಟ್ಟೆ ಮತ್ತು ನೈಸರ್ಗಿಕ ಬಂಡವಾಳದ ಮಧ್ಯೆ ಹಾಗೂ ಸಾಮಾಜಿಕ ಆದಾಯದ ಅಸಮತೆ ಮತ್ತು ಜೀವವೈವಿಧ್ಯತೆಯ ನಾಶದ ಮಧ್ಯೆ ಪರಸ್ಪರ ಸಂಬಂಧವಿದೆ. ಅಂದರೆ ಸಂಪತ್ತಿನ ಅಸಮತೆ ಹೆಚ್ಚಿರುವ ಪ್ರದೇಶಗಳಲ್ಲಿ ಜೀವವೈವಿಧ್ಯತೆಯ ನಾಶದ ಪ್ರಮಾಣವು ಅಧಿಕವಾಗಿರುತ್ತದೆ.[80]
ನೈಸರ್ಗಿಕ ಬಂಡವಾಳದ ನೇರ ಮಾರುಕಟ್ಟೆ ಹೋಲಿಕೆಯು ಮಾನವನ ಮೌಲ್ಯದಲ್ಲಿ ಸಾಧ್ಯವಾಗದಿದ್ದರೂ, ಪರಿಸರ ವ್ಯವಸ್ಥೆಯ ಸೌಕರ್ಯಗಳ ಒಂದು ಪರಿಮಾಣವು ಈ ಅಂದಾಜನ್ನು ವಾರ್ಷಿಕವಾಗಿ ಟ್ರಿಲಿಯನ್(ಒಂದು ಲಕ್ಷ ಕೋಟಿ) ಡಾಲರ್ಗಳೆಂದು ಸೂಚಿಸುತ್ತದೆ.[81][82][83][84] ಉದಾಹರಣೆಗಾಗಿ, ಉತ್ತರ ಅಮೆರಿಕಾದ ಅರಣ್ಯಗಳ ಒಂದು ಭಾಗದಲ್ಲಿ ವಾರ್ಷಿಕವಾಗಿ 250 ಶತಕೋಟಿ ಡಾಲರ್ಗಳಷ್ಟು ಮೌಲ್ಯವನ್ನು ಗೊತ್ತುಮಾಡಲಾಗಿದೆ;[85] ಮತ್ತೊಂದು ಉದಾಹರಣೆಯಲ್ಲಿ, ಜೇನ್ನೊಣಗಳ ಪರಾಗಸ್ಪರ್ಶವು ವಾರ್ಷಿಕವಾಗಿ 10ರಿಂದ 18 ಶತಕೋಟಿ ಡಾಲರ್ಗಳಷ್ಟು ಆದಾಯವನ್ನು ಒದಗಿಸುತ್ತದೆಂದು ಅಂದಾಜಿಸಲಾಗಿದೆ.[86] ನ್ಯೂಜಿಲೆಂಡ್ನ ದ್ವೀಪವೊಂದರಲ್ಲಿ ಪರಿಸರ ವ್ಯವಸ್ಥೆಯ ಉಪಯೋಗಗಳ ಮೌಲ್ಯವು ಆ ಪ್ರದೇಶದ GDPಯಷ್ಟು ಹೆಚ್ಚು ಎಂದು ಹೇಳಲಾಗಿದೆ.[87] ಮಾನವ ಸಮಾಜದ ಬೇಡಿಕೆಗಳು ಭೂಮಿಯ ಜೈವಿಕ-ಪುನರುತ್ಪಾದಕ ಸಾಮರ್ಥ್ಯವನ್ನು ಮೀರಿಸುವುದರಿಂದ, ಈ ಭೂಮಿಯ ಸಂಪತ್ತು ನಂಬಲಾಗದ ದರದಲ್ಲಿ ನಾಶವಾಗುತ್ತಿದೆ. ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳು ಚೇತರಿಸಿಕೊಳ್ಳುವದಾದರೂ, ಅನೇಕ ಪರಿಸರ ವ್ಯವಸ್ಥೆಯ ಕ್ರಿಯೆಗಳನ್ನು ಮಾನವನು ತಾಂತ್ರಿಕ ಆವಿಷ್ಕಾರದಿಂದ ಪುನಃರಚಿಸಲು ಸಾಧ್ಯವಿಲ್ಲದಿರುವುದರಿಂದ ಅವುಗಳನ್ನು ಕಳೆದುಕೊಳ್ಳುವ ಅಪಾಯವಿದೆ.
ಕೀಸ್ಟೋನ್ ಪ್ರಭೇದ ಗಳೆಂದು ಕರೆಯಲ್ಪಡುವ ಕೆಲವು ಪ್ರಭೇದಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ನೆರವನ್ನು ಒದಗಿಸುವ ಕೇಂದ್ರವಾಗಿರುತ್ತವೆ. ಅಂತಹ ಪ್ರಭೇದಗಳ ಕ್ಷೀಣಿಸುವಿಕೆಯು ಪರಿಸರ ವ್ಯವಸ್ಥೆಯ ಕ್ರಿಯೆಯ ಸಂಪೂರ್ಣ ನಾಶಕ್ಕೆ, ಅಲ್ಲದೆ ಅವುಗಳೊಂದಿಗೆ ವಾಸಿಸುವ ಪ್ರಭೇದಗಳ ಹಾನಿಗೂ ಕಾರಣವಾಗುತ್ತದೆ.[4] ಕೀಸ್ಟೋನ್ ಪ್ರಭೇದಗಳ ಪ್ರಾಮುಖ್ಯತೆಯನ್ನು ಸಮುದ್ರ ನೀರುನಾಯಿಗಳು, ಸಮುದ್ರ ಅರ್ಚಿನ್(ಮುಳ್ಳುಹಂದಿ)ಗಳು ಮತ್ತು ಕೆಲ್ಪ್(ಸಮುದ್ರದ ಕಳೆ)ಗಳೊಂದಿಗಿನ ಪರಸ್ಪರ ಸಂಬಂಧದ ಮೂಲಕ ಸ್ಟೆಲ್ಲರ್ಸ್ ಸೀ ಕೌ(ಕಡಲ್ಗುದುರೆ) (ಹೈಡ್ರೊಡ್ಯಾಮಲಿಸ್ ಗಿಗಾಸ್ )ಯ ಅಳಿವಿನಿಂದ ತೋರಿಸಲಾಗಿದೆ. ಕೆಲ್ಪ್ ಬೆಡ್ಗಳು ಆಳವಿಲ್ಲದ ನೀರಿನಲ್ಲಿ ಬೆಳೆಯುತ್ತವೆ ಹಾಗೂ ಅವು ಆಹಾರ ಸರಪಳಿಯನ್ನು ಬೆಂಬಲಿಸುವ ಜೀವಿಗಳ ಆಶ್ರಯಕ್ಕೆ ಸೂಕ್ತವಾದ ಪೋಷಣಸ್ಥಾನಗಳನ್ನು ರಚಿಸುತ್ತವೆ. ಸಮುದ್ರದ ಅರ್ಚಿನ್ಗಳು ಕೆಲ್ಪ್ಗಳನ್ನು ತಿನ್ನುತ್ತವೆ ಹಾಗೂ ಸಮುದ್ರ ಅರ್ಚಿನ್ಗಳನ್ನು ಸಮುದ್ರ ನೀರುನಾಯಿಗಳು ತಿನ್ನುತ್ತವೆ. ಮಿತಿಮೀರಿದ ಬೇಟೆಯಿಂದಾಗಿ ಸಮುದ್ರ ನೀರುನಾಯಿಗಳ ಸಂಖ್ಯೆಯು ಕ್ಷೀಣಿಸಿದ್ದರಿಂದ, ಸಮುದ್ರ ಅರ್ಚಿನ್ಗಳು ಕೆಲ್ಪ್ ಬೆಡ್ಗಳ ಮೇಲೆ ಅನಿರ್ಬಂಧಿತವಾಗಿ ಬೆಳೆದವು ಹಾಗೂ ಪರಿಸರ ವ್ಯವಸ್ಥೆ ನಾಶವಾಯಿತು. ಈ ಅರ್ಚಿನ್ಗಳು ಆಳವಿಲ್ಲದ ನೀರಿನ ಕೆಲ್ಪ್ಗಳನ್ನು ನಾಶಗೊಳಿಸಿದವು. ಇದು ಸ್ಟೆಲ್ಲರ್ಸ್ ಸೀ ಕೌನ ಆಹಾರಕ್ಕೆ ಒತ್ತಾಸೆಯಾಗಿದ್ದ ಕೆಲ್ಪ್ಗಳ ನಾಶದಿಂದ ಸ್ಟೆಲ್ಲರ್ ಸೀ ಕೌ ತ್ವರೆಯಾಗಿ ಅವನತಿಯಾದವು.[88] ಸಮುದ್ರ ನೀರುನಾಯಿಗಳು ಕೀಸ್ಟೋನ್ ಪ್ರಭೇದಗಳಾಗಿವೆ ಏಕೆಂದರೆ ಕೆಲ್ಪ್ ಬೆಡ್ಗಳಲ್ಲಿನ ಪರಿಸರ ವಿಜ್ಞಾನದ ಅನೇಕ ಪ್ರಭೇದಗಳ ಸಹಜೀವನವು ನೀರುನಾಯಿಗಳ ಉಳಿವನ್ನು ಅವಲಂಬಿಸಿದೆ.
ಸೂಚಕ ಪ್ರಭೇದಗಳು ಅಲ್ಪ ಪ್ರಮಾಣದ ಪರಿಸರ ವಿಜ್ಞಾನದ ಅವಶ್ಯಕತೆಗಳನ್ನು ಹೊಂದಿವೆ. ಆದ್ದರಿಂದ ಅವು ಪರಿಸರ ವ್ಯವಸ್ಥೆಯ ಸುಸ್ಥಿತಿಯನ್ನು ಕಾಪಾಡುವಲ್ಲಿ ಉಪಯುಕ್ತ ಅಂಶಗಳಾಗಿವೆ. ಜೌಗುಪ್ರದೇಶಗಳಲ್ಲಿ ಸಂಪರ್ಕ ಹೊಂದಿರುವ,ಅರೆ-ಪ್ರವೇಶಸಾಧ್ಯ ಚರ್ಮ ಮತ್ತು ರಚನೆಗಳನ್ನು ಹೊಂದಿರುವ ಉಭಯಚರಿಗಳಂತಹ ಕೆಲವು ಪ್ರಭೇದಗಳು ಪರಿಸರದ ಹಾನಿಗೆ ತೀವ್ರ ಸಂವೇದನೆಯನ್ನು ಹೊಂದಿರುತ್ತವೆ. ಆದ್ದರಿಂದ ಅವು ಮೈನರ್ಸ್ ಕೆನರಿ (ಗಣಿಗಳಲ್ಲಿ ಬಳಸುತ್ತಿದ್ದ ಕೆನರಿ ಹಕ್ಕಿ)ಯಾಗಿ ನೆರವಾಗುತ್ತವೆ. ಸೂಚಕ ಪ್ರಭೇದಗಳನ್ನು ಮಾಲಿನ್ಯದಿಂದ ಅಥವಾ ಮಾನವನ ಇತರ ಚಟುವಟಿಕೆಗಳಿಗೆ ಹತ್ತಿರವಾದ ಸಂಪರ್ಕದಿಂದ ಉಂಟಾಗುವ ಪರಿಸರದ ನಾಶವನ್ನು ತಿಳಿಯುವ ಪ್ರಯತ್ನದಲ್ಲಿ ಪರೀಕ್ಷಿಸಲಾಗುತ್ತದೆ.[4] ಸೂಚಕ ಪ್ರಭೇದಗಳ ನಿಗಾವಹಿಸುವುದು ಸಲಹೆ ಅಥವಾ ಅಭ್ಯಾಸದ ಬದಲಾವಣೆಗೆ ನೆರವಾಗುವಂತಹ ಗಮನಾರ್ಹ ಪರಿಸರ ಪರಿಣಾಮವಿದೆಯೇ ಎಂದು ನಿರ್ಧರಿಸುವ ಪರಿಮಾಣವಾಗಿದೆ. ಉದಾಹರಣೆಗೆ ವಿವಿಧಅರಣ್ಯ ವೃಕ್ಷಪಾಲನೆ ವಿಧಾನಗಳು ಮತ್ತು ನಿರ್ವಹಣಾ ಸನ್ನಿವೇಶಗಳ ಮೂಲಕವಾಗಿದೆ. ಅಥವಾ ಪರಿಸರವ್ಯವಸ್ಥೆಯ ಸುಸ್ಥಿತಿ ಮೇಲೆ ಕೀಟನಾಶಕವು ಉಂಟು ಮಾಡಬಹುದಾದ ಪರಿಣಾಮದ ಹಾನಿಯ ಪ್ರಮಾಣವನ್ನು ಅಳೆಯುವುದಾಗಿದೆ.
ಸರ್ಕಾರಿ ನಿಯಂತ್ರಕಗಳು, ಸಲಹಾರ್ಥಿಗಳು ಅಥವಾ NGOಗಳು ಹೆಚ್ಚಾಗಿ ಸೂಚಕ ಪ್ರಭೇದಗಳ ಮೇಲ್ವಿಚಾರಣೆ ನಡೆಸುತ್ತವೆ. ಆದರೆ ವಿಧಾನವು ಪರಿಣಾಮಕಾರಿ ಆಗಬೇಕಾದರೆ ಹಲವಾರು ಪ್ರಾಯೋಗಿಕ ಪರಿಗಣನೆಗಳೊಂದಿಗೆ ಅನುಸರಿಸಬೇಕಾದ ಅನೇಕ ಮಿತಿಗಳೂ ಇವೆ.[89] ಅನೇಕ ಸೂಚಕಗಳ ಬಗ್ಗೆ (ವಂಶವಾಹಿಗಳು, ಜನಸಂಖ್ಯೆ, ಪ್ರಭೇದಗಳು,ಸಮುದಾಯಗಳು ಮತ್ತು ಭೂದೃಶ್ಯ) ಪರಿಣಾಮಕಾರಿ ಪರಿಸರ ವ್ಯವಸ್ಥೆಯ ಅಳತೆಗಾಗಿ ನಿಗಾವಹಿಸಬೇಕೆಂದು ಸಾಮಾನ್ಯವಾಗಿ ಶಿಫಾರಸು ಮಾಡಲಾಗಿದೆ. ಇದು ಸಂಕೀರ್ಣಕ್ಕೆ ಹಾನಿಯನ್ನು ನಿವಾರಿಸುತ್ತದೆ ಹಾಗೂ ಪರಿಸರವ್ಯವಸ್ಥೆ ಚಾಲಕಶಕ್ತಿಯಿಂದ ಊಹಿಸಲಾಗದ ಪ್ರತಿಕ್ರಿಯೆಯನ್ನು ನೀಡುತ್ತದೆ. (ನಾಸ್ಸ್, 1997[19]: 88–89 ).
ಅಂಬ್ರೆಲ್ಲಾ ಪ್ರಭೇದ ಗೆ ಒಂದು ಉದಾಹರಣೆಯೆಂದರೆ ಮೊನಾರ್ಕ್ ಚಿಟ್ಟೆ, ಇದು ದೀರ್ಘದೂರ ವಲಸೆ ಹೋಗುವುದರಿಂದ ಮತ್ತು ಅದರ ಸೌಂದರ್ಯೋಪಾಸನೆಮೌಲ್ಯ ಇದಕ್ಕೆ ಉದಾಹರಣೆಯಾಗಿದೆ. ಮೊನಾರ್ಕ್ ಉತ್ತರ ಅಮೆರಿಕದಾದ್ಯಂತ ವಲಸೆ ಹೋಗುತ್ತದೆ. ಇದು ಅನೇಕ ಪರಿಸರ ವ್ಯವಸ್ಥೆಗಳನ್ನು ಒಳಗೊಳ್ಳುತ್ತದೆ, ಆದ್ದರಿಂದ ಅದರ ಅಸ್ತಿತ್ವಕ್ಕೆ ಹೆಚ್ಚಿನ ಪ್ರದೇಶದ ಅವಶ್ಯಕತೆ ಇರುತ್ತದೆ. ಮೊನಾರ್ಕ್ ಚಿಟ್ಟೆಗೆ ನೀಡುವ ಯಾವುದೇ ರಕ್ಷಣೆಗಳು ಅದೇ ಸಂದರ್ಭದಲ್ಲಿ ಅನೇಕ ಇತರ ಪ್ರಭೇದಗಳಿಗೆ ಮತ್ತು ಆವಾಸ ಸ್ಥಾನಗಳಿಗೂ ಆಶ್ರಯವನ್ನು ಒದಗಿಸುತ್ತವೆ. ಅಂಬ್ರೆಲ್ಲಾ ಪ್ರಭೇದಗಳನ್ನು ಫ್ಲ್ಯಾಗ್ಶಿಪ್ ಪ್ರಭೇದ ಗಳಾಗಿಯೂ ಬಳಸಬಹುದು. ಜೈಂಟ್ ಪಾಂಡ, ಬ್ಲೂ ವೇಲ್(ನೀಲಿ ತಿಮಿಂಗಿಲ), ಹುಲಿ, ಪರ್ವತ ಗೊರಿಲ್ಲಾ ಮತ್ತು ಮೊನಾರ್ಕ್ ಚಿಟ್ಟೆ ಮೊದಲಾದ ಪ್ರಭೇದಗಳು ಸಾರ್ವಜನಿಕ ಗಮನವನ್ನು ಸೆಳೆಯುತ್ತವೆ ಹಾಗೂ ಸಂರಕ್ಷಣೆ ಕ್ರಮಗಳಿಗಾಗಿ ನೆರವನ್ನು ಆಕರ್ಷಿಸುತ್ತವೆ.[4]
Theodore Roosevelt[90]
ಜಾಗತಿಕ ಜೀವವೈವಿಧ್ಯತೆಯನ್ನು ಉಳಿಸುವ ಮತ್ತು ಸಂರಕ್ಷಿಸುವ ಪ್ರಯತ್ನಗಳು ಇತ್ತೀಚಿನ ಸಂಗತಿಯಾಗಿದೆ.[6] ಜಾಗತಿಕ ಸಂರಕ್ಷಣೆಯ ಯುಗಕ್ಕಿಂತ ಮೊದಲು ಸಂರಕ್ಷಣೆಯ ಕಾಲವಿತ್ತು. ಕೆಲವು ಇತಿಹಾಸಕಾರರು ಇದನ್ನು 1916ರ ನ್ಯಾಷನಲ್ ಪಾರ್ಕ್ಸ್ ಆಕ್ಟ್ ಒಂದಿಗೆ ಸಂಬಂಧ ಕಲ್ಪಿಸಿದ್ದಾರೆ. ಅದು ಜಾನ್ ಮ್ಯೂರ್ ಕಂಡುಹಿಡಿದ 'ಹಾಳುಮಾಡದೆ ಬಳಸು' ಎಂಬ ನಿಯಮವನ್ನು ಒಳಗೊಂಡಿತ್ತು. ಇದು ಅಂತಿಮವಾಗಿ 1959ರಲ್ಲಿ ಡೈನೊಸರ್ ನ್ಯಾಷನಲ್ ಮಾನ್ಯುಮೆಂಟ್ನಲ್ಲಿ ಅಣೆಕಟ್ಟೊಂದನ್ನು ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಲು ಕಾರಣವಾಯಿತು.[91]
ಆದರೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯು ಸಂರಕ್ಷಣಾ-ಕಾಲಕ್ಕಿಂತಲೂ ಹಿಂದಕ್ಕೆ ವಿಸ್ತರಿಸಿರುವ ಇತಿಹಾಸವನ್ನು ಹೊಂದಿದೆ. ಸಂಪನ್ಮೂಲದ ನೀತಿನಿಯಮಗಳು ನಿಸರ್ಗದೊಂದಿಗಿನ ನೇರ ಸಂಬಂಧಗಳ ಮೂಲಕ ಅವಶ್ಯಕತೆಯಿಂದ ಹುಟ್ಟಿಕೊಂಡಿವೆ. ನಿಯಂತ್ರಣ ಅಥವಾ ಸಾಮುದಾಯಿಕ ನಿರ್ಬಂಧವು ಸ್ಥಳೀಯವಾಗಿ ಪೋಷಣೆಯಾಗುವುದಕ್ಕಿಂತ ಹೆಚ್ಚಿನದನ್ನು ಪಡೆಯುವ ಸ್ವಾರ್ಥಪರ ಚಟುವಟಿಕೆಗಳನ್ನು ತಡೆಗಟ್ಟಲು ಅವಶ್ಯಕವಾದವು. ಆ ಮೂಲಕ ಸಮುದಾಯದ ಉಳಿದವಕ್ಕೆ ದೀರ್ಘ-ಕಾಲದ ಪೂರೈಕೆಯನ್ನು ಹೊಂದಿಕೆ ಮಾಡುವುದಾಗಿದೆ.[6] ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ಈ ಸಾಮಾಜಿಕ ವಿಷಮ ಪರಿಸ್ಥಿತಿಯನ್ನು ಹೆಚ್ಚಾಗಿ "ಜನಸಾಮಾನ್ಯರ ದುರಂತ" ಎಂದು ಕರೆಯಲಾಗುತ್ತದೆ.[92][93] ಈ ನೀತಿಯಿಂದ, ಸಂರಕ್ಷಣಾ ಜೀವಶಾಸ್ತ್ರಜ್ಞರು ಸಂಸ್ಕೃತಿಗಳಾದ್ಯಂತದ ಸಾಮುದಾಯಿಕ ಸಂಪನ್ಮೂಲ ಆಧಾರಿತ ನೀತಿಗಳನ್ನು ಸಾಮುದಾಯಿಕ ಸಂಪನ್ಮೂಲ ಸಂಘರ್ಷಕ್ಕೆ ಪರಿಹಾರವಾಗಿ ಕಂಡುಹಿಡಿಯಬಹುದು.[6] ಉದಾಹರಣೆಗಾಗಿ, ಅಲಸ್ಕನ್ ಟ್ಲಿಂಗಿಟ್ ಜನರು ಮತ್ತು ಪೆಸಿಫಿಕ್ ನಾರ್ತ್ವೆಸ್ಟ್ನ ಹೈದ ಮಂದಿಯು ಸಾಕೆಯೆ ಸಾಲ್ಮನ್ ಮೀನುಗಾರಿಕೆಗೆ ಸಂಬಂಧಿಸಿದಂತೆ ಬುಡಕಟ್ಟುಗಳ ಮಧ್ಯೆ ಸಂಪನ್ಮೂಲದ ಮಿತಿಗಳನ್ನು, ನಿಯಮಗಳನ್ನು ಮತ್ತು ನಿರ್ಬಂಧಗಳನ್ನು ಹೊಂದಿದ್ದರು. ಈ ನಿಯಮಗಳ ಬಗ್ಗೆ ಪ್ರತಿಯೊಂದು ನದಿ ಮತ್ತು ತೊರೆಯ ಜೀವನ-ಪರ್ಯಂತದ ವಿವರಗಳನ್ನು ತಿಳಿದಿದ್ದ ಬುಡಕಟ್ಟಿನ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದರು.[6][94] ಸಾಮುದಾಯಿಕ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದಂತೆ ಇತಿಹಾಸದಲ್ಲಿ ಸಂಸ್ಕೃತಿಗಳು ನಿಯಮಗಳು, ಆಚರಣೆಗಳು ಮತ್ತು ಆಯೋಜಿತ ಅಭ್ಯಾಸಗಳನ್ನು ಅನುಸರಿಸಿದ ಅನೇಕ ಉದಾಹರಣೆಗಳಿವೆ.[95]
ಸಂರಕ್ಷಣಾ ನೀತಿಗಳು ಆರಂಭಿಕ ಧಾರ್ಮಿಕ ಮತ್ತು ತತ್ವಶಾಸ್ತ್ರದ ಬರಹಗಳಲ್ಲಿಯೂ ಕಂಡುಬಂದಿವೆ. ಟಾವೊ, ಶಿಂಟೊ, ಹಿಂದು, ಇಸ್ಲಾಮಿಕ್ ಮತ್ತು ಬೌದ್ಧ ಸಂಪ್ರದಾಯಗಳಲ್ಲಿ ಅನೇಕ ಉದಾಹರಣೆಗಳಿವೆ.[6][96] ಗ್ರೀಕ್ ತತ್ವಶಾಸ್ತ್ರದಲ್ಲಿ, ಪ್ಲೇಟೊ ಹುಲ್ಲುಗಾವಲಿನ ನಾಶದ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾನೆ: "ಈಗ ಉಳಿದಿರುವುದು ರೋಗಕ್ಕೆ ತುತ್ತಾಗಿ ಜರ್ಜರಿತಗೊಂಡ ದೇಹದ ಕಳೇಬರವಾಗಿದೆ; ಸಮೃದ್ಧವಾದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ, ಕೇವಲ ಬಂಜರು ಭೂಮಿ ಮಾತ್ರ ಉಳಿದುಕೊಂಡಿದೆ."[97] ಬೈಬಲ್ನಲ್ಲಿ, ಮಾಸಸ್ ಮೂಲಕ, ದೇವರು ಪ್ರತಿ ಏಳನೇ ವರ್ಷದಲ್ಲಿ ಭೂಮಿಯನ್ನು ಕೃಷಿ ಮಾಡದೆ ಹಾಗೆಯೇ ಬಿಡಬೇಕೆಂದು ಆದೇಶಿಸಿದ್ದಾರೆ.[6][98] 18ನೇ ಶತಮಾನದ ಮೊದಲು, ಇದನ್ನು ಹೆಚ್ಚಿನ ಯುರೋಪಿಯನ್ ಸಂಸ್ಕೃತಿಗಳು ನಿಸರ್ಗವನ್ನು ಗೌರವಿಸುವುದು ಒಂದು ಅಧಾರ್ಮಿಕ ಅಭಿಪ್ರಾಯವೆಂದು ಭಾವಿಸಿದವು. ಕೃಷಿಯ ಬೆಳವಣಿಗೆಯು ಹೆಚ್ಚಾದಾಗ ಕಾಡುಗಳು ನಾಶಹೊಂದಲು ಆರಂಭವಾದವು.[99] ಆದರೂ, ಕ್ರಿ.ಶ. 680ರ ಸಂದರ್ಭದಲ್ಲಿ ಸೇಂಟ್ ಕತ್ಬರ್ಟ್ ಆತನ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಫಾರ್ನ್ ದ್ವೀಪದಲ್ಲಿ ವನ್ಯಜೀವಿಗಳ ಅಭಯಾರಣ್ಯವೊಂದನ್ನು ನಿರ್ಮಿಸಿದ.[6]
ನೈಸರ್ಗಿಕ ಇತಿಹಾಸವು 18ನೇ ಶತಮಾನದಲ್ಲಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಜನಪ್ರಿಯ ಸಾರ್ವಜನಿಕ ಪ್ರದರ್ಶನಗಳ ಆರಂಭದೊಂದಿಗೆ ಮತ್ತು ಭಾರಿ ವಿಶೇಷ ಕಾರ್ಯಾಚರಣೆಗಳೊಂದಿಗೆ ಒಂದು ಪ್ರಮುಖ ಪೂರ್ವಕಲ್ಪಿತ ಭಾವನೆಯಾಗಿತ್ತು. 1900ರಲ್ಲಿ ಜರ್ಮನಿಯಲ್ಲಿ 150, ಗ್ರೇಟ್ ಬ್ರಿಟನ್ನಲ್ಲಿ 250, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 250 ಹಾಗೂ ಫ್ರಾನ್ಸ್ನಲ್ಲಿ 300 ನೈಸರ್ಗಿಕ ಇತಿಹಾಸದ ಮ್ಯೂಸಿಯಂಗಳಿದ್ದವು.[100] ಸಂರಕ್ಷಣಾವಾದಿಗಳ ಅಥವಾ ಸಂರಕ್ಷಣಾಕಾರರ ಮನೋಭಾವನೆಗಳು 18ನೇ ಶತಮಾನದ ಉತ್ತರಾರ್ಧದಿಂದ 20ನೇ ಶತಮಾನದ ಆರಂಭದ ಸಂದರ್ಭದಲ್ಲಿ ಅಭಿವೃದ್ಧಿಗೊಂಡವು. ನೈಸರ್ಗಿಕ ಇತಿಹಾಸದೊಂದಿಗಿನ 19ನೇ ಶತಮಾನದ ಆಕರ್ಷಣೆಯು, ವಿರಳವಾಗಿರುವ ಪ್ರಭೇದಗಳನ್ನು ಅವು ಇತರ ಸಂಗ್ರಹಕಾರರಿಂದ ನಾಶವಾಗುವುದಕ್ಕಿಂತ ಮೊದಲು ಸಂಗ್ರಹಿಸುವ ಆಸಕ್ತಿಯನ್ನು ಹುಟ್ಟುಹಾಕಿತು.[99][100] ಜಾನ್ ಜೇಮ್ಸ್ ಆಡುಬನ್ನ ಪಕ್ಷಿಗಳ ಜೀವನದ ಬಗೆಗಿನ ಕಲಾತ್ಮಕ ಕೃತಿಗಳು ಮತ್ತು ರೋಮಾಂಚಕಾರಿ ಚಿತ್ರಣವು ಅನೇಕ ಪಕ್ಷಿ ಉತ್ಸಾಹಿಗಳನ್ನು ಮತ್ತು ಸಂರಕ್ಷಣಾ ಸಂಸ್ಥೆಗಳನ್ನು ಪ್ರೇರೇಪಿಸಿದವು. ಆದರೂ ಅವನ ಬರಹಗಳು ಆಧುನಿಕ ಪ್ರಮಾಣಕಗಳಿಂದ ಪಕ್ಷಿ ಸಂರಕ್ಷಣೆಯ ಬಗ್ಗೆ ಅಸಂವೇದನೆಯನ್ನು ತೋರಿಸುತ್ತವೆ. ಏಕೆಂದರೆ ಅವನು ನೂರಾರು ಪ್ರಭೇದಗಳಿಗೆ ಗುಂಡಿಕ್ಕಿದ್ದನು ಮತ್ತು ಸಂಗ್ರಹಿಸಿದ್ದನು.[100] ಆದರೆ ಅವನಿಂದ ಸ್ಫೂರ್ತಿ ಪಡೆದ ಆಡುಬನ್ ಸೊಸೈಟಿಯ ಮೊದಲ ಸ್ಥಳೀಯ ಶಾಖೆಯು ಪಕ್ಷಿಗಳ ಸಂರಕ್ಷಣೆಯ ಉದ್ದೇಶದೊಂದಿಗೆ 1905ರಲ್ಲಿ ಸ್ಥಾಪನೆಯಾಯಿತು.[101]
ಪರಿಸರ ವ್ಯವಸ್ಥೆಯ ಸೇವೆಗಳ ಆಧುನಿಕ ಕಲ್ಪನೆಯು 19ನೇ ಶತಮಾನದ ಆರಂಭದಲ್ಲಿ ಕಂಡುಬರುತ್ತದೆ. "ನೈಸರ್ಗಿಕ ಇತಿಹಾಸದ ಉಪಯೋಗವು ಅಥವಾ ದೇಶದ ಬೌತಿಕ ಸಂಪತ್ತನ್ನು ಉತ್ತೇಜಿಸಲು ಅದರ ಬಳಕೆಯಲ್ಲಿ ಯಾವುದೇ ಸಂದೇಹ ಪಡುವ ಅಗತ್ಯವಿಲ್ಲ. ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಭೂವಿಜ್ಞಾನದ ವಿಷಯಗಳು ಜೀವನ ಸೌಕರ್ಯ, ಅನುಕೂಲತೆ, ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪ್ರಭಾವ ಬೀರುವುದನ್ನು ಹೆಚ್ಚಾಗಿ ಒಳಗೊಳ್ಳುವುದಿಲ್ಲವೆಂದು ಊಹಿಸಿದುದು ತಪ್ಪು ಗ್ರಹಿಕೆಯಾಗಿತ್ತು."[102] ಆದಾಗ್ಯೂ ಈ ಲೇಖನವು ಕೃಷಿ ಉಪದ್ರವಗಳ(ಕೀಟಗಳು) ಭೀತಿಯ ಬಗ್ಗೆ ಹಾಗೂ ಅವುಗಳ ನಾಶಕ್ಕೆ ನೆರವಾಗುವ ಕಾರಣಕ್ಕಾಗಿ ಅವುಗಳ ನೈಸರ್ಗಿಕ ಇತಿಹಾಸವನ್ನು ತಿಳಿಯುವ ಪ್ರಯೋಜನದ ಬಗ್ಗೆ ವಿವರಿಸುವುದನ್ನು ಮುಂದುವರಿಸುತ್ತದೆ.
American Museum of Natural History, 1909[103]
ಆರಂಭಿಕ 1800ರ ದಶಕದಲ್ಲಿ ಜೈವಿಕ-ಭೂಗೋಳಶಾಸ್ತ್ರವು ಅಲೆಕ್ಸಾಂಡರ್ ವನ್ ಹಂಬೋಲ್ಡ್ಟ್, ಡಿಕ್ಯಾಂಡೋಲ್ಲೆ, ಲ್ಯೆಲ್ ಮತ್ತು ಡಾರ್ವಿನ್ ಮೊದಲಾದವರ ಪ್ರಯತ್ನದ ಮೂಲಕ ಹೆಚ್ಚು ತೀವ್ರತೆಯನ್ನು ಪಡೆಯಿತು;[104] ಪ್ರಭೇದಗಳನ್ನು ಅವುಗಳ ಪರಿಸರದೊಂದಿಗೆ ಸಂಬಂಧ ಕಲ್ಪಿಸುವಲ್ಲಿ ಪ್ರಮುಖವಾದ ಅವರ ಪ್ರಯತ್ನಗಳು ಪ್ರಕೃತಿತತ್ವಕ್ಕೆ ಅನುಸಾರವಾದ ಸಂಪ್ರದಾಯದ ಭಾಗವಾಗಿದ್ದವು ಹಾಗೂ ಸಂಪೂರ್ಣವಾಗಿ ಸಂರಕ್ಷಣಾ ಜೀವಶಾಸ್ತ್ರದ ಮಟ್ಟವನ್ನು ತಲುಪಲಿಲ್ಲ. ಡಾರ್ವಿನ್, ಉದಾಹರಣೆಗಾಗಿ, ಪಕ್ಷಿಗಳನ್ನು ಶಿಕಾರಿ ಮಾಡಿದನು ಮತ್ತು ಕೊಂದನು ಹಾಗೂ ನೈಸರ್ಗಿಕ ಇತಿಹಾಸದ ಕ್ಯಾಬಿನೆಟ್ಗಳನ್ನು ವಿಕ್ಟೋರಿಯನ್ ಸಂಪ್ರದಾಯದ ಮಾದರಿಯಲ್ಲಿ ಇರಿಸಿದ.
ಸಂರಕ್ಷಣಾ ಜೀವಶಾಸ್ತ್ರದ ಆಧುನಿಕ ಅಂಶಗಳು 19ನೇ ಶತಮಾನದ ಜ್ಞಾನೋದಯಯ ಅವಧಿಯಲ್ಲಿ ನಿರ್ದಿಷ್ಟವಾಗಿ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ನಲ್ಲಿ ಕಂಡುಬರುತ್ತವೆ.[99][105] ಹಲವಾರು ಚಿಂತಕರು, ಅವರಲ್ಲಿ ಗಮನಾರ್ಹವಾಗಿ ಲಾರ್ಡ್ ಮಾಂಬೊಡ್ಡೊ,[105] "ನಿಸರ್ಗವನ್ನು ಸಂರಕ್ಷಿಸುವ" ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ; ಇದರ ಹೆಚ್ಚಿನ ಆರಂಭಿಕ ಪ್ರಾಧಾನ್ಯತೆಯು ಕ್ರಿಶ್ಚಿಯನ್ ಮತಧರ್ಮಶಾಸ್ತ್ರದಲ್ಲಿ ಮೂಲವನ್ನು ಹೊಂದಿದೆ.
20ನೇ ಶತಮಾನದಲ್ಲಿ, ಯುನೈಟೆಡ್ ಕಿಂಗ್ಡಮ್, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿನ ಕಾರ್ಯಚಟುವಟಿಕೆಗಳು ಜಾನ್ ಮ್ಯೂರ್, ಥಿಯೋಡೋರ್ ರೂಸ್ವೆಲ್ಟ್ ಮತ್ತು ಆಲ್ಡೊ ಲಿಯೊಪಾಲ್ಡ್ ಮೊದಲಾದವರ ಮುನ್ನೋಟಗಳ ಪ್ರಕಾರ ಆವಾಸ ಸ್ಥಾನಗಳ ಸಂರಕ್ಷಣೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದವು. ಅಮೆರಿಕ ಸಂಯುಕ್ತ ಸಂಸ್ಥಾನವು 19ನೇ ಶತಮಾನದ ಉತ್ತರಾರ್ಧದಲ್ಲಿ ಮಾಡಿದಂತೆ, ಕೆನಡ ಅಥವಾ ಯುನೈಟೆಡ್ ಕಿಂಗ್ಡಮ್ ಸರ್ಕಾರಗಳು ರಾಷ್ಟ್ರೀಯ ಉದ್ಯಾನಗಳ ನಿರ್ಮಾಣಕ್ಕೆ ಆದ್ಯಪ್ರವರ್ತಕರಾಗದಿದ್ದರೂ, ಅಲ್ಲಿ ವನ್ಯಜೀವಿಗಳ ಸಂರಕ್ಷಣೆಯನ್ನು ಹಾಗೂ ಅಂತಹ ಗಮನಾರ್ಹ ಕಾರ್ಯಗಳನ್ನು ಮಾಡುತ್ತಿದ್ದ ದೂರದೃಷ್ಟಿಯನ್ನು ಹೊಂದಿದ್ದ ಅನೇಕ ನಾಗರಿಕರಿದ್ದರು. ಇಂತಹ ಕೆಲವು ಐತಿಹಾಸಿಕ ಪ್ರಮುಖ ವ್ಯಕ್ತಿಗಳೆಂದರೆ ಚಾರ್ಲ್ಸ್ ಗೋರ್ಡನ್ ಹೆವಿಟ್ Archived 2009-09-07 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಜೇಮ್ಸ್ ಹಾರ್ಕಿನ್.[106]
ಸಂರಕ್ಷಣೆ ಪದವು 19ನೇ ಶತಮಾನದ ಆರಂಭದಲ್ಲಿ ಬಳಕೆಗೆ ಬಂದಿತು. ಇದು ಮುಖ್ಯವಾಗಿ ಆರ್ಥಿಕ ಕಾರಣಗಳಿಗಾಗಿ ಮರ, ಮೀನು, ಬೇಟೆ, ಮಣ್ಣಿನ ಮೇಲ್ಪದರ, ಹುಲ್ಲುಗಾವಲು ಪ್ರದೇಶ ಮತ್ತು ಖನಿಜಗಳು ಮೊದಲಾದವುಗಳ ನಿರ್ವಹಣೆಯನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ ಇದು ಅರಣ್ಯಗಳು (ಅರಣ್ಯಗಾರಿಕೆ), ವನ್ಯಜೀವಿಗಳು (ವನ್ಯಜೀವಿಗಳ ರಕ್ಷಣೆ), ಉದ್ಯಾನ ಪ್ರದೇಶ, ಕಾಡುಮೇಡು ಪ್ರದೇಶ ಮತ್ತು ಜಲಾನಯನ ಪ್ರದೇಶಗಳ ಸಂರಕ್ಷಣೆಯನ್ನೂ ನಿರೂಪಿಸುತ್ತದೆ. ಪಶ್ಚಿಮ ಯುರೋಪ್ 19ನೇ ಶತಮಾನದ ಸಂರಕ್ಷಣಾ ಜೀವಶಾಸ್ತ್ರದ ಹೆಚ್ಚಿನ ಅಭಿವೃದ್ಧಿಗೆ ಮೂಲಾಧಾರವಾಗಿದೆ. ವಿಶೇಷವಾಗಿ ಬ್ರಿಟಿಷ್ ಸಾಮ್ರಾಜ್ಯವು 1869ರಲ್ಲಿ ಸೀ ಬರ್ಡ್ಸ್ ಪ್ರಿಸರ್ವೇಶನ್ ಆಕ್ಟ್ಅನ್ನು ಜಾರಿಗೆ ತಂದಿತು. ಅಮೆರಿಕ ಸಂಯುಕ್ತ ಸಂಸ್ಥಾನವು ಈ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ, ಅವುಗಳೆಂದರೆ - ಥೋರಿಯಾನ ಚಿಂತನೆಯೊಂದಿಗೆ 1891ರ ಫಾರೆಸ್ಟ್ ಆಕ್ಟ್ ರೂಪುಗೊಂಡಿತು. 1892ರಲ್ಲಿ ಜಾನ್ ಮ್ಯೂರ್ ಸೈಯೆರಾ ಕ್ಲಬ್ಅನ್ನು ಪ್ರತಿಷ್ಠಾಪಿಸಿದನು, 1895ರಲ್ಲಿ ನ್ಯೂಯಾರ್ಕ್ ಜೂವಲಾಜಿಕಲ್ ಸೊಸೈಟಿಯು ಸ್ಥಾಪನೆಯಾಯಿತು ಹಾಗೂ 1901ರಿಂದ 1909ರವರೆಗಿನ ಸಂದರ್ಭದಲ್ಲಿ ಥಿಯೋಡೋರ್ ರೂಸ್ವೆಲ್ಟ್ ಅನೇಕ ರಾಷ್ಟ್ರೀಯ ಅರಣ್ಯಗಳು ಮತ್ತು ರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದನು.[107]
ಸುಮಾರು 20ನೇ ಶತಮಾನದ ಮಧ್ಯದವರೆಗೂ ಪ್ರತಿಯೊಂದು ಪ್ರಭೇದಗಳನ್ನು ರಕ್ಷಿಸುವ ಉದ್ದೇಶದ ಪ್ರಯತ್ನಗಳು ಉದ್ಭವಿಸಿರಲಿಲ್ಲ. ಅವುಗಳಲ್ಲಿ ಪ್ರಮುಖವಾದುದು ನ್ಯೂಯಾರ್ಕ್ ಜೂವಲಾಜಿಕಲ್ ಸೊಸೈಟಿಯು ದಕ್ಷಿಣ ಅಮೆರಿಕಾದಲ್ಲಿ ನಿರ್ವಹಿಸಿದ ದೊಡ್ಡ ಬೆಕ್ಕಿನ ಸಂರಕ್ಷಣಾ ಕಾರ್ಯಗಳು.[108] ಆರಂಭಿಕ 20ನೇ ಶತಮಾನದಲ್ಲಿ ನ್ಯೂಯಾರ್ಕ್ ಜೂವಲಾಜಿಕಲ್ ಸೊಸೈಟಿಯು, ನಿರ್ದಿಷ್ಟ ಪ್ರಭೇದಗಳಿಗಾಗಿ ರಕ್ಷಿತ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹಾಗೂ ಸಂರಕ್ಷಣೆ ಆದ್ಯತೆಗಳಾಗಿ ಸಂರಕ್ಷಣೆ ಮಾಡಲು ಹೆಚ್ಚು ಸೂಕ್ತವಾದ ಪ್ರದೇಶಗಳನ್ನು ಕಂಡುಹಿಡಿಯುವ ಅವಶ್ಯಕ ಸಂರಕ್ಷಣಾ ಅಧ್ಯಯನಗಳನ್ನು ನಡೆಸುವಲ್ಲಿ ಪ್ರಮಖವಾದುದಾಗಿದೆ; ಕಾರ್ಲ್ E. ಅಕೇಲಿ, ಆರ್ಕೈ ಕ್ಯಾರ್ ಮತ್ತು ಆರ್ಕೈ ಕ್ಯಾರ್ III ಮೊದಲಾದವರ ಕೆಲಸಗಳು ಈ ಯುಗದಲ್ಲಿ ಹೆಚ್ಚು ಗಮನಾರ್ಹವಾದುದಾಗಿದೆ.[109][110][ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗಾಗಿ, ಅಕೇಲಿಯು ವಿರುಂಗಾ ಮೌಂಟೇನ್ಸ್ಗೆ ವಿಶೇಷ ಯಾತ್ರೆಗಳನ್ನು ಕೈಗೊಂಡ.ಹಾಗೂ ಅಲ್ಲಿ ಪರ್ವತದ ಗೋರಿಲ್ಲಾಗಳನ್ನು ಕಂಡು, ಆ ಪ್ರಭೇದಗಳು ಮತ್ತು ಆ ಪ್ರದೇಶವು ಸಂರಕ್ಷಣಾ ಆದ್ಯತಾ ವಿಷಯಗಳಾಗಿವೆಯೆಂದು ಮನಗಂಡನು. ಆತನು ಬೆಲ್ಜಿಯಂನ ಆಲ್ಬರ್ಟ್ Iಅವರಿಗೆ ಪರ್ವತದ ಗೋರಿಲ್ಲಾಗಳಿಗೆ ರಕ್ಷಣೆ ಒದಗಿಸಲು ಹಾಗೂ ಈಗಿನ ಡೆಮೋಕ್ರೆಟಿಕ್ ರಿಪಬ್ಲಿಕ್ ಆಫ್ ಕೋಂಗೊ ಎನ್ನುವಲ್ಲಿ ಆಲ್ಬರ್ಟ್ ನ್ಯಾಷನಲ್ ಪಾರ್ಕ್ (ಈಗ ವಿರುಂಗ ನ್ಯಾಷನಲ್ ಪಾರ್ಕ್ ಎಂದು ಮರುಹೆಸರಿಸಲಾಗಿದೆ)ಅನ್ನು ನಿರ್ಮಿಸಲು ಪ್ರೇರಣೆ ನೀಡಿದ ಪ್ರಮುಖ ವ್ಯಕ್ತಿಯಾಗಿದ್ದಾನೆ.[111]
1970ರ ದಶಕದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಎಂಡೇಂಜರ್ಡ್ ಸ್ಪೀಸೀಸ್ ಆಕ್ಟ್[112] ಅಡಿಯಲ್ಲಿ ಕೆನಡಾದ ಸ್ಪೀಸೀಸ್ ಅಟ್ ರಿಸ್ಕ್ ಆಕ್ಟ್ (SARA), ಆಸ್ಟ್ರೇಲಿಯಾ, ಸ್ವೀಡನ್, ಯುನೈಟೆಡ್ ಕಿಂಗ್ಡಮ್ನಲ್ಲಿ ಅಭಿವೃದ್ಧಿಪಡಿಸಲಾದ ಬಯೋಡೈವರ್ಸಿಟ್ ಆಕ್ಷನ್ ಪ್ಲ್ಯಾನ್ಸ್ ಒಂದಿಗೆ ನಿರ್ವಹಿಸಿದ ಕಾರ್ಯಚಟುವಟಿಕೆಗಳಿಂದ ನೂರಾರು ಪ್ರಭೇದಗಳ ವಿಶೇಷ ಸಂರಕ್ಷಣಾ ಯೋಜನೆಗಳು ಸಂಭವಿಸಿದವು. ವಿಶೇಷವಾಗಿ ಅಮೆರಿಕ ಸಂಯುಕ್ತ ಸಂಸ್ಥಾನವು ಮಾನವರ ಸಾಮಾನ್ಯ ಪರಂಪರೆಗೆ ಗಮನಾರ್ಹ ಸಾಂಸ್ಕೃತಿಕ ಅಥವಾ ನೈಸರ್ಗಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರದೇಶಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ನಿರ್ವಹಿಸಿತು. ಈ ಯೋಜನೆಯು UNESCOದ ಜನರಲ್ ಕಾನ್ಫರೆನ್ಸ್ನಿಂದ 1972ರಲ್ಲಿ ಅಂಗೀಕರಿಸಲ್ಪಟ್ಟಿತು. 2006ರಲ್ಲಿ ಒಟ್ಟು 830 ಪ್ರದೇಶಗಳು ಪಟ್ಟಿಮಾಡಲ್ಪಟ್ಟವು: 644 ಸಾಂಸ್ಕೃತಿಕ, 162 ನೈಸರ್ಗಿಕ. ರಾಷ್ಟ್ರೀಯ ಕಾನೂನು ರಚನೆಯ ಮೂಲಕ ತೀವ್ರ ಪ್ರಮಾಣದಲ್ಲಿ ಜೈವಿಕ ಸಂರಕ್ಷಣೆಯನ್ನು ಮಾಡಿದ ಮೊದಲ ರಾಷ್ಟ್ರವೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನ. ಅದು ಎಂಡೇಂಜರ್ಡ್ ಸ್ಪೀಸೀಸ್ ಆಕ್ಟ್[113] (1966) ಮತ್ತು ನ್ಯಾಷನಲ್ ಎನ್ವೈರ್ನ್ಮೆಂಟಲ್ ಪಾಲಿಸಿ ಆಕ್ಟ್ (1970)[114] ಮೂಲಕ ಅನೇಕ ಕಾನೂನುಗಳನ್ನು ಅನುಮೋದಿಸಿತು. ಅವು ಒಟ್ಟಿಗೆ ಹೆಚ್ಚಿನ ಪ್ರಮಾಣದ ಆವಾಸಸ್ಥಾನಗಳ ಸಂರಕ್ಷಣೆಗೆ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂಶೋಧನೆಗೆ ಪ್ರಮುಖ ಹಣಕಾಸಿನ ನೆರವು ಮತ್ತು ಸಂರಕ್ಷಣಾ ಕ್ರಮಗಳನ್ನು ಒದಗಿಸಿದವು. ನಂತರ ಪ್ರಪಂಚದಾದ್ಯಂತ ಇತರ ಸಂರಕ್ಷಣಾ ಅಭಿವೃದ್ಧಿಗಳೂ ಜಾರಿಗೆ ಬಂದವು. ಉದಾಹರಣೆಗಾಗಿ, ಭಾರತವು ವೈಲ್ಡ್ಲೈಫ್ ಪ್ರೊಟೆಕ್ಷನ್ ಆಕ್ಟ್ ಆಫ್ 1972 ಅನ್ನು ಅನುಮೋದಿಸಿತು.
1980ರಲ್ಲಿ ಆದ ಒಂದು ಪ್ರಮುಖ ಬೆಳವಣಿಗೆಯೆಂದರೆ ನಗರ ಸಂರಕ್ಷಣಾಅಭಿಯಾನದ ಹೊಮ್ಮುವಿಕೆ. UKಯ ಬರ್ಮಿಗ್ಹ್ಯಾಮ್ನಲ್ಲಿ ಒಂದು ಸ್ಥಳೀಯ ಸಂಸ್ಥೆಯು ಸ್ಥಾಪನೆಯಾಯಿತು. ಇದು UKಯಾದ್ಯಂತದ ನಗರಗಳಲ್ಲಿ ನಂತರ ಕಡಲಾಚೆಯ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಬೆಳವಣಿಗೆಗೆ ದಾರಿ ಕಲ್ಪಿಸಿತು. ಜನಸಾಮಾನ್ಯ ಅಭಿಯಾನವಾಗಿ ಇದನ್ನು ಗ್ರಹಿಸಿದರೂ, ಇದರ ಆರಂಭಿಕ ಅಭಿವೃದ್ಧಿಯು ನಗರದ ವನ್ಯಜೀವಿಗಳ ಸಂಶೋಧನೆಯಿಂದ ಪ್ರೇರೇಪಿತವಾಗಿದೆ. ಆರಂಭದಲ್ಲಿ ಆಧಾರಭೂತವಾಗಿ ಗ್ರಹಿಸಿದ, ಮಾನವನ ಇತರ ಚಟುವಟಿಕೆಯೊಂದಿಗೆ ಬಿಡಿಸಿಕೊಳ್ಳಲಾಗದಂಥ ಸಂಬಂಧವನ್ನು ಹೊಂದಿದ ಈ ಅಭಿಯಾನದ ಸಂರಕ್ಷಣಾ ದೃಷ್ಟಿಕೋನವು ಈಗ ಸಂರಕ್ಷಣಾ ಚಿಂತನೆಯಲ್ಲಿ ಮುಖ್ಯವಾಹಿನಿಯಾಗಿದೆ. ಪ್ರಮುಖ ಸಂಶೋಧನಾ ಕಾರ್ಯಗಳನ್ನು ಈಗ ನಗರ ಸಂರಕ್ಷಣಾ ಜೀವಶಾಸ್ತ್ರದಲ್ಲಿ ನಿರ್ದೇಶಿಸಲಾಗುತ್ತಿದೆ. ಸೊಸೈಟಿ ಫಾರ್ ಕನ್ಸರ್ವೇಶನ್ ಬಯೋಲಜಿಯು 1985ರಲ್ಲಿ ಸ್ಥಾಪನೆಯಾಯಿತು.[115]
1992ರಲ್ಲಿ ಪ್ರಪಂಚದ ಹೆಚ್ಚಿನ ರಾಷ್ಟ್ರಗಳು ಕನ್ಸರ್ವೇಶನ್ ಆಫ್ ಬಯೋಲಜಿಕಲ್ ಡೈವರ್ಸಿಟಿ ಒಂದಿಗೆ ಜೈವಿಕ-ವೈವಿಧ್ಯತೆಯ ಸಂರಕ್ಷಣಾ ನಿಯಮಗಳಿಗೆ ಬದ್ಧವಾದವು;[116] ಆನಂತರ ಅನೇಕ ರಾಷ್ಟ್ರಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ತಮ್ಮ ಗಡಿಗಳೊಳಗೆ ಗುರುತಿಸಿ, ಸಂರಕ್ಷಿಸುವ ಹಾಗೂ ಸಂಬಂಧಿತ ಆವಾಸ ಸ್ಥಾನಗಳನ್ನು ರಕ್ಷಿಸುವ ಬಯೋಡೈವರ್ಸಿಟಿ ಆಕ್ಷನ್ ಪ್ಲ್ಯಾನ್ಸ್ನ ಕಾರ್ಯಕ್ರಮಗಳನ್ನು ಆರಂಭಿಸಿದವು. 1990ರ ದಶಕದ ಉತ್ತರಾರ್ಧದಲ್ಲಿ ಇದಕ್ಕೆ ಸಂಬಂಧಿಸಿದಂತೆ ವೃತ್ತಿಪರತೆಯು ಹೆಚ್ಚಾಯಿತು ಹಾಗೂ ಅನೇಕ ಸಂಸ್ಥೆಗಳು ಅಭಿವೃದ್ಧಿ ಹೊಂದಿದವು, ಉದಾಹರಣೆಗಾಗಿ, ಇನ್ಸ್ಟಿಟ್ಯೂಟ್ ಆಫ್ ಇಕಾಲಜಿ ಆಂಡ್ ಎನ್ವೈರಾನ್ಮೆಂಟ್ ಮ್ಯಾನೇಜ್ಮೆಂಟ್ ಮತ್ತು ಸೊಸೈಟಿ ಫಾರ್ ದ ಎನ್ವೈರಾನ್ಮೆಂಟ್.
2000ರಲ್ಲಿ ಭೂದೃಶ್ಯ ಮಟ್ಟದ ಸಂರಕ್ಷಣೆಯ ಕಲ್ಪನೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ಒಂದು-ಪ್ರಭೇದ ಅಥವಾ ಒಂದು-ಆವಾಸಸ್ಥಾನ ಕೇಂದ್ರೀಕೃತ ಚಟುವಟಿಕೆಗಳಿಗೆ ಕಡಿಮೆ ಮಹತ್ವ ನೀಡಲಾಯಿತು. ಬದಲಿಗೆ ಪರಿಸರ ವ್ಯವಸ್ಥೆಯ ವಿಧಾನವನ್ನು ಹೆಚ್ಚಿನ ಮುಖ್ಯವಾಹಿನಿ ಸಂರಕ್ಷಣಾವಾದಿಗಳು ಸೂಚಿಸಿದರು. ಆದರೂ ಹೆಚ್ಚು-ವೈಲಕ್ಷಣದ ಪ್ರಭೇದಗಳ ರಕ್ಷಣೆಗೆ ಕಾರ್ಯನಿರತರಾಗಿದ್ದ ಜನರು ಆತಂಕ ವ್ಯಕ್ತಪಡಿಸಿದರು.
ಪರಿಸರ ವಿಜ್ಞಾನವು ಜೀವಗೋಳದ ಕಾರ್ಯಚಟುವಟಿಕೆಗಳನ್ನು ಸ್ಟಷ್ಟಪಡಿಸಿದೆ; ಅಂದರೆ ಮಾನವರು, ಇತರ ಪ್ರಭೇದಗಳು ಮತ್ತು ನೈಸರ್ಗಿಕ ಪರಿಸರದ ನಡುವಿನ ಸಂಕೀರ್ಣವಾದ ಪರಸ್ಪರ ಸಂಬಂಧಗಳು. ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಸಂಬಂಧಿತ ಕೃಷಿ, ಕೈಗಾರಿಕೆ ಮತ್ತು ಮಾಲಿನ್ಯವು ಪರಿಸರ ವಿಜ್ಞಾನದ ಸಂಬಂಧಗಳನ್ನು ಎಷ್ಟು ಸುಲಭವಾಗಿ ನಾಶಮಾಡಬಹುದೆಂಬುದನ್ನು ತೋರಿಸಿದೆ.[117]
“ | The last word in ignorance is the man who says of an animal or plant: "What good is it?" If the land mechanism as a whole is good, then every part is good, whether we understand it or not. If the biota, in the course of aeons, has built something we like but do not understand, then who but a fool would discard seemingly useless parts? To keep every cog and wheel is the first precaution of intelligent tinkering. | ” |
—Aldo Leopold, A Sand County Almanac |
ಟೆಂಪ್ಲೇಟು:Portal box
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.