From Wikipedia, the free encyclopedia
ಕುಟುಂಬ
ಮನೋಜ್.ಕೆ. ಎ೦ಬುದು ನನ್ನ ಹೆಸರು. ನಾನು ೨೪ ಜೂನ್ ೧೯೯೯ ರಂದು ದೇವನಹಳ್ಳಿ ಅಲ್ಲಿ ಜನಿಸಿದೆ. ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ನಾನು ನಮ್ಮ ಅಜ್ಜಿ ಮನೆಗೆ ಬಂದು ಅದೇ ಊರಿನಲ್ಲಿ ನನ್ನ ಒದನ್ನು ಪ್ರಾರಂಭಿಸಿದೆ . ನನ್ನ ತಾಯಿಯ ಹೆಸರು ಮಂಜುಳ , ತಂದೆ ಹೆಸರು ಕ್ರಿಶ್ಣಪ್ಪ ಹಾಗೂ ನನಗೆ ಒಬ್ಬ ತಮ್ಮ ಅವನ ಹೆಸರು ಸಂತೋಷ್ ನನಗೆ ತಂದೆ ಇಲ್ಲ ನನ್ನ ತಾಯಿಯೇ ನಮ್ಮ ಸಂಸಾರ ಮತ್ತು ನಮ್ಮ ಏಳು ಬೀಳುಗಳನ್ನು ನೋಡಿಕೊಳ್ಳುತಿದ್ದಾರೆ. ನಾನು ೧-೫ ನೆ ತರಗತಿ ಅನ್ನು ನಮ್ಮ ಅಜ್ಜಿ ಊರಿನಲ್ಲೇ ಇದ್ದ ಪ್ರಾಥಮಿಕ ಕನ್ನಡ ಕಿರಿಯ ಪಾಠ ಶಾಲೆ ಅಲ್ಲಿ ಅತ್ತ್ಯುತ್ತಮ ವಾಗಿ ಪೂರ್ತಿಗೊಳಿಸಿದೆ.
ನಾನು ೫ ತರಗತಿ ಅಲ್ಲಿ ಇದ್ದಾಗ ನಮ್ಮ ಪೋಷಕರ ಅರಿವಿಲ್ಲದೆ ನಾನು ನಂದಿ ಬೆಟ್ಟ[1] (ಭಾರತ)ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಿದೆ ಹಾಗೂ ಅದರ ಪರೀಕ್ಷೆ ಬರೆದು ದೇವನಹಳ್ಳಿ ಅಲ್ಲಿ ಸುಮಾರು ಸಾವಿರಾರು ವಿದ್ಯಾರ್ಥಿಗಳಲ್ಲಿ ಕೇವಲ ೫ ವಿದ್ಯಾರ್ಥಿಗಳು ಆಯ್ಕೆ ಆದರು ಅದರಲ್ಲಿ ನಾನು ಒಬ್ಬ.!
ನಾನು ಸುಮಾರು ೭ ವರ್ಷಗಳ ಕಾಲ ವಸತಿ ಶಾಲೆ ಅಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ ಅಂದರೆ ೧೨ ತರಗತಿಯನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿದೆ.
ನಾನು ೭ ತರಗತಿ ಇದ್ದಾಗ ಕ್ರೀಡಗಳಲ್ಲಿ ಆಸಕ್ತಿಗಳಿಸಿದೆ ಮತ್ತು ನನಗೆ ತುಂಬಾ ಇಷ್ಟ ವಾದದ್ದು ಕ್ರಿಕೇಟ್ ಆದರೂ ಅದರಲ್ಲಿ ಸ್ಥಾನ ಸಿಗದ ಕಾರಣ ನಾನು ಕೈ ಚೆಂಡು ಆಟವನ್ನು ನನ್ನ ಆಟವಾಗಿ ಆಯ್ಕೆ ಮಾಡಿದೆ ಮತ್ತೆ ನನಗೆ ಕೈ ಚೆಂಡಿನಲ್ಲಿ ರಾಷ್ಟ್ರೀಯ ಮಟ್ಟದ ವರಗೆ ಹೋಗ ಬೇಕೆಂದು ನನ್ನ ಗುರಿ ಆಗಿತ್ತು ಅದಕ್ಕಾಗಿ ನಾನು ತುಂಬಾ ಅಭ್ಯಾಸ ಕೂಡ ಮಾಡಿದೆ ಹಾಗು ನಮ್ಮ ಶಾಲೆ ಮಟ್ಟದಲ್ಲಿ ಒಳ್ಳೆ ಆಟಗಾರನಾಗಿ ಗುರುತಿಸಿ ಕೊಂಡೆ.
ಹೀಗಿರುವಾಗ ನಮ್ಮ ಶಾಲೆಯಲ್ಲಿ ತಾಲ್ಲೂಕಿನ ಮಟ್ಟದ ಆಯ್ಕೆ ಶುರುವಾಯಿತು ನನ್ನ ಒಂದು ವರ್ಷದ ಅಭ್ಯಾಸದ ಫಲವನ್ನು ಗಳಿಸುವ ಅವಾಕಾಶ ಬಂತು ಎನ್ನುವ ಸಂಭ್ರಮ ದಲ್ಲಿ ಇರುವಾಗ ನನಗೆ ವಿಪರೀತ ಜ್ವರ ಬಂದುಬಿಡಿತು ಆದರೂ ನಾನು ಬೇರೆ ಅವರಿಗೆ ತಿಳಿಯದಂತೆ ಹೇಗಾದರೂ ಮಾಡಿ ಅದಲೇಬೇಕೆಂದು ತೀರ್ಮಾನಿಸಿ ಅಡಲು ಹೋದೆ ಆದರೆ ಆ ಸಮಯದಲ್ಲಿ ನನಗೆ ಅಷ್ಟು ಶಕ್ತಿ ಇರಲಿಲ್ಲ ಆದರೂ ಹೇಗೋ ಅಡಿದೆ ಆದರೆ ನನ್ನಲ್ಲಿ ಶಕ್ತಿ ಇರದ ಕಾರಣ ನಾನು ನನ್ನ ಉತ್ತಮ ಗಳನ್ನು ತೋರಿಸಲು ಆಗಲಿಲ್ಲ . ಇದೆ ರೀತಿ ನನಗೆ ,೧೦ ನೆ ತರಗತಿ ಅಲ್ಲಿ ಇದ್ದಾಗಲೂ ಆಯಿತು ಆಗ ನಾನು ೧೭ ನೆ ವಯೋಮೀತಿಯ ಭಾಗದಲ್ಲಿ ಆದಿ ಇನ್ನೇನು ರಾಷ್ಟ್ರೀಯ ಮಟ್ಟದಲ್ಲಿ ಅಡಲು ಎರಡೇ ದಿನಗಳು ಇದೆ ಎನ್ನುವಷ್ಟರಲ್ಲಿ ನನಗೆ ಮತ್ತೆ ಅದೇ ರೀತಿ ಕಾಯಿಲೆ ಬಂತು ಆದರಿಂದ ನಮ್ಮ ಗುರುಗಳು ನನ್ನನ್ನು ಆಡಲು ಬಿಡಲಿಲ್ಲ.
ಈಗೆ ನನ್ನ ಈ ೭ ವರ್ಷದ ನವೋದಯ ಜೀವನದಲ್ಲಿ ನನ್ನದು ಏನು ವಿದ್ಯೆಯಲ್ಲಿ ಸಾಧನೆ ಇಲ್ಲದಿದ್ದರೂ ನಾನು ನಮ್ಮ ರಾಜ್ಯಮಟ್ಟದ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದೆ.
ನನಗೆ ನಮ್ಮ ಶಾಲೆ ಅಲ್ಲಿ ೧೦ನೆ ತರಗತಿಯಲ್ಲಿ ಇದ್ದಾಗ "ವರ್ಷದ ಅತ್ಯುತ್ತಮ ಕ್ರೀಡಾ ವ್ಯಕ್ತಿ ಎಂದು " ಬಹುಮಾನ ದೊರಕಿತು. ನಾನು ೧೧ನೆ ತರಗತಿ ಅಲ್ಲಿ ಇದ್ದಾಗ ನನಗೆ ಶಾಲೆಯ ಆಡಳಿತಗಾರ ಹಾಗು ಶಾಲೆಯ ನಾಯಕನಾಗಬೇಕೆಂದು ಆಸೆ ಇತ್ತು ಆದರೆ ನಮ್ಮ ಶಾಲೆಯ ಒಂದಷ್ಟು ಗುರುಗಳಿಗೆ ನನ್ನನ್ನು ಕ ದರೆ ಅಸೂಯೆ ಇತ್ತು ಆದ ಕಾರಣ ನನ್ನನ್ನು ಆ ಸ್ಥಾನಕ್ಕೆ ಹೋಗಲು ಬಿಡಲಿಲ್ಲ ಆದರೆ ನನ್ನನ್ನು ೧೧ ನೆ ತರಗತಿಯ ನಾಯಕನಾಗಿ ಆರಿಸಿ ಶಾಲೆಯ ಮೊದಲ ನಾಯಕನಾಗಿ ಆರಿಸಿದರು.
ಹೀಗೆ ನಾನು ನನ್ನ ಆಸೆಯಂತೆ ೧೧ ನೆ ತರಗತಿಯಲ್ಲಿ ರಾಷ್ಟ್ರೀಯ ಮಟ್ಟದ ಕೈ ಚೆಂಡು ಆಟಗಾರನಾಗಿ ನಾನು ಆಯ್ಕೆ ಗೊಂಡೆಮತ್ತು ಅದೇ ಸಮಯದಲ್ಲಿ ನನಗೆ ನಮ್ಮ ಶಾಲೆಯಿಂದ ನನಗೆ "ವರ್ಷದ ವಿದ್ಯಾರ್ಥಿ" ಎಂದು ಆಯ್ಕೆಗೊಂಡೆ ಮತ್ತು ಆ ವರ್ಷದ ಕ್ರೀಡಾ ವ್ಯಕ್ತಿ ಆಗಿ ಕೂಡ ಆಯ್ಕೆಗೊಂಡೆ.
ನನ್ನ ಜೀವನದಲ್ಲಿ ನಾನು ತುಂಬಾ ಇಷ್ಟಪಡುವ ತರಗತಿ ಎಂದರೆ ೧೦ ಮತ್ತು ೧೧ ನೆ ತರಗತಿ ಯಾಕೆಂದರೆ ನನಗೆ ಮರೆಯಲಾಗದ ನೆನಪುಗಳು ಅಲ್ಲಿವೆನಾನು ,೧೨ ನೆ ತರಗತಿಯ ಉತ್ತೀರ್ಣಗೊಂಡ ನಂತರ ನಾನು ವ್ಯಾಪರಿ ನೌಕ ಪಡೆಯ ವಿದ್ಯಾಭ್ಯಾಸಕ್ಕಾಗಿ ಹೈದೆರಬಾದ್ ಅಲ್ಲಿ ನನ್ನ ಓದನ್ನು ಮುಂದುವರಿಸಲು ಹೋದೆ ಆದರೆ ನನ್ನ ದುರಾದೃಷ್ಟವಶಾತ್ ನನಗೆ ಡೆಂಗ್ಯು ಜ್ವರ[2] ಬಂದು ನಾನು ಚಿಕಿತ್ಸೆಗಾಗಿ ಮತ್ತೆ ಬೆಂಗಳೂರಿಗೆ ಬರಬೇಕಾಗಿ ಬಂತು ಹಾಗೂನಾನು ನಿಗದಿತ ಸಮಯದಲ್ಲಿ ಮತ್ತೆ ಆ ವಿದ್ಯಾಲಯಕ್ಕೆ ಹೋಗೋಕೆ ಆಗದ ಕಾರಣ ನಾನು ಆ ವಿದ್ಯಾಲಯ ಬಿಡಬೇಕಾಗಿ ಬಂತು.
ನನಗೆ ನಿಗದಿತ ಸಮಯದಲ್ಲಿ ಹೋಗಲಾಗದ ಕಾರಣ ನನಗೆ ಮತ್ತೆ ಎಲ್ಲಯೂ ಕೂಡ ಕಾಲೇಜು ನ ಪ್ರವೇಶ ಸಿಗಲಿಲ್ಲ ಆದ್ದರಿಂದ ನಾನು ಕೆಲಸಕ್ಕೆಂದು ಬೆಂಗಳೂರಿನ [[ಕ್ರೆಡಿಟ್ ಕಾರ್ಡ್ ಇಲಾಖೆಯಲ್ಲಿ ಕೆಲಸ ಮಾಡಿದೆ ನಂತರ ನಾನು ಒಂದು ಒಳ್ಳೆಯ ಕಾಲೇಜು ಸೇರಬೇಕೆಂದು ಕ್ರೈಸ್ಟ್ ಯೂನಿವರ್ಸಿಟಿಯನ್ನು[3] ಆಯ್ಕೆ ಮಾಡಿದೆ ಅದರಂತೆಯೇ ಅಲ್ಲಿ ಒಂದು ಸ್ಥಾನ ಪಡೆದುಕೊಂಡೆ.ಸದ್ಯಕ್ಕೆ ನನ್ನ ಜೀವನ ತುಂಬಾ ಚೆನ್ನಾಗಿ ನಡೆಯುತ್ತಿದೆ . ತುಂಬಾ ಇಷ್ಟ ಪಡುವ ಸ್ನೇಹಯಿತರು ನನಗೆ ಸಿಕ್ಕಿದ್ದಾರೆನನಗೆ ಇರುವಾ ಆಸೆ ಒಂದೇ ಒಂದು ಅದು ನಾನು ತುಂಬಾ ಪ್ರಸಿದ್ದಿ ಆಗಬೇಕೆಂದು ಹಾಗೂ ನಮ್ಮ ಅಮ್ಮ ಅಮ್ಮ ನನ್ನಿಂದ ತುಂಬಾ ಹೆಮ್ಮೆ ಪಡಬೇಕೆಂದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.