ಕುಪ್ನಳ್ಳಿ ಎಂ. ಬೈರಪ್ಪ

ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ From Wikipedia, the free encyclopedia

ಕುಪ್ನಳ್ಳಿ ಎಂ. ಬೈರಪ್ಪ
Remove ads

ಕುಪ್ನಳ್ಳಿ ಎಂ. ಬೈರಪ್ಪ (ಆಂಗ್ಲ:Kupnalli M. Byrappa), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ.[] ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ.[][]

Quick facts ಕುಪ್ನಳ್ಳಿ ಎಂ. ಬೈರಪ್ಪ, ಜನನ ...
Remove ads

ಕೃತಿಗಳು

ಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.[] ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು.

  • ಬೇಲಿಗಿಡಗಳು ಮಾತಾಡುತಾವೆ []
  • ಕರ್ಣರಸಾಯನ
  • ಅಂತರಗಂಗವ್ವ
  • ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ
  • ಬಸವ ಸಿನಿಮಾ ಬುದ್ಧ ಪ್ರತಿಮಾ
  • ಬೌದ್ಧಯಾನಿ ಚಾಮುಂಡಿ
  • ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ
  • ಕತ್ತಲನಾಡಿನ ಬೆಳಕಿನ ಹಾಡು
  • ಮೈಸೂರು-ಚಾಮರಾಜನಗರ ತತ್ತ್ವಪದಗಳು
  • ಬುದ್ಧನಗೆಯ ತಾಯಿನದಿ
  • ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ
  • ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ)[]

ಮುಂತಾದವು.

Remove ads

ಪುರಸ್ಕಾರಗಳು

  • ೨೦೧೯ - ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ರಾಷ್ಟ್ರೀಯ ಪುರಸ್ಕಾರ[]
  • ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನಾ ಬಹುಮಾನ[]
  • ಹಾ. ಮಾ. ನಾಯಕ ದತ್ತಿ ಪುರಸ್ಕಾರ
  • ಲೋಹಿಯಾ ಸಮತಾ ಪುರಸ್ಕಾರ
  • ೨೦೧೯ - ಚೈತನ್ಯ ಫೌಂಡೇಶನ್ ಪ್ರಶಸ್ತಿ []
  • ೨೦೧೯ - ಪ್ರಜಾವಾಣಿ ಯುವ ಸಾಧಕ ಪುರಸ್ಕಾರ[]
  • ೨೦೨೧ - ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ[೧೦]

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads