ದೇ. ಜವರೇಗೌಡ
ಭಾರತೀಯ ಲೇಖಕ, ಜಾನಪದ ತಜ್ಞ, ವಿದ್ವಾಂಸ / From Wikipedia, the free encyclopedia
ದೇವೇಗೌಡ ಜವರೇಗೌಡ, ದೇಜಗೌ ಎಂಬ ಕಾವ್ಯನಾಮದಿಂದ ಹೆಸರಾಗಿರುವ ದೇ. ಜವರೇಗೌಡ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಕುವೆಂಪು ಅವರ ಮಾನಸ ಪುತ್ರರೆಂದು ಕರೆಯಲ್ಪಡುವ ದೇಜಗೌ ಅವರು, ಡಾ. ಕುವೆಂಪು ಅವರ ಶಿಷ್ಯರಾಗಿ ಅವರ ಮಾರ್ಗದರ್ಶನದಿಂದ ಕನ್ನಡದ ಹೆಸರಾಂತ ಗದ್ಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ. 'ದೇಜಗೌ' ಎಂಬ ಸಂಕ್ಷಿಪ್ತ ನಾಮದಿಂದಲೇ ಸಾಹಿತ್ಯವಲಯದಲ್ಲಿ ಪ್ರಖ್ಯಾತರಾಗಿದ್ದಾರೆ. ಕನ್ನಡಕ್ಕೆ ಎಲ್ಲೇ ಸಮಸ್ಯೆಗಳು ಉದ್ಬವಿಸಿದರೂ ಇಳಿವಯಸ್ಸಿನಲ್ಲೂ ಹಾಜರಾಗುತ್ತಿದ್ದರು. ಅವರ ಕನ್ನಡ ಪ್ರೇಮ, ಪುಸ್ತಕ ಪ್ರೀತಿ ಅನನ್ಯ, ಅವರ್ಣನೀಯ. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಕುಡಿ.
Quick Facts ದೇ. ಜವರೇಗೌಡ, ಜನನ ...
ದೇ. ಜವರೇಗೌಡ | |
---|---|
ಜನನ | ಜುಲೈ 6, 1915 ಚಕ್ಕೆರೆ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ |
ಮರಣ | ಮೇ 30, 2016 ಮೈಸೂರು |
ಅಂತ್ಯ ಸಂಸ್ಕಾರ ಸ್ಥಳ | ಮೈಸೂರು |
ಕಾವ್ಯನಾಮ | ದೇಜಗೌ |
ವೃತ್ತಿ | ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಆತ್ಮಕಥೆ, ಜೀವನ ಚರಿತ್ರೆ |
ವಿಷಯ | ಜಾನಪದ, ಜೀವನ ಚರಿತ್ರೆ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮಶ್ರೀ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ |
ಬಾಳ ಸಂಗಾತಿ | ಸಾವಿತ್ರಮ್ಮ |
ಮಕ್ಕಳು | ಜೆ. ಶಶಿಧರ ಪ್ರಸಾದ್, ಜೆ. ಶಶಿಕಲಾ |
Close