ರಾಮಕೃಷ್ಣ
From Wikipedia, the free encyclopedia
ರಾಮಕೃಷ್ಣ - ೨೦೦ ಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟ.
![Thumb image](http://upload.wikimedia.org/wikipedia/commons/thumb/9/90/Ramakrishna_%28Kannada_actor%29.jpg/220px-Ramakrishna_%28Kannada_actor%29.jpg)
ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನವರು ಇವರು.
ಬಬ್ರುವಾಹನ ಚಿತ್ರದಲ್ಲಿ ಕೃಷ್ಣನ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಪುಟ್ಟಣ್ಣ ಕಣಗಾಲ್ ಅವರ ಅಮೃತ ಘಳಿಗೆ,ಮಾನಸ ಸರೋವರ, ರಂಗನಾಯಕಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.
ಅಮೃತವರ್ಷಿಣಿ,ಬೆಂಕಿಯಲ್ಲಿ ಅರಳಿದ ಹೂವು ಅವರ ಇತರ ಪ್ರಮುಖ ಚಿತ್ರಗಳು.
‘ರಂಗ ನಾಯಕಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ, ೧೯೯೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ‘ಅಮೃತವರ್ಷಿಣಿ’ ಚಿತ್ರಕ್ಕೆ ೧೯೯೬-೯೭ರಲ್ಲಿ ನಾಕ್ಔಟ್ ಉದಯ ಚಲನಚಿತ್ರ ಪ್ರಶಸ್ತಿ ಗಳು ಅವರಿಗೆ ಸಿಕ್ಕಿವೆ.
ಗುಬ್ಬಿ ವೀರಣ್ಣ, ಕೆ.ಬಾಲಚಂದರ್, ರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು ಅವರೊಂದಿಗೂ ಇವರು ಕೆಲಸಮಾಡಿದ್ದಾರೆ