From Wikipedia, the free encyclopedia
ಥಾಮಸ್ ಜೆಫರ್ಸನ್ (ಏಪ್ರಿಲ್ ೧೩, ೧೭೪೩ – ಜುಲೈ ೪, ೧೮೨೬)[1] ಇವರು ಯುನೈಟೆಡ್ ಸ್ಟೇಟ್ಸ್ನ ಮೂರನೇಯ ಅಧ್ಯಕ್ಷರಾಗಿದ್ದರು(೧೮೦೧–೧೮೦೯), ಮತ್ತು ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್ನ ಪ್ರಮುಖ ಲೇಖಕರು(೧೭೭೬). ಜೆಫರ್ಸನ್ರವರು ಪ್ರಬಲ ವರ್ಚಸ್ಸಿನ ಸ್ಥಾಪಕ ಪಿತಾಮಹರಲ್ಲಿ ಒಬ್ಬರು, ಇವರು ಯುನೈಟೆಡ್ ಸ್ಟೇಟ್ಸ್ನಲ್ಲಿನ ಪ್ರಜಾಧಿಪತ್ಯವಾದಿತ್ವದಬಗೆಗಿನ ಅವರ ಆದರ್ಶಧ್ಯೇಯದ ಅಭಿವೃದ್ಧಿಯಿಂದ ಪ್ರಖ್ಯಾತರಾದರು. ಜೆಫರ್ಸನ್ ಅಮೆರಿಕಾವನ್ನು ಪ್ರಖ್ಯಾತ "ಸ್ವತಂತ್ರ್ಯ ಸಾಮ್ರಾಜ್ಯದ" ಹಿಂದಿನ ಬಲವೆಂದು,[2] ಅದು ಪ್ರಜಾಧಿಪತ್ಯವಾದಿತ್ವವನ್ನು ಅಭಿವೃದ್ಧಿ ಪಡೆಸಬಹುದು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಸಾಮ್ರಾಜ್ಯಶಾಹಿಯನ್ನು ವಿರೋಧಿಸಬಹುದೆಂದು ಊಹಿಸಿದರು.
ಥಾಮಸ್ ಜೆಫರ್ಸನ್ | |
3rd President of the United States | |
ಅಧಿಕಾರದ ಅವಧಿ March 4, 1801 – March 4, 1809 | |
ಉಪ ರಾಷ್ಟ್ರಪತಿ | Aaron Burr (1801–1805), George Clinton (1805–1809) |
---|---|
ಪೂರ್ವಾಧಿಕಾರಿ | John Adams |
ಉತ್ತರಾಧಿಕಾರಿ | James Madison |
2nd Vice President of the United States | |
ಅಧಿಕಾರದ ಅವಧಿ March 4, 1797 – March 4, 1801 | |
ಪೂರ್ವಾಧಿಕಾರಿ | John Adams |
ಉತ್ತರಾಧಿಕಾರಿ | Aaron Burr |
1st United States Secretary of State | |
ಅಧಿಕಾರದ ಅವಧಿ March 22, 1790 – December 31, 1793 | |
ಪೂರ್ವಾಧಿಕಾರಿ | New Office John Jay as United States Secretary of Foreign Affairs then as Acting-Secretary of State |
ಉತ್ತರಾಧಿಕಾರಿ | Edmund Randolph |
ಅಧಿಕಾರದ ಅವಧಿ 1785 – 1789 | |
ಪೂರ್ವಾಧಿಕಾರಿ | Benjamin Franklin |
ಉತ್ತರಾಧಿಕಾರಿ | William Short |
ಜನನ | April 13 [O.S. April 2] 1743 Shadwell, Virginia |
ಮರಣ | July 4, 1826 83) Charlottesville, Virginia | (aged
ರಾಜಕೀಯ ಪಕ್ಷ | Democratic-Republican |
ಜೀವನಸಂಗಾತಿ | Martha Wayles Skelton Jefferson |
ಧರ್ಮ | see below |
ಹಸ್ತಾಕ್ಷರ |
ಅವರ ಅಧ್ಯಕ್ಷತೆಯ ಸಮಯದಲ್ಲಿ ಒಳಗೊಂಡ ಪ್ರಮುಖ ವಿದ್ಯಮಾನಗಳೆಂದರೆ, ಲೊಯಿಸಿಯಾನವನ್ನು ಕೊಳ್ಳುವಿಕೆ (೧೮೦೩) ಮತ್ತು ಲೆವಿಸ್ ಮತ್ತು ಕ್ಲಾರ್ಕ್ನ ದಂಡಯಾತ್ರೆ (೧೮೦೪–೧೮೦೬), ಹಾಗು ಬ್ರಿಟನ್ ಮತ್ತು ಪ್ರಾನ್ಸ್ ಎರಡರೊಂದಿಗೆ ಮಾನಸಿಕ ಉದ್ವೇಗಗಳನ್ನು ಹೆಚ್ಚಿಸುವುದು, ಇದು ಅವರ ಅಧಿಕಾರದ ಅವಧಿಯ ನಂತರ 1812ರಲ್ಲಿ ಬ್ರಿಟನ್ಜೊತೆಗಿನ ಯುದ್ಧಕ್ಕೆ ಕಾರಣವಾಯಿತು.
ರಾಜಕೀಯ ತತ್ವಜ್ಞಾನಿಯಾಗಿ, ಜೆಫರ್ಸನ್ ಉನ್ನತ ಜ್ಞಾನ ಹೊಂದಿದವರಾಗಿದ್ದರು ಮತ್ತು ಬ್ರಿಟನ್ ಮತ್ತು ಫ್ರಾನ್ಸ್ನ ಅನೇಕ ಧೀಮಂತ ನಾಯಕರ ಪರಿಚಯ ಹೊಂದಿದ್ದರು. ಅವರು ಪ್ರಜಾಧಿಪತ್ಯವಾದಿಯ ಸಂಪನ್ನತೆಗಳ ಮಾದರಿಯಾಗಿ ಸ್ವತಂತ್ರ ಒಕ್ಕಲಿಗ ರೈತನನ್ನು ಆದರ್ಶಧ್ಯೇಯವನ್ನಗಿಸಿದರು, ನಗರಗಳು, ಆರ್ಥಿಕ ಸಂಪನ್ಮೂಲಕ್ಕೆ ಸಂಬಂದಪಟ್ಟವರು, ಮತ್ತು ಪಕ್ಷಪಾತ ರಾಜ್ಯಗಳ ಹಕ್ಕುಗಳನ್ನು ಸಂಶಯಿಸುತ್ತಿದ್ದರು ಮತ್ತು ಪೆಡರಲ್ (ಸಂಯುಕ್ತವಾಗಿದ್ದರೂ ಒಳ ಆಡಳಿತದಲ್ಲಿ ಸ್ವತಂತ್ರವಾದ) ಸರಕಾರವನ್ನು ನಿಷ್ಕೃಷ್ಟವಾಗಿ ಮಿತಿಗೊಳಿಸಿದರು. ಜೆಫರ್ಸನ್ ಕ್ರೈಸ್ತ ದೇವಾಲಯ ಮತ್ತು ರಾಜ್ಯದ ವಿಭಜನೆಯನ್ನು ಬೆಂಬಲಿಸಿದರು[3] ಮತ್ತು ವರ್ಜೀನಿಯಾ ಸ್ಟಾಟುಟ್ ಪರ್ ರಿಲೀಜಿಯಸ್ ಪ್ರೀಡಮ್ನ (೧೭೭೯, ೧೭೮೬) ಲೇಖಕ. ಜೆಫರ್ಸನಿಯನ್ ಡೆಮೊಕ್ರಸಿನ ಎಪೋನಿಮ್ (ಒಂದು ಸ್ಥಳ ಅಥವಾ ಜನಕ್ಕೆ ಒಬ್ಬ ವ್ಯಕ್ತಿಯ ಹೆಸರಿನಿಂದ ಬಂದ ಹೆಸರು) ಆಗಿದ್ದರು ಮತ್ತು ಡೆಮೊಕ್ರಟಿಕ್-ರಿಪಬ್ಲಿಕನ್ ಪಕ್ಷದ ಸಹಸಂಸ್ಥಾಪಕರು ಮತ್ತು ನಾಯಕರಾಗಿದ್ದರು, ಇದು ಅಮೆರಿಕಾದ ರಾಜನೀತಿಗಳಮೇಲೆ ೨೫ ವರ್ಷಗಳಷ್ಟು ಕಾಲ ತನ್ನ ಪ್ರಭಾವನ್ನು ಭೀರಿತ್ತು. ಜೆಫರ್ಸನ್ರವರು ಯುದ್ಧಸಮಯದ ವರ್ಜೀನಿಯಾದ ರಾಜ್ಯಪಾಲರು (೧೭೭೯–೧೭೮೧), ಯುನೈಟೆಡ್ ಸ್ಟೇಟ್ಸ್ನ ಮೊದಲ ರಾಜ್ಯದ ಕಾರ್ಯದರ್ಶಿಯಾಗಿ (೧೭೮೯–೧೭೯೩), ಮತ್ತು ಯುನೈಟೆಡ್ ಸ್ಟೇಟ್ಸ್ನ ಎರಡನೆಯ ಉಪಾಧ್ಯಕ್ಷರಾಗಿ (೧೭೯೭–೧೮೦೧) ಸೇವೆಸಲ್ಲಿಸಿದ್ದಾರೆ.
ಒಬ್ಬ ಬಹು ಶಾಸ್ತ್ರಜ್ಞಾನಿಯಾಗಿ, ಜೆಫರ್ಸನ್ ಇತರ ಎಲ್ಲಾ ವಿಷಯಗಳ ನಡುವೆ ಒಬ್ಬ ತೋಟಗಾರಿಕೆಯ ತಜ್ಞ, ರಾಜಕೀಯ ನಾಯಕ, ವಾಸ್ತುಶಿಲ್ಪಿ, ಪ್ರಾಚೀನ ವಸ್ತುಶಾಸ್ತ್ರಜ್ಞ, ಪಾಲೆಂಟೊಲೊಜಿಸ್ಟ್ (ಪ್ರಾಣಿ ಅಥವಾ ಸಸ್ಯಗಳ ಪಳಯುಳಿಕೆಗಳನ್ನು ಕುರಿತು ಅಧ್ಯಯನ ಮಾಡಿದ), ಸಂಗೀತಗಾರ, ಕಾಲ್ಪನಿಕ, ಮತ್ತು ವರ್ಜೀನಿಯಾ ವಿಸ್ವವಿದ್ಯಾಲಯದ ಸಂಸ್ಥಾಪಕರಾಗಿ ಡಿಸ್ಟಿಂಕ್ಷನ್ (ಶೇ. ೭೦ ಕ್ಕಿಂತ ಮಿಗಿಲಾಗಿ) ಸಾಧಿಸಿದ್ದರು. ೧೯೬೨ರಲ್ಲಿ ಅಧ್ಯಕ್ಷರಾದ ಜಾನ್ ಎಫ್. ಕೆನಡಿಯವರು ೪೯ ನೋಬೆಲ್ ಬಹುಮಾನ ವಿಜೇತರನ್ನು ವೈಟ್ ಹೌಸ್ಗೆ ಆಹ್ವಾನಿಸಿದಾಗ, "ಥಾಮಸ್ ಜೆಫರ್ಸನ್ರವರು ಒಂಟಿಯಾಗಿ ಭೋಜನ ಸೇವಿಸುವ ಸಾಧ್ಯತೆಯನ್ನು ವಿನಾಯಿತಿಸಿದರೆ,– ವೈಟ್ ಹೌಸ್ನಲ್ಲಿನ ಪ್ರತಿಭೆ ಮತ್ತು ಮಾನವ ಜ್ಞಾನದ ಅತ್ಯಂತ ಅಸಾಧಾರಣ ಸಂಗ್ರಹವು ಇದೇ ಆಗಿದೆಯೆಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದರು.[4] ಇಂದಿನವರೆಗೂ, ಕಾಂಗ್ರೇಸ್ಸಿನ ಒಂದೇ ಒಂದು ಬಿಲ್ಲನ್ನು ನಿಷೇಧಿಸದೆ ಎರಡು ಪೂರ್ಣ ಅವಧಿಗಳಲ್ಲಿ ಸೇವೆಸಲ್ಲಿಸಿದ ಏಕೈಕ ವ್ಯಕ್ತಿ ಜೆಫರ್ಸನ್. ಜೆಫರ್ಸನ್ರವರು ಅತ್ಯಂತ ಶ್ರೇಷ್ಠ U.S. ಅಧ್ಯಕ್ಷರಲ್ಲಿ ಒಬ್ಬರೆಂದು ಪಂಡಿತರಿಂದ ಏಕರೂಪವಾಗಿ ಉತ್ತಮ ಶ್ರೇಣಿಯನ್ನು ಪಡೆದರು.
ಥಾಮಸ್ ಜೆಫರ್ಸನ್ ಏಪ್ರಿಲ್ ೧೩, ೧೭೪೩[1] ರಂದು ವರ್ಜೀನಿಯಾದಲ್ಲಿನ ಕೆಲವು ಅತ್ಯಂತ ಪ್ರಮುಖ ವ್ಯಕ್ತಿಗಳ ಹತ್ತಿರದ ಸಂಬಂದಕರ ಕುಟುಂಬದಲ್ಲಿ, ಹತ್ತು ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದರು. ಅವರಲ್ಲಿ ಇಬ್ಬರು ಬಾಲ್ಯದಲ್ಲಿಯೇ ಸಾವನ್ನಪ್ಪಿದರು.[5] ಇವರ ತಾಯಿ ಜಾನೆ ರಾಂಡೊಲ್ಫ್ರವರು, ಹಡುಗುಗಳ ನೌಕಾಧಿಪತಿ ಮತ್ತು ಕೆಲವುಸಲ ಗಿಡನೆಡುವವರಾದ ಇಷಮ್ ರಾಂಡೊಲ್ಫ್ರ ಮಗಳು, ಪೆಯ್ಟೊನ್ ರಾಂಡೊಲ್ಫ್ರ ಮೊದಲ ಸೋಧರಿ ಸಂಬಂದಿ, ಮತ್ತು ವೆಲ್ಧಿ ಇಂಗ್ಲಿಷ್ ಮತ್ತು ಸ್ಕೊಟಿಷ್ ಜೆಂಟ್ರಿರ ಮಮ್ಮೊಗಳಾಗಿದ್ದರು. ಜೆಫರ್ಸನ್'ರ ತಂದೆ ಪೀಟರ್ ಜೆಫರ್ಸನ್, ಗಿಡನೆಡುವವರು ಮತ್ತು ಅಲ್ಬೆಮಾರ್ಲೆ ದೇಶದಲ್ಲಿ ಸಮೀಕಹಕರಾಗಿದ್ದರು (ಷಡ್ವೆಲ್, ನಂತರ ಎಡ್ಜ್ ಹಿಲ್ಲ್, ವರ್ಜೀನಿಯಾ.) ಅವರು ವೆಲ್ಷ್ನ ಸಂಬವನೀಯ ಸಂತಾನವಾಗಿದ್ದರು, ಅದಾಗ್ಯೂ ಇದು ಅಸ್ಪಷ್ಟವಾಗಿಯೇ ಉಳಿಯಿತು.[6] ಪೀಟರ್ ಜೆಫರ್ಸನ್ರ ಹಳೆಯ ಮಿತ್ರ ಸೈನ್ಯಾಧಿಕಾರಿ ಹುದ್ದೆಯಲ್ಲಿದ್ದ ವಿಲಿಯಮ್ ರಾಂಡೊಲ್ಫ್, ೧೭೪೫ರಲ್ಲಿ ಸಾವನ್ನಪ್ಪಿದಾಗ, ಪೀಟರ್ರವರು ಮೃತ್ಯುಪತ್ರ ನಿರ್ವಾಹಕತ್ವವನ್ನು ಸ್ವಾಧೀನಪಡೆಸಿಕೊಂಡರು ಮತ್ತು ಟುಕಾಹೊನಲ್ಲಿರುವ ವಿಲಿಯಮ್ ರಾಂಡೊಲ್ಫ್’ರ ಸ್ಥಿರಾಸ್ತಿಯ ಹಾಗು ಅವರ ಮಗ ಹಸುಗೂಸಾದ ಥಾಮಸ್ ಮನ್ನ್ ರಾಂಡೊಲ್ಫ್, ಜೂನಿಯರ್ನ ರಕ್ಷಣೆಯನ್ನು ವೈಯುಕ್ತಿಕವಾಗಿ ಕೈಗೆತ್ತಿಕೊಂಡರು, ಅಲ್ಬೆಮರ್ಲೆನಲ್ಲಿರುವ ಅವರ ಮನೆಗೆ ಹಿಂತಿರುಗುವ ಮೊದಲು ಅವರು ಅಲ್ಲಿ ಮುಂದಿನ ಏಳು ವರ್ಷಗಳು ಇರಬೇಕಾಯಿತು. ನಂತರ ಪೀಟರ್ ಜೆಫರ್ಸನ್ರವರನ್ನು ಆ ಸಮಯದಲ್ಲಿ ಮುಖ್ಯ ಸ್ಥಾನವಾದ ದೇಶದ ಮಿಲಿಟರಿಯಲ್ಲಿನ ಕೊಲೊನೆಲ್ಸಿಯಾಗಿ ನೇಮಕ ಮಾಡಲಾಯಿತು.[7]
೧೭೫೨ರಲ್ಲಿ, ಜೆಫರ್ಸನ್, ಸ್ಕೋಟಿಷ್ ಮಂತ್ರಿಗಳಾದ ವಿಲಿಯಮ್ ಡವ್ಗ್ಲಾಸ್ ನಡೆಸುತ್ತಿದ್ದ, ಸ್ಥಳೀಯ ಶಾಲೆಗೆ ಹೋಗಲು ಪ್ರಾರಂಭಿಸಿದರು. ಅವರ ಒಂಬತ್ತನೆಯ ವಯಸ್ಸಿನಲ್ಲಿ, ಜೆಫರ್ಸನ್ ಲಾಟಿನ್, ಗ್ರೀಕ್, ಮತ್ತು ಪ್ರೆಂಚ್ ಭಾಷೆಗಳ ಅಧ್ಯಯನವನ್ನು ಪ್ರಾರಂಭಿಸಿದರು. ೧೭೫೭ರಲ್ಲಿ, ಅವರು ೧೪ ವರ್ಷ ವಯಸ್ಸಿನವರಿದ್ದಾಗ, ಅವರ ತಂದೆ ಮರಣಹೊಂದಿದರು. ಜೆಫರ್ಸನ್ರವರು ಸುಮಾರು ೫,೦೦೦ ಎಕೆರೆಗಳಷ್ಟು (೨೦ km²) ಭೂಮಿಯನ್ನು ಮತ್ತು ಡಜನುಗಟ್ಲೆ ಗುಲಾಮರನ್ನು ಉತ್ತರಾಧಿಕಾರದಿಂದ ಪಡೆದರು. ಅಲ್ಲಿ ಅವರು ತಮ್ಮ ಮನೆಯನ್ನು ನಿರ್ಮಿಸಿದರು, ಕೊನೆಗೆ ಇದನ್ನು ಮೊಂಟಿಸೆಲ್ಲೊ ಎಂದು ಗುರುತಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
ಅವರ ತಂದೆಯ ಮರಣದ ನಂತರ, ಅವರು ಜೇಮ್ಸ್ ಮವ್ರಿ ಮಂತ್ರಿಗಳು ವಿದ್ಯಾವಂತರಾದ ಶಾಲೆಯಲ್ಲಿ ೧೭೫೮ರಿಂದ ೧೭೬೦ರ ವರೆಗೆ ಬೋಧನೆಯನ್ನು ಪಡೆದರು. ಶಾಲೆಯು ಷಡ್ವೆಲ್ನಿಂದ ಹನ್ನೆರಡು ಮೈಲುಗಳು (೧೯ km) ದೂರದ, ಗೊರ್ಡನ್ಸ್ವಿಲ್ಲೆ, ವರ್ಜೀನಿಯಾದ ಹತ್ತಿರದ, ಪ್ರೆಡೆರಿಕ್ಸ್ವಿಲ್ಲೆ ಪರಿಷ್ನಲ್ಲಿತ್ತು, ಮತ್ತು ಜೆಫರ್ಸನ್ ಮೌರಿ'ರ ಕಿಟುಂಬದೊಂದಿಗೆ ಭೋಜನದ ವ್ಯವಸ್ಥೆಯನ್ನೊಂದಿದ್ದರು. ಅಲ್ಲಿ ಅವರು ಶಾಸ್ತ್ರೀಯವಾದ ವಿಧ್ಯಭ್ಯಾಸವನ್ನು ಪಡೆದುಕೊಂಡರು ಮತ್ತು ಇತಿಹಾಸ ಮತ್ತು ವಿಜ್ಞಾನದ ಅಧ್ಯಯನವನ್ನು ಮಾಡಿದರು.[ಸೂಕ್ತ ಉಲ್ಲೇಖನ ಬೇಕು]
೧೭೬೦ರಲ್ಲಿ, ಅವರ ೧೬ನೆಯ ವಯಸ್ಸಿನಲ್ಲಿ, ಜೆಫರ್ಸನ್ ವಿಲಿಯಮ್ಸ್ಬರ್ಗ್ನಲ್ಲಿನ ವಿಲಿಯಮ್ & ಮೇರಿ ಕಾಲೇಜನ್ನು ಪ್ರವೇಶಿಸಿದರು. ಅವರು ಫಿಲೋಸಫಿ ಶಾಲೆಯಲ್ಲಿ ದಾಖಲಿಸಿಕೊಂಡು, ಪ್ರೊಫೆಸರ್ ವಿಲಿಯಮ್ ಸ್ಮಾಲ್ರ ಅಧೀನದಲ್ಲಿ ಗಣಿತಶಾಸ್ತ್ರ, ಆಧ್ಯಾತ್ಮವಿದ್ಯೆ, ಮತ್ತು ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದರು, ಅವರು ಉತ್ಸಾಹಿ ಜೆಫರ್ಸನ್ರವರಿಗೆ ಜಾನ್ ಲೊಕೆ, ಪ್ರಾನ್ಸಿಸ್ ಬ್ಯಾಕನ್, ಮತ್ತು ಐಸಾಕ್ ನ್ಯೂಟನ್ರನ್ನು ಒಳಗೊಂಡು ಬ್ರಿಟಿಷ್ ಅನುಭವಿಕ ಬರವಣಿಗೆಗಳನ್ನು ಪರಿಚಯಿಸಿದರು (ಜೆಫರ್ಸನ್ ಅವರನ್ನು "ಪ್ರಪಂಚದಲ್ಲೇ ಇಲ್ಲಿಯವರಿಗು ಸೃಷ್ಟಿಯಾದ ಅತ್ಯಂತ ಮಹತ್ತರವಾದ ಮೂರು ಮನುಷ್ಯರೆಂದು ಕರೆದರು").[8] ಅವರು ಅವರ ಪ್ರೆಂಚು ಭಾಷೆಯಲ್ಲು ಸಹ ಪರಿಪೂರ್ಣತೆಯನ್ನು ಪಡೆದರು, ಅವರು ಹೋದಲ್ಲೆಲ್ಲ ಅವರ ಗ್ರೀಕ್ ವ್ಯಾಕರಣ ಪುಸ್ತಕವನ್ನು ಜೊತೆಯಲ್ಲಿ ತಗೆದುಕೊಂಡು ಹೋಗುತ್ತಿದ್ದರು, ಪಿಟೀಲಿನ ಅಭ್ಯಾಸ ಮಾಡಿದರು, ಮತ್ತು ಟಸಿಟಸ್ ಮತ್ತು ಹೊಮೆರ್ನ್ನು ಓದುತ್ತಿದ್ದರು. ಒಬ್ಬ ತೀಕ್ಷ್ಣ ಮತ್ತು ಪರಿಶ್ರಮಶೀಲ ವಿದ್ಯಾರ್ಥಿಯಾಗಿದ್ದು, ಕುಟುಂಬದ ಸಂಪ್ರದಾಯಕ್ಕೆ ತಕ್ಕಂತೆ ಜೆಫರ್ಸನ್ ಎಲ್ಲಾ ಸ್ನೇಹಿತರಲ್ಲೂ ಅತಿ ಅಶಾಗ್ರಸ್ತ ಕುತೂಹಲವನ್ನು ಪ್ರದರ್ಶಿಸುತ್ತಿದ್ದರು, ದಿನಕ್ಕೆ ಹದಿನೈದು ಗಂಟೆಗಳಂತೆ ಅಡಿಗಡಿಗೆ ಓದುತ್ತಿದ್ದರು. ಇವರ ಆತ್ಮೀಯ ಕಾಲೇಜಿನ ಗೆಳೆಯ, ರೋಸ್ವೆಲ್ನ ಜಾನ್ ಪಜೆಯವರು, ಜೆಫರ್ಸನ್ "ತನ್ನ ವಿದ್ಯಾಭ್ಯಾಸದ ಕಡೆಗೆ ಓಡಲು ತನ್ನನ್ನು ತನ್ನ ಆಪ್ತ ಗೆಳೆಯರಿಂದ ಬೇರೆಮಾಡಿಕೊಳ್ಳುತ್ತಾನೆ" ಎಂದು ವರದಿಮಾಡಿದರು.[ಸೂಕ್ತ ಉಲ್ಲೇಖನ ಬೇಕು]
ಕಾಲೇಜಿನಲ್ಲಿರುವಾಗ, ಜೆಫರ್ಸನ್ F.H.C. ಸಮುದಾಯ ಎಂದು ಕರೆಯಲಾಗುವ ಗುಪ್ತಚರ ಸಂಸ್ಥೆಯ ಸದಸ್ಯರಾದರು. ಅವರು ವಸತಿ ಮತ್ತು ಭೋಜನದ ವ್ಯವಸ್ತೆಯನ್ನು ಕಾಲೇಜಿನ ಕಟ್ಟಡದಲ್ಲಿ ಪಡೆಯುತ್ತಿದ್ದರು, ಇಂದು ಆ ಕಟ್ಟಡವನ್ನು ಸರ್ ಕ್ರಿಸ್ಟೋಫೆರ್ ವ್ರೆನ್ ಕಟ್ಟಡವೆಂದು ಗುರುತಿಸಲಾಗುತ್ತಿದೆ, ಗ್ರೇಟ್ ಹಾಲ್ನಲ್ಲಿ ಸಮುದಾಯದ ಭೋಜನಕ್ಕೆ ಹಾಜರಾಗುತ್ತಿದ್ದರು, ಮತ್ತು ಪ್ರಾತಃಕಾಲದ ಮತ್ತು ಸಾಯಂಕಾಲದ ಪ್ರಾರ್ಥನೆಗಳಿಗೆ ವ್ರೆನ್ ಚಾಪೆಲ್ನಲ್ಲಿ ಹಾಜರಾಗುತ್ತಿದ್ದರು. ಜೆಫರ್ಸನ್ರವರು ರಾಜ್ಯಪಾಲರಾದ ಪ್ರಾನ್ಸಿಸ್ ಪಾಕ್ವಿಯರ್ರ ರಾಜವೈಭವದ ಅಪರಿಮಿತ ಔತಣಗಳಿಗೆ ಆಗಾಗ್ಗೆ ಹಾಜರಾಗಿದ್ದರು, ಅಲ್ಲಿ ಅವರು ಗಿಟಾರನ್ನು ನುಡಿಸುತ್ತಿದ್ದರು ಮತ್ತು ಶರಾಬಿಗೆ ಮೊದಲ ಪ್ರೀತಿಯನ್ನು ವರ್ಧಿಸುತ್ತಿದ್ದರು. ೧೭೬೨ರಲ್ಲಿ ಅತ್ಯುನ್ನತ ನೈಪುಣ್ಯತೆಯಿಂದ ಪದವೀಧರರಾದ ನಂತರ, ಅವರು ಜಾರ್ಜ್ ವಿತ್ ಕಾನೂನು ಪ್ರೊಫೆಸರ್ ವಿಲಿಯಮ್ & ಮೇರಿರ ಜೊತೆ ಕಾನೂನು ಶಾಸ್ತ್ರವನ್ನು ಓದಿದರು ಮತ್ತು ೧೭೬೭ರಲ್ಲಿ ವರ್ಜೀನಿಯಾದ ವಕೀಲರ ಸಂಘಕ್ಕೆ ಸೇರಿಕೊಂಡರು.[ಸೂಕ್ತ ಉಲ್ಲೇಖನ ಬೇಕು]
ಅಕ್ಟೋಬರ್ ೧, ೧೭೬೫ರಂದು, ಜೆಫರ್ಸನ್'ರ ಹಿರಿಯ ಸಹೋದರಿ ಜನೆರವರು ಅವರ ೨೫ನೆಯ ವಯಸ್ಸಿನಲ್ಲಿ ಸಾವನ್ನಪ್ಪಿದರು.[9] ಅವರ ಸಹೋದರಿಯರಾದ ಮೇರಿ ಮತ್ತು ಮಾರ್ಥಾರವರ ಗೈರುಹಾಜರಿಯಿಂದ ಈಗಾಗಲೇ ವಿಷಾದಕರವಾಗಿದ್ದ ಜೆಫರ್ಸನ್ ಅಗಾಧವಾದ ದುಃಖದಲ್ಲಿ ಬಿದ್ದರು, ಅವರ ಸಹೋದರಿ ಮೇರಿ ಅನೇಜ ವರ್ಷಗಳ ಹಿಂದೆ ಥೋಮಸ್ ಬೊಲ್ಲಿಂಗ್ರವರನ್ನು ಮದುವೆಯಾದರು ಮತ್ತು ಮಾರ್ಥಾರವರು ಮುಂಚೆ ಜುಲೈನಲ್ಲಿ ಡಬ್ನಿ ಕರ್ರ್ರನ್ನು ಮದುವೆಯಾದರು.[9] ಕಿರಿಯ ರಕ್ತಸಂಬಂಧಿಗಳಾದ ಎಲಿಜಬೆತ್, ಲುಸಿ, ಮತ್ತು ಇಬ್ಬರು ಅಂಬೆಗಾಲು ಹಾಕಿಕೊಂದು ನಡೆಯುವ ಮಕ್ಕಳನ್ನು ಜೆಫರ್ಸನ್ರ ಜೊತೆಗಾರರಾಗಿ ಬಿಟ್ಟು, ಅವರಿಬ್ಬರು ತಮ್ಮ ತಮ್ಮ ಗಂಡಂದಿರ ಮನೆಗೆ ಹೋದರು. ಜೆಫರ್ಸನ್ರವರಿಗೆ ಎಲಿಜಬೆತ್ ಅಥವಾ ಲುಸಿಯ ಸಾನ್ನಿದ್ಯವು ಹಿತಕರವಾಗಿರಲಿಲ್ಲ, ಕಾರಣ ತಮ್ಮ ಹಿರಿಯ ರಕ್ತಸಂಬಂಧಿಗಳು ವದಗಿಸುತ್ತಿದ್ದ ರೀತಿಯಲ್ಲಿ ಇವರು ಧೀಮಂತ ಉತ್ತೇಜನ ಕೊಡುತ್ತಿರಲಿಲ್ಲ.[9]
ಜೆಫರ್ಸನ್ ವರ್ಜೀನಿಯಾ ಸಮುದಾಯದಲ್ಲಿ ವಕೀಲರಾಗಿ ಅನೇಕ ಕೇಸುಗಳನ್ನು ನಿರ್ವಹಿಸಲು ಹೋಗಬೇಕಾಗುತ್ತಿತ್ತು, ನೂರಾರು ಕೇಸುಗಳಿಗೆ ವಕೀಲರಾಗಿ ವರ್ತಿಸುತ್ತಿರುವಾಗಲೆ, ೧೭೬೮ ಮತ್ತು ೧೭೭೩ರ ನಡುವೆ ಸಾಮಾನ್ಯ ನ್ಯಾಯಾಲಯದಲ್ಲಿ ಪ್ರತಿವರ್ಷವು ನೂರಕ್ಕಿಂತಲು ಹೆಚ್ಚು ಕೇಸುಗಳನ್ನು ಒಂಟಿಯಾಗಿ ನಿರ್ವಹಿಸುತ್ತಿದ್ದರು.[10] ಜೆಫರ್ಸನ್'ರ ಗಿರಾಕಿಗಳ ಪಟ್ಟಿಯು ಅವರ ತಾಯಿಯ ಕುಟುಂಬ, ರಾಂಡೊಲ್ಫ್ಸ್ನ್ನು ಒಳಗೊಂಡು, ವರ್ಜಿನಿಯಾದ ಉತ್ತಮ ಕುಟುಂಬಗಳ ಸದಸ್ಯರುಗಳನ್ನು ಒಳಗೊಂಡಿದೆ.[10]
೧೭೬೮ರಲ್ಲಿ ಥಾಮಸ್ ಜೆಫರ್ಸನ್ ಮೊಂಟಿಚೆಲ್ಲೋ ಆನ್ನುವ, ಆಧುನಿಕ ಶಾಸ್ತ್ರೀಯವಾದ ಮಹಲಿನ ನಿರ್ಮಾಣವನ್ನು ಪ್ರಾರಂಭಿಸಿದರು. ಅವರ ಬಾಲ್ಯದಿಂದಲೆ, ಜೆಫರ್ಸನ್ ಷಡ್ವೆಲ್ಲ್ ನಲ್ಲಿಯೇ ಒಂದು ಸುಂದರವಾದ ಪರ್ವತ ಶಿಖರದ ಮನೆಯನ್ನು ಕಟ್ಟುವ ಕನಸನ್ನೊಂದಿದ್ದರು.[11][12] ಜೆಫರ್ಸನ್ ಮೊಂಟಿಚೆಲ್ಲೋದಲ್ಲಿ ಆಧುನಿಕ ಶಾಸ್ತ್ರೀಯ ವಾತಾವರಣವನ್ನು ರಚಿಸುವ ಸಲುವಾಗಿ, ಅವರ ವಾಸ್ತುಕಲೆ ಅಧ್ಯಯನ ಅಂಡ್ರೆಯ ಪಲ್ಲಡಿಯೊ ಮತ್ತು ಅದರ ವ್ಯವಸ್ಥೆಯ ಆಧಾರದ ಮೇಲೆ ಅಪರಿಮಿತವಾಗಿ ಖರ್ಚುಮಾಡಿ ಸಾಲಕ್ಕೊಳಗಾದರು. [13]
ಮೊಂಟಿಚೆಲ್ಲೋ ಸಹ ಥಾಮಸ್ ಜೆಫರ್ಸನ್'ರ ಗುಲಾಮರ ತೋಟವಾಗಿತ್ತು. ಎಪ್ಪತ್ತು ವರ್ಷಗಳ ಅವಧಿಯ ಅಂತ್ಯದ ಸಮಯಕ್ಕೆ, ಥಾಮಸ್ ಜೆಫರ್ಸನ್ ಸುಮಾರು ೬೦೦ ಗುಲಾಮರನ್ನು ಹೊಂದಿದ್ದರು. ಮೊಂಟಿಚೆಲ್ಲೋ ತೋಟದಲ್ಲಿನ ಬಹುತೇಕ ಗುಲಾಮರು ಅವರೊಳಗೆಯೇ ಒಬ್ಬರು ಇನ್ನೊಬ್ಬರನ್ನು ಮದುವೆಯಾದರು ಮತ್ತು ಸಂತಾನೋತ್ಪತ್ತಿಗೆ ಕಾರಣರಾದರು. ಜೆಫರ್ಸನ್ ಮುಖ್ಯವಾದ ಹುದ್ದೆಯಲ್ಲಿ ಚಿಮಣಿಗಳು ಅಥವಾ ಗುಪ್ತವಾದಂತಹ ಕಷ್ಟಕರವಾದ ಕೆಲಸ ಮಾಡುತ್ತಿದ್ದ ಕೆಲವು ನಿಷ್ಟಾವಂತ ಗುಲಾಮರಿಗೆ ಮಾತ್ರ ಹಣ ಪಾವತಿಸುತ್ತಿದ್ದರು. ತುಣುಕು ತುಣುಕಾದ ದಾಖಲೆಗಳ ಸೂಚನೆಯ ಪ್ರಕಾರ ಮೊಂಟಿಚೆಲ್ಲೋ ಗುಲಾಮ ವಸತಿಗಳಲ್ಲಿನ ಶ್ರೀಮಂತ ಧಾರ್ಮಿಕ ಜೀವನ, ಕ್ರಿಶ್ಚಿಯನ್ ಮತ್ತು ಆಪ್ರಿಕಾನ್ ಎರಡರ ಸಂಸ್ಕೃತಿಯನ್ನು ಒಟ್ಟಾಗಿ ಒಳಗೊಂಡಿತ್ತು. ಜೆಫರ್ಸನ್ ಗುಲಾಮರಿಗೆ ವ್ಯಾಕರಣದ ವಿದ್ಯಾಭ್ಯಾಸವನ್ನು ಪರಿಚಯಿಸಿದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲದಿದ್ದರು, ಮೊಂಟಿಚೆಲ್ಲೋದಲ್ಲಿನ ಅನೇಕ ಗುಲಾಮ ಪುರುಷರು ಓದಲು ಮತ್ತು ಬರೆಯಲು ಬಲ್ಲವರಾಗಿದ್ದಾರೆ.[14] ಾ
ಕಾನೂನಿನ ಅಭ್ಯಾಸದ ಜೊತೆಗೆ, ಜೆಫರ್ಸನ್ ೧೭೬೯ ಆರಂಭದಲ್ಲಿ ವರ್ಜೀನಿಯಾ ಹೌಸ್ ಆಫ್ ಬರ್ಗೆಸ್ಸೆಸ್ನಲ್ಲಿ ಆಲ್ಬೆಮರ್ಲೆ ಕಾಂಟಿಯಾಗಿ ಪ್ರತಿನಿಧಿಸಿದ್ದರು. ೧೭೭೪ರಲ್ಲಿನ ಬ್ರಿಟಿಷ ಪಾರ್ಲಿಮೆಂಟ್ ಸಭೆಯಿಂದ ನಡೆದ ನಿರ್ಬಂಧಕ ಕೃತ್ಯಗಳ ತರುವಾಯಿ, ಅವರು ಆ ಕೃತ್ಯಗಳ ವಿರುದ್ಧ ದೃಢಸಂಕ್ಲ್ಪದ ನಿರ್ಧಾರಗಳ ಸೆಟ್ಟನ್ನು ಬರೆದರು, ಇದನ್ನು ಎ ಸಮ್ಮರಿ ವ್ಯೂವ್ ಆಫ್ ದಿ ರೈಟ್ಸ್ ಆಫ್ ಬ್ರಿಟಿಷ್ ಅಮೆರಿಕ ವಾಗಿ ವಿಸ್ತರಿಸಲಾಯಿತು,ಇದು ಪ್ರಲಟವಾದ ಅವರ ಮೊದಲ ಪುಸ್ತಕವಾಗಿದೆ. ನಿರ್ಬಂಧಕ ಕೃತ್ಯಗಳ ಮೊದಲಿನ ಖಂಡನೆಯು ಕಾನೂನಿಗೊಳಪಡುವ ಮತ್ತು ಶಾಸನಬದ್ಧ ವಿಚಾರಗಳ ಮೇಲೆ ಕೇಂದ್ರೀಕರಿಸಿತ್ತು, ಆದರೆ ಜೆಫರ್ಸನ್ ವಲಸೆಗಾರರು ತಮ್ಮನ್ನು ತಾವೆ ಆಳುವ ಸ್ವಾಭಾವಿಕ ಹಕ್ಕನ್ನು ಹೊಂದಿದ್ದರೆಂಬ ಮೂಲತತ್ವದ ಅಭಿಪ್ರಾಯವನ್ನು ಒಡ್ಡಿದ್ದಾರೆ.[15] ಜೆಫರ್ಸನ್ ಪಾರ್ಲಿಮೆಂಟ್ ಸಭೆಯು ಗ್ರೇಟ್ ಬ್ರಿಟನ್ಗೆ ಮಾತ್ರ ಶಾಸನ ಸಭೆ, ಮತ್ತು ಅದು ವಲಸೆಗಾರರ ಮೇಲೆ ಯಾವುದೇ ಶಾಸನಾಧಿಕಾರವನ್ನೊಂದಿಲ್ಲವೆಂದು ಸಹ ವಾದಿಸಿದರು.[15] ವರ್ತಮಾನ ಪತ್ರವು ಮೊದಲ ಭೂಖಂಡದ (ಯುರೋಪಿನ) ಕಾಂಗ್ರೆಸ್ಸಿನ ವರ್ಜೀನಿಯಾ ನಿಯೋಗಕ್ಕೆ ಸೂಚನೆಗಳನ್ನು ವದಗಿಸುವ ಉದ್ದೇಶವನ್ನೊಂದಿತ್ತು, ಆದರೆ ಜೆಫರ್ಸನ್'ರ ಯೋಜನೆಗಳು ಆ ಕಾಯಕಕ್ಕೆ ಅತ್ಯಂತ ಮೂಲತತ್ವದ್ದಾಗಿವೆ ಎಂಬುದನ್ನು ದೃಢಪಡಿಸಲಾಗಿದೆ.[15] ಅದಾಗ್ಯೂ, ಕರಪತ್ರಗಳು ಅಮೆರಿಕಾದ ಸ್ವಾತಂತ್ರ್ಯಕ್ಕೆ ಸೈದ್ಧಾಂತಿಕ ಚೌಕಟ್ಟನ್ನು ವದಗಿಸುವಲ್ಲಿ ಸಹಾಯಕವಾಗಿವೆ, ಮತ್ತು ಜೆಫರ್ಸನ್ ಅತ್ಯಂತ ಚಿಂತನಶೀಲ ದೇಶಭಕ್ತ ವಕ್ತಾರರಲ್ಲಿ ಒಬ್ಬರೆಂಬುದು ಅಂಕಿತವಾಯಿತು.[ಸೂಕ್ತ ಉಲ್ಲೇಖನ ಬೇಕು]
ಜೆಫರ್ಸನ್ ಎರಡನೆಯ ಭೂಖಂಡದ (ಯುರೋಪಿನ) ಕಾಂಗ್ರೆಸ್ಸಿನ ನಿಯೋಗಿಯಾಗಿ ಕಾರ್ಯನಿರ್ವಹಿಸಿದರು, ಈ ಸೇವೆಯನ್ನು ಅಮೆರಿಕಾದ ಕ್ರಾಂತಿಕಾರಿ ಯುದ್ದದ ಸ್ಫೋಟದ ನಂತರ ಕೂಡಲೇ ಜೂನ್ ೧೭೭೫ರಲ್ಲಿ ಪ್ರಾರಂಭಿಸಿದರು. ಜೂನ್ ೧೭೭೬ರಲ್ಲಿ ಕಾಂಗ್ರೇಸ್ ಸ್ವಾತಂತ್ರ್ಯದ ನಿರ್ಣಯಗಳನ್ನು ಪರಿಗಣಿಸಲು ಪ್ರಾರಂಭಿಸಿದಾಗ, ನಿರ್ಣಯಗಳ ಜೊತೆಯಲ್ಲಿ ಸೇರಿಸಲು ಘೋಷಣೆಯನ್ನು ತಯಾರಿಸಲು ಐದು-ಜನರ ಸಮಿತಿಯ ಸದಸ್ಯರನ್ನಾಗಿ ಜೆಫರ್ಸನ್ರನ್ನು ನೇಮಕ ಮಾಡಲಾಯಿತು. ಸಮಿತಿಯು ಮೊದಲ ಕರಡುಪತ್ರವನ್ನು ಬರೆಯಲು ಜೆಫರ್ಸನ್ರನ್ನು ಆಯ್ಕೆಮಾಡಿಕೊಂಡಿತ್ತು, ಬಹುಶಃ ಇದು ಬರಹಗಾರರೆಂಬ ಅವರ ಪ್ರಖ್ಯಾತಿಯಿಂದ ಆಗಿರಬಹುದು. ಈ ಕೆಲಸವನ್ನು ದಿನಚರಿಯೆಂದು ಪರಿಗಣಿಸಲಾಯಿತು; ಆ ಸಮಯದಲಿ ಇದನ್ನು ಯಾರು ಪ್ರಮುಖ ಜವಾಬ್ದಾರಿಯೆಂದು ಯೋಚಿಸಿರಲಿಲ್ಲ.[16] ಜೆಫರ್ಸನ್ ಸಮಿತಿಯ ಇತರ ಸದಸ್ಯರುಗಳೊಂದಿಗೆ ಪರ್ಯಾಲೋಚನೆ ಮಾಡುವದರೊಂದಿಗೆ ಕರಡುಪತ್ರವನ್ನು ಪೂರ್ಣಗೊಳಿಸಿದರು, ಜಾರ್ಜ್ ಮಾಸೊನ್ಸ್ರವರ ಹಕ್ಕುಗಳ ವರ್ಜೀನಿಯಾ ಘೋಷಣೆಯ ಕರಡುಪತ್ರವನ್ನು, ಮತ್ತು ಇತರ ಮೂಲಗಳನ್ನಾಧರಿಸಿ ಅವರು ಸ್ವತಃ ವರ್ಜೀನಿಯಾ ಸಂವಿಧಾನದ ಪ್ರಸ್ತಾಪಿತ ಕರಡುಪತ್ರವನ್ನು ರಚಿಸಿದರು.[17]
ಜೆಫರ್ಸನ್ ತಮ್ಮ ಕರಡುಪತ್ರವನ್ನು ಸಮಿತಿಯ ಸದಸ್ಯರಿಗೆ ತೋರಿಸಿದರು, ಇದು ಕೆಲವು ಅಂತಿಮ ತಿದ್ದುಪಡಿಯನ್ನು ಒಳಗೊಂಡಿತ್ತು, ಮತ್ತು ಜೂನ್ ೨೮, ೧೭೭೬ರಂದು ಕಾಂಗ್ರೆಸ್ಸ್ಗೆ ಪ್ರಸ್ತುತ ಪಡಿಸಿದರು. ಜುಲೈ ೨ರಂದು ಸ್ವಾತಂತ್ರ್ಯದ ನಿರ್ಣಯದ ಪರವಾಗಿ ಮತ ನೀಡಿದ ನಂತರ, ಕಾಂಗ್ರೆಸ್ಸ್ ಅದರ ಗಮನವನ್ನು ಘೋಷಣೆಯ ಕಡೆಗೆ ಹರಿಸಿತ್ತು. ಅನೇಕ ದಿನಗಳ ಚರ್ಚೆಯ ನಂತರ, ಕಾಂಗ್ರೆಸ್ಸ್ ಪದಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವನ್ನು ಮಾಡಿದೆ ಮತ್ತು ಮೂಲಪಠ್ಯದ ನಾಲ್ಕನೇ ಭಗವನ್ನು ತೆಗೆದುಹಾಕಲಾಯಿತು, ಅತ್ಯಂತ ಪ್ರಮುಖವಾಗಿ ಗುಲಾಮ ವ್ಯವಹರದ ಕಷ್ಟವಾದ ವಾಕ್ಯವೃಂದವನ್ನು, ವ್ಯತ್ಯಾಸಗಳಿಂದ ಜೆಫರ್ಸನ್ ಅಸಮಾಧಾನಗೊಂಡರು.[18] ಜುಲೈ ೪, ೧೭೭೬ರಂದು, ಸ್ವಾತಂತ್ರ್ಯದ ಘೋಷಣೆಯ ಸಮುಚಿತ ಪದಗಳ ಆಯ್ಕೆಯು ಅನುಮೋದಿತಗೊಂಡಿದೆ. ಕಾಲಾನುಕ್ರಮ ಘೋಷಣೆಯು ಜೆಫರ್ಸನ್'ರ ಪ್ರಮುಖ ಯಶಸ್ಸಿನ ಹೆಗ್ಗಳಿಕೆಯಾಗಿದೆ, ಮತ್ತು ಅವರ ನಿರರ್ಗಳ ಉಪೋದ್ಘಾತವು ಮಾನವ ಹಕ್ಕುಗಳ ಸಹಿಸುಕೊಳ್ಳಬಹುದಾದಂತಹ ಹೇಳಿಕೆಯಾಗಿ ಮಾರ್ಪಟ್ಟಿದೆ.[18]
ಸೆಪ್ಟೆಂಬರ್ ೧೭೭೬ರಲ್ಲಿ, ಜೆಫರ್ಸನ್ ವರ್ಜೀನಿಯಾಗೆ ವಾಪಾಸಾದರು ಮತ್ತು ಅಲ್ಲಿ ಹೊಸಾ ವರ್ಜೀನಿಯಾ ಹೌಸ್ ಆಫ್ ಡೆಲಿಗೇಟ್ಸ್ಗೆ ಆಯ್ಕೆಯಾದರು. ಮನೆಯಲ್ಲಿನ ಅವರ ಅವಧಿಯ ಸಮಯದಲ್ಲಿ, ಜೆಫರ್ಸನ್ ವರ್ಜೀನಿಯಾವನ್ನು ಪ್ರಜಾಪ್ರಭುತ್ವದ ರಾಜ್ಯವಾಗಿ ತನ್ನ ಹೊಸಾ ಗುರುತ್ವವನ್ನು ಪ್ರತಿಬಿಂಬಿಸುವಂತೆ ಮಾಡಲು ವರ್ಜೀನಿಯಾ'ದ ಕಾನೂನು ವ್ಯವಸ್ಥೆಯನ್ನು ಸುದಾರಿಸಲು ಮತ್ತು ಅಪ್ಡೇಟ್ ಮಾಡಲು (ಸದ್ಯದ ವರೆಗು ತರಲು)ತಯಾರಿ ಮಾಡಿದರು. ಅವರು ಮೂರು ವರ್ಷಗಳಲ್ಲಿ ೧೨೬ ವಿಧೇಯಕಗಳ ಕರಡುಪ್ರತಿಗಳನ್ನು ತಯಾರಿಸಿದರು, ಇದು ಜೇಷ್ಠಪುತ್ರನ ಹಕ್ಕನ್ನು ರದ್ದುಪಡಿಸುವುದು, ಮತಶ್ರದ್ಧೆಯುಳ್ಳವರ ಸ್ವಾತಂತ್ರ್ಯವನ್ನು ಪ್ರತಿಪಾಲಿಸುವುದು, ಮತ್ತು ನ್ಯಾಯಾಲಯದ ವ್ಯವಸ್ಥೆಯನ್ನು ಸ್ಪಷ್ಟಗೊಳಿಸುವುದು ಗಳನ್ನು ಒಳಗೊಂಡಿದೆ. ೧೭೭೮ರಲ್ಲಿ, ಜೆಫರ್ಸನ್'ರ "ಪಾಂಡಿತ್ಯದ ಹೆಚ್ಚಿನ ಸಾಮಾನ್ಯ ಚರ್ಚೆಯ ವಿಧೇಯಕವು " ಮೊದಲು ಅಮೆರಿಕ ವಿಶ್ವವಿದ್ಯಾಲಯದಲ್ಲಿನ-ಚುನಾಯಿಸುವ ಹಕ್ಕಿಗೆ ಸಂಬಂಧಿಸಿದ ವ್ಯವಸ್ಥೆಯ ಅಧ್ಯಯನವನ್ನು ಒಳಗೊಂಡು, ಅವರ ಅಲ್ಮ ಮಾಟೆರ್ ನಲ್ಲಿ ಅನೇಕ ಪಾಂಡಿತ್ಯದ ಸುಧಾರಣೆಗಳಿಗೆ ಅನುವುಮಾಡಿಕೊಟ್ಟಿದೆ.[ಸೂಕ್ತ ಉಲ್ಲೇಖನ ಬೇಕು]
ರಾಜ್ಯದ ಶಾಸನಸಭೆಯಲ್ಲಿರುವಾಗ ಜೆಫರ್ಸನ್ ಕೊಲೆ ಮತ್ತು ದೇಶದ್ರೋಹವನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಪರಾಧಗಳಿಗೆ ಮರಣ ದಂಡನೆಯನ್ನು ತೆಗೆದುಹಾಕುವ ವಿಧೇಯಕವನ್ನು ಸೂಚಿಸಿದರು. ಮರಣ ದಂಡದ ಕಾನೂನನ್ನು ತಿದ್ದುಪಡಿಮಾದುವ ಅವರ ಪ್ರಯತ್ನವು ಕೇವಲ ಒಂದು ಮತದಿಂದ ವ್ಯರ್ತವಾಯಿತು,[19] ಮತ್ತು ಅತ್ಯಾಚಾರದಂತಹ ಅಪರಾಧಗಳಿಗೆ ಮರಣ ದಂಡನೆ ವಿಧಿಸುವುದು ವರ್ಜೀನಿಯಾದಲ್ಲಿ ೧೯೬೦ರ ವರೆಗು ಉಳಿಯಿತು.[20] ಅವರು ಗುಲಾಮರನ್ನು ಆಮದು ಮಾಡಿಕೊಳ್ಳುವಿಕೆಯನ್ನುನಿಷೇಧಿಸುವ ಕಾಯಿದೆಯನ್ನು ಹೊರಡಿಸುವಲ್ಲಿ ಯಶಸ್ಸನ್ನು ಗಳಿಸಿದರು ಆದರೆ ಗುಲಾಮಗಿರಿಯನ್ನೇ ನಿಷೇಧಿಸುವಲ್ಲಿ ವಿಫಲರಾದರು.[ಸೂಕ್ತ ಉಲ್ಲೇಖನ ಬೇಕು]
ಜೆಫರ್ಸನ್ ೧೭೭೯ರಿಂದ ೧೭೮೧ರ ವರೆಗು ವರ್ಜೀನಿಯಾದ ರಾಜ್ಯಪಾಲರಾಗಿ ಸೇವೆಸಲ್ಲಿಸಿದರು. ರಾಜ್ಯಪಾಲರಾಗಿ, ಅವರು ೧೭೮೦ರಲ್ಲಿ ರಾಜ್ಯದ ರಾಜಧಾನಿಯನ್ನು ವಿಲಿಯಮ್ಸ್ಬರ್ಗ್ನಿಂದ ರಿಚ್ಮಂಡ್ನ ಮಧ್ಯಭಾಗಕ್ಕೆ ವರ್ಗಾಯಿಸುವ ಉಸ್ತುವಾರಿಯನ್ನು ವಹಿಸಿಕೊಂದಿದ್ದರು. ಅವರು ವಿಲಿಯಮ್ ಮತ್ತು ಮೇರಿ ಕಾಲೇಜುಗಳಲ್ಲಿ ಶೈಕ್ಷಣಿಕ ಸುಧಾರಣೆಗೆ ಪ್ರೋತ್ಸಾಹಿಸುವುದನ್ನು ಮುಂದುವರೆಸಿದರು, ಇದು ರಾಷ್ಟ್ರದ ಪ್ರಥಮ ವಿದ್ಯಾರ್ಥಿ ಗೌರವ ಬಿರುದುಗಳ ರಕ್ಷಣೆಯನ್ನು ಒಳಗೊಂಡಿದೆ. ೧೭೭೯ರಲ್ಲಿ, ಜೆಫರ್ಸನ್'ರ ಅನುಜ್ಞೆಯ ಮೇರೆಗೆ, ಜಾರ್ಜ್ ವಿತ್ರನ್ನು ಅಮೆರಿಕಾದ ವಿಶ್ವವಿದ್ಯಾಲಯದಲ್ಲಿನ ಮೊದಲ ಕಾನೂನಿನ ಅಧ್ಯಾಪಕರನ್ನಾಗಿ ವಿಲಿಯಮ್ ಮತ್ತು ಮೇರಿಯಿಂದ ನೇಮಕಮಾಡಿಕೊಳ್ಳಲಾಯಿತು. ಅವರು ಮಾಡಬೇಕೆಂದುಕೊಂಡಿದ್ದ ವ್ಯತ್ಯಾಸಗಳ ವೇಗದಿಂದ ಅಸಂತ್ರೂಪ್ತಿಗೊಂಡರು, ಅವರು ನಂತರ ವರ್ಜೀನಿಯಾ ವಿಶ್ವವಿದ್ಯಾನಿಲಯದ ಸಂಸ್ಥಾಪಕರಾದರು, ಉನ್ನತ ವಿಧ್ಯಾಭ್ಯಾಸವನ್ನು ಧಾರ್ಮಿಕ ಬೋಧನೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಹೊಂದಿದ್ದ ಯುನೈಟೆಡ್ ಸ್ಟೇಟ್ಸ್ನಲ್ಲೇ ಮೊಟ್ಟಮೊದಲ ಕಾಲೇಜು ಇದಾಗಿದೆ.
ರಾಜ್ಯಪಾಲರಾಗಿದ್ದಾಗಿನ ಜೆಫರ್ಸನ್'ರ ಅವಧಿಯಲ್ಲಿ ವರ್ಜೀನಿಯಾ ಬ್ರಿಟಿಷ್ನಿಂದ ಎರಡುಬಾರಿ ದಾಳಿಗೊಳಗಾಯಿತು, firstಸಲ ಬೆನೆಡಿಕ್ಟ್ ರ್ನೋಲ್ಡ್ರಿಂದ ಮತ್ತು ನಂತರ ಕಾರ್ನ್ವಾಲಿಸ್ ಪ್ರಭುಗಳಿಂದ. ಬನಸ್ಟ್ರೆ ಟಾರ್ಲೆಟೊನ್ರವರಿಂದ ಬಂದನಕ್ಕೊಳಗಾಗುವ ಹತ್ತುನಿಮಿಷಗಳ ಮೊದಲು, ಅವರು ಪ್ಯಾಟ್ರಿಕ್ಖೆನ್ರಿ ಮತ್ತು ಇತರ ವರ್ಜೀನಿಯಾ ನಾಯಕರೊಂದಿಗಿದ್ದರು, ಜೂನ್ ೧೭೮೧ರಲ್ಲಿ ಬ್ರಿಟಿಷ್ ಅಧಿಕಾರಿಗಳು ಅಶ್ವಬಲದೊಂದಿಗೆ ದಾಳಿನಡೆಸಿದರು.[21] ಅವರ ಕಾರ್ಯನಿರ್ವಹಣೆಯನ್ನು ಸಾರ್ವಜನಿಕರು ಅಸಮ್ಮತಿಸಿದ್ದು ಅವರ ಮುಂದಿನ ರಾಜಕೀಯದ ನಿರೀಕ್ಷೆಗಳಿಗೆ ಅಡಚಣೆಯಾಯಿತು, ಮತ್ತು ಅವರು ಮತ್ತೆ ಎಂದೂ ವರ್ಜೀನಿಯಾದಲ್ಲಿನ ಪದಕ್ಕೆ ಆಯ್ಕೆಯಾಗಿರಲಿಲ್ಲ.[22] ಹೇಗಾದರು, ಅವರು, ೧೭೮೩ರಲ್ಲಿ ರಾಜ್ಯದ ಶಾಸನಸಭೆಯಿಂದ ಕಾಂಗ್ರೆಸ್ಸಿಗೆ ನೇಮಕಗೊಂಡರು.
ಜೂನ್ ೬ ೧೭೮೩ರಲ್ಲಿ ವರ್ಜೀನಿಯಾ ರಾಜ್ಯದ ಶಾಸನಸಭೆಯು ಜೆಫರ್ಸನ್ರನ್ನು ರಾಜ್ಯಸಂಘದ ಕಾಂಗ್ರೆಸ್ಸಿಗೆ ನೇಮಕ ಮಾಡಿತು, ನವೆಂಬರ್ ೧ರಂದು ಅವರ ಅಧಿಕಾರ ಅವದಿಯು ಪ್ರಾರಂಭವಾಯಿತು. ಅವರು ವಿದೇಶಿ ವಿನಿಮಯ ಬೆಲೆಗಳನ್ನು ನಿಶ್ಚಯಿಸಲು ವ್ಯವಸ್ಥಿತಗೊಂಡ ಸಮಿತಿಯ ಸದಸ್ಯರಾಗಿದ್ದರು, ಆ ಸಾಮರ್ಥ್ಯದಿಂದ ಅವರು ಅಮೆರಿಕಾದ ಕರೆನ್ಸಿಯು (ಚಲಾವಣೆಯಲ್ಲಿರುವ ನಾಣ್ಯ, ನೋಟು) ದಶಮಾಂಶ ಪದ್ದತಿಯಲ್ಲಿರಬೇಕೆಂದು ಶಿಫಾರಸುಮಾಡಿದರು. ಜೆಫರ್ಸನ್ರವರು ಕಾಂಗ್ರೆಸ್ಸ್ ಅಧಿವೇಶನದ ಸಭೆಯಲ್ಲಿಲ್ಲದಿರುವಾಗ ಕಾಂಗ್ರೆಸ್ಸಿನ ಕಾರ್ಯಾಂಗ ಹಸ್ತವಾಗಿ ಕಾರ್ಯನಿರ್ವಹಿಸುವ, ರಾಜ್ಯಗಳ ಸಮಿತಿಗಳನ್ನು ಸಜ್ಜುಗೊಳಿಸುವ ಶಿಫಾರಸನ್ನು ಸಹ ಮಾಡಿದರು. ೭ ಮೇ ೧೭೮೪ರಂದು ರಾಯಭಾರಿ ಮಂತ್ರಿಯಾಗಿ ಆಯ್ಕೆಯಾದಾಗ ಅವರು ಕಾಂಗ್ರೆಸ್ಸನ್ನು ಬಿಟ್ಟರು. ೧೭೮೫ರಲ್ಲಿ ಅವರು ಫ್ರಾನ್ಸ್ಗೆ ಮಂತ್ರಿಯಾದರು.
ಜೆಫರ್ಸನ್ ೧೭೮೫ರಿಂದ ೧೭೮೯ರ ವರೆಗು ಫ್ರಾನ್ಸ್ಗೆ ಮಂತ್ರಿಯಾಗಿ ಸೇವೆಸಲ್ಲಿಸಿದ್ದ ಕಾರಣ, ಅವರು ಫಿಲಾಡೆಲ್ಫಿಯಾದ ಸಭೆಗೆ ಹಾಜರಾಗಲು ಸಾದ್ಯವಾಗಲಿಲ್ಲ. ಹಕ್ಕುಗಳ ವಿಧೇಯಕದ ಕೊರತೆಯಿದ್ದರು ಅವರು ಸಮಾನ್ಯವಾಗಿ ಹೊಸಾ ಸಂವಿಧಾನವನ್ನು ಬೆಂಬಲಿಸಿದರು ಮತ್ತು ಜೇಮ್ಸ್ ಮಾಡಿಸನ್ರಿಂದ ಪತ್ರವ್ಯವಹಾರದ ಮೂಲಕ ಮಾಹಿತಿಯನ್ನು ಪಡೆಯುತ್ತಿದ್ದರು.
ಪ್ಯಾರಿಸ್ನಲ್ಲಿರುವಾಗ, ಅವರು ಚಾಂಪ್ಸ್-ಎಲೈಸೀಸ್ನಲ್ಲಿನ ಮನೆಯಲ್ಲಿ ವಾಸವಿದ್ದರು. ಅವರ ಬಹುತೇಕ ಸಮಯವನ್ನು ನಗರದಲ್ಲಿನ ವಸ್ತುಕಲೆಗೆ ಸಂಬಂದಿಸಿದ ಸ್ಥಳಗಳ ಸಂಶೋಧನೆಯಲ್ಲಿ ಕಳೆಯುತ್ತಿದ್ದರು, ಹಾಗು ಫ್ಯಾರೀಸ್ ಹೊಂದಿದ್ದ ಭವ್ಯ ಕಲೆಯನ್ನು ಆಹ್ಲಾದಿಸುತ್ತಿದ್ದರು. ಅವರು ಸಲೊನ್ ಸಂಸ್ಕೃತಿಯಲ್ಲಿ ಪ್ರೀತಿಪಾತ್ರರಾದರು ಮತ್ತು ನಗರದ ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ ಸತತವಾಗಿ ಭೋಜನದ ಅತಿಥಿಯಾಗಿದ್ದರು. ಇದರ ಜೊತೆಗೆ, ಅವರು ಅಗಾಗ್ಗೆ ಯುರೋಪ್ ಮತ್ತು ಫ್ರೆಂಚ್ ಸಮುದಾಯದಿಂದ ಇತರರನ್ನು ಮನರಂಜಿಸುತ್ತಿದ್ದರು. ಮೊಂಟಿಚೆಲ್ಲೋದಿಂದ ಹೆಮಿಂಗ್ಸ್ ಕುಟುಂಬದ ಇಬ್ಬರು ಗುಲಾಮರು ಇವರ ಮತ್ತು ಇವರ ಹೆಣ್ಣುಮಕ್ಕಳ ಜೊತೆಯಲ್ಲಿದ್ದರು. ಜೇಮ್ಸ್ ಹೆಮಿಂಗ್ಸ್ನಿಗೆ ಫ್ರೆಂಚ್ನ ಮುಖ್ಯ ಅಡುಗೆಯವನಾಗಿ ತರಬೇತಿಹೊಂದಲು ಜೆಫರ್ಸನ್ ಸಂಬಳ ನೀಡಿದರು (ನಂತರ ಜೆಫರ್ಸನ್ ಫಿಲಾಡೆಲ್ಫಿಯದಲ್ಲಿದ್ದಾಗ ಹೆಮಿಂಗ್ಸ್ ಮುಖ್ಯ ಅಡುಗೆಯವರಾಗಿ ಅವರ ಜೊತೆಯಲ್ಲಿದ್ದರು). ಸಲ್ಲಿ ಹೆಮಿಂಗ್ಸ್, ಜೇಮ್ಸ್' ಸಹೋದರಿ, ಕಡಲಾಚೆಯ ಪ್ರದೇಶದಲ್ಲಿ ಜೆಫರ್ಸನ್’ರ ಕಿರಿಯ ಮಗಳ ಜೊತೆಯಲ್ಲಿದ್ದಳು. ಫ್ಯಾರೀಸ್ನಲ್ಲಿ ಜೆಫರ್ಸನ್ ಸಲ್ಲಿ ಹೆಮಿಂಗ್ಸ್ಜೊತೆ ದೀರ್ಘಾವಧಿಯ ಸಂಬಂದವನ್ನು ಪ್ರಾರಂಭಿಸಬಹುದೆಂದು ನಂಬಿದ್ದರು. ನಗರದಲ್ಲಿ ಇದ್ದ ಅವರ ಸಮಯದಲ್ಲಿ ಇಬ್ಬರು ಹೆಮಿಂಗ್ಸ್ ಫ್ರೆಂಚನ್ನು ಕಲೆತರು.[23]
೧೭೮೪ರಿಂದ ೧೭೮೫ರ ವರೆಗು, ಜೆಫರ್ಸನ್ರವರು ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರುಸ್ಸಿಯದ ನಡುವಿನ ವ್ಯವಹಾರ ಸಂಬಂದಗಳ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. ಪ್ರುಸ್ಸಿಯನ್ ರಾಯಭಾರಿಯಾದ ಪ್ರೀಡ್ರಿಕ್ ವಿಲ್ಹೆಮ್ ವೊನ್ ತುಲ್ಮೆಯರ್ ಮತ್ತು ಜಾನ್ ಆಯ್ಡಮ್ಸ್, ಹಗ್ಯುನಲ್ಲಿ ವಾಸಿಸುತ್ತಿದ್ದ ಇಬ್ಬರು , ಮತ್ತು ಪ್ಯಾರೀಸ್ನಲ್ಲಿನ ಬೆಂಜಾಮಿನ್ ಪ್ರಾಂಕ್ಲಿನ್, ಸಹ ಭಾಗಿಯಾಗಿದ್ದರು.[24]
ಸಾಮಾಜಿಕ ಮತ್ತು ಗಣ್ಯ ವ್ಯಕ್ತಿಗಳ ಜೊತೆಗೆ ಗೆಳೆತನ ವಿದ್ದರೂ, ೧೭೮೯ರಲ್ಲಿ ಪ್ರೆಂಚ್ ಆಂದೋಲನ ಪ್ರಾರಂಭವಾದಾಗ, ಆಂದೋಲನ ಕಾರರಿಂದ ಜೆಫರ್ಸನ್ರನ್ನು ಪಕ್ಕಕ್ಕಿರಿಸಲಾಯಿತು.
ಪ್ರಾನ್ಸ್ನಿಂದ ವಾಪಾಸಾದ ನಂತರ, ಜೆಫರ್ಸನ್ ಜಾರ್ಜ್ ವಾಷಿಂಗ್ಟನ್ರ ಅಡಿಯಲ್ಲಿ ಮೊದಲ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. (೧೭೯೦–೧೭೯೩). ಜೆಫರ್ಸನ್ ಮತ್ತು ಅಲೆಕ್ಸಾಂಡರ್ ಹ್ಯಾಮಿಲ್ಟನ್ ರಾಷ್ಟ್ರೀಯ ಅದಾಯ ತೆರಿಗೆ ನೀತಿ ವಿರುದ್ದ ಒಂದು ಬಂಡಾಯ ಪ್ರಾರಂಭಿಸಿದರು. ಇದು ವಿಶೇಷವಾಗಿ ಯುದ್ದದ ಸಾಲಕ್ಕೆ ಬಂಡವಾಳವನ್ನು ಸಂಗ್ರಹಿಸುವುದಾಗಿತ್ತು. ಈ ಸಾಲಗಳನ್ನು ಸಮನಾಗಿ ಹ್ಯಾಮಿಲ್ಟನ್ ನೊಂದಿಗೆ ಹಂಚಿಕೊಳ್ಳುವುದರೊಂದಿಗೆ ತಮ್ಮ ಸಾಲಕ್ಕೆ ಆಯಾ ರಾಜ್ಯವೇ ಹೊಣೆ ಎಂಬುದು ಜೆಫರ್ಸನ್ ರವರ ಅಭಿಪ್ರಾಯವಾಗಿತ್ತು. ಮುಂದಿನ ಬಂಡಾಯದಲ್ಲಿ ಜೆಫರ್ಸನ್ ಪ್ರಜಾತಂತ್ರ ವ್ಯವಸ್ಥೆಯನ್ನು ನಿರ್ಮೂಲ ಮಾಡಲು ಬೆದರಿಕೆ ಹಾಕುತ್ತಿದ್ದ ಸ್ವತಂತ್ರವಾದಿಗಳು ಮತ್ತು ರಾಜಪ್ರಭುತ್ವವಾದಿಗಳೊಂದಿಗೆ ಹ್ಯಾಮಿಲ್ಟನ್ ರವರನ್ನು ಸೇರಿಸಿ ಕೊಳ್ಳಲು ಮುಂದಾದರು. ಅವರು ಸಂಸ್ಥೆಯನ್ನು "ರಾಯಲಿಸಮ್" ದೊಂದಿಗೆ ಸಮೀಕರಿಸಿದರು, ಮತ್ತು ಅವರು ಸಂಯುಕ್ತ ಪ್ರಜಾಸತ್ತತೆಯನ್ನು "ರಾಜಪ್ರಭುತ್ವ" ದೊಂದಿಗೆ ಸಮದೂಗಿಸುವುದರ ಮೂಲಕ, "ಹ್ಯಾಮಿಲ್ಟನ್ ಮತ್ತು ಆತನ ಅನುಯಾಯಿಗಳು ಕಿರೀಟ ಮತ್ತು ಮುಕುಟಗಳಿಗೆ ಹಂಬಲಿಸುವವರಾಗಿದ್ದರು" ಎಂದು ಸಾರಿದರು.[25] ಜೆಫರ್ಸನ್ ಮತ್ತು ಜೇಮ್ಸ್ ಮಾಡಿಸನ್ ಡೆಮೊಕ್ರಟಿಕ್-ರಿಪಬ್ಲಿಕನ್ ಪಕ್ಷವನ್ನು ಸ್ಥಾಪಿಸಿದರು ಮತ್ತು ನಾಯಕತ್ವವನ್ನು ವಹಿಸಿದರು. ಅವರು ದೇಶದಾದ್ಯಂತ ಪೆಡರಲಿಸ್ಟ್ ಪಕ್ಷದ ಬೆಂಬಲಿಗರ ವಿರುದ್ಧ ಪ್ರತಿಭಟಿಸಲು ರಿಪಬ್ಲಿಕನ್ ಸಂಧಾನಕರ ಜಾಲವನ್ನು ದೇಶದಾದ್ಯಂತ ರಚಿಸಲು ಮಡಿಸನ್ ಮತ್ತು ಅವರ ಆಂದೋಲನದ ವ್ಯವಸ್ಥಾಪಕರು ಜಾನ್ ಜೆ. ಬೆಕ್ಲಿರ ಜೊತೆಯಲ್ಲಿ ಕೆಲಸ ಮಾಡಿದರು.
೧೭೯೩ರಂದು ಫ್ರಾನ್ಸ್ ಮತ್ತು ಬ್ರಿಟನ್ ನಡುವೆ ಯುದ್ಧ ಘೋಷಣೆಯಾದಾಗ ಜೆಫರ್ಸನ್ ರವರು ಫ್ರಾನ್ಸ್ ದೇಶವನ್ನು ಪ್ರಭಲವಾಗಿ ಬೆಂಬಲಿಸಿದರು. ಇತಿಹಾಸಕಾರರಾದ ಲಾರೆನ್ಸ್ ಎಸ್. ಕಲ್ಪನ್ ರವರ ವರದಿಯಂತೆ,"ಜೆಫರ್ಸನ್ ರವರ ಫ್ರಾನ್ಸ್ ನ ಆಂತರಿಕ ಬೆಂಬಲ ವಾಷಿಂಗ್ಟನ್ ಒಪ್ಪಂದದ ಸಮಯದಲ್ಲಿ ದೇಶವು ಯಾವುದೇ ಯುದ್ಧದಲ್ಲಿ ಭಾಗಿಯಾಬಾರದು" ಎಂಬುದಕ್ಕೆ ಕಾರಣವಾಯಿತು.[26] ೧೭೯೩ ರಲ್ಲಿ ಎಡ್ಮಂಡ್-ಚಾರ್ಲ್ಸ್ ಜೆನೆಟ್ ಎಂಬ ಫ್ರೆಂಚ್ ನ ಭಯಾನಕ ಮಂತ್ರಿಯಿಂದ ರಾಜ್ಯದ ಕಾರ್ಯದರ್ಶಿ ಸ್ಥಾನದಲ್ಲಿ ಬಿಕ್ಕಟು ಉಂಟಾಯಿತು.ಏಕೆಂದರೆ ಜೆನೆಟ್ ಅಮೇರಿಕಾದ ತಟಸ್ಥವನ್ನು, ಜನರ ಅಭಿಫ್ರಾಯವನ್ನು ಬದಲಿಸುವುದರೊಂದಿಗೆ, ವಾಷಿಂಗ್ಟನ್ ರವರ ವಿರುದ್ಧವಾಗಿಯೂ ಜನರಲ್ಲಿ ತಪ್ಪು ಅಭಿಪ್ರಾಯ ಹುಟ್ಟಿಸಿದ್ದನು ಮತ್ತು ಇದಕ್ಕೆ ಜೆಫರ್ಸನ್ ರವರ ಸಹಾಯ ಇತ್ತು ಎಂದು ಪ್ರಚಾರ ಮಾಡಲಾಯಿತು. ಸಾಚ್ನರ್ ಅವರ ಪ್ರಕಾರ, "ತವರು ನೆಲದ ರಾಜಕೀಯ ಯಶಸ್ಸು ಯೂರೋಪಿನ ಫ್ರೆಂಚ್ ಸೈನ್ಯದ ಯಶಸ್ಸನ್ನು ಅವಲಂಬಿಸಿದೆ" ಎಂಬುದು ಜಫರ್ಸನ್ ರವರ ಅಭಿಪ್ರಾಯವಾಗಿತ್ತು:[27]
೧೭೯೩ರ ಕೊನೆಯಲ್ಲಿ ಜೆಫರ್ಸನ್ ಮೊಂಟಿಚೆಲ್ಲೋಗೆ ಹಿಂದಿರುಗಿದರು .ಅಲ್ಲಿ ಹ್ಯಾಮಿಲ್ಟನ್ ಮತ್ತು ವಾಷಿಂಗ್ಟನ್ ವಿರುದ್ದ ದನಿ ಎತ್ತುವುದನ್ನು ಮುಂದುವರೆಸಿದರು. ೧೭೯೪ರಲ್ಲಿ ಹ್ಯಾಮಿಲ್ಟನ್ ಮಾಡಿಕೊಂಡ ಜೇ ಒಪ್ಪಂದವು ಬ್ರಿಟನ್– ನೊಂದಿಗೆ ಉತ್ತಮ ವ್ಯಾಪಾರ ಮತ್ತು ಶಾಂತಿಯನ್ನು ತಂದವು. ಈ ನಡುವೆ ಜೆಫರ್ಸನ್ರ ಪ್ರಬಲ ಬೆಂಬಲ ಹೊಂದಿದ್ದ ಮಾಡಿಸನ್ ಮಿಲ್ಲರ್ ಹೇಳಿಕೆ," ತಾಯಿನಾಡನ್ನು ಯದ್ದವಿಲ್ಲದೆ ಸಬಲಗೊಳಿಸುವುದು" ಎಂಬುದಕ್ಕೆ ಕರೆ ನೀಡಿದರು. "ಇದು ಪ್ರಜಾಪ್ರಭುತ್ವ ವಾದಿಗಳಲ್ಲಿ ನಂಬಿಕೆಯ ಒಂದು ಸಂಗತಿಯಾಗಿದ್ದು, ಗ್ರೇಟ್ ಬ್ರಿಟನ್ ನ್ನು ಅಮೇರಿಕಾದ ಸರ್ವಾಧಿಕಾರಕ್ಕೆ ಒಳಪಡಿಸುವಷ್ಟು ವಾಣಿಜ್ಯ ಶಸ್ತ್ರಗಳು ತಮ್ಮಲ್ಲಿವೆ ಎಂಬ ಭಾವನೆಯನ್ನು ಮೂಡಿಸಿತ್ತು" ನಿವೃತ್ತಿಯ ಸಮಯದಲ್ಲಿ ಜೆಫರ್ಸನ್ ಮಾಡಿಸನ್ ರವರನ್ನು ಪ್ರಭಲವಾಗಿ ಬೆಂಬಲಿಸಿದರು.[28]
೧೭೯೬ರಲ್ಲಿ ಒಬ್ಬ ಪ್ರಜಾಪ್ರಭುತ್ವದ ನಾಯಕರಾಗಿ ಜಾನ್ ಆಡಮ್ಸ್ವಿರುದ್ದ ಸೋತರು, ಆದರೆ ಉಪ ರಾಷ್ಟ್ರಪತಿಯಾಗಲು (೧೭೯೭-೧೮೦೧) ಸಾಕಷ್ಟು ಚುನಾಯಿತ ಮತಗಳನ್ನು ಪಡೆದಿದ್ದರು. ಅವರು ಸಂಸತ್ತಿನ ಪ್ರಕ್ರಿಯೆಯ ಬಗ್ಗೆ ಒಂದು ಕೈ ಬರಹವನ್ನು ಬರೆಯುವುದರೊಂದಿಗೆ ಸೆನೆಟ್ನ್ನು ತಡೆದರು.
೧೭೯೮ರಲ್ಲಿ ಜಾನ್ ಆಡಮ್ಸ್ ಹೊಸ ಸೈನ್ಯವನ್ನು ಕಟ್ಟಿ, ಹೊಸ ತೆರಿಗೆಗಳನ್ನು ಹಾಕುವುದರ ಮೂಲಕ ಫೆಡರಲಿಸ್ಟ್ಗಳ ಸಹಾಯದೊಂದಿಗೆ ಫ್ರಾನ್ಸ್ ನೊಂದಿಗೆಅಘೋಷಿತ ಕ್ವಾಸಿ-ಯುದ್ದ, ನಡೆಸುವುದರ ಮೂಲಕ , ವಿದೇಶಿ ಮತ್ತು ಬಂಡಾಯ ಕಾಯಿದೆಗೆ ಚೈತನ್ಯ ತುಂಬಿದರು. ಜೆಫರ್ಸನ್ ವಿದೇಶಿ ಮತ್ತು ಬಂಡಾಯ ಕಾಯಿದೆಯನ್ನು, ವಿದೇಶಿ ಶತ್ರುಗಳನ್ನು ಬೆದರಿಸುವುದಕ್ಕಿಂತ ಪ್ರಜಾಪ್ರಭುತ್ವವಾದಿಗಳನ್ನು ಕುಗ್ಗಿಸುವ ಒಂದು ಪ್ರಯತ್ನ ಎಂದು ವಿವರಿಸಿದರು. ವಾಸ್ತವವಾಗಿ ಅವರು ತಮ್ಮ ಪಕ್ಷವನ್ನು ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ಪ್ರಮುಖರು ವರ್ಮಂಟ್ನ ಪ್ರತಿನಿಧಿಯಾದ ಮ್ಯಾಥೂ ಲಿಯನ್. ಜೆಫರ್ಸನ್ ಮತ್ತು ಮಾಡಿಸನ್ರು ಕೆಂಟುಕಿ ಮತ್ತು ವರ್ಜೀನಿಯಾ ಸುಧಾರಣೆಗಳನ್ನು, ಅನಾಮದೇಯ ಪತ್ರದ ಮೂಲಕ ಪರಿಹಾಸ್ಯ ಮಾಡಿದರು. ಏಕೆಂದರೆ ಅವುಗಳ ಪ್ರಕಾರ ಪ್ರಜಾಸತ್ತಾತ್ಮಕ ಸರ್ಕಾರವು ರಾಜ್ಯಗಳ ಪ್ರತಿನಿಧಿಯಾಗಿ ತನ್ನ ಅಧಿಕಾರವನ್ನು ಚಲಾಯಿಸುವುದಕ್ಕೆ ಯಾವುದೇ ರೀತಿಯ ಹಕ್ಕು ಹೊಂದಿರುವುದಿಲ್ಲ. ಸುಧಾರಣೆಗಳು ಎಂದರೆ, ಪ್ರಜಾಸತ್ತಾತ್ಮಕ ಸರ್ಕಾರವು ಅದರ ಯಾವುದೇ ವಿಧಿಗಳನ್ನು ರದ್ದು ಪಡಿಸುವಷ್ಟರಮಟ್ಟಿಗೆ ದೇಶವು ಅಧಿಕಾರವನ್ನು ಹೊಂದಿರಬೇಕು ಎಂದು ಅರ್ಥ. ಸುಧಾರಣೆಗಳು ರಾಜ್ಯದ ಹಕ್ಕುಗಳ ಸಿದ್ಧಾಂತದ ಮೊದಲ ಹೇಳಿಕೆಗಳನ್ನು ಸೂಚಿಸುವುದಾಗಿದ್ದು, ಅವು ಮುಂದೆ,ರದ್ದತೆಯ ಮತ್ತು ಅಡೆತಡೆಯ ಪರಿಕಲ್ಪನೆಗಳಿಗೆ ಕಾರಣವಾಗಿವೆ.
ಜೆಫರ್ಸನ್ ನೂಯಾರ್ಕ್ನ ಆರೋನ್ ಬರ್ರ್ ರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು, ಹೊಸ ತೆರಿಗೆಗಳ ಆಕ್ರಮಣದ ಮೂಲಕ ಅವರ ಪಕ್ಷವನ್ನು ಟೀಕಿಸಿದರು ಮತ್ತು ೧೮೦೦ ರಲ್ಲಿ ಅಧ್ಯಕ್ಷತೆಗಾಗಿ ದೌಡಾಯಿಸಿದರು . ಅಂದಿನ ಪ್ರಚಲಿತ ಸಂಪ್ರದಾಯಗಳಂತೆ, ಅವರು ಸ್ಥಾನ ಮಾನಕ್ಕೆ ಔಪಚಾರಿಕವಾಗಿ ಕಾರ್ಯಾಚರಣೆ ನಡೆಸಲಿಲ್ಲ. ಹನ್ನೆರಡನೆಯ ತಿದ್ದುಪಡಿಯ, ಗೊಂದಲಕ್ಕಿಂತ ಮುಂಚೆ, ಕೇಂದ್ರ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಎದುರಾಯಿತು. ಅವರು ಬರ್ರ್ ನೊಂದಿಗೆ ಚುನಾಯಿತ ಕಾಲೇಜ್ ನಲ್ಲಿ ಮೊದಲ ಸ್ಥಾನ ಪಡೆದು, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ತೊರೆದರು. (ಅಲ್ಲಿ ಫೆಡರಲಿಸ್ಟ್ ಗಳ ಪ್ರಭಾವ ಇನ್ನೂ ಇತ್ತು)
ಧೀರ್ಘಕಾಲದ ಚರ್ಚೆಯ ನಂತರ, ಹ್ಯಾಮಿಲ್ಟನ್ ತನ್ನ ಪಕ್ಷದವರಿಗೆ ಈ ರೀತಿಯಲ್ಲಿ ಮನವರಿಕೆ ಮಾಡಿದರು. "ಜೆಫರ್ಸನ್ ಬರ್ರ್ ಗಿಂತ ರಾಜಕೀಯದಲ್ಲಿ ಕನಿಷ್ಟ ದುಷ್ಟನಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಚುನಾವಣೆ ಪ್ರಕ್ರಿಯೆಯಿಂದ ಅಂತಹವನನ್ನು ಹೊರಗಿಡುವುದರಿಂದ ಅಪಾದನೆಯನ್ನು ಹೋಗಲಾಡಿಸಬಹುದು. ೧೮೦೧ಫೆಬ್ರವರಿ ೧೭ರಂದು ಮುವತ್ತೆರಡು ಮತಪತ್ರಗಳ ಪರಿಶೀಲನೆಯ ನಂತರ ಜೆಫರ್ಸನ್ ಅಧ್ಯಕ್ಷರಾಗಿ ಮತ್ತು ಬರ್ರ್ ಉಪಾಧ್ಯಕ್ಷರಾಗಿ ಚುನಾಯಿತರಾಗುವುದರ ಮೂಲಕ ಈ ವಿವಾದವನ್ನು ಬಗೆಹರಿಸಲಾಯಿತು. ಬರ್ರ್ ಇದನ್ನು ತನ್ನಷ್ಟಕ್ಕೆ ತಾನೆ ನಿರಕರಿಸಿದ್ದು ಜೆಫರ್ಸನ್ ರವಲ್ಲಿ ಅಸಮಧಾನ ಮೂಡಿಸಿತು. ೧೮೦೪ರಲ್ಲಿ ಬರ್ರ್ ಹ್ಯಾಮಿಲ್ಟನ್ ನನ್ನು ಒಂದು ಯುದ್ದದಲ್ಲಿ ಕೊಂದ ನಂತರ ಆತನನ್ನು ಪಕ್ಷದಿಂದ ಕೈ ಬಿಡಲಾಯಿತು.
ಸಾಮಾನ್ಯ ಚುನಾವಣೆಯಲ್ಲಿ ಫೆಡರಲಿಸ್ಟ್ ಆದ ಜಾನ್ ಆಡಮ್ಸ್ ವಿರುದ್ದ ಜೆಫರ್ಸನ್ ಜಯಗಳಿಸಿದ್ದು ಆ ದಿನಗಳಲ್ಲಿ ಪರಿಹಾಸ್ಯಕ್ಕೆ ಕಾರಣವಾಯಿತು.ಏಕೆಂದರೆ ಸಂವಿಧಾನದ ಸಭೆಯಲ್ಲಿ ಚುನಾವಣಾ ಕಾಲೇಜು ಯಾವ ರೀತಿಯಲ್ಲಿ ಮೂರನೇ-ಐದು ಒಪ್ಪಂದ ಮಾಡಿಕೊಂಡಿದೆ ಎಂಬುದು ಪ್ರಶ್ನೆಯಾಗಿತ್ತು. ಜೆಫರ್ಸನ್ ಗುಲಾಮಗಿರಿಯ ಹಿಡಿತದಲ್ಲಿದ್ದ ದಕ್ಷಿಣದ ಮತಗಳನ್ನು ತಮ್ಮದಾಗಿಸಿಕೊಂಡರು. ಅಂದರೆ ಜೆಫರ್ಸನ್ ರವರ ಒಟ್ಟು ಮತಗಳ ಹನ್ನೆರಡರಲ್ಲಿ ಮತದಾನವನ್ನು ಮತ್ತು ಸಂಪೂರ್ಣ ಮಾನವೀಯತೆಯನ್ನು ನಿರಾಕರಿಸಿದ ಪ್ರಜೆಗಳಿಂದ ಬಂದವುಗಳಾಗಿದ್ದವು.[29][30] ಚುನಾವಣೆಯ ನಂತರ ೧೮೦೦ರಲ್ಲಿ ಜೆಫರ್ಸನ್ "ನೀಗ್ರೋಗಳ ಅಧ್ಯಕ್ಷ " ಎಂಬ ಟೀಕೆಗೆ ಒಳಗಾದರು. ಮರ್ಕ್ಯುರಿ ಮತ್ತು ಬೊಟ್ಸನ್ನ ನ್ಯೂ-ಇಂಗ್ಲೆಂಡ್ ಪಲ್ಲಾಡಿಯಂ ರವರು ಜನವರಿ ೨೦, ೧೮೦೧ ರಂದು ಬರೆದಿರುವಂತೆ ಜೆಫರ್ಸನ್ "ಗುಲಾಮರ ಹೆಗಲಿನ ಮೇಲಿರುವ ಲಿಬರ್ಟಿ ಆಲಯವನ್ನು" ಗೆದ್ದು ಪರ್ಜಾಪ್ರಭುತ್ವಕ್ಕಾಗಿ ಸಾಧಿಸಿದ ವಿಜಯೋತ್ಸವ ಎಂದು ವಿವರಿಸಿದ್ದಾರೆ.[30][31]
ಜೆಫರ್ಸನ್ ರವರ ಅಧ್ಯಕ್ಷತೆಯಲ್ಲಿ ಹಲಾವರು ಸಂಯುಕ್ತ ತೆರಿಗೆಗಳನ್ನು ನಿವಾರಿಸಲಾಯಿತು. ಮತ್ತು ಅವರು ಮುಖ್ಯವಾಗಿ ತೆರಿಗೆ ಕಂದಾಯಕ್ಕೆ ಹೆಚ್ಚು ಒತ್ತು ಕೊಟ್ಟರು. ಅಷ್ಟೇ ಅಲ್ಲದೆ ಜಾನ್ ಆಡಮ್ಸ್ನ ಕಾಲದಲ್ಲಿ ಜಾರಿಗೆ ಬಂದಿದ್ದ ವಿದೇಶಿ ಮತ್ತು ಬಂಡಾಯ ಪ್ರಚೋದಕ ಕಾಯಿದೆಯಡಿಯಲ್ಲಿ ಜನರನ್ನು ಬಂಧಿಸಿದ್ದು ಕಾನೂನು ಬಾಹಿರವೆಂದು ನಂಬಿದ್ದ ಅವರು, ಆ ಜನರಿಗೆ ಕ್ಷಮಾಯಾಚನೆಯನ್ನು ನೀಡಿದರು. ಅವರು ಜನರನ್ನು ಬಂಧಿಸಿದ್ದು ಕಾನೂನು ಬಾಹಿರವೆಂದು ನಂಬಿದ್ದ ಅವರು, ಆ ಜನರಿಗೆ ಕ್ಷಮಾಯಾಚನೆಯನ್ನು ನೀಡಿದರು. ಅವರು 1801ರ ನ್ಯಾಯಾಂಗ ಕಾಯಿದೆಯನ್ನು ವಜಾಮಾಡಿದರು ಮತ್ತು ಆಡಮ್ಸ್ನ ಅನೇಕ "ಮಧ್ಯ ರಾತ್ರಿ ನ್ಯಾಯಾಧೀಶರನ್ನು" ತಮ್ಮ ಕಛೇರಿಯಿಂದ ತೆಗೆದು ಹಾಕಿದರು. ಇದು ಮುಂದೆಮಾರ್ಬುರಿ. ವಿ. ಮಾಡಿಸನ್ ನ ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಗೊಳಿಸಲು ಸಾಧ್ಯವಾಯಿತು. ಅಮೇರಿಕಾದ ಪ್ರಮುಖ ಸಮುದ್ರದಾಚೆಗಿನ ಯುದ್ಧವಾದ ಮೊದಲ ಬಾರ್ಬರಿ ಯುದ್ಧವನ್ನು (೧೮೦೧-೧೮೦೫), ಪ್ರಾರಂಭಿಸಿದ್ದಲ್ಲದೇ ಅದರಲ್ಲಿ ವಿಜಯ ಸಾಧಿಸಿದರು. ಮತ್ತು ೧೮೦೨ ರಲ್ಲಿ ಪಶ್ಚಿಮ ಭಾಗದಲ್ಲಿ ಅಮೇರಿಕಾ ಸಂಯುಕ್ತ ರಾಷ್ಟ್ರಗಳ ಮಿಲಿಟರಿ ಅಕ್ಯಾಡೆಮಿಯನ್ನು ಸ್ಥಾಪಿಸಿದರು.
180px|right|thumb|ಲೂಸಿಯಾನ ರಾಜ್ಯ ಮ್ಯೂಸಿಯಂನಲ್ಲಿ ಜೆಫರ್ಸನ್ ಅವರ ತಲೆ, ಭುಜ ಮತ್ತು ಎದೆಯುಳ್ಳ ಪ್ರತಿಮೆ.
೧೮೦೩ರಲ್ಲಿ, ಭೂಮಿ ಖರೀದಿಸಲು ಇರುವ ಕಾಂಗ್ರೇಸ್ ಅಧಿಕಾರದ ಸಂವಿಧಾನತ್ಮಕ ಸಂದೇಹಗಳ ಹೊರತಾಗಿಯೂ, ಜೆಫರ್ಸನ್ ರವರು ಫ್ರಾನ್ಸ್ ನಿಂದ ಲೂಸಿಯಾನ ಖರೀದಿಸಿ, ಸಂಯುಕ್ತ ಸಂಸ್ಥಾನದ ಗಾತ್ರವನ್ನು ಎರಡರಷ್ಟು ಹೆಚ್ಚಿಸಿದರು. ಈ ರೀತಿ ಪಡೆದುಕೊಂಡ ಭೂ ಭಾಗವು ಇಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ಶೇಕಡಾ ೨೩ ರಷ್ಟಿದೆ.[32]
೧೮೦೭ರಲ್ಲಿ, ಮಾಜಿ ಅಧ್ಯಕ್ಷರಾದ ಆರೋನ್ ಬರ್ ರವರು ಜೆಫರ್ಸನ್ ರವರ ಮೇಲೆ ರಾಜದ್ರೋಹ ಅಪಾದನೆಯನ್ನು ಹೊರಿಸಲು ಪ್ರಯತ್ನಿಸಿದರಾದರೂ, ಅವರು ಈ ಆಪಾದನೆಯಿಂದ ಮುಕ್ತ. ನ್ಯಾಯ ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಾಧೀಶರಾದ ಜಾನ್ ಮಾರ್ಷಲ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದಾಗ ಜೆಫರ್ಸನ್ ಘನ ನ್ಯಾಯಾಲಯದ ಮುಂದೆ ಪ್ರಾರ್ಥಿಸಿ, ತಾವು ಒಬ್ಬ ರಾಷ್ಟ್ರಾಧ್ಯಕ್ಷರಾಗಿ ಮನವಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು. ಆದರೆ ಮಾರ್ಷಲ್ ರವರು ನ್ಯಾಯಾಲದ ಅದೇಶವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಒಬ್ಬ ರಾಷ್ಟ್ರಾಧ್ಯಕ್ಷನಿಗೆ ಸಂವಿಧಾನದಲ್ಲಿ ಯಾವುದೇ ರೀತಿಯ ರಿಯಾಯಿತಿ ಇಲ್ಲವೆಂದಾಗ ಜೆಫರ್ಸನ್ ಒಪ್ಪಿಕೊಂಡರು.
1807ರ ಎಂಬರ್ಗೊ ಕಾಯಿದೆ ಜೆಫೆರ್ಸನ್ ರವರ ಗೌರವ ಚ್ಯುತಿ ತರುವಂತದ್ದಾಗ್ಗಿತ್ತು. ಆದರೆ ಇದು ಯಾವುದೇ ರೀತಿಯ ಪರಿಣಾಮ ಬೀರದೆ ಅವರ ಎರಡನೇ ಅವಧಿಯಲ್ಲಿ ತೆಗೆದು ಹಾಕಲ್ಪಟ್ಟಿತು.
೧೮೦೩ರಲ್ಲಿ, ಅಧ್ಯಕ್ಷ ಜೆಫರ್ಸನ್ ರವರು ಕರಿಯರನ್ನು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೆ ಸಾಗಿಸುವುದನ್ನು ನಿಷೇಧಿಸುವ ಕಾನೂನು ಮಸೂದೆಗೆ ಸಹಿ ಹಾಕಿದರು. ಇತಿಹಾಸಕಾರರಾದ ಜಾನ್ ಹೋಪ್ ಫ್ರಾಂಕ್ಲಿನ್ ಈ ಸಹಿಯನ್ನು ಈ ರೀತಿ ವರ್ಣಿಸಿದ್ದಾರೆ, "ಇದು ಸ್ವತಂತ್ರ ನೀಗ್ರೋಗಳ ಉಚಿತವಾದ ಸಂಶಯಾತ್ಮಕ ಭಾವನೆಯಾಗಿದ್ದು ಇದಕ್ಕೆ ಬದಲಾಗಿ ಏನೂ ಮಾಡಲು ಸಾಧ್ಯವಿಲ್ಲ." [33]
ಮಾರ್ಚ್ ೩, ೧೮೦೭ರಲ್ಲಿ, ಜೆಫರ್ಸನ್ ರವರು ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಗುಲಾಮರನ್ನು ಕಾನೂನು ಬಾಹಿರವಾಗಿ ಆಮದು ಮಾಡಿಕೊಳ್ಳುವ ಮಸೂದೆಗೆ ಸಹಿ ಹಾಕಿದರು.[34][35]
ಟೆಂಪ್ಲೇಟು:Infobox cabinet |
ಅಸೋಸಿಯೇಟ್ ಜಸ್ಟಿಸ್
ಒಕ್ಕೂಟಕ್ಕೆ ಸೇರಲ್ಪಟ್ಟ ರಾಜ್ಯಗಳು
|
ಅದ್ಯಕ್ಷತೆಯನ್ನು ಬಿಟ್ಟ ನಂತರ, ಜೆಫರ್ಸನ್ ಸಾರ್ವಜನಿಕ ಕಾರ್ಯಗಳಲ್ಲಿ ಕ್ರಿಯಾತ್ಮಕವಾಗಿರುವುದನ್ನು ಮುಂದುವರೆಸಿದರು. ಅವರು ಹೆಚ್ಚಿನ ಅಭ್ಯಾಸವನ್ನು ಒದಗಿಸುವ ಹೊಸ ಸಂಸ್ಥೆಯನ್ನು ಸ್ಥಾಪಿಸುವ ಚಿಂತಕರಾದರು, ಮುಖ್ಯವಾಗಿ ವಿದ್ಯಾರ್ಧಿಗಳು ಬೇರೆ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಒದಗಿಸದೇ ಇದ್ದಂತಹ ಅನೇಕ ಹೊಸಾ ವಿಷಯಗಳಲ್ಲಿ ಪರಿಣತಿಯನ್ನು ಪಡೆಯಬಹುದಾದಂತಹ ವರ್ಚಸ್ಸು ಬೀರುವ ಒಂದು ಉಚಿತ ಚರ್ಚನ್ನು ಸ್ಥಾಪಿಸುವ ಚಿಂತಕರಾದರು. ಜೆಫರ್ಸನ್ ಜನಸಾಮಾನ್ಯರಿಗೆ ಶಿಕ್ಷಣಕೊಡುವುದು ಸುಸಂಘಟಿತ ಸಮಾಜವನ್ನು ಸ್ಥಾಪಿಸುವ ಒಂದು ಉತ್ತಮ ಮಾರ್ಗವೆಂದು ನಂಬಿದ್ದರು, ಶಾಲೆಗಳಿಗೆ ಸಾರ್ವತ್ರಿಕ ಜನರಿಂದ ಪಾವತಿಯನ್ನು ಮಾಡಬೇಕು, ಇದರಿಂದ ಬಡ ಜನರು ವಿದ್ಯಾರ್ಥಿ ಸದಸ್ಯತ್ವವನ್ನು ಸಹ ಪಡೆಯಬಹುದು ಎಂದು ಭಾವಿಸಿದರು.[36] ಜನವರಿ ೧೮೦೦ರಲ್ಲಿ ಜೊಸೆಫ್ ಪ್ರಿಸ್ಟ್ಲಿಯವರಿಗೆ ಬರೆದ ಪತ್ರದಲ್ಲಿ, ಅವರು ವಿಶ್ವವಿದ್ಯಾನಿಲಯದ ಸ್ಥಾಪನೆಯ ಮೊದಲಿನ ದಶಕದಿಂದಲೇ ಅದರಬಗ್ಗೆ ಯೋಜನೆಯನ್ನು ಹೊಂದಿದ್ದೆ ಎಂದು ಸೂಚಿಸಿದ್ದರು.
ಅವರ ಕನಸು ೧೮೧೯ರಲ್ಲಿನ ವರ್ಜೀನಿಯಾ ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ನನಸಾಯಿತು. ೧೮೨೫ರಲ್ಲಿನ ಇದರ ಪ್ರಾರಂಭದದೊಂದಿಗೆ, ಅದರ ವಿದ್ಯಾರ್ಧಿಗಳಿಗೆ ಆಯ್ದುಕೊಂಡ ಕೋರ್ಸ್ಗಳ ಪೂರ್ಣ ತರಬೇತಿಯನ್ನು ಒದಗಿಸುವ ಮೊಟ್ಟಮೊದಲಿನ ವಿಶ್ವವಿದ್ಯಾನಿಲಯವು ಇದಾಗಿದೆ. ಆ ಸಮಯದಲ್ಲಿ ಉತ್ತರ ಅಮೆರಿಕಾದಲ್ಲಿನ ಅತ್ಯಂತ ದೊಡ್ಡ ಮಟ್ಟದ ನಿರ್ಮಾಣ ಯೊಜನೆಗಳಲ್ಲಿ ಒಂದಾಗಿದೆ, ಇದು ಚರ್ಚ್ಗಿಂತಲೂ ಗ್ರಂಥಾಲಯಕ್ಕೆ ಪ್ರಾಮುಖ್ಯತೆಯನ್ನು ಹೊಂದಿರುವುದಕ್ಕೆ ಪ್ರಖ್ಯಾತವಾಯಿತು. ಅವರ ಮೂಲ ಯೋಜನೆಯಲ್ಲಿ ಕ್ಯಾಂಪಸ್ಸ್ನ (ಆವರ ಬಯಲು) ಸಣ್ಣ ದೇವಾಲಯವು ಒಳಗೊಂಡಿರಲಿಲ್ಲ. ಅವರ ಮರಣದ ವರೆಗು, ಜೆಫರ್ಸನ್ ಶಾಲೆಯ ವಿದ್ಯಾರ್ಧಿಗಳು ಮತ್ತು ಭೋದಕರನ್ನು ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು.
ಜೆಫರ್ಸನ್ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರದೇಶದಲ್ಲಿ ಇವರು ಮಾಡಿದ ವಾಸ್ತುಕಲೆಯ ವಿನ್ಯಾಸಗಳಿಗಾಗಿ ವ್ಯಾಪಕವಾದ ಮಾನ್ಯತೆಗೊಳಗಾದರು, ಇದು ಒಂದು ನವೀನತೆಯ ವಿನ್ಯಾಸವಾಗಿದ್ದು ರಾಜ್ಯ ಪ್ರಯೋಜಿತ ಶಿಕ್ಷಣ ಮತ್ತು ಹೊಸಾ ಗಣರಾಜ್ಯದಲ್ಲಿನ ಕೃಷಿಕ ಪ್ರಜಾಪ್ರಭುತ್ವ ಎರಡರ ಬಗ್ಗೆ ಅವರು ಹೊಂದಿದ್ದ ಆಕಾಂಕ್ಷೆಗಳನ್ನು ಬಿಂಬಿಸುತ್ತದೆ. ಅವರು "ಉಚ್ಚ ಶಿಕ್ಷಣಕ್ಕೆ ಸಂಬಂಧಿಸಿದ ಗ್ರಾಮ" ಎಂದು ಕರೆದ ಅವರ ಕ್ಯಾಂಪಸ್ನ (ಆವರಣ ಬಯಲು) ಯೋಜನೆಯ ಸಾಪೇಕ್ಷ ಸ್ವರೂಪದಲ್ಲಿ (ಹೊರಗಿನ ಆಕಾರ) ಕಲಿಕೆಯ ಅಸಾಧಾರಣ ಘಟಕಗಳನ್ನು ರಚಿಸುವ ಅವರ ಶೈಕ್ಷಣಿಕ ಕಲ್ಪನೆಯನ್ನು ಭೌತಿಕವಾಗಿ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ಶೈಕ್ಷಣಿಕ ಘಟಕಗಳನ್ನು ಭಿನ್ನವಾದ ವಿನ್ಯಾಸಗಳಂತೆ ಕಾಣುವಹಾಗೆ ವ್ಯಕ್ತಪಡಿಸಿದ್ದಾರೆ, ಇವನ್ನು ಮುಂಭಾಗದಲ್ಲಿ ಹುಲ್ಲಿನಿಂದ ಕೂಡಿದ ಚತುರ್ಭುಜಾಕೃತಿಯಲ್ಲಿರುವಂತೆ, ದೊಡ್ಡ ಗುಡಾರಗಳಿಂದ ನಿರೂಪಿಸಲಾಗಿದೆ, ಪ್ರತಿಯೊಂದು ದೊಡ್ಡ ಗುಡಾರಗಳು ತರಗತಿ ಕೊಠಡಿ, ಬೋಧಕರ ಕಛೇರಿ, ಮತ್ತು ಮನೆಗಳನ್ನೊಳಗೊಂಡಿವೆ. ಇವು ಪ್ರತ್ಯೇಕವಾಗಿದ್ದರು, ಪ್ರಾಮುಖ್ಯತೆಯಲ್ಲಿ ಪ್ರತಿಯೊಂದು ಸಮನಾಗಿವೆ, ಮತ್ತು ಅವು ವಿದ್ಯಾರ್ಧಿ ವಸತಿ ಕಟ್ಟಡದ ಮುಂಬಾಗದ ಬಯಲಿನ ಕಮಾನುಗಳ ಸಾಲಿನ ಸರಣಿಯಿಂದ ಜೊತೆಗೂಡಿವೆ. ತೋಟಗಳು ಮತ್ತು ತರಕಾರಿ ಬೆಳೆಯುವ ಜಾಗಗಳನ್ನು ಹಿಂಬಾಗದಲ್ಲಿ ಹೊಂದಿದ್ದು ಇವನ್ನು ಸುರುಳಿಯ ಗೋಡೆಗಳಿಂದ ಸುತ್ತುವರಿಯಲಾಗಿದೆ, ಇದು ಕೃಷಿಕ ಜೀವನ ಶೈಲಿಯ ಪ್ರಾಮುಖ್ಯತೆಯನ್ನು ದೃಢೀಕರಿಸುತ್ತದೆ.
ಅವರ ಅತ್ಯುನ್ನತವಾದ ರೀತಿಯ ಸ್ಥಳದ ಕಲ್ಪನೆಯು ಲಾನ್ ಎಂದು ಕರೆಯುವ, ಮಧ್ಯದಲ್ಲಿ ಸಮಚತುಷ್ಕೋನದಲ್ಲಿದ್ದ ಚೌಕೋನ ಪ್ರಾಂಗಣವನ್ನು ಕಟ್ಟಡಗಳ ಗುಂಪು ಸುತ್ತುವರೆಯುವಂತೆ ನೆಲೆಗೊಳಿಸುತ್ತದೆ, ಇದನ್ನು ಎರಡುಕಡೆ ಶೈಕ್ಷಣಿಕ ಬೋಧನೆಯ ಘಟಕಗಳು ಮತ್ತು ಅವುಗಳ ಜೊತೆಗೂಡಿಸುವ ಕಮಾನುಗಳೊಂದಿಗೆ ಕ್ರಮದಲ್ಲಿರುವಂತೆ ಮಾಡಲಾಗಿದೆ. ಕ್ವಾಡ್ (ಚೌಕವು) ಒಂದು ತುದಿಯಲ್ಲಿ ಗ್ರಂಥಾಲಯದಿಂದ ಸುತ್ತುವರೆದಿದೆ, ಮೇಜಿನ ಮುಖ್ಯ ಭಾಗದಲ್ಲಿ, ಜ್ಞಾನದ ಭಂಡಾರವಿದೆ. ಗ್ರಂಥಾಲಯಕ್ಕೆ ವಿರುದ್ಧವಾಗಿದ್ದ ಉಳಿದ ಭಾಗವು ಭವಿಷ್ಯದಲ್ಲಿನ ಬೆಳವಣಿಗೆಗಾಗಿ ಬಯಲಾಗಿ ಉಳಿದಿದೆ. ಕ್ರಮೇಣವಾಗಿ ಲಾನ್ (ಹುಲ್ಲಿನ ಜಾಗ) ಮೆಟ್ಟಿಲುಗಳ ಮಹಡಿಯ ಶ್ರೇಣಿಯಂತೆ ಮೇಲೆದ್ದಿದೆ, ಪ್ರತಿಯೊಂದು ಮೆಟ್ಟಿಲು ಹಿಂದಿನದಕ್ಕಿಂತಲು ಕೆಲವೇ ಅಡಿಗಳಷ್ಟು ಎತ್ತರದ್ದಾಗಿದ್ದು, ಶಿಖರದಲ್ಲಿ ಪ್ರಮುಖ ಸ್ಥಾನದಲ್ಲಿರುವಂತೆ ಗ್ರಂಥಾಲಯವರೆಗು ಮೇಲೇರಿದೆ, ಇದು ವಿಷ್ಯಕ್ಕೆ ಸರಳವಾಗಿ ವಲಿಸುವುದನ್ನು ಉಚ್ಚ ಶಿಕ್ಷಣಕ್ಕೆ ಸಂಬಂಧಿಸಿದ ಗ್ರಾಮವು ಸರಾಗಗೊಳಿಸುವುದನ್ನು ಸಹ ಸೂಚಿಸುತ್ತದೆ.
ಶೈಲಿಶಾಸ್ತ್ರವಾಗಿ, ಜೆಫರ್ಸನ್ ಗ್ರೀಕ್ ಮತ್ತು ರೋಮನ್ ಶೈಲಿಗಳ ಸಿದ್ಧಾಂತ ಪ್ರತಿಪಾದಕವಾಗಿದ್ದರು, ಇದನ್ನು ಚಾರಿತ್ರಿಕ ಮಂಡಲಿಯಿಂದಾಗುವ ಅಮೆರಿಕಾದ ಪ್ರಜಾಪ್ರಭುತ್ವದ ಅತ್ಯುನ್ನತ ಪ್ರತಿನಿಧಿಯಾಗಿರಬೇಕೆಂದು ಅವರು ನಂಬಿದ್ದರು. ಪ್ರತಿಯೊಂದು ಶೈಕ್ಷಣಿಕ ಘಟಕವನ್ನು ಎರಡು ಕಥೆಗಳ ದೇಗುಲದಿಂದ ಮುಂಭಾಗದಲ್ಲಿ ಚತುರ್ಭುಜಾಕೃತಿಯಲ್ಲಿರುವಂತೆ ವಿನ್ಯಾಸಿಸಲಾಗಿದೆ, ಹಾಗು ಗ್ರಂಥಾಲಯವನ್ನು ರೋಮನ್ ಸರ್ವದೇವಮಂದಿರದ ಮಾದರಿಯಲ್ಲಿ ವಿನ್ಯಾಸಿಸಲಾಗಿದೆ. ಸ್ಕ್ವಾಡ್ (ಚೌಕದ) ಸುತ್ತ ಇರುವ ಕಟ್ಟಡಗಳ ಗುಂಪು, ಲೌಕಿಕವಾದ ಸಾರ್ವಜನಿಕ ಶಿಕ್ಷಣದ ಪ್ರಾಮುಖ್ಯೆತೆಯ ಸ್ಪಸ್ಟ ವಾಸ್ತುಕಲೆಯ ಹೇಳಿಕೆಯಾಗಿದೆ, ಹಾಗು ಧಾರ್ಮಿಕ ವಿನ್ಯಾಸಗಳ ನಿಷೇಧವು ಚರ್ಚ್ (ದೇವಾಲಯ) ಮತ್ತು ರಾಜ್ಯದ ವಿಭಜನೆಯ ತತ್ವವನ್ನು ಬಲಪಡಿಸುತ್ತದೆ. ಆವರಣಕ್ಕೆ ಮಾಡಿದ ಯೋಜನೆ ಮತ್ತು ವಾಸ್ತುಕಲೆಯನ್ನು ಮಾಡಿದ ರೀತಿಯು ಇಂದು ಬೌದ್ಧಿಕ ಕಲ್ಪನೆಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸುವ ಕಟ್ಟಡದ ವಿನ್ಯಾಸಗಳ ಮಾದರಿಯಾಗಿ ಉಳಿದಿದೆ. ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ನದಸ್ಯರ ಸಮೀಕ್ಷೆಯು ಜೆಫರ್ಸನ್'ರ ಕ್ಯಾಂಪಸ್ನ್ನು (ವಿಶ್ವವಿದ್ಯಾಲಯದ ಆವರಣ) ಅಮೆರಿಕದಲ್ಲಿನ ವಾಸ್ತುಕಲೆಯ ಅತ್ಯಂತ ಅರ್ಥಾನ್ವಿತ ಕೆಲಸವೆಂದು ಗುರುತಿಸಿದೆ.
ವಿಶ್ವವಿದ್ಯಾಲಯವನ್ನು ವರ್ಜೀನಿಯಾದ ಶೈಕ್ಷಣಿಕ ಪದ್ಧತಿಯ ಶಿಖರವನ್ನಾಗಿ ವಿನ್ಯಾಸಿಸಲಾಗಿದೆ. ಅವರ ದೃಷ್ಟಿಯಲ್ಲಿ, ರಾಜ್ಯದ ಯಾವುದೇ ನಾಗರಿಕ ಸಾಮರ್ಥ್ಯ ಅನ್ನುವ ಒಂದೇ ಒಂದು ಪ್ರಮಾಣದಿಂದ ವಿದ್ಯಾಲಯಕ್ಕೆ ಹಾಜರಾಗಬಹುದು.
ಜೆಫರ್ಸನ್ ಜುಲೈ 4, ೧೮೨೬, ಸ್ವಾತಂತ್ರ್ಯದ ಘೋಷಣೆಯನ್ನು ಆಯ್ದುಕೊಂಡ ಐವತ್ತನೆಯ ವಾರ್ಷಿಕೋತ್ಸವದ ದಿನದಂದು ಮರಣಹೊಂದಿದರು. ಅವರು ಸ್ವಾತಂತ್ರ್ಯದ ಹೋರಾಟಗಾರರಲ್ಲೊಬ್ಬರಾಗಿದ್ದ, ನಂತರ ರಾಜಕೀಯದ ಪ್ರಮುಖ ಪ್ರತಿಸ್ಪರ್ಧಿ, ಮತ್ತು ನಂತರ ಗೆಳೆಯ ಮತ್ತು ಪಾರುಪತ್ಯಗಾರರಾದ ಜಾನ್ ಆಯ್ಡಮ್ಸ್ರಿಗಿಂತ ಕೆಲವೇ ಗಂಟೆಗಳ ಮೊದಲು ಮರಣಹೊಂದಿದರು. ಆಯ್ಡಮ್ಸ್ ಸಾವಿನ ಅರಿವಿಲ್ಲದೆ, ಅವರ ಕೊನೆಯ ಮಾತುಗಳಲ್ಲಿ ಜೆಫರ್ಸನ್ರನ್ನು ಉಲ್ಲೇಖಿಸಿದ್ದರೆಂದು ಆಗಾಗ್ಗೆ ವದಂತಿಗಳಿದ್ದವು.[38] ಜೆಫರ್ಸನ್ ಅವರ ವೃದ್ಧಾಪ್ಯದಲ್ಲಿನ ಅನೇಕ ರೋಗಗಳಿಂದ ಮರಣಹೊಂದಿದರೆಂದು ಪರಿಗಣಿಸಲಾಗಿದೆ: ರಕ್ತದಲ್ಲಿ ಉತ್ಪತ್ತಿಯಾದ ವಿಷಗಳು ಮತ್ತು ರಕ್ತದಲ್ಲಿನ ಅತಿಯಾದ ಸಕ್ಕರೆಯಿಂದ ಮೂತ್ರಪಿಂಡಗಳಲ್ಲಿ ಕಾಣಿಸಿಕೊಳ್ಳುವ ರೋಗ (ನೆಪ್ರೊಪಥಿ)ದಿಂದಯುರೇಮಿಯಾ, ಅತಿಸಾರ ಬೇಧಿ ಮತ್ತು ನ್ಯುಮೋನಿಯಾ. ಮೂತ್ರಪಿಂಡದ ರೋಗದ ಲಕ್ಷಣವಾದ, ಮೂತ್ರದ ಹಾದಿಯ ರೋಗದ ಸೋಂಕಿನಿಂದ ಮೂತ್ರಮಾಡುವ ತೊಂದರೆಗಳು, ಕೆಲವರು ಜೆಫರ್ಸನ್ ಕಂಡುಹಿಡಿಯದೇ ಇದ್ದ ಪ್ರೊಸ್ಟೇಟ್ (ಮೂತ್ರಕೋಶದ ಹತ್ತಿರ ಇರುವ ಗ್ರಂಥಿ) ಅರ್ಬುದ ರೋಗದಿಂದ ಮರಣಹೊಂದಿದರೆಂದು ಪರಿಗಣಿಸಲು ಕಾರಣವಾಯಿತು.[39][unreliable source?]
ಅವರು ಉತ್ತರ ಅಮೆರಿಕಾದಲ್ಲಿನ ಅತ್ಯಂತ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರೂ, ಅವರು ಮರಣಹೊಂದಿದಾಗ ಥಾಮಸ್ ಜೆಫರ್ಸನ್ ಅತಿಯಾದ ಸಾಲಕ್ಕೊಳಗಾಗಿದ್ದರು. ಜೆಫರ್ಸನ್'ರ ಕಷ್ಟಗಳು ಪ್ರಾರಂಭವಾಗಿದ್ದು ಅವರ ಮಾವ ಮರಣಹೊಂದಿದಾಗ, ಮತ್ತು ಅವರು ಮತ್ತು ಅವರ ಬಾವ ಸ್ಥಿರಾಸ್ತಿಯ ಸಾಲಗಳನ್ನು ತೀರಿಸುವ ಮುನ್ನವೇ ತ್ವರಿತವಾಗಿ ಅವನ್ನು ಹಂಚಿಕೊಂಡಾಗ. ಇದರಿಂದ ಅವರಿಬ್ಬರು ಪೂರ್ತಿ ಸಾಲಕ್ಕೆ ಹೊಣೆಯಾಗಬೇಕಾಯಿತು– ಇದು ಅವರು ನಿರೀಕ್ಷಿಸಿದ್ದಕ್ಕಿಂತಲು ಹೆಚ್ಚಾಗಿ ಪರಿವರ್ತನೆಗೊಂಡಿತ್ತು.
ಸಾಲವನ್ನು ತೀರಿಸುವ ಸಲುವಾಗಿ ಜೆಫರ್ಸನ್ ಅಮೆರಿಕಾದ ಆಂದೋಲನದ ಮೊದಲೆ ಸ್ಥಳವನ್ನು ಮಾರಾಟಮಾಡಿದ್ದರು, ಆದರೆ ಅವರು ಹಣವನ್ನು ಪಡೆಯುವ ಸಮಯಕ್ಕೆ, ಯುದ್ಧದ ವರ್ಷಗಳಲ್ಲಿ ತ್ವರಿತವಾಗಿ ಮೇಲೇರುವ ಹಣದುಬ್ಬರದ ಗುರಿಯಿಂದ ಕಾಗದ ಹಣವು ಬೆಲೆಯನ್ನು ಕಳೆದುಕೊಂಡಿತ್ತು. ಯುದ್ಧದ ಸಮಯದಲ್ಲಿ ಕಾರ್ನ್ವಾಲಿಸ್ ಜೆಫರ್ಸನ್'ರ ತೋಟವನ್ನು ಸರ್ವನಾಶ ಮಾಡಿದರು, ಮತ್ತು ಬ್ರಿಟಿಷ್ ಲೇಣೆದಾರರು (ಸಾಲ ಕೊಟ್ಟವರು) ಘರ್ಷಣೆ ಮುಗಿದಾಗ ಅವರ ಹಣ ಸಂಗ್ರಹಿಸುವ ಪ್ರಯತ್ನಗಳನ್ನು ಹಿಂದಕ್ಕೆ ಪಡೆದರು. ಜೆಫರ್ಸನ್ ಆರ್ಥಿಕ ಪ್ಯಾನಿಕ್ ಆಫ್ 1819 (1819 ರಿಂದ 1923ರ ವರೆಗಿನ ಯುನೈಟೆಡ್ ಸ್ಟೇಟ್ಸ್ನಲ್ಲಿನ ಮೊದಲ ಆರ್ಥಿಕ ಬಿಕ್ಕಟ್ಟಿನ ಸಮಯ)ದಲ್ಲಿ ಸಾಲತೀರಿಸುವ ಮಾತನ್ನು ಉಳಿಸಿಕೊಳ್ಳದೇ ಇದ್ದ ಸಂಬಂದಿಕರೊಬ್ಬರ ಪತ್ರಗಳಿಗೆ ದೃಢೀಕರಣದ ಸಹಿ ಮಾಡಿದಾಗ ಮತ್ತೊಂದುಸಲ ಆರ್ಥಿಕವಾಗಿ ಹಿಂದಕ್ಕೆ ಬೀಳುವ ತೊಂದರೆಗೊಳಗಾದರು. ಕೇವಲ ಜೆಫರ್ಸನ್'ರ ಲೋಕ ಪ್ರಸಿದ್ಧ ಸ್ಥಾನ ಮಾನಗಳು ಸಾಲಗಾರರು ಅವರ ಜೀವನ ಸಮಯಸಲ್ಲಿ ಅವರ ಅದೀನದಲ್ಲಿರುವ ಮೊಂಟಿಚೆಲ್ಲೋವನ್ನು ಜಪ್ತಿಮಾಡುವುದನ್ನು ಮತ್ತು ಮಾರಾಟಮಾಡುವುದನ್ನು ತಡೆದವು.
ಅವರ ಮರಣದ ನಂತರ, ಅವರ ಆಸ್ತಿಪಾಸ್ತಿಗಳು ಹರಾಜಿನಲ್ಲಿ ಮಾರಾಟವಾದವು. ೧೮೩೧ರಲ್ಲಿ, ಜೆಫರ್ಸನ್'ರ ೫೫೨ ಎಕರೆಗಳನ್ನು (೨೨೩ ಹೆಕ್ಟಾರ್ಸ್) ಜೇಮ್ಸ್ ಟಿ. ಬಾರ್ಕ್ಲೆರವರಿಗೆ $೭,೦೦೦ಕ್ಕೆ ಮಾರಾಟ ಮಾಡಲಾಗಿತ್ತು, ಇವತ್ತು ಇದು $NaNಗೆ ಸಮ.ಗೆ ಸಮ.[40] ಥಾಮಸ್ ಜೆಫರ್ಸನ್ರನ್ನು ವರ್ಜೀನಿಯಾದ ಚಾರ್ಲೊಟ್ಟೆಸ್ವಿಲ್ಲೆಯಲ್ಲಿನ, ಮೊಂಟಿಚೆಲ್ಲೋ ಎಸ್ಟೇಟ್ನಲ್ಲಿ ಸಮಾಧಿ ಮಾಡಲಾಯಿತು. ಅವರ ಮರಣಶಾಸನದಲ್ಲಿ, ಅವರು ಮೊಂಟಿಚೆಲ್ಲೋವನ್ನು ನೌಕಪಡೆಯ ಉದ್ಯೋಗಸ್ಥ ತಬ್ಬಲಿಗಳಿಗೆ ವಿದ್ಯಾಲಯವನ್ನಾಗಿ ಉಪಯೋಗಿಸಲು ಯುನೈಟೆಡ್ ಸ್ಟೇಟ್ಸ್ಗೆ ಬಿಟ್ಟುಕೊಟ್ಟಿದ್ದರು. ಅವರ ಸಮಾಧಿಯಮೇಲಿನ ಲಿಪಿಯು, ಅವರು ಬರೆದಹಾಗೆ ಕೆತ್ತುವಂತೆ ಮತ್ತು "ಒಂದೇ ಒಂದು ಪದವನ್ನು ಹೆಚ್ಚಿಗೆ ಸೇರಿಸದಂತೆ" ಕಡ್ಡಾಯವಾಗಿ ಸೂಚಿಸುತ್ತಾ ಅವರೇ ಬರೆದದ್ದು (ಪ್ರಮುಖವಾಗಿ ವರ್ಜೀನಿಯಾದ ರಾಜ್ಯಪಾಲರಾಗಿ, ಉಪಾಧ್ಯಕ್ಷರಾಗಿ ಮಾತು ಅಧ್ಯಕ್ಷರಾಗಿ ಅವರ ಸೇವೆಯನ್ನು ಬಿಟ್ಟುಬಿಡುವಂತೆ), ಈ ಕೆಳಗಿನಂತಿದೆ:
ಸಮಾಧಿ ಲೇಖನದ ಕೆಳಗೆ, ಪ್ರತ್ಯೇಕ ಹಲಗೆಯಲ್ಲಿ, ಬರೆದದ್ದು
O.S. ಸಾಂಕೇತಿಕಾಕ್ಷರಗಳು ಓಲ್ಡ್ ಸ್ಟೈಲ್ (ಹಳೇ ಶೈಲಿಯ) ಸಂಖ್ಯಾಲೇಖನಗಳಾಗಿವೆ ಮತ್ತು ಇದು ಜೆಫರ್ಸನ್'ರ ಜೀವನದ ಸಮಯದಲ್ಲಿ ಬ್ರಿಟಿಷ್ ಪಂಚಾಂಗ ದಾಖಲೆಯ ಪಟ್ಟಿಯ (ಹೊಸಾ ಶೈಲಿ) 1750ರ ಕಾಯಿದೆಯ ಅಡಿಯಲ್ಲಿ ಜುಲಿಯನ್ ಪಂಚಾಂಗ ದಾಖಲೆಯ ಪಟ್ಟಿಯಿಂದ ಗ್ರೆಗೊರಿಯನ್ ಪಂಚಾಂಗ ದಾಖಲೆಯ ಪಟ್ಟಿಗೆ ಮಾರ್ಪಟ್ಟ ತಾರೀಕು ನಮೂದಿಸುವಿಕೆಯ ಸಂಕೇತವಾಗಿದೆ.[41]
ಜೆಫರ್ಸನ್ ಸಪುರವಾಗಿ, ಉದ್ದವಾಗಿದ್ದ ಮನುಷ್ಯ, ಅವರು ಸರಿಸುಮಾರು ಆರು ಅಡಿಗಳಷ್ಟಿದ್ದರು ಮತ್ತು ಗಣನೀಯವಾಗಿ ನೇರವಾಗಿದ್ದರು.[42]
"ಮೊಂಟಿಚೆಲ್ಲೋದ ಸೇಜ್ (ಒಂದು ಸಸಿ)" ಅವರಿಗೆ "ಮ್ಯಾನ್ ಆಫ್ ದಿ ಪೀಪಲ್" (ಸಾಮಾನ್ಯ ಜನರ ಮನುಷ್ಯ) ಅನ್ನುವ ಇನ್ನೊಂದು ಉಪನಾಮವನ್ನು ತಂದುಕೊಟ್ಟ ಪ್ರತೀಕವನ್ನು ಅಭಿವೃದ್ಧಿ ಪಡಿಸಿದೆ. ಅವರು ವೈಟ್ಹೌಸ್ನ ಅಥಿತಿಗಳನ್ನು ನಿಲುವಂಗಿ ಮತ್ತು ಚಪ್ಪಲಿಗಳಂತಹ ಉಡುಗೊರೆಗಳಿಂದ ಅಭಿನಂದಿಸಿದ್ದಕ್ಕೆ ಅವರ ಜನಪ್ರಿಯೆತೆಗೆ ದಕ್ಕೆಯಾಯಿತು. ಡೊಲಿ ಮಾಡಿಸನ್, ಜೇಮ್ಸ್ ಮಾಡಿಸನ್ರ ಪತ್ನಿ (ಜೆಫರ್ಸನ್'ರ ರಾಜ್ಯದ ಕಾರ್ಯದರ್ಶಿ), ಮತ್ತು ಜೆಫರ್ಸನ್'ರ ಪುತ್ರಿಯರು ವೈಟ್ ಹೌಸ್ನ ಶಿಷ್ಟಾಚಾರವನ್ನು ವಿರಮಿಸಿದರು ಮತ್ತು ರಾಜ್ಯದ ಸಂಪ್ರದಾಯಬದ್ಧವಾದ ಔತಣದ ಊಟವನ್ನು ಅಧಿಕ ಲೋಕಾಭಿರಾಮ ಮತ್ತು ಮನರಂಜಿಸುವ ಸಾಮಾಜಿಕ ಸನ್ನಿವೇಶಗಳನ್ನಾಗಿ ಪರಿವರ್ತಿಸಿದರು.[43] ಪ್ರೀ ಪ್ರೆಸ್ಸ್ನ ಪ್ರಮುಖ ರಕ್ಷಕರಾಗಿದ್ದರೂ, ಜೆಫರ್ಸನ್ ಒಂದುಪಂಗಡದ ವಾರ್ತಾಪತ್ರಿಕೆಯೊಂದಿಗೆ ಸಮಯ ಹಂಚಿಕೊಂಡು ಜನರಲ್ಲಿ ವಿಜ್ಞಾಪಿಸಿದರು.[44]
ಜೆಫರ್ಸನ್'ರ ಬರವಣಿಗೆಗಳು ಪ್ರಯೋಜಕಯಾಗಿದ್ದವು ಮತ್ತು ಅತ್ಯಂತ ಹೆಚ್ಚಿನ ಬುದ್ಧಿಶಕ್ತಿಗೆ ಸಾಕ್ಷಿಯಗಿವೆ, ಮತ್ತು ಅವರು ಭಾಷೆಗಳೊಂದಿಗೆ ಸಾದೃಶ್ಯಹೊಂದಿದ್ದರು. ಓಸ್ಸಿಯನ್ನನ್ನು ಭಾಷಾಂತರಿಸಲು ಅವರು ಕೆಲ್ಟ್ ಜನರ ಭಾಷೆಯನ್ನು ಕಲೆತರು, ಮತ್ತು ಮೂಲ ಪ್ರತಿಗಳಿಗಾಗಿ ಅವರನ್ನು ಜೇಮ್ಸ್ ಮಕ್ಪರ್ಸನ್ ಹತ್ತಿರ ಕಳುಹಿಸಲಾಯಿತು.
ಅಧ್ಯಕ್ಷರಾಗಿ, ಅವರು ರಾಜ್ಯದ ಸಂಯೋಗದ ಭಾಷಣೆಯನ್ನು ಸ್ವತಃ ಮಾಡುವ ಆಚರಣೆಯನ್ನು ನಿಲ್ಲಿಸಿಬಿಟ್ಟರು, ಇದರ ಬದಲಾಗಿ ಅವರು ಭಾಷಣವನ್ನು ಬರೆದು ಕಾಂಗ್ರೆಸ್ಸ್ಗೆ ಕಳುಹಿಸುತ್ತಿದ್ದರು (ಕೊನೆಗೆ ಆಚರಣೆಯನ್ನು ವೂಡ್ರೊ ವಿಲ್ಸನ್ರವರಿಂದ ಮರು ಪರಿಶೀಲಿಸಲಾಯಿತು); ಅವರ ಅಧ್ಯಕ್ಷ ಅವಧಿಯಲ್ಲಿ ಅವರು ಕೇವಲ ಎರಡೇ ಸಾರ್ವನಿಕ ಭಾಷಣೆಗಳನ್ನು ಮಾಡಿದ್ದರು. ಜೆಫರ್ಸನ್ ಮಾತನಾಡುವಾಗ ತೊದಲುತ್ತಿದ್ದರು[45] ಮತ್ತು ಇದರಿಂದ ಅವರು ಸಾರ್ವಜನಿಕರೊಂದಿಗೆ ಅಂಶತಃ ಮಾತನಾಡಿ ಬರೆದುಕಳುಹಿಸುತ್ತಿದ್ದರು. ಅವರ ಪತ್ನಿಯ ಮರಣ ನಂತರ ಅವರ ಮತ್ತು ಪತ್ನಿಯ ನಡುವಿನ ಎಲ್ಲಾ ಪತ್ರಗಳನ್ನು ಸುಟ್ಟುಹಾಕಿದರು, ಇದರೊಂದಿಗೆ ಒಬ್ಬ ಮನುಷ್ಯ ತನ್ನ ಖಾಸಗಿ ಬದುಕಿನಲ್ಲಿ ಹೇಗಿರಬೇಕೆಂಬ ಚಿತ್ರಣವನ್ನು ನಿರೂಪಿಸಿದರು. ವಾಸ್ತವವಾಗಿ, ಅವರು ಸಾರ್ವಜನಿಕರ ಎದುರಿಗಿರುವುದಕ್ಕಿಂತಲೂ ಅವರ ಕಛೇರಿಯಲ್ಲಿ ಏಕಾಂತವಾಗಿ ಕೆಲಸಮಾಡುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದರು.[46]
ಜೆಫರ್ಸನ್ ಒಬ್ಬ ಪ್ರವೀಣತೆಯ ವಾಸುಶಿಲ್ಪಿಯಾಗಿದ್ದರು, ಅವರು ಬ್ರಿಟನ್ನಿನ ವಿಗ್ (ಟೋರಿಗಳಿಗೆ ಎದುರಾಗಿದ್ದ ರಾಜಕೀಯ ಪಕ್ಷದವರು) ಕುಲೀನರ ಒಳಗೆ ಲೋಕಪ್ರಿಯವಾಗಿದ್ದ ನ್ಯೂ-ಪಲಡಿಯನ್ ಶೈಲಿಯನ್ನು ಯುನೈಟೆಡ್ ಸ್ಟೇಟ್ಸ್ಗೆ ತರುವಲ್ಲಿ ಅತ್ಯಧಿಕವಾದ ಪ್ರತಿಷ್ಠಿತ ಪ್ರಭಾವವುಳ್ಳವರಾಗಿದ್ದರು. ಶೈಲಿಯು ರಿಪಬ್ಲಿಕನ್ ಪೌರ ಸಂಪನ್ನತೆ ಮತ್ತು ರಾಜಕೀಯ ಸ್ವಾತಂತ್ರ್ಯಗಳ ಜ್ಞಾನೋದಯದ ಕಲ್ಪನೆಗಳನ್ನು ಜೊತೆಗೂಡಿತ್ತು. ಜೆಫರ್ಸನ್ ವರ್ಜೀನಿಯಾದ ಚಾರ್ಲೊಟ್ಟೆಸ್ವಿಲ್ಲೆಯ ಹತ್ತಿರ ಅವರ ಮನೆಯಾದ ಮೊಂಟಿಚೆಲ್ಲೋವನ್ನು ವಿನ್ಯಾಸಿಸಿದರು. ಇದರ ಹತ್ತಿರದಲ್ಲೇ ವರ್ಜೀನಿಯಾ ವಿಶ್ವವಿದ್ಯಾಲಯವಿದೆ, ಇದು ಇಲ್ಲಿಯವರೆಗು U.S.ಅಧ್ಯಕ್ಷರಿಂದ ಸ್ಥಾಪನೆಗೊಂಡ ಏಕೈಕ ವಿಶ್ವವಿದ್ಯಾಲಯವಾಗಿದೆ. ಜೆಫರ್ಸನ್ ಮೊದಲ ಕಟ್ಟಡಗಳ ವಾಸ್ತುಕಲೆಯನ್ನು ವಿನ್ಯಾಸಿಸಿದರು ಹಾಗು ಮೂಲಭೂತ ವ್ಯಾಸಾಂಗಕ್ರಮವನ್ನು ಮತ್ತು ವಾಸ್ತವ್ಯದ ಶೈಲಿಯನ್ನು. ಮೊಂಟಿಚೆಲ್ಲೋ ಮತ್ತು ವರ್ಜೀನಿಯಾ ವಿಶ್ವವಿದ್ಯಾಲಯ ಎರಡು ಒಟ್ಟಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೇವಲ ನಾಲ್ಕು ಜನರಿಂದ ನಿರ್ಮಿತಗೊಂಡ ಪ್ರಪಂಚದ ಪಿತ್ರಾರ್ಜಿತ ಸ್ಥಳಗಳಲ್ಲಿ ಒಂದಾಗಿವೆ.
ಜೆಫರ್ಸನ್ ಬೆಡ್ಪೋರ್ಡ್ ದೇಶದಲ್ಲಿನ, ವರ್ಜೀನಿಯಾದ, ಲಿಂಚ್ಬರ್ಗ್ ಹತ್ತಿರ ಲೋಕಪ್ರಸಿದ್ಧಿ ವನವನ್ನು ಸಹ ವಿನ್ಯಾಸಿಸಿದರು, ಇದು ಅವರ ಸಾರ್ವಜನಿಕ ಜೀವನದಿಂದ ಖಾಸಗಿ ಕಡೆಗಿನ ನಡೆಗೆಯನ್ನು ತೋರಿಸುತ್ತದೆ. ಜೆಫರ್ಸನ್ ವರ್ಜೀನಿಯಾ ರಾಜ್ಯದ ರಾಜಧಾನಿಯ ವಿನ್ಯಾಸದಲ್ಲಿಯು ಭಾಗಿಯಾಗಿದ್ದರು, ಇದನ್ನು ಮೈನ್ಸನ್ ಕರೀರ ನಂತರದಲ್ಲಿ, ಪ್ರಾಚೀನ ರೋಮನ್ ದೇಗುಲವನ್ನಾಗಿ, ಪ್ರಾನ್ಸ್ನ ದಕ್ಷಿಣದಿಕ್ಕಿನ ನಿಮ್ಸ್ನಲ್ಲಿ ನಮೂನಿಸಲಾಯಿತು. ಜೆಫರ್ಸನ್'ರ ಕಟ್ಟಡಗಳು ಪೆಡರಲ್ ವಾಸ್ತುಕಲೆಗೆ ಅಮೆರಿಕಾದ ಶೈಲಿ ಉದ್ಭವಿಸುವಿಕೆಯನ್ನು ಉಪಕ್ರಮಿಸಲು ಸಹಾಯಕವಾಗಿವೆ.
ಜೆಫರ್ಸನ್ ಅನೇಕ ಚಿಕ್ಕ ಚಿಕ್ಕ ಕ್ರಿಯಾತ್ಮಕ ವಸ್ತುಗಳ ಸೃಷ್ಟಿ ಮಾಡಿದ್ದರು, ಅವುಗಳಲ್ಲಿ ಕೆಲವು ತಿರುಗುವ ಪುಸ್ತಕದ ಪೀಠ ಮತ್ತು (ಚಾರ್ಲೆಸ್ ವಿಲ್ಸೊನ್ ಪೀಲ್ರ ಜೊತೆಯಲ್ಲಿ) ಪೋಲಿಗ್ರಾಫ್ಗೆ ಮಾಡಿದ ಅನೇಕ ಸುಧಾರಣೆಗಳು, ಇದು ಇವರೇ ಬರೆದ ಮೂಲಪತ್ರದ ಪ್ರತಿಯಾಗಿ ಮಾರ್ಪಟ್ಟಿತು,[47] ಮೊಂಟಿಚೆಲ್ಲೋ ಜೆಫರ್ಸನ್ರವರೇ ಸೃಷ್ಟಿಸಿದ ಸ್ವಯಂಚಾಲಿತ ಬಾಗಿಲುಗಳನ್ನು, ಮೊದಲ ತೂಗಾಡುವ ಕುರ್ಚಿ, ಮತ್ತು ಇತರ ಅನುಕೂಲಕರ ವಸ್ತುಗಳನ್ನು ಒಳಗೊಂಡಿದೆ. ಯಾಂತ್ರಿಕ ರೇಖಾಕೃತಿ ವಸ್ತುಗಳಲ್ಲಿನ ಅವರ ಆಸಕ್ತಿಯು ಪಿಸಿಯೊನೊಟ್ರೇಸ್ (ರೇಖಾಕೃತಿಗಳನ್ನು ಉತ್ಪ್ರೇಕ್ಷಿಸುವ ಅಥವಾ ಮನುಷ್ಯರ ಮುಖಲಕ್ಷಣವನ್ನು ರೇಖಿಸುವ ಉಪಕರಣ)ವನ್ನು ಉಪಯೋಗಿಸುವುದನ್ನು ಒಳಗೊಂಡಿದೆ. ೧೮೦೨ರಲ್ಲಿ, ಚಾರ್ಲೆಸ್ ವಿಲ್ಸೊನ್ ಪೀಲ್ರವರು ಈ ಉಪಕರಣದ ವಾಟರ್ಕಲರ್ (ನೀರನ್ನು ಉಪಯೋಗಿಸಿ ಬಣ್ಣಹಚ್ಚುವ) ಚಿತ್ರ ರೂಪರೇಖೆಯನ್ನು ಥಾಮಸ್ ಜೆಫರ್ಸನ್ಗೆ ಕಳುಹಿಸಿದ್ದರು,[48] ಇದರ ಜೊತೆಯಲ್ಲಿ ತಪಶೀಲುವಾರು ವಿವರೆಣೆಯು ಒಳಗೊಂಡಿತ್ತು. ಈಗ ಈ ಚಿತ್ರ ರೂಪರೇಖೆಯನ್ನು ಕಾಂಗ್ರೆಸ್ಸ್ ಗ್ರಂಥಾಲಯದಲ್ಲಿ ಜೆಫರ್ಸನ್ರ ಕಾಗದಗಳೊಂದಿಗೆ ಇಡಲಾಗಿದೆ. ೧೮೦೪ರಲ್ಲಿ, ಚಾರ್ಲೆಸ್ ಪೆವ್ರೆಟ್ ಡಿ ಸೈಂಟ್-ಮೆಮಿನ್ ಪಿಸಿಯೊನೊಟ್ರೇಸ್ನ್ನು ಉಪಯೋಗಿಸಿ ಜೆಫರ್ಸನ್ ಹೋಲಿಕೆಯ ಅಂಡಾಕೃತಿಯ ಚಿತ್ರರೇಖೆಯನ್ನು ರಚಿಸಿದರು, ಇದು ಅವರ ದಿನಗಳಲ್ಲಿನ ಜೆಫರ್ಸನ್ರ ಉತ್ತಮ ನಮೂನೆಗಳೆಂದು ಗುರುತಿಸಿದವುಗಳಲ್ಲಿ ಒಂದಾಗಿದೆ.
ಜೆಫರ್ಸನ್'ರ ಆಸಕ್ತಿಗಳು ಪ್ರಾಚೀನ ವಸ್ತುಶಾಸ್ತ್ರವನ್ನು, ಶಿಸ್ತು ಹೊಂದಿದ್ದು ಹಾಗು ಇದರ ಶೈಶವಾವಸ್ಥೆಯಲ್ಲಿದೆ. ಭೂಶೋಧನೆಯ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿನ ಅವರ ಪಾತ್ರದ ಮನ್ನಣೆಯಿಂದಾಗಿ ಅವರನ್ನು ಕೆಲವುಸಲ "ಪ್ರಾಚೀನ ವಸ್ತುಶಾಸ್ತ್ರದ ಪಿತೃ" ಎಂದು ಕರೆಯಲಾಗಿತ್ತದೆ. ೧೭೮೪ ರಲ್ಲಿ ಅವರ ವರ್ಜೀನಿಯಾ ಎಸ್ಟೇಟ್ನಲ್ಲಿ ಭಾರತೀಯ ಸಮಾಧಿಕ್ರಿಯೆಯ ದಿಣ್ಣೆಯನ್ನು ಪರಿಶೋಧಿಸುವಾಗ, ಜೆಫರ್ಸನ್ ಸಮಾನ್ಯ ಆಚರೆಣೆಯೆಂತೆ ಏನಾದರು ಪತ್ತೆಯಾಗುವ ವರೆಗು ಸುಮ್ಮನೆ ಆಳಕ್ಕೆ ಅಗಿಯುವುದನ್ನು ತಪ್ಪಿಸಿದರು. ಇದರು ಬದಲಾಗಿ, ದಿಣ್ಣೆಯ ಹೊರಗೆ ಗೂಟವನ್ನು ಕತ್ತರಿಸಿ ಇರಿಸಿದರು, ಇದರಿಂದ ಅವರು ಅದರೊಳಗೆ ನಡೆದುಹೊಗಿ, ಅದರೊಳಗಿನ ಪದರುಗಳನ್ನು ನೋಡಬಹುದಾಗಿದೆ, ಮತ್ತು ಅವುಗಳಿಂದ ತಮ್ಮ ನಿರ್ಧಾರಗಳನ್ನು ಚಿತ್ರಿಸಬಹುದಾಗಿದೆ.
ಥಾಮಸ್ ಜೆಫರ್ಸನ್ ಮೊಂಟಿಚೆಲ್ಲೋದಲ್ಲಿನ ಅವರ ಮೀನಿನ ಕೊಳವನ್ನು ಆಹ್ಲಾದಿಸಿದರು. ಇದು ಸುಮಾರು ಮೂರು ಅಡಿಗಳಷ್ಟು (೧ m) ಆಳವಾಗಿದೆ ಮತ್ತು ಗಾರೆಯ ಸಾಲುಗಳನ್ನು ಒಳಗೊಂಡಿದೆ. ಅವರು ಕೊಳವನ್ನು ಇತ್ತೀಚೆಗೆ ಹಿಡಿಯಲಾಗಿದ್ದ ಮೀನನ್ನು ಇಡಲು ಹಾಗು ಹಾವುಮೀನುಗಳನ್ನು ತಾಜಾವಾಗಿಡಲು ಉಪಯೋಗಿಸುತ್ತಿದ್ದರು. ಇತ್ತೀಚೆಗೆ ಪುನಃಶೇಖರಿಸಿದ ಕೊಳವನ್ನು ಮೊಂಟಿಚೆಲ್ಲೋದ ಪಶ್ಚಿಮ ಬದಿಯಿಂದ ನೋಡಬಹುದು. ೧೭೮೦ರಲ್ಲಿ, ಅವರು ಬೆಂಜಾಮಿನ್ ಪ್ರಾಂಕ್ಲಿನ್’ರ ಅಮೆರಿಕನ್ ಫಿಲೋಸೊಫಿಕಲ್ ಸೊಸೈಟಿಯನ್ನು ಸೇರಿಕೊಂಡರು. ಅವರು ೧೭೯೭ರಿಂದ ೧೮೧೫ರ ವರೆಗು ಸಂಸ್ಥೆಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು.
ಜೆಫರ್ಸನ್ರಿಗೆ ಪಕ್ಷಿಗಳಲ್ಲಿ ಆಸಕ್ತಿಯಿತ್ತು . ವರ್ಜೀನಿಯಾದ ಮೇಲಿನ ಅವರ ಟಿಪ್ಪಣಿಗಳು ಅವರ ಸ್ವಂತ ರಾಜ್ಯದಲ್ಲಿ ಕಂಡ ಪಕ್ಷಿಗಳ ಪಟ್ಟಿಯನ್ನು ಒಳಗೊಂಡಿವೆ, ಅದಾಗ್ಯೂ ಅಲ್ಲಿ "ವರ್ಣಿಸದೇ ಇದ್ದ ಮತ್ತು ವರ್ಗೀಕರಿಸದೇ ಇದ್ದ ಇನ್ನೂ ಅನೇಕವು ಇವೆ ಎಂಬುದರಲ್ಲಿ ಶಂಶಯವೇಯಿಲ್ಲ". ನಿಸರ್ಗವಾದಿಯಾದ ಮಾರ್ಕ್ ಕಟೆಸ್ಬಿರವರಿಂದ ಮಾಡಲ್ಪಟ್ಟ ವರ್ಜೀನಿಯಾದ ಪಕ್ಷಿಗಳ ರೇಖಾಚಿತ್ರಗಳನ್ನು ಸಹ ಅವರು "ಸಾಮಾನ್ಯವಾಗಿ ಅತೀ ಎತ್ತರದಲ್ಲಿರುವವನ್ನು, ಬಣ್ಣಮಾಡಿದ್ದಕ್ಕಿಂತಲು, ಇವು ಆಕಾರದಲ್ಲಿ ಮತ್ತು ನಿಲುವಿನಲ್ಲಿ ಉತ್ತಮವಾಗಿವೆ" ಎಂದು ವ್ಯಾಖ್ಯಾನಿಸಿದರು.
ಜೆಫರ್ಸನ್ರವರು ಅತಿಯಾದ ಸರಾಯಿ ಪ್ರಿಯರು ಮತ್ತು ಸಂಗ್ರಹಕಾರರಾಗಿದ್ದರು, ಮತ್ತು ಪ್ರಖ್ಯಾತ ರುಚಿಗಾರ (ರಸಿಕ) ರಾಗಿದ್ದರು. ಪ್ರಾನ್ಸ್ನಲ್ಲಿ ಅವರು ಇದ್ದ ವರ್ಷಗಳ (೧೭೮೪–೧೭೮೯) ಸಮಯದಲ್ಲಿ, ಪ್ರೆಂಚ್ ಮತ್ತು ಇತರ ಯುರೋಪಿನ ಸರಾಯಿ ಪ್ರಾಂತಗಳಿಗೆ ಸವಿಸ್ತಾರವಾದ ಪ್ರವಾಸಗಳನ್ನು ಕೈಗೊಂಡರು, ಮತ್ತು ಯುನೈಟೆಡ್ ಸ್ಟೇಟ್ಸ್ಗೆ ಕಳುಹಿಸಲು ಸರಾಯಿಯನ್ನು ತಗೆದುಕೊಂಡು ಬಂದರು. ಅವರು ಧಿಟ್ಟ ಅಭಿಪ್ರಾಯವ್ಯಕ್ತಪಡಿಸುವಲ್ಲಿ ಪ್ರಖ್ಯಾತರಾದರು: "ಯುನೈಟೆಡ್ ಸ್ಟೇ ನಾವು ಯುರೋಪಿನಲ್ಲಿ ಮಾಡುವಹಾಗೆ ಸರಾಯಿಯ ಅಧಿಕ ವಿಧಗಳನ್ನು ಮಾಡಬಹುದು, ನಿಷ್ಕೃಷ್ಟವಾಗಿ ಅದೇರೀತಿಯಲ್ಲದೇ ಇರಬಹುದು, ಆದರೆ ಚೆನ್ನಾಗಿರುವಲ್ಲಿ ಶಂಶಯವಿಲ್ಲ. ಹೀಗಿರುವಾಗ ಮೊಂಟಿಚೆಲ್ಲೋದಲ್ಲಿ ವ್ಯಾಪಕ ಸರಾಯಿತೋಟವನ್ನು ನೆಡಲಾಯಿತು, ಇದರ ಮಹತ್ತರ ಭಾಗವು ಯುರೋಪಿನ ದ್ರಾಕ್ಷಾರಸವು ವಿಟಿಸ್ ವಿನಿಪೆರ ಆಗಿದೆ ಮತ್ತು ಅಮೆರಿಕಾ ಅನೇಕ ಸರಾಯಿ ರೋಗಗಳಿಗೆತವರಾಗಿದ್ದರಿಂದ ಅವು ಉಳಿಯಲಿಲ್ಲ.
೧೮೦೧ರಲ್ಲಿ, ಅವರು ಪ್ರಕಟಿಸಿದ ಎ ಮೇನುಯಲ್ ಆಫ್ ಪರ್ಲಿಮೆಂಟರಿ ಪ್ರಾಕ್ಟಿಸ್ Archived 2020-06-26 ವೇಬ್ಯಾಕ್ ಮೆಷಿನ್ ನಲ್ಲಿ. ಈಗಲು ಉಪಯೋಗದಲ್ಲಿದೆ. ೧೮೧೨ರಲ್ಲಿ, ಜೆಫರ್ಸನ್ ಎರಡನೆಯ ಆವೃತ್ತಿಯನ್ನು ಪ್ರಕಟಿಸಿದರು.
ಆಗಸ್ಟ್ ೧೮೧೪ರಲ್ಲಿ ಬ್ರಿಟಿಷರು ವಾಷಿಂಗ್ಟನ್ನ, D.C. ಮತ್ತು ಕಾಂಗ್ರೆಸ್ಸಿನ ಗ್ರಂಥಾಲಯವನ್ನು ಸುಟ್ಟುಹಾಕಿದ ನಂತರ, ಜೆಫರ್ಸನ್ ಪುಸ್ತಕಗಳ ತನ್ನ ಸ್ವಂತ ಸಂಗ್ರಹವನ್ನು ರಾಷ್ಟ್ರಕ್ಕೆ ಒಪ್ಪಿಸುವ ಪ್ರಸ್ತಾಪವನ್ನು ಮಾಡಿದರು. ಜನವರಿ ೧೮೧೫ರಲ್ಲಿ, ಅವರ ೬,೪೮೭ ಪುಸ್ತಕಗಳಿಗೆ $೨೩,೯೫೦ನ್ನು ವಿನಿಯೋಗಿಸುವುದರೊಂದಿಗೆ, ಕಾಂಗ್ರೆಸ್ಸ್ ಅವರ ಈ ಪ್ರಸ್ತಾಪವನ್ನು ಅಂಗೀಕರಿಸಿತು. ಭವ್ಯ ರಾಷ್ಟ್ರೀಯ ಗ್ರಂಥಾಲಯಕ್ಕೆ ಪ್ರತಿಷ್ಟಾಪನೆ ಮಾಡಲಾಗಿತ್ತು. ಇಂದು, ಲೈಬ್ರರಿ ಆಫ್ ಕಾಂಗ್ರೆಸ್ಸ್ನ (ಕಾಂಗ್ರೆಸ್ಸಿನ ಗ್ರಂಥಾಲಯ) ವೆಬ್ಸೈಟ್ಗೆ ಸಂಯುಕ ಶಾಸನಾಧಿಕಾರದ ಮಾಹಿತಿಗಾಗಿ, ಜೆಫರ್ಸನ್ರ ಗೌರವಾರ್ತವಾಗಿ ಥಾಮಸ್ ಎಂದು ಹೆಸರಿಸಲಾಯಿತು.[49] ೨೦೦೭ರಲ್ಲಿ, ಜೆಫರ್ಸನ್'ರ ಕ್ವರ್'ಯನ್ನ ಸಂಪುಟ-ಎರಡು ೧೭೬೪ರ ಆವೃತ್ತಿಯನ್ನು ರೆಪ್. ಕೈತ್ ಎಲ್ಲಿಸನ್ರವರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿಗಳ ಮನೆ)ಯಲ್ಲಿ ಪ್ರಮಾಣ ಮಾಡಲು ಉಪಯೋಗಿಸಲಾಯಿತು.[50]
ಜೆಫರ್ಸನ್ ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರಜಾಧಿಪತ್ಯವಾದಿತ್ವವನ್ನು ಬೆಳೆಸುವಲ್ಲಿ ನಾಯಕರಾಗಿದ್ದರು. ಬ್ರಿಟಿಷ್ ನವಾಬ ಪದ್ಧತಿಯು ಸ್ವಾಭಾವಿಕವಾಗಿ ಬ್ರಷ್ಟಾಚಾರದಿಂದ ಕೂಡಿದೆ ಮತ್ತು ನಗರದ ಸಂಪನ್ನತೆಯ ಕಡೆಗೆ ಅಮೆರಿಕ ಜನರಿಗೆ ಇದ್ದ ಶ್ರದ್ಧಾಭಕ್ತಿಗೆ ಸ್ವಾತಂತ್ರ್ಯದ ಅವಶ್ಯಕತೆಯಿದೆ ಎಂದು ಅವರು ಪಟ್ಟುಹಿಡಿದರು. ೧೭೯೦ರ ಕಾಲದಲ್ಲಿ ಅವರು ಹಮಿಲ್ಟನ್ ಮತ್ತು ಆಯ್ಡಮ್ಸ್ರವರು ಪ್ರಜಾಧಿಪತ್ಯವಾದಿತ್ವವನ್ನು ದಿಟ್ಟಿಸುವ ಚಕ್ರಾದಿಪತ್ಯ ಪದ್ಧತಿಯಂತ ಬ್ರಿಟಿಷ್ ಆಡಳಿತವನ್ನು ಹೇರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಪದೇ ಪದೇ ಸೂಚಿಸಿದರು. ಬ್ರಿಟಿಷ್ ಸಿಪಾಯಿಗಳನ್ನು ಮತ್ತು ಕೆನಡದ ವಿಚಾರಶಾಸ್ತ್ರದ ಬೆದರಿಕೆಗಳನ್ನು ತೊಲಗಿಸುತ್ತದೆಂಬ ಆಶಾಭಾವನೆಯಿಂದ 1812ರ ಯುದ್ಧವನ್ನು ಅವರು ಬೆಂಬಲಿಸಿದರು.
ಅಮೆರಿಕ ಕೃಷಿಮೂಲ ರಾಷ್ಟ್ರವಾಗಿದ್ದು, ಅಲ್ಲಿನ ಒಕ್ಕಲಿಗ ರೈತರು ತಮ್ಮ ಕೆಲಸಗಳನ್ನು ತಾವೆ ನಿಭಾಯಿಸುವಷ್ಟು ಪ್ರಬುದ್ಧರಾಗಿರಬೇಕೆಂಬುದು, ಅಮೆರಿಕಾ ಬಗೆಗಿನ ಜೆಫರ್ಸನ್'ರ ಧ್ಯೇಯವಾಗಿತ್ತು. ಅಲೆಕ್ಸಾಂಡರ್ ಹ್ಯಾಮಿಲ್ಟನ್ ದೃಷ್ಟಿಯಲ್ಲಿ ವಾಣಿಜ್ಯ ಮತ್ತು ತಯಾರಿಕೆಗಳ ದೇಶ ಈತನ ರೈತಾಪಿ ದೃಷ್ಟಿಗೆ ವಿರುದ್ಧವಾಗಿತ್ತು. ಅದ್ವಿತೀಯತೆ ಮತ್ತು ಅಮೆರಿಕದ ಸಾಮರ್ಥ್ಯದಲ್ಲಿನ ಜೆಫರ್ಸನ್'ರ ಬಲವಾದ ನಂಬಿಕೆಯು ಅವರನ್ನು ಅಮೆರಿಕದ ವಿಷೇಷತೆಯ ಪಿತಾಮಹನನ್ನಾಗಿ ಮಾಡಿತು.. ಮುಖ್ಯವಾಗಿ, ಕಡಿಮೆಜನಸಂಖ್ಯೆಯನ್ನು ಹೊಂದಿದ್ದ ಅಮೆರಿಕದಲ್ಲಿ ಯುರೋಪಿನಲ್ಲಾದ ಕೈಗಾರಿಕಾ ಅಭಿವೃದ್ಧಿ ಹಿನ್ನಡೆಯು ಅಮೆರಿಕದಲ್ಲಿ ಮರುಕಳಿಸದೆಂಬ ವಿಶ್ವಾಸವನ್ನು ಹೊಂದಿದ್ದರು.
ಜೆಫರ್ಸನ್'ರ ಪ್ರಜಾಧಿಪತ್ಯವಾದಿ ರಾಜಕೀಯ ತತ್ವಗಳು ೧೮ನೆಯ ಶತಮಾನದ ಬ್ರಿಟಿಷ್ ವಿರೋಧ ಲೇಖಕರ ಕಂಟ್ರಿ ಪಕ್ಷದಿಂದ ಅಧಿಕವಾಗಿ ಪ್ರಾಬಲ್ಯ ಹೊಂದಿದ್ದವು. ಅವರು ಜಾನ್ ಲೊಕೆರವರಿಂದ ಪ್ರಾಬಲ್ಯಹೊಂದಿದ್ದರು (ಮುಖ್ಯವಾಗಿ ವರ್ಗಾಯಿಸಲು ಸಕ್ಯವಿಲ್ಲದ ಹಕ್ಕುಗಳ ತತ್ವಗಳಿಗೆ ಸಂಬಂಧವಾಗಿ). ಚರಿತ್ರೆಗಾರರು ಜೆಫರ್ಸನ್ರವರು ತಮ್ಮ ಪ್ರೆಂಚ್ ಸಹವರ್ತಿಯಾದ ಜೀನ್-ಜಾಕ್ವೆಸ್ ರೂಸೆವ್ರವರಿಂದ ಪ್ರಭಾವಿತರಾಗಿದ್ದರೆಂಬುದರ ಬಗ್ಗೆ ಕೆಲವು ಮಾಹಿತಿಗಳನ್ನು ಕಂಡುಹಿಡಿದಿದ್ದರು.[51]
ಯುನೈಟೆಡ್ ಸ್ಟೇಟ್ಸ್ನ ಬ್ಯಾಂಕುಗಳ ವಿರುದ್ಧ ಅವರು ತೀವ್ರವಾದ ಪ್ರತಿಭಟನೆಯನ್ನು ಹೊಂದಿದ್ದರು: "ನಿಮ್ಮೊಂದಿಗೆ ನಾನು ಬಹಳ ವಿಶ್ವಾಸದಿಂದ ನಂಬಿದ ಪ್ರಕಾರ ಬ್ಯಾಂಕುಗಳ ಸ್ಥಾಪನೆಯು ನಿಂತ ಸೈನಿಕರಿಗಿಂತಲು ಹೆಚ್ಚು ಅಪಾಯಕಾರಿ; ಮತ್ತು ಮುಂದಿನ ಪೀಳಿಗೆಗೋಸ್ಕರ ಬಂಡವಾಳದ ಹೆಸರಲ್ಲಿ ಹಣ ಖರ್ಚು ಮಾಡುವ ನೀತಿಯು, ದೊಡ್ಡ ಪ್ರಮಾಣದಲ್ಲಿ ಮೊಸಗಾರಿಕೆಗೆ ಅವಕಾಶನೀಡಿದ ಹಾಗೆ".[52] ಹಾಗಿದ್ದರೂ ಮಾಡಿಸೊನ್ ಮತ್ತು ಕಾಂಗ್ರೆಸ್ಸ್, ೧೮೧೨ರ ಯುದ್ಧದಿಂದಾದ ಆರ್ಥಿಕ ಗೊಂದಲಗಳನ್ನು ನೋಡಿಯು, ಅವರ ಸಲಹೆಯನ್ನು ಗಣನೆಗೆ ತೆದುಕೊಳ್ಳದೆ ೧೮೧೬ರಲ್ಲಿ ಯುನೈಟೆಡ್ ಸ್ಟೇಟ್ಸ್ನ ಎರಡನೆಯ ಬ್ಯಾಂಕನ್ನು ಪ್ರಾರಂಭಿಸಿದರು.
ಜೆಫರ್ಸನ್ ತಮ್ಮ ಸಹೋದ್ಯೋಗಿಗಳಿಗೆ ಹಲವು ಪತ್ರಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕವಾಗಿ ಬರೆದಿದ್ದರು. ಎಲ್ಲದರಲ್ಲೂ ಅತ್ಯಂತ ನಿರ್ಧಾರಾತ್ಮಕವಾದುದು ಮೇ ೨೮, ೧೮೧೬ರಂದು, ಜಾನ್ ಟೈಲರ್ಗೆ ಬರೆದ ಪತ್ರ.
The system of banking we have both equally and ever reprobated . I contemplate it as a blot left in all our constitutions, which, if not covered, will end in their destruction, which is already hit by the gamblers in corruption, and is sweeping away in its progress the fortunes and morals of our citizens. [53]
— Thomas Jefferson, 1816
ಪ್ರತಿಯೊಬ್ಬ ವ್ಯಕ್ತಿಯು "ವರ್ಗಾಯಿಸಲಾಗದಂತಹ ನಿರ್ದಿಷ್ಟ ಹಕ್ಕುಗಳನ್ನು" ಹೊದಿದ್ದಾನೆಂದು ಜೆಪರ್ಸನ್ ನಂಬಿದ್ದರು. ಅದು, ಸರಕಾರ ಇರಲಿ ಇಲ್ಲದಿರಲಿ ಪ್ರತಿಯೊಬ್ಬ ವ್ಯಕ್ತಿಯು ಈ ಹಕ್ಕನ್ನು ಹೊಂದಿರುತ್ತಾನೆ; ಮನುಷ್ಯನಿಂದ ಇವನ್ನು ರಚಿಸಲು, ತೆಗೆದುಕೊಳ್ಳಲು ಅಥವಾ ಬಿಟ್ಟುಬಿಡಲು ಸಾಧ್ಯವಿಲ್ಲ. ಇದನ್ನು ವ್ಯಾಖ್ಯಾನಿಸುವುದರಿಂದಲೆ ಜೆಫರ್ಸನ್ ಅತ್ಯಂತ ಪ್ರಸಿದ್ದರಾದಂತಹ "ಸ್ವಾತಂತ್ರ್ಯದ" ಹಕ್ಕಿದು. ಅವರ ವ್ಯಾಖ್ಯಾನದ ಪ್ರಕಾರ, "ಸರಿಯಾದ ಸ್ವಾತಂತ್ರ್ಯವು, ನಮ್ಮ ಮನೋಬಲದ ಪ್ರಕಾರ ಇತರರಿಗೂ ಇದ್ದ ಸಮನಾದ ಹಕ್ಕುಗಳಿಂದ ನಮ್ಮ ಸುತ್ತ ಹರಡಿದ ಮಿತಿಯಲ್ಲಿನ ತಡೆಯಿಲ್ಲದ ಚಟುವಟಿಕೆ. ನಾನು ’ಕಾನೂನಿನ ಚೌಕಟ್ಟಿನೊಳಗೆ ಏನನ್ನು ಸೇರಿಸಲಾರೆ’, ಏಕೆಂದರೆ ಕಾನೂನು ಆಡಳಿತಗಾರರ ಇಚ್ಚೆಯೆಂತೆ ಆಗಾಗ್ಗೆ ಬದಲಾಗುತ್ತದೆ, ಮತ್ತು ಯಾವಾಗಲು ಆ ರೀತಿ ಆಗುವುದರಿಂದ ಯಾವಾಗ ಇದು ಪ್ರತಿಯೊಬ್ಬ ವ್ಯಕ್ತಿಯ ವೈಯುಕ್ತಿಕ ಹಕ್ಕುಗಳನ್ನು ಉಲ್ಲಘಿಸುತ್ತದೆ ಎಂದು ಹೇಳಲು ಸಾದ್ಯವಿಲ್ಲ."[54] ಆದ್ದರಿಂದ, ಜೆಫರ್ಸನ್ರ ಪ್ರಕಾರ, ಸ್ವಾತಂತ್ರ್ಯದ ಹಕ್ಕನ್ನು ರಚಿಸಲು ಸರಕಾರದಿಂದ ಸಾಧ್ಯವಾಗದಿದ್ದರು, ಅದನ್ನು ಬೇಕಾದಾಗ ಉಲ್ಲಂಘಿಸಲು ದಾದ್ಯವಾಗುತ್ತದೆ. ಪ್ರತಿಯೊಬ್ಬರ ವೈಯುಕ್ತಿಕ ಹಕ್ಕಿನ ಸ್ವಾತಂತ್ರ್ಯವು ಕಾನೂನಿನಲ್ಲಿ ಹೇಳುವ ರೀತಿಯಂತಹದು ಅಲ್ಲ, ಆದರೆ ಇದು ಇತರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದನ್ನು ತಡೆಯುವ ಒಂದು ಸರಳ ವಿಷಯವಷ್ಟೆ. ಯಾವ ಸರಕಾರ ಸಮಾಜದಲ್ಲಿ ಇತರರ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳಲು ನೋಡುವಂತವರನ್ನು ತಡೆಹೊಡ್ಡುವುದಷ್ಟೇ ಅಲ್ಲದೆ, ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಕಡೆಮಾಡುವಿಕೆಯನ್ನು ಹತೋಟಿಯಲ್ಲಿಡುತ್ತದೊ ಅದೇ ಸರಿಯಾದ ಸರಕಾರವೆಂದು ಜೆಫರ್ಸನ್ ಅಭಿಪ್ರಾಯಪಟ್ಟರು.
ಮೊದಲು ಜನಿಸಿದ ಮಗ ಎಲ್ಲಾ ಜಮೀನನ್ನು ಪಡೆದೊಕೊಳ್ಳುವ ನಿಯಮವಾದ, ಜೇಷ್ಟಪುತ್ರನಹಕ್ಕನ್ನು ವರ್ಜೀನಿಯಾದಿಂದ ನಿರ್ಮೂಲನೆಗೊಳಿಸುವುದರಲ್ಲಿನ ಅವರ ವಿಜಯಶೀಲ ಪ್ರಯತ್ನಗಳಿಂದ, ಸಮಾನತೆಗೆ ಜೆಪರ್ಸನ್ರವರಿಗಿದ್ದ ಕಟ್ಟುಪಾಡನ್ನು ವ್ಯಕ್ತಪಡಿಸಿದ್ದರು.[55]
ಪ್ರತಿಯೊಬ್ಬರು ನೀತಿನಿಯಮಗಳ ಸ್ವಾಭಾವಿಕ ತಿಳುವಳಿಕೆಯನ್ನು ಹೊಂದಿರುತ್ತಾರೆ, ಇದು ಇತರರೊಂದಿಗೆ ವ್ಯವಹರಿಸುವಾಗ ತಮ್ಮ ತಪ್ಪುಗಳಿಂದ ಸರಿಯಾದ ದಾರಿಗೆ ತರುತ್ತದೆ- ಅಂದರೆ ಅವರು ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಲು ಆಯ್ಕೆಮಾಡಿಕೊಂಡಿದ್ದಾರೊ ಇಲ್ಲವೊ, ಅವರು ಇತರರ ಸ್ವಾಭಾವಿಕ ಹಕ್ಕುಗಳನ್ನು ತಿಳಿಯುವ ಸಹಜಗುಣವನ್ನು ಹೊಂದಿರುತ್ತಾರೆಂದು ಜೆಫರ್ಸನ್ ನಂಬಿದ್ದರು. ನೀತಿಪ್ರಜ್ಞೆಯು ಸರಿಯಾಗಿ ವಿಶ್ವಸನೀಯವಾಗಿದ್ದರೆ, ಸಮಂಜಸ ರೀತಿಯಲ್ಲಿ ಚಿಕ್ಕದಾದ ಅರಾಜಕತೆಯ ಸಮಾಜವು ಸರಿಯಾದ ರೀತಿಯಲ್ಲಿ ನಡೆಯುತ್ತದೆ ಎಂದು ಸಹ ಅವರು ನಂಬಿದ್ದರು. ಅನೇಕ ಸಂದರ್ಭಗಳಲ್ಲಿ, ಅವರು ಸ್ಥಳೀಯ ಅಮೆರಿಕನ್ನರ ಆದಿವಾಸಿ ಸಮುದಾಯದ ಜೀವನದ ರೀತಿಯಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು: ಜೆಫರ್ಸನ್ ಕೆಲವುಸಲ ಸೈದ್ಧಾಂತಿಕ ದಂಗೆಕೋರನಂತೆ ಗೋಚರಿಸುತ್ತಾರೆ.[56]
ಕೊಲೊನೆಲ್ ಕರಿಂಗ್ಟೊನ್ಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದೇನೆಂದರೆ: "ಸರಕಾರ ವಿಲ್ಲದೆ ಜೀವಿಸುವ ಸಮುದಾಯಗಳಲ್ಲಿನ ಜನರು (ಭಾರತೀಯರ ಹಾಗೆ), ಯುರೋಪಿನ ಸರಕಾರದ ಆಡಳಿತದಡಿಯಲ್ಲಿ ಜೀವಿಸುವವರಿಗಿಂತಲು, ಅವರ ಸಾಮಾನ್ಯ ಸಮುದಾಯದಲ್ಲಿ ಅಮಿತವಾದ ಸಂತೋಷದಿಂದ ಜೀವಿಸುತ್ತಾರೆಂಬುದನ್ನು ಮನದಟ್ಟುಮಾಡಿಕೊಂಡೆ" ಎಂದರು. ಏನೇಯಾಗಲಿ, "ಹೆಚ್ಚಿನ ಜನಸಂಖ್ಯೆಯುಳ್ಳ ದೇಶದಲ್ಲಿ, ಅನಾಯಕತ್ವವು ಅಸ್ಥಿರವಾಗಿರುತ್ತದೆಂಬುದನ್ನು" ಜೆಫರ್ಸನ್ ನಂಬಿದ್ದರು.[57] ಆದ್ದರಿಂದ, ಅವರು "ರಾಜ್ಯಭಾರದ ಅನುಮತಿಯಿಂದ ಇರುವಂತೆ" ಅಮೆರಿಕಾವನ್ನು ವಿಸ್ತಾರಿಸಿದ್ದಕ್ಕಾಗಿ, ಸರಕಾರವನ್ನು ಸಮರ್ಥಿಸಿದರು.
ಅವರ ಸ್ವಾತಂತ್ರ್ಯದ ಘೋಷಣೆಯ ಮೂಲ ಕರಡುಪತ್ರದ ಆತರಿಣಿಕೆಯಲ್ಲಿ, ಜೆಫರ್ಸನ್ ಬರೆದದ್ದು:
ನಾವು ಹೊಂದಿದ್ದ ಈ ಸತ್ಯಗಳು ಪವಿತ್ರವಾಗಿ & ಅಪ್ರಶ್ನಿತವಾಗಿರಬೇಕು; ಅದು ಎಲ್ಲಾ ಮನುಷ್ಯರು ಸಮಾನ & ಸ್ವತಂತ್ರರು, ಆ ಸಮಾನತೆಯಿಂದ ಅವರು ಸ್ವಾಭಾವಿಕವಾದ ವರ್ಗಾಯಿಸಲು ಸಾದ್ಯವಿಲ್ಲದ ಹಕ್ಕುಗಳನ್ನು ಹೊಂದುತ್ತಾರೆ, ಅವುಗಳಲ್ಲಿ ಜೀವನದ ಸಂರಕ್ಷಣೆ, & ಸ್ವಾತಂತ್ರ್ಯ, & ಸಂತೋಷದ ಪ್ರಯತ್ನಗಳು ಒಳಗೊಂಡಿವೆ; ಇವುಗಳನ್ನು ಉಳಿಸಿಕೊಳ್ಳಲು, ಜನರ ನಡುವೆ ಸರಕಾರಗಳನ್ನು ಸ್ಥಾಪಿಸಿ, ಅವರ ಅಧಿಕಾರವನ್ನು ರಾಜ್ಯಭಾರದ ಒಪ್ಪಿಗೆಯಿಂದ ಪಡೆಯಲಾಗುತ್ತದೆ; ಯಾವುದೇ ಸಮಯದಲ್ಲಿ ಯಾವುದೇ ಸರಕಾರವು ಈ ಹಕ್ಕುಗಳನ್ನು ನಾಶಮಡಿದ ಸಂದರ್ಭದಲ್ಲಿ, ಜನರು ಸರಕಾರವನ್ನು ಬದಲಿಸುವ ಅಥವಾ ವಿಸರ್ಜಿಸುವ, ಮತ್ತು ಹೊಸಾ ಸರಕಾರವನ್ನು ಸ್ಥಾಪಿಸುವ ಹಕ್ಕನ್ನು ಪಡೆದಿರುತ್ತಾರೆ, ತಮ್ಮ ಸುರಕ್ಷತೆ ಮತ್ತು ನೆಮ್ಮದಿಯನ್ನು ಗುರಿಯಾಗಿಟ್ಟುಕೊಂಡು ಸರಕಾರದ ಆಡಳಿತ ನೀತಿಗಳನ್ನು & ಅಧಿಕಾರದ ಪರಿಮಿತಿಯನ್ನು ನಿರ್ದೇಶಿಸುತ್ತಾರೆ.[58]
ಮುಂದಿನ ಪೀಳಿಗೆಯ ಕಾರ್ಯಗಳಿಂದ ಪ್ರತಿಯೊಬ್ಬರು ನೈತಿಕವಾಗಿ ಬದ್ಧರಾಗಿರುವುದಿಲ್ಲವೆಂದು ಅವರು ನಂಬಿದ್ದು "ರಾಜ್ಯಭಾರದ ಸಮ್ಮತಿಗೆ" ಜೆಫರ್ಸನ್'ರ ನಿವೇದನೆಯು ಅತ್ಯಂತ ಕೂಲಂಕುಷವಾಗಿತ್ತು. ಇದು ಋಣಗಳನ್ನು ಹಾಗು ಕಾನೂನನ್ನು ಒಳಗೊಂಡಿತ್ತು. "ಯಾವುದೇ ಸಮಾಜವು ಶಾಶ್ವತವಾದ ಸಂವಿಧಾವನ್ನಾಗಲಿ ಅಥವಾ ಶಾಶ್ವತವಾದ ಕಾನೂನನ್ನಾಗಲಿ ಮಾಡಲು ಸಾಧ್ಯವಿಲ್ಲ. ಭೂಲೋಕವು ಯಾವಾಗಲು ಪ್ರಸ್ತುತ ಜೀವಿಸುವ ಪೀಳಿಗೆಗೆ ಸೇರುತ್ತದೆಂದು" ಅವರು ಹೇಳಿದ್ದರು. ಅವರ ನಂಬಿಕೆಯಂತೆ ಕಾನೂನು ಆಂದೋಲನದ ಸರಿಯಾದ ಕಾಲಚಕ್ರಹೊಂದುವಿಕೆಯನ್ನು ಸಹ ವಿಚಾರಮಾಡಿದರು: "ಪ್ರತಿಹತ್ತೊಂಬತ್ತು ವರ್ಷಗಳ ಅವಧಿಯು ಮುಗಿಯುವ ವೇಳೆಗೆ ಅಂದಿನ ಸಂವಿಧಾನವು , ಮತ್ತು ಪ್ರತಿಯೊಂದು ಕಾನೂನು, ಸ್ವಾಭಾವಿಕವಾಗಿ ಕೊನೆಗೊಳ್ಳುತ್ತವೆ. ಒಂದು ವೇಳೆ ಇದು ಬಹಳಷ್ಟು ಕಾಲ ಉಳಿಯಬೇಕೆಂದರೆ, ಇದು ಒತ್ತಾಯದ ಕಾರ್ಯವಾಗಿರುತ್ತದೆ ಹೊರತು, ಹಕ್ಕಲ್ಲ". ಅವರು ನಂಬಿದ್ಧ "ಮೆಚುರಿಟಿ" (ಪರಿಪಕ್ವತೆ)-ಪ್ರತಿಯೊಬ್ಬರು ವೈಯುಕ್ತಿಕ ವಿವೇಚನಾಶಕ್ತಿ ಹೊಂದಲು ಸಮರ್ಥರಾಗಿರುವ ಅವಧಿಯ ಪರಿಗಣನೆಯಿಂದ, ಅವರ ೧೯ನೆಯ ವಯಸ್ಸಿನಲ್ಲಿ ಜೀವನ ಕಾಲಾವಧಿಯ ನಿರೀಕ್ಷಣೆಗಳನ್ನು ಹೊಂದಿದ್ದ ವಿಚಾರಗಳಿಂದ ಹೊರಟರು.[59] ರಾಷ್ಟ್ರೀಯ ಋಣವನ್ನು ಕಡ್ಡಾಯವಾಗಿ ತೆಗೆದುಹಾಕಬೇಕೆಂದು ಸಹ ಅವರು ಪ್ರತಿಪಾದಿಸಿದರು. ಇಂದಿನ ಪ್ರತಿಯೊಬ್ಬ ಪ್ರಜೆಯು ತಮ್ಮ ಹಿಂದಿನ ಪೀಳಿಗೆಯು ಮಾಡಿದಂತಹ ಸಾಲವನ್ನು ಮರುಪಾವತಿಸುವ ನೈತಿಕ ಧರ್ಮ ಹೊಂದಿರುತ್ತಾನೆಂದು ಅವರು ನಂಬಿರಲಿಲ್ಲ. ಆ ರೀತಿಯ ಸಾಲಗಳನ್ನು ಮರುಪಾವತಿಸುವುದು " ಉದಾರತೆಯ ಪ್ರಶ್ನೆಯಾಗಿರುತ್ತದೆ ಹೊರತು ಹಕ್ಕು ಆಗಿರುವುದಿಲ್ಲ" ಎಂದು ಅವರು ಹೇಳಿದ್ದರು.
ರಾಜ್ಯಗಳ ಹಕ್ಕುಗ ಬಗೆಗಿನ ಜೆಫರ್ಸನ್'ರ ಅತ್ಯಂತ ದೃಢವಾದ ಪ್ರತಿವಾದವು, ಮುಖ್ಯವಾಗಿ ಕೆಂಚಕೀ ಮತ್ತು ವರ್ಜೀನಿಯಾದ ೧೭೯೮ರ ಸಂಕಲ್ಪಗಳಲ್ಲಿನ, ಸಂಘಟಿತ ಪಾರುಪತ್ಯಗಳ ವಿಸ್ತಾರದ ಬಗೆಗಿನ ವಿರೋಧದಲ್ಲಿ ದ್ವನಿಗೂಡಿಸುವಂತಾಯಿತು. ಏನೇಯಾಗಲಿ, ಅವರ ಕೆಲವು ವಿದೇಶಿ ನೀತಿಗಳು ಸರಕಾರವನ್ನು ಬಲಪಡಿಸಿದವು. ಅತ್ಯಂತ ಮುಖ್ಯವಾದುದೆಂದರೆ, ೧೮೦೩ರಲ್ಲಿ ಲೂಯಿಜಿಯಾನವನ್ನು ಖರೀದಿಸುವಾಗ ವಿದೇಶಿ ಪ್ರಾಂತವನ್ನು ಮತ್ತು ಅಲ್ಲಿನ ಎಲ್ಲಾ ಪ್ರೆಂಚ್ ಮತ್ತು ಭಾರತೀಯ ನಿವಾಸಿಗರನ್ನು ಸೇರಿಸಿಕೊಳ್ಳಲು ಅವರು ಉಪಯೋಗಿಸಿದ ವಿವಕ್ಷಿತ ಸಾಮರ್ಥ್ಯ. ೧೮೧೦ರ ಜನಗಣತಿಯ ಪ್ರಕಾರ ಜನಸಂಖ್ಯೆಯು ೯೭,೦೦೦ರಷ್ಟಿರಬಹುದೆಂದು ಅಂದಾಜಿಸಲಾಗಿತ್ತು.[60] ವಿದೇಶಿ ಕಾಯಿದೆಯಾಗಿ ಎಂಬಾರ್ಗೊ ಯಾಕ್ಟ್ ಆಫ್ 1807 ವಿಫಲವಾದಾಗ, ಅದರಬಗ್ಗೆ ಇವರ ಪ್ರವರ್ತನೆಯು, ಸಂಯುಕ್ತ ಸರಕಾರವು ವ್ಯಾಪಾರದ ವ್ಯವಹಾರಗಳನ್ನು ಹತೋಟಿಯಲ್ಲಿಡಲು ಸ್ಥಳಿಯ ಸೇನೆಯ ನಡುವೆ ಬರಬಹುದು, ಆಗ್ ಇದು ಯುದ್ಧಕ್ಕೆ ದಾರಿಮಾಡಬಹುದು ಎಂಬುದನ್ನು ಸ್ಪಷ್ಟಪಡಿಸಿತು.
ಜೆಫರ್ಸನ್ ಅವರು ಓದಿದಂತಹ ವಿವಿಧ ಪುಸ್ತಕಗಳಿಂದ ಅನೇಕ ಪಂಡಿತರ ಅನುಕರಣವನ್ನು ತನ್ನ ಪುಸ್ತಕವಾದ "ಲೀಗಲ್ ಕಾಮನ್ಪ್ಲೇಸ್ ಬುಕ್"ನಲ್ಲಿ ಹೊಂದಿದ್ದರು.[61] ಗನ್ ಕಂಟ್ರೋಲ್ನ್ನು ಪ್ರತಿಪಾತಿಸುವಂತೆ ಅವರು ಬರೆದ ಒಂದು ವಾಕ್ಯವೃಂದವನ್ನು ಸಿಸರೆ ಬೆಕರಿಯ'ರ ಎಸ್ಸೆ ಆನ್ ಕ್ರೈಮ್ಸ್ ಆಂಡ್ ಫನಿಷ್ಮೆಂಟ್ ದಿಂದ ನಕಲು ಮಾಡಲಾಗಿತ್ತು. ಇಟಾಲಿನ ದಲ್ಲಿ ಬರೆದ ವಾಕ್ಯವೃಂದವು, ಬೆಕಾರಿಯ ಕೆಲವು ಕಾನೂನುಗಳನ್ನು ಒತ್ತಿಹೇಳಲು ಉಪಯೋಗಿಸಿದ "ಪಾಲ್ಸ್ ಐಡಿಯ ಆಫ್ ಯುಟಿಲಿಟಿ (ಉಪಯುಕ್ತತೆಯ ತಪ್ಪು ಕಲ್ಪನೆ)" (ಪಾಲ್ಸ್ ಐಡೀ ದಿ ಯುಟಿಲಿಟ)ಯನ್ನು ಚರ್ಚಿಸುತ್ತದೆ. ಇದನ್ನು ಭಾಗತಃ, ಈ ಕೆಳಗಿನಂತೆ ಭಾಷಾಂತರಿಸಬಹುದಾಗಿದೆ:
ಉಪಯುಕ್ತತೆಯ ತಪ್ಪು ಕಲ್ಪನೆಗಳೇ, ತಪ್ಪುಗಳ ಮತ್ತು ಅನ್ಯಾಯದ ಪ್ರಮುಖ ಮೂಲಗಳು. ಉದಾಹರಣೆಗೆ: ಉಪಯುಕ್ತತೆಯ ತಪ್ಪು ಕಲ್ಪನೆಗಳನ್ನು ಹೊಂದಿದ ಶಾಸನಕಾರರು...ತಮ್ಮನ್ನು ಬೆಂಕಿಯಿಂದ ಸುಡಬಹುದೆಂಬ ಭಯದಿಂದ ಬೆಂಕಿಯನ್ನು ಉಪಯೋಗಿಸುವ ಹಕ್ಕನ್ನು, ಮತ್ತು ನೀರಿನಲ್ಲಿ ತಮ್ಮನ್ನು ಮುಳಿಸಿದುವರೆಂಬ ಭಯದಿಂದ ನೀರನ್ನು ಉಪಯೋಗಿಸುವ ಹಕ್ಕನ್ನು ಜನರಿಂದ ಕಸಿದುಕೊಳ್ಳುತ್ತಾರೆ; ಮತ್ತು ಯಾರು ಅದನ್ನು ತಡೆಯುವ ದಾರಿಯಿಲ್ಲವೆಂದು ತಿಳಿಯುತ್ತಾರೋ ಅಂತವರು ಅದನ್ನು ನಾಶಮಾಡುತ್ತಾರೆ.
ಈ ಸ್ವಭಾವದ ಕಾನೂನುಗಳು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ನಿಷೇಧಿಸುತ್ತವೆ, ಶಸ್ತ್ರಾಸ್ತ್ರಗಳನ್ನು ಹಸ್ತಾಂತರ ಮಾಡದವರನ್ನು ನಿರಾಯುಧವರನ್ನಾಗಿ ಮಾಡಿ ಕಾನೂನಿನ ಮೂಲಕ ಅಪರಾಧಗಳನ್ನು ತಡೆಯುವುದು.... ಇದು ಖಂಡಿತವಾಗಿಯು ಪರಿಸ್ಥಿಯನ್ನು ಹೆಚ್ಚು ಆಕ್ರಮಣಕಾರಿಯಾಗಿ ಮಾಡುತ್ತದೆ, ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದವರಿಗಿಂತ, ಇಲ್ಲದೆ ಇದ್ದವರ ಮೇಲೆ ಸುಲಭವಾಗಿ ಹಲ್ಲೆ ಮಾದಬಹುದಾಗಿದೆ, ಆದ್ದರಿಂದ ಇದು ನಿಜವಾಗಿಯು ಕೊಲೆಮಾಡುವಿಕೆಯನ್ನು ತಡೆಯುವ ಬದಲಾಗಿ ಅದನ್ನು ಪ್ರೋತ್ಸಾಹಿಸುತ್ತದೆ.[62]
ಜೆಫರ್ಸನ್'ರ ಸಂಖ್ಯಾಲೇಖನವು ಕೇವಲ, "ಪಾಲ್ಸ್ ಐಡೀ ದಿ ಯುಟಿಲಿಟ," ಆಗಿತ್ತು[62] ಬೆಕಾರಿಯ ಉಪಯೋಗಿಸಿದ ಉದಾಹರಣೆಗಳಿಗೆ ಜೆಫರ್ಸನ್ ಒಪ್ಪಿಗೆ ನೀಡಿದ್ದಾರೆಯೆ ಇಲ್ಲವೆ, ಅಥವಾ ಸಾಮಾನ್ಯ ಕಾರಣಕ್ಕಾಗಿ, ಅಥವಾ ಇನ್ನಾವುದೋ ಬೇರೆ ಕಾರಣಕಾಗಿ ಈ ವಾಕ್ಯವೃಂದವನ್ನು ಅನುಕರಣೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ.
೧೮೧೬ ಜೆಫರ್ಸನ್ ಅವರು ಜಾರ್ಜ್ ಲೋಗನ್ ಅವರಿಗೆ ಬರೆಯುತ್ತಾರೆ,
ಈ ಸಂಬಂಧ ವಿಶ್ವದಲ್ಲಿಯೇ ಗಮನಾರ್ಹವಾದಂತಹ ಅದ್ಭುತವನ್ನು ಇಂಗ್ಲೆಂಡ್ ಸರ್ಕಾರ ಪ್ರದರ್ಶಿಸಿತು ಸರ್ಕಾರ ಮತ್ತು ನಾಗರೀಕರ ಪ್ರಾಮಾಣಿಕತೆಯ ಮಧ್ಯೆ ನಿಯಮಗಳ ಯಾ ಸಂಪ್ರದಾಯಗಳ ಉಲ್ಲಂಘನೆಯಲ್ಲಿ ವಿರೋಧ ಉಂಟಾಯಿತು. ಮತ್ತು ಅದರ ಪ್ರಕಾರವಾಗಿ ಈ ನಿಯಮದ ನಿಜಾಂಶವೆಂದರೆ ಸದ್ಗುಣ & ಆಸಕ್ತಿಗಳು ಬೇರಾಗುವಂತಹವಲ್ಲ. ಅಂದುಕೊಂಡಿರಬಹುದಾದಂತೆ ಜನರ ನಾಶದ ಜೊತೆಗೆ ಅದು ಕೊನೆಯಾಯಿತು. ನಮಗೆ ಆ ಉದಾಹರಣೆಯಿಂದ ಎಚ್ಚರಿಕೆ ಸಿಕ್ಕಿದೆ ಎಂದು ಆಶಿಸುತ್ತೇನೆ ಮತ್ತು ಅದರ ಹುಟ್ಟಿನಲ್ಲಿಯೇ ಬಡಿದು ಹಾಕಬೇಕು .[63]
ವಕೀಲರಾಗಿ ತರಬೇತಿಯನ್ನು ಪಡೆದಿದ್ದ, ಜೆಫರ್ಸನ್ ಸ್ವಾಭಾವಿಕವಾಗಿಯೆ ಒಳ್ಳೆಯ ಬರಹಗಾರರಾಗಿದ್ದರು ಆದರೆ ಯಾವತ್ತೂ ಒಳ್ಳೆಯ ಭಾಷಣಕಾರರಾಗಲಿ ಅಥವಾ ಒಳ್ಳೆಯ ವಕೀಲರಾಗಲಿ ಆಗಿರಲಿಲ್ಲ ಮತ್ತು ಅವರು ನ್ಯಾಯಾಲಯದಲ್ಲಿ ಎಂದೂ ನೆಮ್ಮದಿಯಿಂದ ಇರಲಿಲ್ಲ. ಅವರು ನ್ಯಾಯಾಧೀಶರು ತಾಂತ್ರಿಕವಾಗಿ ಪರಿಣಿತರಾಗಿರಬೇಕು ಆದರೆ ಯಾವುದೇ ನೀತಿ ನಿಯಮಗಳನ್ನು ಮಂಡಿಸಬಾರದು ಎಂದು ನಂಬಿದ್ಧರು. ಮಾರ್ಬುರಿ ವಿ. ಮ್ಯಾಡಿಸನ್ ಕಾಲದಲ್ಲಿನ ೧೮೦೩ರ ಸರ್ವೋಚ್ಚ ನ್ಯಾಯಾಲಯವನ್ನು ಸಂವಿಧಾನದ ಅಂತಿಮ ನಿರ್ಣಾಯಕನನ್ನಾಗಿ ಮಾಡಿದ್ದ ಇದರ ಆಡಳಿತವನ್ನು ಪ್ರಜಾಪ್ರಭುತ್ವದ ಉಲ್ಲಂಘನೆಯೆಂದು ಅವರು ವೈಯುಕ್ತಕವಾಗಿ ಭಾವಿಸಿದ್ದರು. ಇದನ್ನು ತಪ್ಪಿಸಲು ಸಂವಿಧಾನದ ತಿದ್ದುಪಾಟನ್ನು ಸೂಚಿಸಲು ಅವರಿಗೆ ಬೇಕಾದ ಬೆಂಬಲ ಕಾಂಗ್ರೆಸ್ಸ್ನಲ್ಲಿ ಸಿಗಲಿಲ್ಲ.[64] ಜೆಫರ್ಸನ್ ನ್ಯಾಯಾಧೀಶರ ಸಮೀಕ್ಷೆಯ ತತ್ವವನ್ನು ವಿರೋಧಿಸುವುದನ್ನು ಮುಂದುವರೆಸಿದರು:
ನ್ಯಾಯಾದೀಶರನ್ನು ಎಲ್ಲಾ ಸಂವಿಧಾನದ ಪ್ರಶ್ನೆಗಳ ಅಂತ್ಯದ ಪಂಚಾಯತರೆಂದು ಪರಿಗಣಿಸುವುದು ನಿಜವಾಗಿಯು ಅಪಾಯಕಾರಿ ತತ್ವ, ಮತ್ತು ಇದು ನಮ್ಮನ್ನು ಆಲಿಗ್ಯಾರ್ಕಿ (ಕೆಲವೇ ಜನರ ಪ್ರಭುತ್ವ)ದ ಜಬರುದಸ್ತಿನ ಅಡಿಗೆ ತಳ್ಳುತ್ತದೆ. ನಮ್ಮ ನ್ಯಾಯಾದೀಶರು ಎಲ್ಲಾ ಜನರನಷ್ಟೆ ಪ್ರಾಮಾಣಿಕರಾಗಿರುತ್ತಾರೆ ಹೊರತು ಅದಕ್ಕಿಂತ ಹೆಚ್ಚಾಗಿ ಇರುವುದಿಲ್ಲ. ಅವರು ಇತರಹಾಗೆ ಪಕ್ಷಕ್ಕೆ, ಅಧಿಕಾರಕ್ಕೆ, ಮತ್ತು ಅವರ ದಳದ ಸೌಕರ್ಯಗಳಿಗೆ ಅದೇ ತರಹದ ಅನುರಾಗವನ್ನು ಹೊಂದಿರುತ್ತಾರೆ. ಅವರ ನೀತಿವಾಕ್ಯವು ಬೊನಿ ಜುಡಿಸಿಸ್ ಎಸ್ಟ್ ಅಂಪ್ಲೈಯರ್ ಜುರಿಸ್ಡಿಕ್ಟಿಯೊನಮ್ [ವಿಶಾಲ ಕಾನೂನು ಪರಿಧಿಯೇ ಒಳ್ಳೆಯ ನ್ಯಾಯಮೂರ್ತಿ], ಮತ್ತು ಇತರ ಅಧಿಕಾರಿಗಳು, ಚುನಾಯಿತ ಹತೋಟಿಯ ಜವಾಬ್ದಾರಿಯನ್ನು ಹೊದಿದ್ದ ರೀತಿಯಲ್ಲಿ ಇವರು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಮತ್ತು ಅವರು ತಮ್ಮ ಜೀವನಕ್ಕಾಗಿ ಅಧಿಕಾರದಲ್ಲಿರುತ್ತಾರೆ ಆದ್ದರಿಂದ ಅವರು ಹೆಚ್ಹ್ಚು ಅಪಾಯಕಾರಿ. ಸಮಯ ಮತ್ತು ಪಕ್ಷದ ಭ್ರಷ್ಟಾಚಾರದೊಂದಿಗೆ ಯಾವಯಾವ ಕೈಗಳು ಗುಟ್ಟಾಗೆ ಸೇರಿಕೊಂಡಿವೆ ಎಂದು ತಿಳಿದ, ಹಾಗು ಇದರ ಸದಸ್ಯರು ನಿರಂಕುಶ ಅಧಿಕಾರಿಗಳಾಗಬಹುದೆಂದು, ಸಂವಿಧಾನವು ಈ ತರಹದ ಯಾವುದೇ ಒಂದು ನ್ಯಾಯಸ್ಥಾನವನ್ನು ಸ್ಥಾಪಿಸಿಲ್ಲ. ಇದು ಅತ್ಯಂತ ಬುದ್ಧಿವಂತಿಕೆಯಿಂದ ತಮ್ಮತಮ್ಮೊಳಗೆ ಸಮನಾದ ಮತ್ತು ಸಮ ಅಧಿಕಾರವನ್ನು ಹೊಂದಿದ್ದ ವಿಭಾಗಗಳನ್ನು ಮಾಡಿಕೊಂಡಿದೆ.[65]
ಕ್ರಾಂತಿಕಾರಿ ಯುದ್ಧದ ನಂತರ, ವೈಯುಕ್ತಿಕ ಸ್ವಾತಂತ್ರ್ಯದ ರಕ್ಷಣೆಗಾಗಿ, ಅಗತ್ಯವಿದ್ದಾಗ ಬಂಡಾಯ ಮತ್ತು ದೌರ್ಜನ್ಯದ ಮೂಲಕ ಸರಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಜೆಫರ್ಸನ್ ಪ್ರತಿಪಾದಿಸಿದರು. ಜನವರಿ ೩೦, ೧೭೮೭ರಂದು ಜೆಮ್ಸ್ ಮೆಡಿಸೊನ್ರಿಗೆ ಬರೆದ ಪತ್ರದಲ್ಲಿ, ಜೆಫರ್ಸನ್ "ಆಗಾಗ್ಗೆ, ಸ್ವಲ್ಪ ಮಟ್ಟಿನ ಬಂಡಾಯವು ಒಳ್ಳೆಯದು, ಮತ್ತು ಭೌತಿಕವಾಗಿ ಆಕ್ರಮಣಕಾರಿ ಯಾಗಿದ್ದ ರಾಜಕೀಯದ ಪ್ರಪಂಚದಲ್ಲಿ ಇದು ಒಳ್ಳೆಯ ಸರಕಾರದ ಆಡಳಿತಕ್ಕೆ ಅಗತ್ಯವಾದ ಔಷದಂತೆ ಉಪಯೋಗವಾಗುತ್ತದೆ " ಎಂದು ಬರೆದರು.[66] ಇದೇರೀತಿಯಲ್ಲಿ, ಪೆಬ್ರವರಿ ೨೨, ೧೭೮೭ರಂದು ಅಬಿಗಲಿ ಆಯ್ಡಮ್ಸ್ಗೆ ಬರೆದ ಪತ್ರದಲ್ಲಿ ಅವರು ಬರೆದರು, "ಸರಕಾರದೊಂದಿಗೆ ಪ್ರತಿಭಟಿಸುವ ಚೈತನ್ಯವು ಕೆಲವು ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗುತ್ತದೆ ಆದ್ದರಿಂದ ಇದನ್ನು ಯಾವಾಗಲು ಜೀವಂತ ಇಟ್ಟುಕೊಳ್ಳುವುದನ್ನು ನಾನು ಬಯಸುತ್ತೇನೆ. ಇದನ್ನು ಅನ್ಯಾಯದ ಸಮಯದಲ್ಲಿ ಆಗಾಗ್ಗೆ ಅನುಷ್ಟಾನಕ್ಕೆ ತರಲಾಗುತ್ತದೆ, ಆದರೆ ಇದನ್ನು ಯಾವತ್ತು ಕಾರ್ಯಪೂಪಕ್ಕೆ ತರದೆ ಇರುವುದಕ್ಕಿಂತಲು ಇದು ಒಳ್ಳೆಯದು."[66] ಶಾಯ್ಸ್ ಬಂಡಾಯರಿಗೆ ಸಂಬಂದಪಟ್ಟ ರಕ್ತಪಾತದ ಬಗ್ಗೆ ಕೇಳಿದ ನಂತರ, ನವೆಂಬರ್ ೧೩, ೧೭೮೭ರಂದು ಜೆಫರ್ಸನ್ ಜಾಹ್ನ್ ಆಯ್ಡಮ್ಸ್ರ ಅಳಿಯ ವಿಲ್ಲಿಯಮ್ S. ಸ್ಮಿತ್ಗೆ ಬರೆದ ಪತ್ರದಲ್ಲಿ ಬರೆದರು, "ಕೆಲವು ಜೀವಿಗಳು ಶತಮಾನದಲ್ಲಿ ಅಥವಾ ಎರಡರಲ್ಲಿ ಅಳಿದುಹೋಗಿದ್ದನ್ನು ಸೂಚಿಸುತ್ತದಾ? ಸ್ವಧೇಶಾಭಿಮಾನಿಗಳ ಮತ್ತು ದುಷ್ಟದೊರೆಗಳ ರಕ್ತಪಾತದಿಂದ ಸ್ವಾತಂತ್ರ್ಯದ ವೃಕ್ಷವು ಸಮಯದಿಂದ ಸಮಯಕ್ಕೆ ಪುನಃಶ್ಚೆತನಗೊಳ್ಳಬೇಕು. ಇದುವೇ ಇದರ ಸ್ವಾಭಾವಿಕ ಪದ್ದತಿ."[67] ೧೭೮೭ರ ಸಮಯದಲ್ಲಿ ವಿಲ್ಲಿಯಮ್ ಎಸ್. ಸ್ಮಿತ್ಗೆ ಬರೆದ ಮತ್ತೊಂದು ಪತ್ರದಲ್ಲಿ, ಜೆಫರ್ಸನ್ ಬರೆದದ್ದು: ಸಮಯದಿಂದ ಸಮಯಕ್ಕೆ ನೀತಿಗಳನ್ನು ಹೆಚ್ಚಿಸದಿದ್ದರೆ, ದೇಶವು ಯಾವರೀತಿ ಇದರ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ, ಅಲ್ಲಿನ ಜನರು ಪ್ರತಿಭಟನೆಯ ಚೈತನ್ಯದ ಸುರಕ್ಷತೆಯನ್ನು ಹೊಂದಿರುವರಾ? ಅಂತವರು ಆಯುಧಗಳನ್ನು ಕೈಗೆತ್ತಿಕೊಳ್ಳಲಿ. [66]
ಮಾರ್ಚ್ ೧೩, ೧೭೮೯ರಂದು ಪ್ರಾನ್ಸಿಸ್ ಹಾಪ್ಕಿನ್ಸೊನ್ರಿಗೆ ಬರೆದ ಪತ್ರದಲ್ಲಿ, ಜೆಫರ್ಸನ್ ಬರೆದದ್ದು: " ಗೆಲ್ಲಲು ಭ್ಯಯಗ್ರಸ್ತನಾಗಿದ್ದಂತ ರಾಜಕೀಯ ಅಥವಾ ಧರ್ಮಗಳಲ್ಲಿ ನಾನು ಯಾವತ್ತು ನಂಬಿಕೆಹೊಂದಿರಲಿಲ್ಲ. ಈ ವಿಷಯಗಳ ಮೇಲಿನ ಸೋಮಾರಿತನವು ನನಗಿಂತ, ಇತರರಿಂದ ಹೆಚ್ಚು ಮನ್ನಣೆಗೊಳಗಾಗುವಂತೆ ಮಾಡಿದೆ."[68]
ಜೆಫರ್ಸನ್ ಮಹಿಳೆಯರ ಮತದಾನದ ಹಕ್ಕನ್ನು ಪ್ರತಿಪಾದಿಸುತ್ತಿರಲಿಲ್ಲ; "ಧೀಮಂತ ಮಹಿಳೆಯರನ್ನು ಅಬಿಗೈಲ್ ಆಯ್ಡಮ್ಸ್ ಆಕ್ಷೇಪಿಸಿದರು, ಜೆಫರ್ಸನ್ ತಿರಸ್ಕರಿಸಿದರು ಎಂದು ಲೇಖಕರಾದ ರಿಚಾರ್ಡ್ ಮೊರಿಸ್ ಬರೆದಿದ್ದರು. ಪರಿಸಿಯನ್ ಸಲೊನ್ಸ್ನಲ್ಲಿನ ಮಹಿಳೆಯರ ರಾಜಕೀಯ ಹರಟೆಗಳಿಂದ ಸತಾಯಿತಗೊಂಡ, ಅವರು ತಾಯಿನಾಡಿನ ಬಗ್ಗೆ ವ್ಯಕ್ತಪಡಿಸುವಲ್ಲಿ ’ನಮ್ಮ ಒಳ್ಳೆಯ ಮಹಿಳೆಯರು...ತಮ್ಮ ಪತಿಯರನ್ನು ರಾಜಕೀಯ ಚರ್ಚೆಯ ಜಂಬದಿಂದ ಮರಳುವಂತೆ ಅವರ ಆಲೋಚನೆಗಳನ್ನು ಸಂತೈಸುವುದರಿಂದ ಮತ್ತು ಶಾಂತಹೊಳಿಸುವುದರಿಂದ ಸಂತುಷ್ಟರಾದರು,’" ಎಂದು ಬರೆದರು. ಅಧ್ಯಕ್ಷರಾಗಿದ್ದಾಗ, ಜೆಫರ್ಸನ್ ಬರೆದರು "ಮಹಿಳೆಯರನ್ನು ಅಧಿಕಾರಕ್ಕೆ ನೇಮಿಸುವುದು ಒಂದು ಹೊಸಾ ಬದಲಾವಣೆ ಇದಕ್ಕೆ ಸಾರ್ವಜನಿಕರಾಗಲಿ, ಅಥವಾ ನಾನಾಗಲಿ ಸಿದ್ಧರಾಗಿಲ್ಲ."[69]
ಧಾರ್ಮಿಕವಾಗಿ ಥಾಮಸ್ ಜೆಫರ್ಸನ್ ಕ್ರಿಶ್ಚಿಯಾನಿಟಿಯ ಕಡು ಸಂಪ್ರದಾಯ ನಿಷ್ಟರಾಗಿದ್ದರು. ಅವರ ಜೀವಮಾನದುದ್ದಕ್ಕೂ ಜೆಫರ್ಸನ್ ದೇವತಾಶಾಸ್ತ್ರ, ಬೈಬ್ಲಿಕಲ್ ಅಧ್ಯಯನ ಮತ್ತು ನೀತಿಶಾಸ್ತ್ರ. ಡೀಸ್ಮ್ ಮತ್ತು ಯೂನಿಟರಿಯಾನಿಸ್ಮ್ ಧಾರ್ಮಿಕ ತತ್ವಜ್ಞಾನಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ಈ ರೀತಿಯಾಗಿ ಹೇಳುತ್ತಾರೆ, "ದೇವರು ಇರುವುದು ಮತ್ತು ಧೈರ್ಯವನ್ನು ಪ್ರಶ್ನಿಸುವುದು; ಅಲ್ಲಿ ಒಬ್ಬನಿದ್ದರೆ, ಆತ ನಿಮ್ಮ ಕುರುಡು ಭಯಕ್ಕಿಂತ ಸ್ವಾಮಿನಿಷ್ಟೆಯ ಕಾರಣಕ್ಕಾಗಿ ನಿಮಗೆ ನೀಡುತ್ತಾನೆ."[70][71]
ಭಾರತೀಯರನ್ನು ಹೊರಕಳುಹಿಸುವ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ ಅಧ್ಯಕ್ಷ ಜೆಫರ್ಸನ್.[72][73]
ಆಂಡ್ರ್ಯೂ ಜಾಕ್ಸನ್ ಅವರನ್ನು ತಪ್ಪಾಗಿ ಭಾರತೀಯರನ್ನು ಹೊರಕಳುಹಿಸುವುದನ್ನು ಯೋಜಿಸಿದ ಮೊದಲಿಗ ಎಂದು ಗುರುಗಿಸಲಾಗುತ್ತದೆ, ಏಕೆಂದರೆ ಕಾಂಗ್ರೆಸ್ ಮೊದಲು ಆತ ಅಧ್ಯಕ್ಷನಾಗಿದ್ದಾಗ ೧೮೩೦ರಲ್ಲಿ ಇಂಡಿಯನ್ ರಿಮೂವಲ್ ಆಕ್ಟ್ ಅನ್ನು ಅಂಗೀಕಾರ ಮಾಡಿತು, ಅಲ್ಲದೆ ಇನ್ನೊಂದು ಕಾರಣವೆಂದರೆ ಆತ ವೈಯಕ್ತಿಕ ಆಸಕ್ತಿಯಿಂದ ಹಲವಾರು ಪೂರ್ವದ ಬುಡಕಟ್ಟು ಜನರನ್ನು ಹೊರಹಾಕುವುದರಲ್ಲಿ ತೊಡಗಿಸಿಕೊಂಡಿದ್ದ.[72] ಆದರೆ ಜೆಫರ್ಸನ್ ಅವರ ಯೋಜನೆಗಳನ್ನು ಕಾನೂನು ಬದ್ಧಗೊಳಿಸಿ ಅವನ್ನು ಕಾರ್ಯರೂಪಕ್ಕೆ ತರಲು ಜಾಕ್ಸನ್ ಪ್ರಯತ್ನಿಸಿದರು, ೧೮೦೩ರಿಂದ ಹಲವಾರು ಖಾಸಗಿ ಪತ್ರವ್ಯವಹಾರ ನಡೆದಿತ್ತು. (ಉದಾಹರಣೆಗೆ ವಿಲಿಯ ಹೆನ್ರಿ ಹ್ಯಾರಿಸನ್ಗೆ ಬರೆದ ಪತ್ರ ನೋಡಿ).[72]
ಜೆಫರ್ಸನ್ ಅವರ ಮೊದಲ ಭಾರತೀಯರನ್ನು ಹೊರಗೆ ಕಳುಹಿಸುವ ಕೆಲಸ ಪ್ರಾರಂಭವಾದದ್ದು ೧೭೭೬ ಮತ್ತು ೧೭೭೯ರ ಮಧ್ಯದಲ್ಲಿ, ಆಗ ಅವರು ಚೆರೊಕೀ ಮತ್ತು ಶಾವ್ನೀ ಬುಡಕಟ್ಟುಗಳನ್ನು ತಮ ಪೂರ್ವಜರ ಸ್ಥಾನದಿಂದ ಪಶ್ಚಿಮದ ಮಿಸ್ಸಿಸ್ಸಿಪ್ಪಿ ನದಿ ಪ್ರದೇಶಕ್ಕೆ ತೆರಳುವಂತೆ ಒತ್ತಾಯಿಸಿದರು.[72]
ಅಧ್ಯಕ್ಷರಾಗಿ ಅವರ ಮೊದಲ ಕಾರ್ಯವೆಂದರೆ ಜಾರ್ಜಿಯಾ ರಾಜ್ಯದೊಂದಿಗಿನ ಒಪ್ಪಂದ, ಜಾರ್ಜಿಯಾವು ಪಶ್ಚಿಮದ ಭೂಭಾಗದಲ್ಲಿ ಅನ್ವೇಷಣೆನಡೆಸಲು ಅದರ ಕಾನೂನು ಹಕ್ಕನ್ನು ಬಿಡುಗಡೆಮಾದಿದರೆ ಯು.ಎಸ್. ಮಿಲಿಟರಿಯು ಬಲವಂತವಾಗಿ ಚೆರೊಕೀ ಜನರನ್ನು ಜಾರ್ಜಿಯಾದಿಂದ ಹೊರಹಾಕುವುದಕ್ಕೆ ಸಹಾಯವಾಗುವುದು. ಆ ಸಮಯದಲ್ಲಿ, ಚೆರೊಕೀ ಜನಾಂಗವು ಯುನೈಟೆಡ್ ಸ್ಟೇಟ್ಸ್ ಜೊತೆಯಲ್ಲಿ ತಮ್ಮ ಭೂಮಿಯ ಹಕ್ಕಿನ ಖಾತರಿ ಬಗ್ಗೆ ಒಂದು ಒಪ್ಪಂದವನ್ನು ಮಾಡಿಕೊಂಡಿತು, ಇದು ಜಾರ್ಜಿಯಾ ಜೊತೆ ಜೆಫರ್ಸನ್ ಅವರ ವ್ಯವಹಾರವನ್ನು ಭಂಗಗೊಳಿಸಿತು.[72]
ಜೆಫರ್ಸನ್ನ ಮೂಲ ಯೋಜನೆಯು ಸ್ಥಳೀಯರು ತಮ್ಮ ಸ್ವತಃ ಸಂಸ್ಕೃತಿ, ಧರ್ಮಗಳು ಮತ್ತು ಜೀವನಶೈಲಿಯನ್ನು ಪಾಶ್ಚಿಮಾತ್ಯ ಯೂರೋಪಿಯನ್ ಸಂಸ್ಕೃತಿಯಾಗಿ ತ್ಯಜಿಸುವುದಾಗಿತ್ತು, ಕ್ರಿಶ್ಚಿಯನ್ ಧರ್ಮ ಮತ್ತು ಅಲ್ಲಿರುವ ವ್ಯವಸಾಯದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿತ್ತು.[72][73]
ಜೆಫರ್ಸನ್ ಅವರು ಆ ಜನರನ್ನು ವ್ಯವಸಾಯದ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಆಶಿಸುತ್ತಿದ್ದರು ಮತ್ತು ಸ್ವಯಂ-ಪೂರ್ಣತೆಯನ್ನು ಹೊಂದಬೇಕು, ಆಗ ಅವರು ಆರ್ಥಿಕವಾಗಿ ಸಬಲತೆಯನ್ನು ಹೊಂದಿ ಬಿಳಿಯ ಅಮೇರಿಕನ್ನರೊಂದಿಗೆ ವ್ಯವಹಾರ ನಡೆಸಬಹುದು.[74] ೧೮೦೩ರಲ್ಲಿ ವಿಲಿಯಮ್ ಹೆನ್ರಿ ಹ್ಯಾರಿಸನ್ ಅವರಿಗೆ, ಜೆಫರ್ಸನ್ ಅವರು ಬರೆದ ಪತ್ರದಲ್ಲಿ:
ಅಲ್ಲಿಯ ಬುಡಕಟ್ಟು ಜನರು ಸಜಾತೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅಂತಹವರನ್ನು ಬಲವಂತವಾಗಿ ಅವರ ಪ್ರದೇಶದಿಂದ ಪಶ್ಚಿಮಕ್ಕೆ ಕಳುಹಿಸಬೇಕೆಂದು ಜೆಫರ್ಸನ್ ಅಭಿಪ್ರಾಯ ಪಟ್ಟರು.[72] ಬುಡಕಟ್ಟು ಜನಾಂಗದವರು 1812ರ ಯುದ್ಧದಲ್ಲಿ ಬ್ರಿಟಿಷರನ್ನು ಸೇರಿದರು ಮತ್ತು ಅಮೇರಿಕಾದ ಸಾಮೂಹಿಕ ಕಗ್ಗೊಲೆಯ ವಿರುದ್ಧ ಹೋರಾಡಬೇಕೆಂದುಕೊಂಡರು. ೧೮೧೩ರಲ್ಲಿ ಜೆಫರ್ಸನ್ ಅವರು ಅಲೆಕ್ಸಾಂಡರ್ ವನ್ ಹಂಬೊಲ್ಟ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ:
ಜೆಫರ್ಸನ್ ಅವರು ಭಾರತೀಯರ ಸಜಾತೀಕರಣದಲ್ಲಿ ನಂಬಿಕೆ ಇಟ್ಟಿದ್ದರು; ಎರಡನೆಯ ಉತ್ತಮದ್ದೆಂದರೆ ಪಶ್ಚಿಮೀಕರಣವನ್ನು ತೆಗೆಯುವುದು. ಭಾರತೀಯರು ಬಿಳಿಯರ ಮೇಲೆ ದಾಳಿ ಮಾಡಿದರೆ ಏನಾಗಬಹುದು.[76] ಅವರು ತಮ್ಮ ಯುದ್ಧ ಕಾರ್ಯದರ್ಶಿ, ಜನರಲ್ ಹೆನ್ರಿ ಡೀರ್ಬಾರ್ನ್ ಅವರಿಗೆ ಹೀಗೆ ಹೇಳುತ್ತಾರೆ (ಭಾರತೀಯ ವ್ಯವಹಾರಗಳಲ್ಲಿ ಮೊದಲ ಜವಾಬ್ಧಾರಿಯುತ ವ್ಯಕ್ತಿ): "ನಾವು ಯಾವುದೇ ಬುಡಕಟ್ಟಿನವರ ಮೇಲೆ ಹಲ್ಲೆಯನ್ನು ನಿಲ್ಲಿಸಲು ಬಲವಂತ ಪಡಿಸಿದರೆ, ಬುಡಕಟ್ಟಿನವರು ಬೇರುಸಹಿತ ಹೋಗುವವರೆಗೂ ನಾವು ಎಂದಿಗೂ ಅದನ್ನು ಬಿಡುವುದಿಲ್ಲ ಅಥವಾ ಅವರನ್ನು ಮಿಸ್ಸಿಸ್ಸಿಪ್ಪಿ ನದಿಯಾಚೆ ಹೋಗುವಂತೆ ಮಾಡಬೇಕು."[77]
ಜೆಫರ್ಸನ್ ಅನ್ನು ಯು.ಎಸ್. ನಿಕೆಲ್ನ ಮೇಲೆ ಬಿಂಬಿಸಲಾಗಿರುವುದು |
---|
thumb|150px|right|2005|alt=ಜೆಫರ್ಸನ್ ಅವರ ಹತ್ತಿರದಿಂದ ತೆಗೆದ ಚಿತ್ರ, ಯುಎಸ್ ನಿಕೆಲ್, 2005 thumb|150px|right|2006–present|alt=ಜೆಫರ್ಸನ್ ಅವರ ಮುಖ, ಯುಎಸ್ ನಿಕೆಲ್, 2006–ಇಂದಿನವರೆಗೆ ಜೆಫರ್ಸನ್ ನಿರ್ಮೂಲನೆ ಮಾಡುವವರಲ್ಲ, ಮತ್ತು ಅವರು ತಮ್ಮ ಜೀವನಕಾಲದಲ್ಲಿ ಬಹಳ ಗುಲಾಮರನ್ನು ಹೊಂದಿದ್ದರು. ಜೀವನ ಚರಿತ್ರೆ ಬರೆಯುವವರ ದೃಷ್ಟಿಯಲ್ಲಿ ಜೆಫರ್ಸನ್ರು ಅಗಾಧವಾದ ಸಾಲ ಮಾಡಿಕೊಂಡಿದ್ದರು ಮತ್ತು ಭೋಗ್ಯ ಮತ್ತು ಸರಕಾರಿ ಮಾಹಿತಿ ಪತ್ರವನ್ನು ಗುಲಾಮರಿಗೆ ಹೊರೆ ಮಾಡಿದರು; ಅವರನ್ನು ಸಾಲ ತೀರಿಸುವ ವರೆಗೂ ಬಿಡುಗಡೆ ಮಾಡುತ್ತಿರಲಿಲ್ಲ, ಎಂಬುದು ಯಾವಾಗಲೂ ನಡೆಯಲಿಲ್ಲ.[78] ಅದರ ಪರಿಣಾಮವಾಗಿ, ಜೆಫರ್ಸನ್ರು ತೀಕ್ಷ ವೇದನೆ ಮತ್ತು ವಿವೇಚನಾ ಶಕ್ತಿಯ ಪರೀಕ್ಷೆಯನ್ನು ಅನುಭವಿಸಿದ ಹಾಗೆ ಕಾಣುತ್ತದೆ. ಅವರ ಆಂಬಿವಾಲೆನ್ಸ್ ಹಕ್ಕು ಸಹ ಯಾವ ಗುಲಾಮರು ಅವರ ಮತ್ತು ಅವರ ಕುಟುಂಬದವರ ಜೊತೆ ತುಂಬಾ ಹತ್ತಿರದಿಂದ ಕೆಲಸಮಾಡುತ್ತಿದ್ದರು ಮಾಂಟಿಸೆಲ್ಲೊದಲ್ಲಿ ಮತ್ತು ಇನ್ನು ಕೆಲವು ಸ್ಥಳದಲ್ಲಿ ಅವರ ಚಿಕಿತ್ಸೆಯು ಪ್ರತಿಬಿಂಬಿಸಿದೆ. ಅವರನ್ನು ಪಳಗಿಸುವಲ್ಲಿ ಮತ್ತು ಹೆಚ್ಚು ಗುಣಮಟ್ಟದ ಕೌಶಲ್ಯವನ್ನು ಕಲಿಸುವದಕ್ಕಾಗಿ ಬಂಡವಾಳ ಹಾಕಿದರು.[79] ಅವರು ಗುಲಾಮಗಿರಿಯ ಬಗ್ಗೆ ಬರೆದಿದ್ದಾರೆ, "ನಾವು ಕಿವಿ ಕೇಳಿಸದಂತೆ ಗೋಮುಖವ್ಯಾಘ್ರದಂತಿರುವೆವು; ಮತ್ತು ನಾವು ಅವರನ್ನು ಹಿಡಿದಿಟ್ಟುಕೊಳ್ಳಲೂ ಆಗುವುದಿಲ್ಲ, ಸುರಕ್ಷಿತವಾಗಿ ಅವರನ್ನು ಬಿಡಲೂ ಆಗುವುದಿಲ್ಲ. ತಕ್ಕಡಿಯ ಒಂದು ಕಡೆ ನ್ಯಾಯ, ಮತ್ತೊಂದು ಕಡೆಯಲ್ಲಿ ಸ್ವಯಂ ಸಂರಕ್ಷಣೆ".[80]
ಅವನು ಜೇಮ್ಸ್ ಲೆಮನ್ ನಂತಹ ಸ್ವತಂತ್ರವಾದ-ರಾಜ್ಯ ಪ್ರತಿಪಾದಕರನ್ನು ಉತ್ತೇಜಿಸಿ ಪ್ರಾಯೋಜಿಸಿದ್ದಾರೆ.[81] ಜೀವನ ಚರಿತ್ರೆ ಬರೆಯುವವರ ಪ್ರಕಾರ, ಜೆಫರ್ಸನ್ "ಗುಲಾಮರನ್ನು ಬಿಡುಗಡೆ ಮಾಡುವುದು ರಾಜ್ಯದ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ನಂಬಿದ್ದರು".[82] ೧೭೬೯ರಲ್ಲಿ, ಹೌಸ್ ಆಫ್ ಬರ್ಗೆಸ್ಸಸ್ನ ಸದಸ್ಯನಾಗಿ, ಜೆಫರ್ಸನ್ ವರ್ಜೀನಿಯಾದಲ್ಲಿನ ಗುಲಾಮರನ್ನು ಬಂಧವಿಮೋಚನೆ ಮಾಡುವುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.[83] ಅವರ ಮೊದಲ ರಚನೆ ಸ್ವಾತಂತ್ರ್ಯದ ನುಡಿಕಟ್ಟಿನಲ್ಲಿ, ಜೆಫರ್ಸನ್ ಬ್ರಿಟೀಶ್ ಮುಕುಟವನ್ನು ಪ್ರಾಯೋಜಿತ ಗುಲಾಮಗಿರಿಯನ್ನು ಆಮದು ಮಾಡುವುದರ ವಸಾಹತಿಗೆ ಸಂಬಂಧಿಸಿದೆ ಎಂದು ದೋಷಾರೋಪಣೆ ಮಾಡಿದರು, "ಮನುಕುಲಕ್ಕೆ ಸಂಬಂಧಿಸಿದ ನಿಸರ್ಗಕ್ಕೆ ವಿರುದ್ಧವಾಗಿ ಕೂಲೀಕಾರರ ನಿಷ್ಟೂರ ಯುದ್ಧದ ಆಪಾದನೆ ಮಾಡಿದರು, ಅದರ ಅತಿ ಹೆಚ್ಚಾದ ಪರಿಶುದ್ಧ ಜೀವನದ ಹಕ್ಕುಗಳು ಮತ್ತು ಸ್ವಾತಂತ್ರ್ಯ, ದೂರದಲ್ಲಿರುವ ಮನುಷ್ಯರಲ್ಲಿ ಯಾರು ಅಪರಾಧ ಮಾಡಿರುವವರು, ಸೆರೆಯಾಳುಗಳು ಮತ್ತು ಅವರನ್ನು ಇನ್ನೊಂದು ಹೆಮಿಸ್ಪಿಯರ್ನಲ್ಲಿ ಗುಲಾಮಗಿರಿಯತ್ತ ಕರೆದೊಯ್ಯಲಾಗುತ್ತದೆ". ಹೇಗಿದ್ದರೂ, ಉತ್ತರ ಕ್ಯಾರೋಲೀನಾ ಮತ್ತು ಜಾರ್ಜಿಯಾ ಇಂದ ಬಂದ ಅತಿಥಿಗಳ ಬೇಡಿಕೆಗೆ ಅನುಸಾರವಾಗಿ ಈ ಬಾಷೆಯನ್ನು ನುಡಿಕಟ್ಟಿನಿಂದ ಕೈ ಬಿಡಲಾಗಿದೆ.
೧೭೭೮ರಲ್ಲಿ ವಿಧಾನ ಸಬೆಯು ಒಂದು ಕಾನೂನಿನ ಕರಡು ಮಸೂದೆಯನ್ನು ಹೊರಡಿಸಿದೆ ಅವನು ವರ್ಜೀನಿಯಾದಿಂದ ಗುಲಾಮರನ್ನು ಮುಂದಕ್ಕೆ ಆಮದು ಮಾಡುವದನ್ನು ನಿಷೇಧಿಸುವುದಾಗಿ ಪ್ರಸ್ತಾಪಿಸಿದರು, ಮತ್ತು ಹೆಚ್ಚುತ್ತಿರುವ ದುಷ್ಟರನ್ನು ಆಮದು ಮಾಡುವವರನ್ನು ನಿಲ್ಲಿಸಿ, ಭವಿಶ್ಯದ ಪರಿಶ್ರಮ ಮತ್ತು ಅದರ ಅಂತಿಮವಾಗಿ ಸಂಪೂರ್ಣ ನಾಶವನ್ನು ಕೈ ಬಿಡಲಾಗಿದೆ. ಹಲವು ಗುಲಾಮರ ಧಣಿಗಳು ಗುಲಾಮತನಕ್ಕೆ ಬೆಂಬಲ ಕೊಟ್ಟರೂ, ಗುಲಾಮರ ವ್ಯಾಪಾರಕ್ಕೆ ವಿರೋಧಿಸಿದರು. ಅವು ಎರಡೂ ನಿಯಮಬದ್ಧ ಸಂಸ್ಥೆಗಳು ಬೇರೆ ಬೇರೆಯವು.
೧೭೮೭ರ ವಾಯುವ್ಯ ವಿಶೇಷ ಕಾಯಿದೆಯನ್ನು ಗುಲಾಮ ಧಣಿಗಳು ಬೆಂಬಲಿಸಿದ್ದರು ಏಕೆಂದರೆ ಅದು ಫುಜಿಟಿವ್ ಗುಲಾಮ ಉಪವಾಕ್ಯವನ್ನು (ಅವರು ಓಡಿ ಹೋಗುವ ಗುಲಾಮರನ್ನು ಹಿಡಿಯುವ ಅಧಿಕಾರ) ಒಳಗೊಂಡಿತ್ತು, ಅದನ್ನು ಜೆಫರ್ಸನ್ ಬೆಂಬಲಿಸಿದ್ದಾಗ್ಯೂ ಅದು ಗುಲಾಮ ವಿರೋಧಿ ಕಾನೂನಾಗಿರಲಿಲ್ಲ, ಮತ್ತು ಅದರಿಂದ ಗುಲಾಮರಿಗೆ ಕಾಂಗ್ರೆಸ್ ಹೌಸ್ ಪ್ರತಿನಿಧಿಗಳಾಗಲು ತೊಂದರೆ ಇರಲಿಲ್ಲ, ಏಕೆಂದರೆ ೧೭೯೦ರಲ್ಲಿ ನೈರುತ್ಯ ವಿಶೇಷ ಕಾಯಿದೆಯು ಓಹಿಯೋ ನದಿಯ ದಕ್ಷಿಣ ಗುಲಾಮಗಿರಿಗೆ ಭರವಸೆ ಕೊಡುತ್ತದೆ.[84]
೧೮೦೭ರಲ್ಲಿ ಅವನು ಅಧ್ಯಕ್ಷನಾಗಿ ಗುಲಾಮಗಿರಿ ವ್ಯಾಪಾರವನ್ನು ತೆಗೆದು ಹಾಕುವ ಕಾನೂನಿನ ಕರಡು ಮಸೂದೆಗೆ ಹಸ್ತಾಕ್ಷರ ಹಾಕುತ್ತಾನೆ. ಗುಲಾಮಗಿರಿ ವ್ಯಾಪಾರವು ಒಂದು ತೊಡಕಾಗಿ ಪರಿಣಮಿಸುತ್ತದೆ ಮತ್ತು ಗ್ರೇಟ್ ಬ್ರಿಟೀಶ್ ನಂತಹ ಬೇರೆ ರಾಷ್ಟ್ರಗಳು ಕೂಡ ಆ ಸಮಯದಲ್ಲಿ ಗುಲಾಮಗಿರಿ ವಸಾಹತುಗಳಾಗುತ್ತವೆ ಮತ್ತು ಗುಲಾಮಗಿರಿಯನ್ನು ಹೊಂದುತ್ತವೆ.
ಜೆಫರ್ಸನ್ ವರ್ಜೀನಿಯಾ ರಾಜ್ಯದಲ್ಲಿ ಬರೆದಿರುವಂತೆ ಗುಲಾಮಗಿರಿ ಸಂಸ್ಥೆಗಳ ಮೇಲೆ ಆಕ್ರಮಣ ಮಾಡುವಂತೆ ತೋರುತ್ತದೆ(೧೭೮೪):
ನಮ್ಮ ನಡುವಿನ ಗುಲಾಮಗಿರಿ ಬಗ್ಗೆ ನಮ್ಮ ಜನರು ಅಸಂತೋಷದ ನಡವಳಿಕೆ ಹೊಂದಿರುವ ಬಗ್ಗೆ ಯಾವುದೇ ಅನುಮಾನ ಇಲ್ಲ. ಧಣಿ ಮತ್ತು ಗುಲಾಮರ ನಡುವಿನ ಪೂರ್ತಿ ವಾಣಿಜ್ಯವು ಶಾಶ್ವತವಾಗಿ ಮುಂದುವರಿಸುವಿಕೆಯ ಪ್ರಯೋಗವು ಅತಿ ಹೆಚ್ಚಾದ ಗದ್ದಲವು ಮನೋವಿಕಾರ ಮಾಡುತ್ತದೆ, ಒಂದು ಕಡೆ ಪೂರ್ಣ ಹಣ ರವಾನೆ ಮಾಡದಿರುವ ಪ್ರಜಾಪೀಡನೆ ಆಗಿರುತ್ತದೆ ಮತ್ತು ಮತ್ತೊಂದು ಕಡೆ ಅವನತಿಗೆ ಆಧೀನವಾಗಿರುತ್ತದೆ.[85]
ಅದೇ ಕೆಲಸವಾಗಿ, ಕಪ್ಪು ಜನರು ಬಿಳಿ ಜನರಿಗಿ೦ತ ಕೆಳಮಟ್ಟದಲ್ಲಿದ್ದಾರೆ "ದೇಹ ಮತ್ತು ಮನಸ್ಸು ಎರಡೂ ದತ್ತಿಗಳ ಒಳಗಿವೆ" ಎಂದು ಜೆಫರ್ಸನ್ ತನ್ನ ಸ೦ದೇಹವನ್ನು ಮು೦ದುವರಿಸಿದ್ದಾರೆ.[86] ಹೇಗಾದರೂ, ಕಪ್ಪು ಜನರಿಗೆ ಯವುದೇ ದೇಶದಲ್ಲಿ ಬದುಕುವ ಹಕ್ಕು ಇದೆ ಅಲ್ಲಿನ ಜನರು ಅವರ ನಿಸರ್ಗಕ್ಕೆ ತಕ್ಕಂತೆ ನ್ಯಾಯ ಒದಗಿಸುತ್ತಾರೆ, ಮತ್ತು ಬರೀ ಒಳ್ಳೆ ಸ್ವಭಾವಕ್ಕೆ ಅನುಗುಣವಾಗಿ ಅವರನ್ನು ಗುರುತಿಸಿರುತ್ತಾರೆ, ಎಂದು ಅವರು ತಮ್ಮದೇ ಆದ ಕೆಲಸದಲ್ಲಿ ಬರೆದಿದ್ದಾರೆ.[87] "ಪೇಟ್ ಅನ್ನುವ ಪುಸ್ತಕದಲ್ಲಿ ಈ ಜನರು ನಿರಾತಂಕವಾಗಿ ಇರಬೇಕು ಅನ್ನುವುದಕ್ಕಿಂತಲು ಹೆಚ್ಚಿನ ಖಚಿತವಾಗಿ ಏನನ್ನೂ ಬರೆದಿಲ್ಲ ಎಂದು ಸಹ ಅವರು ಬರೆದರು. [ಆದರೆ] ಎರಡು ಜನಾಂಗಗಳು...ಒಂದೇ ಸರ್ಕಾರದಲ್ಲಿರುವುದಕ್ಕೆ ಆಗುವುದಿಲ್ಲ. ಸ್ವಭಾವ, ಅಭ್ಯಾಸ, ಅಭಿಪ್ರಾಯಗಳು ಅವರೊಳಗೆ ಅಳಿಸಿಹಾಕಲಾಗದಂತಹ ಭಿನ್ನತೆಯ ಗೆರೆಗಳನ್ನು ಎಳೆದಿವೆ."[43] ಚರಿತ್ರೆಕಾರ ಸ್ಟೆಫೆನ್ ಅಮ್ಬ್ರೊಸೆ ಪ್ರಕಾರ: "ಜೆಫರ್ಸನ್, ಹೊಂದಿದ್ದ ಎಲ್ಲಾ ಗುಲಾಮರನ್ನು ಮತ್ತು ಅಮೆರಿಕ ಸಮಾಜದ ಅನೇಕ ಬಿಳಿ ಸದಸ್ಯರನ್ನು ಇಸ್ಟಪಡುತ್ತಿದ್ದರು, ನೀಗ್ರೋಗಳನ್ನು ಕೀಳು ದರ್ಜೆಯವರು, ಸರಳಸ್ವಭಾವದ, ನಂಬಲು ಅರ್ಹರಲ್ಲದವರು ಮತ್ತು ಸಂಪತ್ತಿನಂತೆ ಪರಿಗಣಿಸುತ್ತಿದ್ದರು. ಜೆಫರ್ಸನ್, ರಾಜಕೀಯ ಮೇಧಾವಿಗಳು, ಆಪ್ರಿಕಾದ ಅಮೆರಿಕನ್ನರು ಸಮಾಜದಲ್ಲಿ ನಿರಾತಂಕ ಜನರಾಗಿ ಜೀವಿಸುವ ಯಾವುದೇ ದಾರಿ ಇಲ್ಲ ಎಂಬುದನ್ನು ತಿಳಿದರು". ಅದೇ ಸಮಯದಲ್ಲಿ ಅವರ ಆಹಾರ ತಯರಿಸುವುದರೊಂದಿಗೆ ಮತ್ತು ಉತ್ತಮ ದರ್ಜೆಯ ಅಥಿದಿಗಳನ್ನು ಮನರಂಜಿಸುವದರೊಂದಿಗೆ ಜೆಫರ್ಸನ್ ಅವರನ್ನು ತನ್ನ ಮಕ್ಕಳ ಸಮವಾಗಿ ನಂಬಿದ್ದರು. ಆದ್ದರಿಂದ ಕೆಲವು ಪ್ರಾಮಾಣಿಕರೆಂದು ಅವರು ನಂಬಿದ್ದರು .[88] ದೀರ್ಘಕಾಲದ ಪರಿಹಾರಕ್ಕಾಗಿ ಗುಲಾಮರನ್ನು ಸ್ವತಂತ್ರರನ್ನಾಗಿ ಬಿಟ್ಟರೆ ಆಪ್ರಿಕಾದ ವಲಸೆಗಾರರನ್ನು ಶಾಂತವಾಗಿ ಗಡಿಪಾರು ಮಾಡಬಹುದು ಎಂದು ಜೆಫರ್ಸನ್ ನಂಬಿದ್ದರು. ಅನ್ಯಥಾ, ಅವರನ್ನು ಯುದ್ಧದ ಭಯ ಕಾಡುತ್ತಿತ್ತು, ಅದನ್ನು ಅವರ ಶಬ್ದಗಳಲ್ಲಿ ಈ ರೀತಿ ಹೇಳಿದರು "ದೂರಕೃಷ್ಟಿ ಹೊಂದಿದ್ದ ಮನುಷ್ಯರ ಸ್ವಭಾವವು ಭಯದಿಂದ ಕಂಪಿಸುತ್ತದೆ. ಸ್ಪಾನಿಷ್ ಗಡಿಪಾರು ಮಾಡುವಿಕೆ ಅಥಾವಾ ಬಂಜರುಭೂಮಿಯನ್ನು ತೆಗೆದು ಹಾಕುವ ಉದಾಹರಣೆಯಲ್ಲಿ ನಾವು ನಿರರ್ಥಕ ದೃಷ್ಟಿಯಲ್ಲಿರಬೇಕು. ಹಿಂದಿನ ದೃಷ್ಟಾಂತವು ನಮ್ಮ ವಿಷಯಕ್ಕೆ ಬಹಳ ದೂರದಲ್ಲಿರುತ್ತದೆ."[89] ಆದರೆ ಪೆಬ್ರವರಿ ೨೫, ೧೮೦೯ರಂದು, ಜೆಫರ್ಸನ್ [[ಹೆನ್ರಿ ಗ್ರೆಗೊಯ್ರೆ|ಅಬ್ಬೆ ಗ್ರೆಗೊಯ್ರೆ]ಗೆ ಬರೆದ ಪತ್ರದಲ್ಲಿ ಅವರ ಮೊದಲಿನ ಅಭಿಪ್ರಾಯವನ್ನು ತ್ಯಜಿಸಿದರು]:
ಸರ್, ಆಗಸ್ಟ್ 17ರಂದು ನೀವು ಒಲುಮೆಯಿಂದ ಕಳುಹಿಸಿದ ಪತ್ರವನ್ನು ನಾನು ಪಡೆದುಕೊಂಡೆ, ಮತ್ತು "ಲಿಟೆರೇಚರ್ ಆಫ್ ನೀಗ್ರೋಸ್" ಅನ್ನುವ ಸಂಪುಟವನ್ನು ನೀವು ಕಳುಹಿಸಿದ್ದು ನನಗೆ ತುಂಬಾ ಉಪಕಾರವಾಯಿತು. ಅರ್ಥಮಾಡಿಕೊಳ್ಳಲು ಸ್ವಾಭಾವಿಕವಾಗಿ ಹೊಂದಿರುವ ಶಕ್ತಿಯಿಂದ ನನ್ನಲ್ಲಿ ಉದ್ಭವಿಸಿದ ಸಂಶಯಗಳನ್ನು ಅರಿತು ಅವುಗಳನ್ನು ಖಂಡಿಸಲು, ಮತ್ತು ಈ ರೀತಿಯ ಮನ್ನಣೆಯಲ್ಲಿ ಅವು ನಮ್ಮ ಜೊತೆಜೊತೆಯಲ್ಲಿವೆ ಎಂಬುದನ್ನು ಕಂಡುಹಿಡಿಯಲು, ಜೀವಿಸುವ ಯಾವುದೇ ಮನುಷ್ಯ ನನಗಿಂತಲು ಹೆಚ್ಚಿನ ಮನಃಪೂರ್ವಕವಾದ ಆಕಾಂಕ್ಷೆಯನ್ನು ಹೊಂದಿರುವುದಿಲ್ಲ ಎಂಬ ಭರವಸೆಯನ್ನು ಹೊಂದಿರಿ. ನನ್ನಲ್ಲಿರುವ ಶಂಶಯಗಳು ನಮ್ಮ ಪ್ರತಿಭಾಶಾಲಿಗಳ ಅಭಿವೃದ್ಧಿಗೆ ಪೂರಕವಾಗಿಲ್ಲದ ಮತ್ತು ಇದನ್ನು ಇನ್ನೂ ಕಡಿಮೆಗೊಳಿಸುತ್ತಿದ್ದ ನನ್ನ ಸ್ವಂತ ರಾಜ್ಯದ ಪರಿಮಿತಿಯ ವಲಯದ ಪರಿಸ್ಥಿಯನ್ನು ವೈಯುಕ್ತಿಕವಾಗಿ ಗಮನಿಸುವುದರ ಪರಿಣಾಮ ಉದ್ಭವಿಸಿದವು. ಆದ್ದರಿಂದ ಇದನ್ನು ನಾನು ಅವರಿಗೆ ಅತ್ಯಂತ ಸಂದೇಹದೊಂದಿಗೆ ವ್ಯಕ್ತಪಡಿಸಿದೆ; ಆದರೆ ಅವರ ಪ್ರತಿಭೆಯು ಯಾವುದೇ ಪ್ರಮಾಣದಲ್ಲೇ ಇರಲಿ ಇದು ಅವರ ಹಕ್ಕುಗಣ ಮಾನವಂತು ಅಲ್ಲ. ಆದಕಾರಣ ಸರಐಸಾಕ್ ನ್ಯೂಟನ್ ಅರ್ಥಮಾಡಿಕೊಳ್ಳುವಲ್ಲಿ ಎಲ್ಲರಿಗಿಂತಲು ಶ್ರೇಷ್ಠರಾಗಿದ್ದರು, ಆದ್ದರಿಂದ ಅವರು ಮನುಷ್ಯರ ಅಥವಾ ಇತರರ ಸ್ವತ್ತಿನ ಅಧೀಶರು ಆಗಿರಲಿಲ್ಲ. ಈ ವಿಷಯದಲ್ಲಿ ಅವರು ಪ್ರತಿದಿನ ರಾಷ್ಟ್ರದ ಜನರ ಅಭಿಪ್ರಾಯದಿಂದ ಪ್ರಯೋಜನ ಪಡೆಯುತ್ತಿದ್ದರು, ಮತ್ತು ಆಶಾಜನಕವಾಗಿ ಮುಂದುವರೆಯುವಿಕೆಯು ಮನುಕುಲ ಕುಟುಂಬದ ಜೊತೆಯಲ್ಲಿ ಅವಕಾಶಗಳನ್ನು ಕಲ್ಪಿಸುಕೊಳ್ಳುವಲ್ಲಿ ಅವರ ಮರು-ನೆಲೆಯನ್ನು ಸ್ಥಾಪಿಸಲು ಸಹಾಯಕವಾಗಿದೆ. ಮಾನವ ಜೀವನದಲ್ಲಿ ಅವರ ಉಪಸಮನದ ದಿನವನ್ನು ತ್ವರೆಮಾಡುವಲ್ಲಿ ವಿಫಲವಾಗದಂತಹ, ಆಧರಣೀಯ ಬುದ್ಧಿಶಕ್ತಿಯನ್ನು ಗಮನಿಸುವ ಅನೇಕ ಸನ್ನಿವೇಶಗಳನ್ನು ಒದಗಿಸಿದ್ದಕ್ಕಾಗಿ ನನ್ನ ಕೃತಜ್ಞತೆಗಳನ್ನು ಸ್ವೀಕರಿಸುವಂತೆ ನಾನು ನಿನ್ನನ್ನು ಪ್ರಾರ್ಥಿಸುತ್ತೇನೆ; ಮತ್ತು ಎತ್ತರದ ಮತ್ತು ಗೌವರದಿಂದ ಕಾಣುವ ಭಾವನೆಗಳ ಭರವಸೆಯಲ್ಲಿರುವಂತೆ ಮತ್ತು ಎಲ್ಲಾ ಮುತುವರ್ಜಿಯಿಂದ ನಾನು ನಿನಗೆ ಅರ್ಪಿಸುವ ಎಲ್ಲವನ್ನು ಪರಿಗಣಿಸುವಂತೆ ಪ್ರಾರ್ಥಿಸುತ್ತೇನೆ.[90]
ಆಗಸ್ಟ್ ೧೮೧೪ರಲ್ಲಿ ಎಡ್ವರ್ಡ್ ಕೊಲ್ಸ್ ಮತ್ತು ಜೆಫರ್ಸನ್ ಬಂಧವಿಮೋಚನೆಯ ಮೇಲಿನ ಕೊಲ್ಸ್ ಕಲ್ಪನೆಗಳನ್ನು ಕುರಿತು ನಡೆಸಿದ ಪತ್ರವ್ಯವಹಾರ: " ನಿಮ್ಮ ಏಕಾಂಗಿತನ ಆದರೆ ಸ್ವಾಗತದ ದ್ವನಿಯು ಇದನ್ನು ಮೊದಲ ಬಾರಿಗೆ ನನ್ನ ಗಮನಕ್ಕೆ ತಂದಿತು, ಮತ್ತು ಪ್ರತಿಯೊಂದು ಆಕಾಂಕ್ಷೆಗೆ ಪ್ರತಿಕುಲ ಭಾವನಾರಾಹಿತ್ಯವನ್ನು ಸೂಚಿಸುವುದರಿಂದ ಈ ವಿಷಯವನ್ನು ಜಯಶಾಲಿಯನ್ನಾಗಿ ಮಾಡುವ ಸಾಮಾನ್ಯ ಮೌನವನ್ನು ನಾನು ಪರಿಗಣಿಸಿದ್ದೇನೆ.[91] ೧೮೧೭ರಲ್ಲಿ, ಸಾಮಾನ್ಯ ನಿರ್ಣಯದಂತೆ ಮತ್ತು ಅಮೆರಿಕಾದ ಸ್ವಾತಂತ್ರ್ಯದ ಯುದ್ಧದ ಬಂಡುಗಾರ ಟಡೆಯುಷ್ ಕೊಸ್ಸಿಯೊಜ್ಕೊ ಮರಣಹೊಂದಿದ್ದರು, ಆಗ ಕೊಸ್ಸಿಯೊಜ್ಕೊರವರಿಂದ ಅವರ ಮರಣಶಾಸನದ ನಿರ್ವಾಹಕರನ್ನಾಗಿ ಜೆಫರ್ಸನ್ರ ಹೆಸರನ್ನು ಸೂಚಿಸಲಾಯಿತು, ಅದರಲ್ಲಿ ತಮ್ಮ ಆಸ್ತಿಯ ಮಾರಾಟದಿಂದ ಬಂದ ಲಾಭವನ್ನು ಜೆಫರ್ಸನ್'ರ ಗುಲಾಮರನ್ನು ಬಿಡುಗಡೆಮಾಡಲು ಉಪಯೋಗಿಸ ಬಹುದಾಗಿ ಪೊಲೆ ಚೂಚಿಸಿದ್ದರು. ಆ ಸಮಯದಲ್ಲಿ ಜೆಫರ್ಸನ್ ೭೫ ವರ್ಷನವರಾಗಿದ್ದು, ಅವರ ಗುಲಾಮರನ್ನು ಬಿಡುಗಡೆಮಾಡಲಿಲ್ಲ ಮತ್ತು ಅವರು ಮೃತ್ಯುಪತ್ರ ನಿರ್ವಾಹಕತ್ವದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಲು ಅವರಿಗೆ ತುಂಬಾ ವಯಸ್ಸಾಗಿದೆ ಎಂದು ಸಮರ್ಥಿಸಿಕೊಂಡರು; ಅದೇ ಸಮಯದಲ್ಲಿ ವರ್ಜೀನಿಯಾ ವಿಶ್ವವಿದ್ಯಾಲಯದ ರಚನೆಯಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.[92] ಕೆಲವು ಚರಿತ್ರೆಗಾರರ ಊಹೆಯ ಪ್ರಕಾರ ಅವರು ತಮ್ಮ ಗುಲಾಮರನ್ನು ಬಿಡುಗಡೆಮಾಡುವುದರ ಬಗ್ಗೆ ಅಸಮಾದಾನಗೊಂಡಿದ್ದರು.[93] ೧೮೧೯ರ ನಂತರ ಕುಸಿದ ಭೂಮಿಯ ಬೆಲೆಯು ಜೆಫರ್ಸನ್ರನ್ನು ಇನ್ನೂ ಹೆಚ್ಚಿನ ಸಾಲದಲ್ಲಿ ಮುಳುಗುವಂತೆ ಮಾಡಿತು. ಜೆಫರ್ಸನ್ ಕೊನೆಗೆ ಅವರಿಗೆ ಅತ್ಯಂತ ಪ್ರಾಮಾಣಿಕರಾಗಿದ್ದ ಐದು ಗುಲಾಮರನ್ನು ಬಂದನದಿಂದ ಬಿಡುಗಡೆಮಾಡಿದ್ದರು ಮತ್ತು ಅವರಿಗೆ ವರ್ಜೀನಿಯಾದಲ್ಲಿ ವಾಸಿಸಲು ಅನುಮತಿ ನೀಡುವಂತೆ ಶಾಸನಸಭೆಗೆ ಅರ್ಜಿ ಸಲ್ಲಿಸಿದರು. ಅವರ ಮರಣ ನಂತರ, ಅವರ ಕುಟುಂಬವು ಉಳಿದ ಗುಲಾಮರನ್ನು ಅವರ ಎಸ್ಟೇಟ್ನ ಹುಲ್ಲು ಮೈದಾನದಲ್ಲಿ ಹರಾಜಿನ ಮೂಲಕ ವಿಕ್ರಯಿಸಿದರು[92] ಇದರಿಂದ ಅಧಿಕವಾಗಿದ್ದ ಸಾಲವನ್ನು ತೀರಿಸುವ ಉದ್ದೇಶಹೊಂದಿದ್ದರು.[94]
ಜೆಫರ್ಸನ್ ಕಟ್ಟಗಳು, ಪ್ರತಿಮೆಗಳು, ಮತ್ತು ಚಲಾವಣೆಯ ನಾಣ್ಯ,ನೋಟುಗಳನ್ನು ಒಳಗೊಂಡು ಅನೇಕ ವಿಧದಲ್ಲಿ ನೆನಪಾಗಿ ಉಳಿದರು. ಜೆಫರ್ಸನ್ ಸ್ಮಾರಕವನ್ನು ವಾಷಿಂಗ್ಟನ್, D.C.ನಲ್ಲಿ ಏಪ್ರಿಲ್ ೧೩, ೧೯೪೩ರಂದು ಅಂಕಿತಮಾಡಲಾಯಿತು, ಆ ದಿನವು ಜೆಫರ್ಸನ್'ರ ೨೦೦ನೆಯ ಜನನದ ವಾರ್ಷಿಕೋತ್ಸವವಾಗಿತ್ತು. ಸ್ಮಾರಕದ ಒಳ ಪ್ರದೇಶವು 19-foot (6 m) ಜೆಫರ್ಸನ್ರ ಪ್ರತಿಮೆಯನ್ನು ಮತ್ತು ಅವರ ಬರಹಗಳಿಂದ ಆಯ್ದು ಕೊರೆದ ವಾಕ್ಯವೃಂದಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅತ್ಯಂತ ಪ್ರಧಾನವಾದವೆಂದರೆ ಸ್ಮಾರಕದ ಸುತ್ತಾ ಮೇಲುಚಾವಣಿಯ ಹತ್ತಿರ ಕೆತ್ತಿದ ಪದಗಳು: "I have sworn upon the altar of god eternal hostility against every form of tyranny over the mind of man".[95] ಅವರ ಮೂಲ ಶಿಲಾಸ್ಮಾರಕವು, ಈಗಿನ ಸ್ಮಾರಕ, ಇದು ಈಗ ಯುನಿವೆರ್ಸಿಟಿ ಆಫ್ ಮಿಸ್ಸೊಯ್ರಿ'ಸ್ ಚತುರ್ಭುಜಾಕೃತಿ ಆವರಣದ ಸ್ಥಳದಲ್ಲಿದೆ. ಜೆಫರ್ಸನ್, ಜೊತೆಯಲ್ಲಿ ಜಾರ್ಜ್ ವಾಷಿಂಗ್ಟನ್, ಥಿಯೊಡೊರ್ ರೂಸ್ವೆಲ್ಟ್ ಮತ್ತು ಅಬ್ರಾಹಂ ಲಿಂಕನ್, ಪ್ರತಿಮೆಯನ್ನು ಆಯ್ಕೆ ಮಾಡಿದವರು ಗುಟ್ಜನ್ ಬೋರ್ಗ್ಲಮ್ ಮತ್ತು ಅಧ್ಯಕ್ಷ ಕಾಲ್ವಿನ್ ಕೂಲಿಡ್ಜ್ , ಮೌಂಟ್ ರಷ್ಮೋರ್ ಮೆಮೋರಿಯಲ್.[96] ಯು.ಎಸ್. ಜೆಫರ್ಸನ್ಸ್ $2 ಬಿಲ್, ನಿಕೆಲ್, ಮತ್ತು $೧೦೦ ಶ್ರೇಣಿ ಇಇ ಸೇವಿಂಗ್ಸ್ ಬಾಂಡ್. ಜೆಫರ್ಸನ್ರ ಇತ್ತೀಚಿನ ಸ್ಮಾರಕಗಳು NOAA ನಾವೆಯ ಆದೇಶಾಧಿಕಾರ ಕೊಡುವುದನ್ನು ಒಳಗೊಂಡಿದೆ ಥಾಮಸ್ ಜೆಫರ್ಸನ್ ನೋರ್ಪೋಕ್ ದಲ್ಲಿ, ವರ್ಜೀನಿಯಾ ಜುಲೈ ೮, ೨೦೦೩ರಂದು, ಅವರ ಕಡಲತೀರದ ಸಮೀಕ್ಷೆಯ ಅಧಿಸ್ಟಾನದ ಸಾರ್ವಜನಿಕ ಸ್ಮರಣೋತ್ಸವದಲ್ಲಿ, NOAA'ದ ನ್ಯಾಷನಲ್ ಒಸಿಯನ್ ಸರ್ವೀಸ್ನ ಸ್ಥಾನದಲ್ಲಿ ಹಿಂದೆ ಇದ್ದವರು; ಮತ್ತು ಕಂಚು ಸ್ಮಾರಕವನ್ನು ಜೆಫರ್ಸನ್ ಉದ್ಯಾನವನ, ಚಿಕಾಗೊನಲ್ಲಿ ಜೆಫರ್ಸನ್ ಉದ್ಯಾನವನದ ಸಾಗಣೆ ಕೇಂದ್ರದ ಪ್ರವೇಶ ದ್ವಾರದಲ್ಲಿ ಇಡುವುದು ಜೊತೆಯಲ್ಲಿ ಮಿಲ್ವಯ್ಕೀ ದಾರಿ ೨೦೦೫ರಲ್ಲಿ.
ಥಾಮಸ್ ಜೆಫರ್ಸನ್ ಅವರ ಇಷ್ಟಗಳು ಥಾಮಸ್ ಜೆಫರ್ಸನ್ ಹೊಂದಿರುವ ಮೊದಲ ಯುಎಸ್ ಪೋಸ್ಟೇಜ್ ಸ್ಟ್ಯಾಂಪ್ ೧೮೫೬ರಲ್ಲಿ ಬಿಡುಗಡೆಯಾಯಿತು, (displayed above) ಒಂಭತ್ತು ವರ್ಷಗಳ ನಂಟರ ಪೋಸ್ಟ್ ಆಫೀಸ್ ೧೮೪೭ರಲ್ಲಿ ತನ್ನ ಎರಡು ಸ್ಟ್ಯಾಂಪ್ಗಳನ್ನು ಹೊರತಂದಿತು ಹೆಚ್ಚುಕಡಿಮೆ ಜಾರ್ಜ್ ವಾಷಿಂಗ್ಟನ್ ಅವರಷ್ಟೇ ಹೆಸರು ಪಡೆದಿರುವ, ವಾಷಿಂಗ್ಟನ್ ಮತ್ತು ಫ್ರಾಂಕ್ಲಿನ್. regular issues.[97]
ಇತರೆ ಜೆಫರ್ಸನ್ ಪ್ರಚಾಂತರಗಳು, ಇದನ್ನೂ ನೋಡಿ ಯು.ಎಸ್. ಅಂಚೆ ಸ್ಟ್ಯಾಂಪುಗಳಲ್ಲಿ ಯು.ಎಸ್ ಅಧ್ಯಕ್ಷರುಗಳು.
೧೭೭೨ರಲ್ಲಿ, ತನ್ನ ೨೯ರ ವಯಸ್ಸಿನಲ್ಲಿ ಜೆಫರ್ಸನ್ ೨೩-ವರ್ಷ-ವಯಸ್ಸಿನ ವಿಧವೆಯನ್ನು ಮದುವೆಯಾದರು ಮಾರ್ಥಾ ವೇಲ್ಸ್ ಸ್ಕೆಲ್ಟನ್. ಅವರು ಆರು ಮಕ್ಕಳನ್ನು ಹೊಂದಿದ್ದರು: ಮಾರ್ಥಾ ಜೆಫರ್ಸನ್ ರ್ಯಾಂಡಾಲ್ಫ್ (೧೭೭೨–೧೮೩೬), ಜೇನ್ ರ್ಯಾಂಡಲ್ಫ್ (೧೭೭೪–೧೭೭೫), ಹೆಸರಿಲ್ಲದ ಒಬ್ಬ ಮಗ (೧೭೭೭), ಮೇರಿ ಜೆಫರ್ಸನ್ ಎಪ್ಪೆಸ್ (೧೭೭೮–೧೮೦೪), ಲೂಸಿ ಎಲಿಜಬೆತ್ (೧೭೮೦–೧೭೮೧), ಮತ್ತು ಇನ್ನೊಬ್ಬಳು ಲೂಸಿ ಎಲಿಜಾಬೆತ್ (೧೭೮೨–೧೭೮೫). ಮಾರ್ಥಾ ಸೆಪ್ಟೆಂಬರ್ ೬, ೧೭೮೨ರಂದು ಆಕೆಯ ಕೊನೆಯ ಮಗು ಹುಟ್ಟಿದ ನಂತರ ನಿಧನಹೊಂದಿದಳು. ಜೆಫರ್ಸನ್ ಮರುಮದುವೆಯೇ ಆಗಿಲ್ಲ. : :
ಜೆಫರ್ಸನ್ ಅವರು ಬಹಳ-ದಿನಗಳವರೆಗೂ, ಅತಿ ಹತ್ತಿರದ ಸಂಬಂಧವನ್ನು ಅವನ ಒಬ್ಬ ದಾಸಿಯೊಂದಿಗೆ ಇಟ್ಟುಕೊಂಡಿದ್ದನು, ಸ್ಯಾಲಿ ಹೆಮಿಂಗ್ಸ್, ಕ್ವಾಡ್ರೂನ್, ಆಕೆಯನ್ನು ಜೆಫರ್ಸನ್ನ ನಿಧನ ಹೊಂದಿದ ಹೆಂಡತಿಯ ಮಲಸಹೋದರಿ ಎನ್ನಲಾಗುತ್ತಿತ್ತು. ಆಕೆಯು ಆರು ಜನ ಮಕ್ಕಳನ್ನು ಹೊಂದಿದ್ದಳು, ಅದರಲ್ಲಿ ನಾಲ್ಕು ಜನ ಮಕ್ಕಳು ಬದುಕಿದ್ದರು ಮತ್ತು ಅವರನ್ನು ಸ್ವೇಚ್ಛೆಯಾಗಿ ಬಿಡಲಾಗಿತ್ತು ಮತ್ತ್ತು ಜೆಪರ್ಸನ್ನಿಂದ ದೂರವಿರಲು ಅವಕಾಶ ನೀಡಲಾಗಿತ್ತು. ಅದರಲ್ಲಿ ಏಳು-ಎಂಟು ಜನರು ಪೂರ್ವಜರಿಂದ ಬಿಳಿಯರಾಗಿರಬಹುದು.[98] ಅಧ್ಯಕ್ಷ ಜೆಫರ್ಸನ್ ಅವರ ಆಡಳಿತದ ಸಮಯದಲ್ಲಿ ಹಿಂದಿನ ನೌಕರ ಜೇಮ್ಸ್ ಟಿ. ಕ್ಯಾಲೆಂಡರ್ ಹೇಳಿದಂತೆ ಜೆಫರ್ಸನ್ ಅವರ ಹೆಂಡತಿಯ ಮರಣಾನಂತರ ಹೆಮಿಂಗ್ಸ್ ಅವರಿಂದ ಹಲವಾರು ಮಕ್ಕಳನ್ನು ಪಡೆದ ಆಪಾದನೆಯನ್ನು ಅಲ್ಲಗಳೆದಿದ್ದರು. ೧೮೧೬ರ ಪತ್ರದಲ್ಲಿ ಜೆಫರ್ಸನ್ ಕಾಮೆಂಟ್ ಮಾಡಿರುವುದು:[99] ಆತನು ಹೇಳಿರುವಂತೆ ಮಿ. ಜೆಫರ್ಸನ್ ಅವರು ಮಹಿಳಾ ಗುಲಾಮರೊಂದಿಗೆ ಸಂಬಂಧ ಹೊಂದಿದನೆನ್ನಲಾಗಿದೆ. "[100]
ಟೆಂಪ್ಲೇಟು:ವಿಕಿಪೀಡಿಯಾ-ಪುಸ್ತಕಗಳು
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.