ಒಂದು ಭಾರತೀಯ ಧರ್ಮ From Wikipedia, the free encyclopedia
ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ[1] ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.[2] ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.
ಹಿಂದೂ ಧರ್ಮದ ಮೇಲಿನ ಒಂದು ಸರಣಿಯ ಭಾಗ |
---|
ಓಂ • ಬ್ರಹ್ಮ • ಈಶ್ವರ |
ಧರ್ಮಗ್ರಂಥಗಳು
|
ಆಚರಣೆಗಳು
|
ದಾರ್ಶನಿಕರು
|
ಇತರ ವಿಷಯಗಳು
|
ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ"[3] ಅಥವಾ "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ" ಎಂದು ಹೇಳಲಾಗುತ್ತದೆ.[4][5][6][7] ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ.[8] ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ.[9] ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.
ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.[15]
ಆದರೆ ಹಿಂದೂ ಎಂಬ ಪದಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿಲ್ಲ. ಭಾರತದಲ್ಲಿ ವೈಧಿಕ ಧರ್ಮ ಇತ್ತು ಎಂಬುದು, ಸನಾತನ ಧರ್ಮ ಇತ್ತು ಎಂಬುದು, ಚಾತುರ್ವರ್ಣ ಧರ್ಮ ಇತ್ತು ಎಂಬುದು, ಮನುಧರ್ಮವಿತ್ತು ಎಂಬುದು, ವೇದಗಳೇ ವೈಧಿಕ ಧರ್ಮದ ಆಧಾರ ಗ್ರಂಥಗಳೆಂದು, ಪ್ರಾಚೀನ ಋಷಿ-ಮುನಿಗಳು ಇವುಗಳ ರಚನೆಕಾರರು, ಅವರೇ ಈ ಧರ್ಮ ಸಂಸ್ಥಾಪಕರು ಎಂಬ ಚಿಂತನೆಗಳಿವೆ. ವೇದಗಳೇ ಸತ್ಯವೆಂಬ ಮಾತೂ ಇದೆ. ಯಜ್ಞ ಯಾಗಾದಿಗಳನ್ನು ಮಾಡುತ್ತ ಪ್ರಜೆಗಳಿಗೆ ಮಾರ್ಗದರ್ಶಕರಾಗಿ ಮುನಿಗಳು ವೈಧಿಕ ಧರ್ಮದ ಕರ್ತೃಗಳು ಎಂಬುದು ಬಹುತೇಕ ಭಾರತೀಯರ ನಂಬಿಕೆ. ಭಾರತೀಯ ಅರೆಸೊತ್ತಿಗೆಯ ರಾಜ್ಯಾಡಳಿತ ಕಾಲದಲ್ಲಿ ರಾಜಾ ಪ್ರತ್ಯಕ್ಷ ದೈವವೆಂಬ ನಂಬಿಕೆಯಲ್ಲಿ, ಆತನ ರಕ್ಷಣೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ಜನ ಸಮುದಾಯಗಳ ಸಂಘಟನೆಯಲ್ಲಿ ಬೆಳೆಯಿತು ಈ ಸನಾತನ ಧರ್ಮ. ಅನಂತರ ಬೆಳೆದು ಬಂದ ಪಂಚಮನ ಸೇರ್ಪಡೆಯೊಂದಿಗೆ ಭಾರತೀಯ ಜನವರ್ಗ ವೈಧಿಕಧರ್ಮದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳುವಾಗ, ದೇವರು, ಸಂಪ್ರದಾಯ, ವಿಧಿ-ನಿಷೇಧಗಳು, ಪುನರ್ಜನ್ಮ, ಕರ್ಮಸಿದ್ದಾಂತ, ಪುರುಷಪ್ರಾಧಾನ್ಯ ಆಚರಣೆಗಳು, ಮೊದಲಾದ ಅಸ್ತ್ರಗಳ ಮೂಲಕ, ಧಾರ್ಮಿಕ ಅಲಿಖಿತ ಶಾಸನಗಳ ಭಯದೊಂದಿಗೆ ವೈಧಿಕ ಧರ್ಮ ಭಾರತೀಯರ ಬದುಕಿನ ಭಾಗವಾಗಿದೆ. ದೇವರ ಶಿರದಿಂದ ಬ್ರಾಹ್ಮಣನೂ, ತೋಳುಗಳಿಂದ ಕ್ಷತ್ರಿಯನೂ, ಹೊಟ್ಟೆ-ತೊಡೆಗಳಿಂದ ವೈಶ್ಯನೂ, ಪಾದಗಳಿಂದ ಶೂದ್ರನು ಹುಟ್ಟಿದನೆಂದು ಭಾರತದ ಜನ ಸಮುದಾಯದ ವೈಧಿಕರ ಜನ್ಮ ರಹಸ್ಯವನ್ನು ತಿಳಿಸಲಾಗಿದೆ. ಶೂದ್ರ ಸೇವಕ. ಪಶು ಸಮಾನ ಆತನಿಗೆ ಸುಖ ಜೀವನದ ಹಕ್ಕಿಲ್ಲ. ಶ್ರೇಣೀಕೃತವಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸೇವೆಯನ್ನು ಕಾಯಾವಾಚಾಮನಸಾ ಮಾಡಿದಾಗ, ಮರುಜನ್ಮದಲ್ಲಿ ತನ್ನ ಕರ್ಮದಂತೆ ಉನ್ನತವಾದ ಸಮುದಾಯಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಹುಟ್ಟಿ ದೇವರ ಪ್ರೀತಿ, ಸುಖ, ಭೋಗ ಜೀವನ ಅನುಭವಿಸಬಹುದು. ಇಲ್ಲದಿದ್ದರೆ ಇಲ್ಲ. ಬ್ರಾಹ್ಮಣನೇ ಶ್ರೇಷ್ಠ. ವೇದಗಳನ್ನು ನಿರ್ಮಿಸಿದ ಋಷಿಗಳ ಸಂತತಿ ಎಂಬುದು ತರ್ಕ. ಧರ್ಮ ಸುಧಾರಕರೂ ಅವರೇ ಆಗಿದ್ದರು.ಸಂಸ್ಕ್ರತ ದೇವಭಾಷೆ ಅಂದರೆ ಶ್ರೇಷ್ಟರ ಭಾಷೆ. ಆಡಳಿತ, ಶಿಕ್ಷಣ, ಧಾರ್ಮಿಕಾಚರಣೆಗಳೆಲ್ಲವೂ ಸಂಸ್ಕೃತ ದಲ್ಲಿಯೇ. ಪ್ರಾದೇಶಿಕ ಭಾಷೆಗಳು ಹತ್ತು ಹಲವು ಶೂದ್ರರಾದ ಜನಸಾಮಾನ್ಯರದು. ಹೆಣ್ಣು ಈ ಧರ್ಮದಲ್ಲಿ ದೈವಿಕವಾದ ಪಾತ್ರ, ಪುರುಷ ಪೋಷಕ, ಪುರುಷನ ಭೋಗವಸ್ತು. ಗೌರವದ ಪತಿವ್ರತೆ, ಗೃಹಿಣಿ. ಮಹಾಸತಿ. ಲಿಂಗತಾರತಮ್ಯವಿದ್ದರೂ ಅದು ದೈವೀ ಇಚ್ಛೆ. “ಮಹಿಳಾ ಮೌನಂ ಸುಖಪ್ರಾಪ್ತಂ” ಆಗಿತ್ತು. ಋಷಿ-ಮುನಿ ನಿರ್ಮಿತ ವೈಧಿಕ ಧರ್ಮದಲ್ಲಿ ಕಾಲಕಾಲಕ್ಕೆ ದೋಷಗಳನ್ನು ಗುರುತಿಸಿ, ಸುಧಾರಣಾ ತಿದ್ದುಪಡಿಗಳನ್ನು ತಂದಿರುವುದುಂಟು, ಅವುಗಳೇ ಸ್ಮ್ರತಿಗಳು, ಆಗಮ ಗ್ರಂಥಗಳು, ಧರ್ಮಶಾಸ್ತ್ರ ಗ್ರಂಥಗಳು ಮೊದಲಾದವು. ಇಲ್ಲಿ ಎಷ್ಟೇ ದೋಷ ನಿವಾರಣೆಯನ್ನು ತಂದರೂ, ಅದರಲ್ಲಿನ ಮೂಲ ಸ್ವರೂಪ ಬದಲಾಗಿಲ್ಲ. ಜನ ಸಮುದಾಯಗಳಲ್ಲಿನ ತಾರತಮ್ಯ ಬದಲಾಗಿಲ್ಲ. ಹೆಣ್ಣು-ಗಂಡಿನ ಬೇಧ ತಗ್ಗಲಿಲ್ಲ. ವೃತ್ತಿ-ಕಸುಬು ಆಧಾರಿತ ಖಾಯಂ ಜಾತಿ-ಗುಂಪುಗಳನ್ನು ಪೋಷಿಸಲಾಯಿತು. ಶ್ರಮ ಜೀವಿಗಳು ಕಷ್ಟ ಪಡುವಂತಾದರೆ, ಸುಖಜೀವಿಗಳು ಮತ್ತಷ್ಟು ಭೋಗಾಕಾಂಕ್ಷಿಗಳಾದರು. ದರ್ಪ, ದೌರ್ಜನ್ಯ, ಪಾಳೇಗಾರಿಕೆಗಳು ಹೆಚ್ಚಿದವು. ಶೂದ್ರರಲ್ಲಿ ಮತ್ತೂ ಶೂದ್ರ-ಪಂಚಮ ಅಸ್ಪ್ರಶ್ಯತೆಗಳು ಹೆಚ್ಚಾಗಿ ಶೋಷಣೆಯ ವಿಧಗಳು ಬೆಳೆದವು. ಹೆಣ್ಣು ರತ್ನವಾಗಿ, ಭೋಗಮಸಾಣಿಯಾಗಿ- ವೇಶ್ಯಯಾಗಿ, ವಂಶವನ್ನು ಹೆತ್ತುಕೊಡುವ ಯಂತ್ರವಾಗಿ ನೆಲೆನಿಂತಳು. ಸ್ವಪ್ರತಿಷ್ಟೆ, ಸ್ವಜನ ಪಕ್ಷಪಾತ, ಅಧಿಕಾರದಾಹಗಳು ಧರ್ಮವನ್ನು ಹಲವು ದಾರಿಗಳಾಗಿ ಸೀಳಿದವು. ಶೈವ, ವೈಷ್ಣವ, ಶಕ್ತಿ ಆರಾಧನೆ ಮೊದಲಾದ ಪಂಥಗಳು ಹುಟ್ಟಿಕೊಂಡವು. ಬೌದ್ಧ, ಜೈನ, ಸಿಖ್, ವೀರಶೈವ ಮೊದಲಾದ ಧರ್ಮಗಳು, ಈ ವೈಧಿಕ ಧರ್ಮದ ದೋಷಗಳನ್ನು ಕಂಡು ಸಿಡಿದು ಹೊಸ ರೂಪಗಳನ್ನು ಪಡೆದವು, ಬೆಳೆದವು. ಕಾಲಾಂತರದಲ್ಲಿ ಯಜ್ಞಯಾಗಾದಿಗಳು ಕೆಲವು ಸನಾತನಿಗಳಲ್ಲಿ ಉಳಿದು, ಆದಿ ಮೂಲದ ಮೂರ್ತಿಪೂಜೆ, ಆತ್ಮ ಪೂಜೆ, ಪ್ರಕೃತಿ ಪೂಜೆಗಳು ಶೂದ್ರರಾದಿಯಾಗಿ ಬೆಳೆದವು. ಶೂದ್ರರಲ್ಲಿ ದೇವರು, ಧರ್ಮಗಳ ಹುಡುಕಾಟದಲ್ಲಿ ಭಕ್ತಿಪಂಥಗಳೂ ಬೆಳೆದವು. ಮುಕ್ತಿಗೆ ಭಕ್ತಿಯೇ ಸಾಕೆಂಬ ಶರಣರ, ದಾಸರ, ತತ್ವಪದಕಾರರ ವಿಚಾರಗಳಿಂದ ಪ್ರೇರಿತವಾದ ಜನರು ಮೂರ್ತಿ ಪೂಜೆಯನ್ನು ಖಾಯಂಗೊಳಿಸಿ, ಪ್ರಕೃತಿ ಆರಾಧನೆಯಲ್ಲಿ ಖುಷಿ ಕಂಡರು. ಹೀಗೆ ಬೆಳೆದು ಬಂದ ಭಾರತ ಜಾತಿ ವ್ಯವಸ್ಥೆಯ ಬಹುತೇಕ ಸಮುದಾಯಗಳಲ್ಲಿ ಧರ್ಮವೆಂಬುದು, ಅನಿವಾರ್ಯದ ಭಾಗವೆಂದು ಅವರಿಗೆ ಅನಿಸಲೇ ಇಲ್ಲ. ಯಾವುದೋ ಗುರುಗಳು ಬಂದು ಧರ್ಮ ಬೋಧನೆ ಮಾಡಬೇಕು, ನಾವು ಅದನ್ನು ಪಾಲಿಸಬೇಕೆಂಬ ಪ್ರಜ್ಞೆಯೂ ಇಲ್ಲದಂತೆ ಅವರು ಬದುಕಿದರು. ಅವರವರಿಗೆ ಅವರದೇ ದೇವರು, ಅವರ ಪೂಜೆ- ಕರ್ಮಗಳೇ ಬೇರೆಯಾಗಿ ಹಿಂದೂ ಎಂದರೆ ಭಾರತದಲ್ಲಿ ಮೂರ್ತಿ ಪೂಜಾರಾಧಕರೆಂಬ ಕುರುಹು ಮಾತ್ರ ಉಳಿಯಿತು.
ಹಿಂದೂ ಎಂಬುದು ಹೊಸ ಇತಿಹಾಸ ನಿರ್ಮಾಣವಾದ ಕಾಲಘಟ್ಟದಲ್ಲಿ ಹುಟ್ಟಿದ ಪದ. ಇತಿಹಾಸಕಾರರ ಪ್ರಕಾರ ಭಾರತದ ಮೂಲನಿವಾಸಿಗಳ ನೆಲೆ-ತಾಣ, ಸಿಂಧೂನದಿ ತೀರ ಪ್ರದೇಶ. ಸಿಂದೂನಾಗರೀಕತೆ ಭಾರತದ ಪೂರ್ವ ಇತಿಹಾಸವನ್ನು ತಿಳಿಸುವ ಗತಕಾಲದ ಉತ್ಖನನದ ದಾಖಲೆ. ಶ್ರೀಲಂಕಾ, ಬರ್ಮಾ, ನೇಪಾಳ, ಬಾಗ್ಲಾದೇಶ, ಪಾಕೀಸ್ಥಾನ ಮತ್ತು ಭಾರತಗಳು ಉಪಖಂಡವಾಗಿ ಒಂದಾಗಿದ್ದ ಕಾಲಘಟ್ಟದಲ್ಲಿ ಸಿಂದೂನದಿ ಪ್ರದೇಶವೇ, ಭಾರತದ ಜನಸಮುದಾಯಗಳ ನೆಲೆ. ಮಧ್ಯೆ ಏಷ್ಯಾದಿಂದ ಆ ಪ್ರದೇಶದ ಮೇಲೆ ದಾಳಿ ನಡೆದಾಗ ಪರ್ಷಿಯನ್ನರು. ಸಿಂದೂ ನದಿಯನ್ನು ಅವರಲ್ಲಿ ‘ಸ’ ಕಾರ ಇಲ್ಲದ್ದರಿಂದ ಹಿಂದೂನದಿ ಎಂದು ಕರೆದರೆಂದೂ, ಸಿಂದೂನದಿ ನಾಗರೀಕರನ್ನು, ಹಿಂದೂನದಿ ನಾಗರೀಕರೆಂದು ಕರೆದರೆಂದೂ ಆ ರೂಪಗಳೇ ಮುಂದೆ ಸಿಂದೂಸ್ಥಾನ- ಹಿಂದೂಸ್ಥಾನ ವಾಯಿತೆಂದು, ಇಲ್ಲಿನ ಜನ ಹಿಂದೂಗಳಾದರೆಂದು ವಿವರಗಳಿವೆ. ಯುರೋಪಿಯನ್ನರು ಆ ಕಾರಣಕ್ಕಾಗಿಯೇ INDIA- ಇಂಡಿಯಾ ಎಂಬ ಹೆಸರಿನಿಂದ ಭಾರತವನ್ನು ಕರೆದಿದ್ದಾರೆಂಬ ವಿವರಗಳು ಇತಿಹಾಸದಲ್ಲಿ ಸಿಗುತ್ತವೆ. ಪರ್ಷಿಯನ್ ಪದದ ಸಿಂದೂ-ಹಿಂದೂ ಜನರಾದ ಭಾರತೀಯರು, ಹಿಂದೂಗಳಾದರು. ಭಾರತೀಯರ ಧರ್ಮ, ಜನಾಂಗೀಯ ಪದವಾದ ಹಿಂದೂ ಪದ ಸೂಚಕವಾಗಿ ಹಿಂದೂ ಧರ್ಮವಾಯಿತು ಅಂಬೋಣ, ಭಾರತ ಮೂಲದ ಎಲ್ಲರೂ ಹಿಂದೂಗಳಾದರೆ, ಹಿಂದೂ ಹೆಸರಿನ ಅವರ ಮೂಲಧರ್ಮ ವೈಧಿಕ ಧರ್ಮ, ಸನಾತನ ಧರ್ಮ ಆಗಿತ್ತು. ಆದರೆ ಈ ಧರ್ಮಾಚರಣೆಗಳಲ್ಲಿ ಫಲಾನುಭವಿಗಳು ಹಳೆಯ ಚಾತುರ್ವರ್ಣ ವ್ಯವಸ್ಥೆಯ ರೂವಾರಿಗಳು. ಯಜ್ಞ-ಯಾಗಾದಿಗಳಲ್ಲಿ ಭಾಗವಹಿಸುತ್ತಾ ಬಂದವರೂ ಆದ ಪುರೋಹಿತಶಾಹಿಗಳು, ರಾಜ್ಯಶಾಹಿಗಳೂ ಆಗಿದ್ದರು. ಶೂದ್ರರಿಗೆ, ದೇವತೆಗಳ, ದೇವರುಗಳ ದರ್ಶನವಿಲ್ಲ. ಧಾರ್ಮಿಕಾಚರಣೆಗಳಲ್ಲಿ ಮೂಕ ಪ್ರೇಕ್ಷಕರು. ಪಾಲುದಾರರಲ್ಲ. ಭಾಗೀದಾರರಲ್ಲ. ಈ ಇಬ್ಬರಲ್ಲಿ ಒಂದು ಕಂದಕವಿತ್ತು. ಶೂದ್ರರಿಗೆ, ಅವರದೇ ಆದ ಪ್ರಕೃತಿ ದೈವಗಳು, ಮಾರ್ಗದರ್ಶನ ನೀಡಿ ಹುತಾತ್ಮರಾದ ಸತ್ವಪರುಷರು, ನೆಲ-ಜಲ ಭೂತ- ಪ್ರೇತಗಳು ದೇವರುಗಳಾಗಿ ಅವರ ಮೈಮೇಲೆ ಬಂದು ಸಹಾಯ ಮಾಡುವ ಪರಿಹಾರ ಸೂಚಕರೂ ಆಗಿದ್ದರು. ಅದರ ಜೊತೆಗೆ ಪುರಾಣ, ಕಾವ್ಯಗಳ ಶಿವ, ವಿಷ್ಣು, ಗಣಪ, ಪಾರ್ವತಿ, ಸರಸ್ವತಿ. ಲಕ್ಷ್ಮಿ ಎಲ್ಲರೂ ವರ ಕೊಡುವ ಆದರ್ಶ ದೇವತೆಗಳಾದರು. ಆದರೆ ಸನಾತನ ಯಜ್ಞ ಯಾಗಾದಿಗಳು ಇವರ ಆರಾಧನೆಗಳಲ್ಲವಾಗಿತ್ತು. ಅದರಿಂದ ಸನಾತನ ವೈಧಿಕರ ಪಂಥಕ್ಕೂ, ಶೂದ್ರರಾದ ಶ್ರಮಿಕರ ಪಂಥಕ್ಕೂ ವ್ಯತ್ಯಾಸಗಳು ಇದ್ದೇ ಇತ್ತು. ವೈಧಿಕರ ಜೊತೆ ಅನಿವಾರ್ಯವಾಗಿ ಸಾಮರಸ್ಯ- ಶೋಷಣೆ- ಬೇಸರಗಳ ನಡುವೆಯೇ ಹೆಸರಿಗೆ ವೈಧಿಕರಾಗಿದ್ದರು. ಆದರೆ ಅವರು ವೈಧಿಕರಲ್ಲ. ಭಾರತೀಯ ಮೂಲನಿವಾಸಿಗಳು ಮಾತ್ರ ಆಗಿದ್ದರು. ಪಿತೃ ಜೊತೆಗೆ ಮಾತೃವನ್ನೂ ಆರಾಧಿಸುವ ಸುಸಂಸ್ಕೃತರು ಇವರು.
ವೈಧಿಕ ಧರ್ಮಕ್ಕೆ ಸಿಂಧೂ ನಾಗರೀಕತೆಯ ಅನ್ವೇಷಣೆಯ ನಂತರ ಹಿಂದೂ ಧರ್ಮವೆಂಬ ನಾಮಕರಣವಾದ ಸಂದರ್ಭದಲ್ಲಿ ಸನಾತನ ವೈಧಿಕಧರ್ಮದ ಶೂದ್ರರೆಲ್ಲರು ಒಂದೇ ಆಗಿ ಹಿಂದೂಗಳು ಎನಿಸಿಕೊಂಡರು. ಆದರೆ, ಹಿಂದೂಗಳಾದ ಮಾತ್ರಕ್ಕೆ ಭಾರತೀಯ ಶೂದ್ರರು ಸನಾತನ ಪುರೋಹಿತಶಾಹಿ ಹಿಂದೂಗಳಾಗಲಿಲ್ಲ. ಅವರೂ ಇವರನ್ನು ಸೇರಿಸಿಕೊಳ್ಳಲಿಲ್ಲ. ಭಾರತೀಯ ಶೂದ್ರರೆಂದು ಕರೆಸಿಕೊಂಡ ಆದಿ ಹಿಂದೂಗಳಾಗಿಯೇ ಉಳಿದರು. ಸನಾತನ ಹಿಂದೂಗಳೇ ಬೇರೆ, ಆದಿ ಹಿಂದೂಗಳೇ ಬೇರೆ. ಮೂರ್ತಿಪೂಜೆ ಮೊದಲಾದ ಕೆಲವೊಂದು ಆಚರಣೆ, ನಂಬಿಕೆಗಳಲ್ಲಿ ಇವರಿಬ್ಬರಲ್ಲಿ ಸಾಮ್ಯತೆಯಿದೆ ಎಂದು ಹೇಳಿದರೂ, ಯಜ್ಞ ಮೂಲದ ಸನಾತನ ಆಚರಣೆಗಳಿಲ್ಲ. ಮುಸ್ಲಿಮಲ್ಲಿ ಸುನ್ನಿ ಮತ್ತು ಶಿಯಾಗಳಿದ್ದಂತೆ, ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರಿದ್ದಂತೆ , ಜೈನರಲ್ಲಿನ ಶ್ವೇತಾಂಬರ ಮತ್ತು ದಿಗಂಬರರಿದ್ದಂತೆ ಭಾರತದ ಹಿಂದೂಗಳಲ್ಲಿ ಸನಾತನ ಹಿಂದೂಗಳು ಮತ್ತು ಆದಿಹಿಂದೂಗಳು ಎಂಬ ವಿಭಾಗವಿದೆ. ಆದರೆ ಬೇರೆ ಧರ್ಮಗಳಂತೆ ಭಾರತದಲ್ಲಿ ಆ ಪ್ರತ್ಯೇಕತೆಯ ಗುರುತು ದಾಖಲೆಯಾಗಿಲ್ಲ. ಸನಾತನ ಧರ್ಮದ ಅನುಯಾಯಿಗಳು ಧರ್ಮದ ನೆಲೆಯಲ್ಲಿ ಅಸ್ತಿತ್ವ ಹುಡುಕಾಡಿದರೆ, ಆದಿಹಿಂದೂಗಳು ಶ್ರಮ, ಭೂಮಿ ತಾಯಿಯ ಮಡಿಲು ಮತ್ತು ಇತ್ತೀಚೆಗೆ ಸರ್ಕಾರದ ನೌಕರಿ, ವಿವಿಧ ಉಧ್ಯಮಗಳ ಹುಡುಕಾಟದಲ್ಲಿ ಅಧಿಕಾರ-ರಾಜಕಾರಣದ ಪರಿಚಯ ಪಡೆಯುತ್ತಿದ್ದಾರೆ. ಅದಕ್ಕೆ ಜಾತಿಯ ಬಳಕೆ ಉಪಯೋಗವಾಗುತ್ತಿದೆಯೆಂಬ ಭ್ರಮೆಯೂ ಇಣುಕಿನೋಡುತ್ತಿದೆ. ಬಹುತೇಕ ಶೂದ್ರರು ಹಿಂದೂ ಎಂಬ ಹೆಸರಿನಿಂದ ಭಾವಪರವಶರಾಗುವುದಿಲ್ಲ. ಆದರೆ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಪದಕ್ಕೆ ವೈಚಾರಿಕ ನೆಲೆಯಲ್ಲಿ ಬೇಸರವಿದ್ದರೂ ಅನಿವಾರ್ಯತೆಯ ನೆಲೆಯಲ್ಲಿ ಭಾವಪರವಶರಾಗುವುದುಂಟು. ಸರ್ಕಾರಿ ದಾಖಲೆಗಳಲ್ಲಿ ಕಾಲಂ ತುಂಬಲು ಹಿಂದೂ ಪದ ಬಳಸುತ್ತಾರೆಂಬುದು ನಿಜವಾದರೂ, ಇವರಿಗೆ ಹಿಂದೂ ಎನ್ನಿಸಿಕೊಳ್ಳುವುದಕ್ಕಿಂತಲೂ ಭಾರತೀಯ ಎನ್ನುವುದು ಭಾವಾದ್ರೇಕಕ್ಕೆ ಕಾರಣವಾಗುತ್ತದೆ. ನನ್ನ ದೇಶ ಭಾರತ, ನಾಡು, ನುಡಿ ಅತ್ಯಂತ ಪ್ರೀಯವಾದುದು. ಭಾರತೀಯ ಹೆಮ್ಮೆಯ ವಿಷಯ. ಹಿಂದೂ ಅದು ವೈಯಕ್ತಿಕ ಅನುಭೂತಿ ಅಷ್ಟೇ. ಹಳೆಯ ಭಾರತದ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಮಾತ್ರ ಅವರ ಬದುಕನ್ನು ನಿರ್ಧರಿಸುತ್ತಿದೆ, ಧರ್ಮ ಐಚ್ಛಿಕವಷ್ಟೇ.
ಭಾರತೀಯ ಹಿಂದೂಗಳೆಲ್ಲರೂ ಜಾತಿಯನ್ನು ಮಾತ್ರ ಹಿಡಿದಿದ್ದಾರೆ. ಅಥವಾ ಅದೇ ಅವರನ್ನು ಬಿಟ್ಟು ಬಿಡಲಾರದಂತೆ ಹಿಡಿದಿದೆ. ಅದರಿಂದಲೇ, ಅವರ ನೋವು-ನಲಿವುಗಳಲ್ಲಿ ಅಲ್ಪ ತೃಪ್ತಿಯನ್ನು ಅನುಭವಿಸುತ್ತಿದ್ದಾರೆ. ಆಗಾಗ ಅಧಿಕಾರ, ರಾಜಕಾರಣಕ್ಕಾಗಿ ಸನಾತನ ಹಿಂದೂಗಳು, ಹಿಂದೂಗಳೆಲ್ಲರೂ ಒಂದೇ ಎಂಬ ಧರ್ಮದ ಅಪೀಮನ್ನು ಹರಡಲು ಪ್ರಯತ್ನ ಪಡುತ್ತಾ ಹೋರಾಡುತ್ತಾರೆ. ಅದಕ್ಕಾಗಿ ಆದಿ ಹಿಂದೂಗಳನ್ನು ಜಾತ್ಯಾತೀತವಾದಿಗಳು, ಧರ್ಮ ವಿರೋಧಿಗಳು ಎಂದು ಜರಿದು ಆವೇಶ ಭರಿತರಾಗುತ್ತಾರೆ. ಹಿಂದೂಗಳಿಗೆ ಪ್ರೇರಣೆ ನೀಡುತ್ತಿದ್ದೇವೆಂದು ಭ್ರಮೆಗೆ ಬೀಳುತ್ತಾರೆ. ಆದರೆ ಬಹಳಷ್ಟು ಆದಿ ಹಿಂದೂಗಳು ಮತ್ತು ಕೆಲವರಾದರೂ ಸನಾತನ ಹಿಂದೂಗಳು ಅದರ ಮೂಲ ಕೋಮುವಾದಿತನದಿಂದ ಬಿಡಿಸಿಕೊಳ್ಳಲು ನಿರ್ಧರಿಸಿ, ಅದು ಹುಟ್ಟು ಹಾಕಿದ ಜಾತಿ ಮೂಲವನ್ನು ಮರೆತು ಜಾತ್ಯಾತೀತತೆಯನ್ನು ಬೆಳೆಸಿಕೊಂಡು, ಇಂದಿನ ಅಖಂಡ ಭಾರತದ ಹಲವು, ಧರ್ಮ, ಸಂಸ್ಕೃತಿ, ಸಮುದಾಯಗಳಲ್ಲಿ ಬೆರೆತು ಮಾನವತನವನ್ನಷ್ಟೇ ಗುರುತಿಸಿಕೊಂಡು ವಿಶ್ವಮಾನವತೆಗಾಗಿ ದುಡಿಯಲು ಕಂಕಣಬದ್ಧರಾಗುತ್ತಿದ್ದಾರೆ. ಜಾತಿ, ಧರ್ಮ, ಕೋಮಿಗಿಂತಲೂ ಮಾನವ ಪ್ರೇಮ ಮುಖ್ಯವಲ್ಲವೇ. ಅದೇ ನಮ್ಮ ಗುರಿಯಾಗಬೇಕೆಂಬ ಧೋರಣೆ ಸ್ವಾಗತಾರ್ಹ. ಪ್ರಕೃತಿಯೊಡನೆ ಸ್ಪಂದಿಸಿ ಮನುಷ್ಯರಾಗುವುದು ಮುಖ್ಯವಾಗುತ್ತದೆಂಬುದು ನನ್ನ ಭಾವನೆ. ಎಲ್ಲಾ ಮನುಷ್ಯರು ಒಂದೇ, ಅವರಿಗೆ ಗೌರವ ಕೊಡಬೇಕು, ಪ್ರೀತಿ ತೋರಿಸಬೇಕು. ನಾವು ಸಹ ಅವನ್ನೆಲ್ಲಾ ಪಡೆಯಬೇಕು, ಇದರಿಂದ ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಉಳಿಯುತ್ತದೆ. ಬುದ್ಧ, ಮಹಾವೀರ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಶಕ್ತಿ ಮತ್ತು ಮಹಾಮಾನವತ್ವ, ಹಾಗೆಯೇ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯ, ಶಾಂತಿಗಳು ಜಗತ್ತನ್ನೂ ಬೆಳಗುವುದರಲ್ಲಿ ಎರಡು ಮಾತಿಲ್ಲ. ಅವು ನಮ್ಮವು ಮಾತ್ರ ಆದರೆ ‘ನಾವು ದೈವತ್ವಕ್ಕಿಂತ ಮಿಗಿಲಲ್ಲವೇ’.
"ಧರ್ಮ"ಕ್ಕೆ ಒಂದು ಸಮಾನಾರ್ಥಕ ಪದವಾಗಿ "ಮತ" ಪದದ ನಿತ್ಯಗಟ್ಟಳೆಯ ಬಳಕೆಯ ಕಾರಣ ಹಿಂದೂ ಧರ್ಮದ ಒಂದು ವ್ಯಾಖ್ಯಾನ ಮತ್ತೂ ಜಟಿಲವಾಗಿದೆ.[20] ಕೆಲವು ವಿದ್ವಾಂಸರು[29] ಮತ್ತು ಹಲವಾರು ಆಚರಣಕರ್ತರು ಹಿಂದೂ ಧರ್ಮವನ್ನು ಒಂದು ಸ್ಥಳೀಯ ವ್ಯಾಖ್ಯಾನವಾದ ಶಾಶ್ವತ ಸೂತ್ರ", ಅಥವಾ "ಶಾಶ್ವತ ಕ್ರಮ"ವೆಂಬ ಅರ್ಥಸೂಚಿಸುವ ಒಂದು ಸಂಸ್ಕೃತ ಪದಗುಚ್ಛವಾದ ಸನಾತನ ಧರ್ಮ ಎಂಬ ಪದವನ್ನು ಬಳಸಿ ನಿರ್ದೇಶಿಸುತ್ತಾರೆ.[2][30]
ಕರ್ಮ ಎಂದರೆ ಅಕ್ಷರಶಃ ಕ್ರಿಯೆ, ಕೆಲಸ, ಅಥವಾ ಕಾರ್ಯ,[45] ಮತ್ತು ಇದನ್ನು "ಕಾರಣ ಮತ್ತು ಫಲದ ನೈತಿಕ ನಿಯಮ"ವೆಂದು ವಿವರಿಸಬಹುದು.[46]
“ | ಒಬ್ಬ ವ್ಯಕ್ತಿಯು ಹಳೆಯ ಮತ್ತು ಹರಿದ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಹೇಗೆ ಧರಿಸುತ್ತಾನೆಯೋ, ಹಾಗೆ ಒಂದು ಸಶರೀರ ಆತ್ಮವು ಹಳೆಯ ಶರೀರಗಳನ್ನು ತೊರೆದು ಹೊಸ ಭೌತಿಕ ಶರೀರಗಳನ್ನು ಪ್ರವೇಶಿಸುತ್ತದೆ. (ಭ.ಗೀ. ೨:೨೨)[48] | ” |
ಎಂದು ಭಗವದ್ಗೀತೆಯು ಹೇಳುತ್ತದೆ.
ಸಂಪ್ರದಾಯಬದ್ಧ ಹಿಂದೂ ಚಿಂತನೆಯು ಪುರುಷಾರ್ಥಗಳೆಂದು ಪರಿಚಿತವಾದ ಮುಂದೆ ಹೇಳಲಾದ ಮನುಷ್ಯ ಜನ್ಮದ ಉದ್ದೇಶಗಳನ್ನು ಒಪ್ಪಿಕೊಳ್ಳುತ್ತದೆ: ಧರ್ಮ "ಧರ್ಮಿಷ್ಠತೆ, ನೀತಿಶಾಸ್ತ್ರ;" ಅರ್ಥ "ಜೀವನಾಧಾರ, ಸಂಪತ್ತು;" ಕಾಮ "ಇಂದ್ರಿಯಾಪೇಕ್ಷೆಗಳು;" ಮೋಕ್ಷ "(ಸಂಸಾರದಿಂದ) ಬಂಧವಿಮುಕ್ತಿ, ಬಿಡುಗಡೆ".[55][56]
ಹಿಂದೂಗಳು ಬಹುಸಂಖ್ಯೆಯಲ್ಲಿ ದೈನಂದಿನ ಆಧಾರದ ಮೇಲೆ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುತ್ತಾರೆ.[62] ಬಹುತೇಕ ಹಿಂದೂಗಳು ಮನೆಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುತ್ತಾರೆ[63], ಆದರೆ ಸಂಸ್ಕಾರಗಳ ಆಚರಣೆಯು ಪ್ರದೇಶಗಳು, ಹಳ್ಳಿಗಳು, ಮತ್ತು ವ್ಯಕ್ತಿಗಳ ನಡುವೆ ಬಹಳವಾಗಿ ಬದಲಾಗುತ್ತವೆ. ಶ್ರದ್ಧಾವಂತ ಹಿಂದೂಗಳು ಪ್ರಾತಃಕಾಲದಲ್ಲಿ ಸ್ನಾನದ ನಂತರ ಪೂಜೆ, (ಸಾಮಾನ್ಯವಾಗಿ ಒಂದು ಕೌಟುಂಬಿಕ ದೇವಸ್ಥಾನ ದಲ್ಲಿ ಮತ್ತು ವಿಶಿಷ್ಟವಾಗಿ ಒಂದು ದೀಪವನ್ನು ಬೆಳಗುವುದು ಮತ್ತು ದೇವತೆಗಳ ಮೂರ್ತಿಗಳಿಗೆ ನೈವೇದ್ಯಾರ್ಪಣೆಯನ್ನು ಒಳಗೊಳ್ಳುತ್ತದೆ.
(ಋಗ್-, ಸಾಮ-, ಯಜುರ್- ಮತ್ತು ಅಥರ್ವ- ಎಂದು ಕರೆಯಲಾಗುವ) ನಾಲ್ಕು ವೇದಗಳಿವೆ. ಋಗ್ವೇದವು ಮೊದಲನೆಯ ಮತ್ತು ಅತ್ಯಂತ ಪ್ರಮುಖ ವೇದವಾಗಿದೆ.[77] ಪ್ರತಿ ವೇದವು ನಾಲ್ಕು ಭಾಗಗಳಲ್ಲಿ ವಿಭಜನೆಗೊಂಡಿದೆ:
ಶ್ರುತಿಗಳನ್ನು ಬಿಟ್ಟು ಉಳಿದ ಹಿಂದೂ ಪಠ್ಯಗಳನ್ನು ಸಾಮೂಹಿಕವಾಗಿ ಸ್ಮೃತಿಗಳೆಂದು (ಸ್ಮರಣೆ) ಕರೆಯಲಾಗುತ್ತದೆ. ಮಹಾಭಾರತ ಮತ್ತು ರಾಮಾಯಣವನ್ನು ಒಳಗೊಂಡಿರುವ ಮಹಾಕಾವ್ಯಗಳು ಸ್ಮೃತಿಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಕೃತಿಗಳು. ಭಗವದ್ಗೀತೆಯು ಮಹಾಭಾರತದ ಒಂದು ಸಮಗ್ರಕತಾವಶ್ಯಕ ಭಾಗ ಮತ್ತು ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಧಾರ್ಮಿಕ ಪಠ್ಯಗಳ ಪೈಕಿ ಒಂದು. ಅದು ಒಂದು ಮಹಾಯುದ್ಧದ ಹಿಂದಿನ ದಿನದಂದು ವಿಷ್ಣುವಿನ ಅವತಾರನಾದ ಕೃಷ್ಣನಿಂದ ರಾಜಕುಮಾರ ಅರ್ಜುನನಿಗೆ ಹೇಳಲಾದ ತತ್ವಬೋಧನೆಗಳನ್ನು ಒಳಗೊಂಡಿದೆ. ಕೃಷ್ಣನಿಂದ ನುಡಿಯಲಾದ 'ಭಗವದ್ಗೀತೆಯು(ಭಗವದ್ಗೀತಾ ತಾತ್ಪರ್ಯ) ವೇದಗಳ ಸಾರಾಂಶವೆಂದು ವಿವರಿಸಲಾಗಿದೆ.[81] ಆದರೆ, ವಿಷಯವಸ್ತುವು ಉಪನಿಷತ್ತಿನಂತೆ ಇರುವುದರಿಂದ, ಕೆಲವೊಮ್ಮೆ ಗೀತೋಪನಿಷತ್ ಎಂದೂ ಕರೆಯಲ್ಪಡುವ ಗೀತೆಯನ್ನು ಹೆಚ್ಚಾಗಿ ಶ್ರುತಿ ವರ್ಗದಲ್ಲಿ ಇರಿಸಲಾಗುತ್ತದೆ.[82] ಸ್ಮೃತಿಗಳು, ವಿಶದವಾದ ಆಖ್ಯಾನಗಳ ಮೂಲಕ ಹಿಂದೂ ಕಲ್ಪನೆಗಳನ್ನು ವಿವರಿಸುವ ಪುರಾಣಗಳನ್ನೂ ಒಳಗೊಳ್ಳುತ್ತವೆ. ದೇವಿ ಮಹಾತ್ಮ್ಯ ತಂತ್ರಗಳು, ಯೋಗ ಸೂತ್ರಗಳು, ತಿರುಮಂತಿರಮ್, ಶಿವ ಸೂತ್ರಗಳು ಮತ್ತು ಆಗಮಗಳಂತಹ ಪಂಥೀಯ ಸ್ವರೂಪವುಳ್ಳ ಪಠ್ಯಗಳಿವೆ. ಹೆಚ್ಚು ವಿವಾದಿತ ಪಠ್ಯವಾದ ಮನುಸ್ಮೃತಿಯು ಜಾತಿ ಪದ್ಧತಿಯ ಸಾಮಾಜಿಕ ನಿಯಮಾವಳಿಗಳನ್ನು ಸಂಗ್ರಹಿಸುವ ಆದೇಶ ನ್ಯಾಯಗ್ರಂಥವಾಗಿದೆ.[ಸೂಕ್ತ ಉಲ್ಲೇಖನ ಬೇಕು]
“ | ತಂತ್ರಗಳು ... ಆಸ್ತಿಕ ಅಥವಾ ವೈದಿಕ ಮತ್ತು ನಾಸ್ತಿಕ ಅಥವಾ ವೈದಿಕವಲ್ಲದ ಎಂದೂ ವಿಭಜಿಸಲಾಗಿವೆ. ದೇವತೆಯ ಪ್ರಧಾನತೆಗೆ ಅನುಗುಣವಾಗಿ ಆಸ್ತಿಕ ಗ್ರಂಥಗಳನ್ನು ಶಾಕ್ತ, ಶೈವ, ಸೌರ, ಗಾಣಪತ್ಯ ಮತ್ತು ವೈಷ್ಣವ ಎಂದು ವಿಭಜಿಸಲಾಗಿದೆ. | ” |
ಪ್ರತಿಯೊಂದು ಧರ್ಮದಲ್ಲಿರುವಂತೆ, ಕೆಲವರು ತಮ್ಮ ಸ್ವಂತ ಪಂಥವನ್ನು ಇತರ ಪಂಥಗಳಿಗಿಂತ ಶ್ರೇಷ್ಠವೆಂದು ಕಾಣುತ್ತಾರೆ. ಆದರೆ, ಹಲವು ಹಿಂದೂಗಳು ಇತರ ಪಂಥಗಳನ್ನು ತಮ್ಮ ಸ್ವಂತ ಪಂಥದ ಸಂಪ್ರದಾಯವಿಹಿತ ಪರ್ಯಾಯಗಳೆಂದು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಹಾಗಾಗಿ, ಹಿಂದೂಗಳಿಗೆ ಸಾಮಾನ್ಯವಾಗಿ ಪಾಷಂಡ ಸಂಪ್ರದಾಯವು ಒಂದು ವಿವಾದಾಂಶವಾಗಿಲ್ಲ.[98]
ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ವರ್ಣಗಳೆಂದು (ಸಂಸ್ಕೃತ: "ಬಣ್ಣ, ರೂಪ, ನೋಟ") ಕರೆಯಲಾಗುವ ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲ್ಪಟ್ಟಿದೆ:[39]
“ | "ನಾನೊಬ್ಬ ಹಾಡುಗಾರ, ನನ್ನ ತಂದೆ ಒಬ್ಬ ವೈದ್ಯ, ಧಾನ್ಯವನ್ನು ಬೀಸುವುದು ನನ್ನ ತಾಯಿಯ ವೃತ್ತಿ." (ಋಗ್ವೇದ ೯.೧೧೨.೩)[102] | ” |
“ | "ದೇವರನ್ನು ಪ್ರೀತಿಸುವವರು ಯಾವುದೇ ಜಾತಿಗೆ ಸೇರುವುದಿಲ್ಲ . . . . ಈ ಪ್ರೀತಿಯಿರದ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯುವುದಿಲ್ಲ. ಮತ್ತು ದೇವರ ಪ್ರೀತಿಯಿರುವ ಅಸ್ಪೃಶ್ಯನು ಅಸ್ಪೃಶ್ಯನಾಗಿ ಉಳಿಯುವುದಿಲ್ಲ. ಭಕ್ತಿಯ ಮೂಲಕ ಒಬ್ಬ ಅಸ್ಪೃಶ್ಯನು ಪರಿಶುದ್ಧ ಮತ್ತು ಉತ್ತಮನಾಗುತ್ತಾನೆ."[107] | ” |
ಎಂದು ಬೋಧಿಸಿದರು.
|
|
|
ಸಂಬಂಧಿತ ಪದ್ಧತಿಗಳು ಮತ್ತು ಧರ್ಮಗಳು
|
|
|
|
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.